ಉದ್ಯೋಗ
Online applications-ಮೇ 2ರಿಂದ ಆನ್ಲೈನ್ ಮೂಲಕ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ
ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಗುಡ್ನ್ಯೂಸ್. ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಈ ಹಿಂದೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಸಕ್ತರು ಮೇ 2ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್ 1.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್ ಹೊಂದಿರಬೇಕು.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 33,450 ರೂ. – 62,600 ರೂ. ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ ಮತ್ತು ಅರ್ಜಿ ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ಲಭ್ಯ. ಎಸ್ಸಿ / ಎಸ್ಟಿ / ಕ್ಯಾಟಗರಿ-1ರ ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪಿಡಬ್ಲ್ಯುಡಿ / ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್ಸಿ / ಎಸ್ಟಿ / ಕ್ಯಾಟಗರಿ-1/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಮಾಜಿ ಯೋಧರು ಅರ್ಜಿ ಶುಲ್ಕವಾಗಿ 50 ರೂ., ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 300 ರೂ., ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸುವುದು ಕಡ್ಡಾಯ.
ಹೆಚ್ಚಿನ ಮಾಹಿತಿಗೆ ಹೆಲ್ಪ್ಲೈನ್ ನಂಬರ್: 080-30574957 / 30574901ಕ್ಕೆ ಕರೆ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ :
ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನಮೂದಿಸಿ ಹೆಸರು ನೋಂದಾಯಿಸಿ.
ಹೊಸ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
ಅಗತ್ಯ ದಾಖಲೆ, ಫೋಟೊ ಅಪ್ಲೋಡ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ / ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಗಮನಿಸಿ ಮೇ 2ರ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಉದ್ಯೋಗ
Vidyamata Academy-ಜೂನ್ 9 ರಿಂದ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರತಿ ಭಾನುವಾರ ಉಚಿತ ಸೇನಾ ನೇಮಕಾತಿಯ ತರಬೇತಿ ಪ್ರಾರಂಭ
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದ್ವಾರಕಾ ಕನ್ಸ್ಟ್ರಕ್ಷನ್ಸ್ ರವರ ಸಹಭಾಗಿತ್ವದಲ್ಲಿ ಜೂನ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಸೇನಾ ನೇಮಕಾತಿಗಳಿಗೆ ಅನ್ವಯವಾಗುವಂತೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆಯ ತರಬೇತಿಗಳು ಪ್ರಾರಂಭವಾಗಲಿದೆ.
ಭಾರತೀಯ ಸೇನಾ ನೇಮಕಾತಿಗಳು / ರೈಲ್ವೆ ಪೊಲೀಸ್ / ಅರೆ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲಾ ರೀತಿಯ ಸಶಸ್ತ್ರ ಪಡೆಗಳ (Armed Forces) ನೇಮಕಾತಿಗಳ ಲಿಖಿತ ಪರೀಕ್ಷೆಗಳು, ದೈಹಿಕ ಸದೃಢತೆಯ ಪರೀಕ್ಷೆಗಳಿಗೆ ಒಂದೇ ಸೂರಿನಡಿಯಲ್ಲಿ ವಿದ್ಯಾಮಾತಾ ಅಕಾಡೆಮಿಯು ‘ದ್ವಾರಕಾ ಕನ್ಸ್ಟ್ರಕ್ಷನ್ಸ್’ ರವರ ಪ್ರಾಯೋಜಕತ್ವದಲ್ಲಿ ತರಬೇತಿಯನ್ನು ನೀಡಲಿದೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ.
ಕಳೆದ 2 ವರ್ಷಗಳಿಂದ 18 ಅಭ್ಯರ್ಥಿಗಳನ್ನು ತರಬೇತಿಗೊಳಿಸಿ ಆಯ್ಕೆಯಾಗಲು ಕಾರಣವಾದ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಸೇನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದಿಂದ ಆಯ್ಕೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಲಾಗುತ್ತಿದೆ. ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವವರಿಗೆ 17 ವರ್ಷದಿಂದ 23 ವರ್ಷದವರೆಗಿನವರೆಗೆ ಅವಕಾಶ ಇರುತ್ತದೆ. ಸದ್ಯ ಓದುತ್ತಿರುವವರು / ಓದು ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯು ಪುತ್ತೂರು ಮತ್ತು ಸುಳ್ಯದಲ್ಲಿ ಲಭ್ಯವಿರುತ್ತದೆ.ಉಚಿತ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31/05/2024ವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆಧಾರ್ ಮತ್ತು 2ಪಾಸ್ಪೋರ್ಟ್ ಸೈಜ್ ಫೋಟೋ ನೀಡಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಪುತ್ತೂರು ಕಛೇರಿ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಫೋನ್ ನಂ. : 9620468869 / 9148935808
ಸುಳ್ಯ ಶಾಖೆ : ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
ಫೋನ್ ನಂ. : 9448527606
ಉದ್ಯೋಗ
M. Sanjeeva Shetty-ಎಂ.ಸಂಜೀವ ಶೆಟ್ಟಿ ’ಸಾರೀಸ್ ಹಾಗೂ ರೆಡಿಮೇಡ್ಸ್’ ನ ನೂತನ ಮಳಿಗೆ ದರ್ಬೆಯಲ್ಲಿ ಶುಭಾರಂಭ : 80 ವರ್ಷಗಳ ಗುಣಮಟ್ಟದ ವಸ್ತ್ರವ್ಯಾಪಾರದ ಅನುಭವದ ಸಂಸ್ಥೆಗೆ 5ನೇ ಮಳಿಗೆಯ ಗರಿಮೆ
ಪುತ್ತೂರು: ವ್ಯಾಪಾರ ಎಂಬುದು ಒಂದು ತಪಸ್ಸಾಗಿದ್ದು, ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಎಂ.ಸಂಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊಂಡಿದೆ. ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಸಂಜೀವ ಶೆಟ್ಟಿ ಮಳಿಗೆ ಮನೆಮಾತಾಗಿದ್ದು, ಮಕ್ಕಳು ಇದರಲ್ಲಿ ತೊಡಗಿಸಿಕೊಂಡಾಗ ಉನ್ನತಿಯಾಗುತ್ತದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎಂದು ಉದ್ಯಮಿ ವಾಮನ್ ಪೈ ಹೇಳಿದರು.
