ಪುತ್ತೂರು: ಡಿ 10: ಪುತ್ತೂರು ನಗರಸಭೆಯ ಕಸ ಸಾಗಾಟ ವಾಹನದ ಚಾಲಕರಾಗಿದ್ದ ಸಚಿನ್ (27ವ)ರವರು ಡಿ. 9ರಂದು ಮಂಗಳೂರಿನ ಆಸ್ಫತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರು ನಗರ ಸಭೆಯ ಹೊರಗುತ್ತಿಗೆ ನೌಕರನಾಗಿದ್ದರು. ಮೃತರು ತಾಯಿ ವಿಜಯ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಸಚಿನ್ ಅವರು ದಿನದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕುಡಲೇ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. .ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಡಿ.9ರಂದು ಮೃತಪಟ್ಟಿದ್ದಾರೆ
ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇಗುಲದ ಹಿಂಬದಿಯ ಬಿಜೆಪಿ ಓಣಿಯಲ್ಲಿ ಸಚಿನ್ ತಾಯಿ ಮತ್ತು ಸಹೋದರಿ ಜತೆ ವಾಸಿಸುತ್ತಿದ್ದರು. ಇವರು ಕಳೆದ 3 ವರ್ಷಗಳಿಂದ ನಗರಸಭೆಯ ವಾಹನ ಚಾಲಕರಾಗಿ ದುಡಿಯುತ್ತಿದ್ದರು. ಸಣ್ಣ ಪ್ರಾಯದಲ್ಲೆ ತಂದೆಯನ್ನು ಕಳಕೊಂಡ ಇವರು ಬಳಿಕ ಮನೆಯ ಆಧಾರ ಸ್ತಂಭವಾಗಿದ್ದರು. ಕುಟುಂಬದ ಜೀವನ ನೀರ್ವಹಣೆ ಇವರ ದುಡಿಮೆಯನ್ನೆ ಅವಲಂಬಿಸಿತ್ತು. ಜೀವನದ ಬಂಡಿ ಓಡಿಸಲು ಇವರು ಹಗಲಿರುಳು ದುಡಿಯುತ್ತಿದ್ದರು.
ತನ್ನ ನಗರಸಭಾ ಸದಸ್ಯತ್ವದ ತಿಂಗಳ ಗೌರವ ವೇತನ ರೂ.4 ಸಾವಿರವನ್ನು ಸಚಿನ್ ಅವರ ತಾಯಿಯ ಖಾತೆಗೆ ಜಮೆ ಮಾಡಿರುವ ಪಿ.ಜಿ.ಜಗನ್ನಿವಾಸ್ ರಾವ್ ಅವರು ಈ ಕುಟುಂಬಕ್ಕೆ ಇತರರು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಸಚಿನ್ ಅವರ ತಾಯಿ ವಿಜಯ್ ಅವರ ಎಸ್ ಬಿಐ ಖಾತೆ ಸಂಖ್ಯೆ 65120888945 (ಐಎಫ್ಎಸ್ಸಿ ಕೋಡ್ ಎಸ್ಬಿಐಎನ್ 0040152) ಕ್ಕೆ ಧನ ಸಹಾಯ ಮಾಡಬಹುದು ಎಂದು ನಗರಸಭೆಯ ಸ್ಥಳೀಯ ವಾರ್ಡ್ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮನವಿಯಲ್ಲಿ ತಿಳಿಸಿದ್ದಾರೆ