80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ ಹಾಗೂ ರೆಡಿಮೇಡ್ಸ್ ನ ದರ್ಬೆ ವೃತ್ತದ ಬಳಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಆಧುನಿಕತೆಗೆ ತಕ್ಕಂತೆ ಯುವ ಪೀಳಿಗೆಗೆ ಬೇಕಾದ ವಸ್ತ್ರಗಳು, ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ವಸ್ತ್ರಗಳನ್ನು ಒಂದೇ ಮಳಿಗೆಯಲ್ಲಿ ಒದಗಿಸುವ ಮೂಲಕ ಪುತ್ತೂರು ಹಾಗೂ ಜಿಲ್ಲೆಯ ಎಲ್ಲಾ ಜನರ ಅನುಕೂಲ ಮಾಡಿಕೊಟ್ಟಿದ್ದಾರೆ. ವಸ್ತ್ರ ಉದ್ಯಮವನ್ನು ಹತ್ತೂರಿಗೆ ಪರಿಚಯಿಸಿದ ಕೀರ್ತಿ ದಿ. ಸಂಜೀವ ಶೆಟ್ಟರಿಗೆ ಸಲ್ಲುತ್ತದೆ. ವಸ್ತ್ರ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದ.ಕ. ಜಿಲ್ಲೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆಯ ವ್ಯಾಪಾರ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಜತೆಗೆ ಕುಟುಂಬದವರು ಅದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದ ತಿಳಿಸಿದರು.
ಉದ್ಯಮಿ ವಿಶ್ವಾಸ್ ಶೆಣೈ ಮಾತನಾಡಿ, ಸಂಸ್ಥೆ ದ.ಕ.ದಲ್ಲಿ ಹೆಸರುವಾಸಿಯಾಗಿದೆ. ದರ್ಬೆ ಪರಿಸರದಲ್ಲಿ ಇಂತಹಾ ಮಳಿಗೆ ಅಗತ್ಯವಿದ್ದು, ಇದೀಗ ಶುಭಾರಂಭಗೊಂಡಿದೆ. ಈ ನಿಟ್ಟಿನಲ್ಲಿ ದರ್ಬೆ ಪರಿಸರದ ಸಹಕಾರ ಯಾವತ್ತೂ ಸಂಸ್ಥೆಗೆ ಇದೆ ಎಂದು ತಿಳಿಸಿದರು.
ಸಂಸ್ಥೆಯ ಮುರಳೀಧರ ಮಾತನಾಡಿ, ಫ್ಯಾಶನ್ ಗಳು ಆಗಾಗ ಬದಲಾವಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಸ್ತ್ರ ಉದ್ಯಮದಲ್ಲಿ ತೊಡಗಿಕೊಂಡವರು ಅಪ್ ಡೇಟ್ ಆಗುತ್ತಿರಬೇಕು. ಕಳೆದ 80 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ನಾವು ಒದಗಿಸುತ್ತಾ ಬಂದಿದ್ದೇವೆ ಎಂದರು.
ಪೊಪ್ಯುಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ಕೆ.ಎಂ.ಇಸ್ಮಾಯಿಲ್, ನರೇಂದ್ರ ಚೋಪ್ರಾ, ಕಟ್ಟಡ ಮಾಲಕ ಕವನ್ ನಾಯ್ಕ್, ಸುಮತಿ ಡಿ. ನಾಯ್ಕ್, ಶ್ವೇತ ಶುಭ ಹಾರೈಸಿದರು. ಕುಟುಂಬದ ಹಿರಿಯ ಸದಸ್ಯ ಸತೀಶ್, ಸಂಸ್ಥೆಯ ಶಿವಶಂಕರ್, ಗಿರಿಧರ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.
ಉದ್ಯೋಗ
M. Sanjeev Shetty-ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ನ ನೂತನ ಮಳಿಗೆ ಮೇ. 10ರಂದು ಶುಭಾರಂಭ
ಪುತ್ತೂರು: ಪ್ರಖ್ಯಾತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಮೇ.10 ಶುಕ್ರವಾರ ಅಕ್ಷಯ ತೃತೀಯದಂದು ಶುಭಾರಂಭಗೊಳ್ಳಲಿದೆ.
ವಸ್ತ್ರ ವ್ಯಾಪಾರದಲ್ಲಿ 80 ವರ್ಷಗಳ ಅನುಭವ ಹೊಂದಿರುವ ಎಂ.ಸಂಜೀವ ಶೆಟ್ಟಿ ಪುತ್ತೂರಲ್ಲದೆ ಹತ್ತೂರಿನಲ್ಲಿ ಪ್ರಸಿದ್ದಿಯೊಂದಿಗೆ ಜನಮಾನಸದಲ್ಲಿ ತನ್ನ ಛಾಪನ್ನು ಮೂಡಿಸಿರುವ ಸಂಸ್ಥೆಯಾಗಿದೆ.
ದರ್ಬೆ ವೃತ್ತದ ಬಳಿ ಶುಭಾರಂಭಗೊಳ್ಳಲಿರುವ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಈ ಮಳಿಗೆ ಶುಭಾರಂಭಗೊಳ್ಳುತ್ತಿದೆ.
ಪುತ್ತೂರಿನ ಮುಖ್ಯರಸ್ತೆಯಲ್ಲಿ ಎರಡು ಬೃಹತ್ ಮಳಿಗೆ ಹಾಗೂ ವೆಂಕಟರಮಣ ದೇವಸ್ಥಾನದ ಸಮೀಪ ಬೃಹತ್ ಶೋರೂಮ್ ಹಾಗೂ ಎಂಎಸ್ಎಸ್ ಹೊಂದಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯ ಕಿರಿಟಕ್ಕೆ ಮತ್ತೊಂದು ಮಳಿಗೆ ಸೇರ್ಪಡೆಯಾಗಿದೆ. ದರ್ಬೆ ಮಳಿಗೆಯ ಕೆಳಗಡೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ.
-
ಶಿಕ್ಷಣ2 days ago
Ambika Vidyalaya-ಸಿಬಿಎಸ್ಇ ಹತ್ತನೆಯ ತರಗತಿ ಫಲಿತಾಂಶದಲ್ಲಿ ಅಂಬಿಕಾ ವಿದ್ಯಾಲಯದ ಅಮೋಘ ಸಾಧನೆ; ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು; ನೂರು ಶೇಕಡಾ ಫಲಿತಾಂಶ, 17 ಮಂದಿಗೆ ವಿಶಿಷ್ಟ ಶ್ರೇಣಿ
-
ಬಿಗ್ ನ್ಯೂಸ್16 hours ago
ಪುರುಷರಕಟ್ಟೆ – ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
-
ಸ್ಥಳೀಯ1 day ago
Prajwal Revanna-ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ : ವಿಡಿಯೋ ಮಾಡದಂತೆ ಪರಿಪರಿಯಾಗಿ ಬೇಡಿಕೊಂಡರೂ ಆತ ಬಿಡುವುದಿಲ್ಲ- ತಮ್ಮ ಮಕ್ಕಳನ್ನೇ ಎದುರಿಸಲಾಗದ ಸ್ಥಿತಿಯಲ್ಲಿ ಸಂತ್ರಸ್ತೆಯರು
-
ಅಂತರ ರಾಜ್ಯ1 day ago
1963 petrol bill-1963ರ ಪೆಟ್ರೋಲ್ ಬಿಲ್ ವೈರಲ್ : ಆಗ ಲೀಟರ್ ಗೆ ಎಷ್ಟಿತ್ತು ಗೊತ್ತೇ ದರ..?
-
ಅಂತರ ರಾಜ್ಯ1 day ago
Mumbai-ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ್ದ ಮುಂಬೈಯ ಜಾಹಿರಾತು ಫಲಕ ಕುಸಿದು ಬಿದ್ದು 14 ಜನ ಮೃತ್ಯು : 74 ಮಂದಿಗೆ ಗಾಯ
-
ಕ್ರೈಂ15 hours ago
Brutually killed for refusing love ನೇಹಾ ಹೀರೆಮಠ್, ಮೀನಾ ಮಾದರಿ ಹುಬ್ಬಳಿಯಲ್ಲಿ ಪ್ರೀತಿ ನಿರಾಕರಿಸಿದ ಯುವತಿಯ ಭೀಕರ ಹತ್ಯೆ ಮಾಡಿದ ಪಾಗಲ್ ಪ್ರೇಮಿ – ತಿಂಗಳೊಳಗೆ ರಾಜ್ಯದಲ್ಲಿ ಮೂರನೇಯ ಭಯಾನಕ ಕೃತ್ಯ
-
ದಕ್ಷಿಣ ಕನ್ನಡ2 days ago
Ganja plant-ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆ …! ವೈರಲ್ ಫೋಟೊದ ಸತ್ಯಾಸತ್ಯತೆಯೇನು ?
-
ಅಂತರ ರಾಜ್ಯ2 days ago
Monsoon-ಜೂ. 1ರಂದು ಮುಂಗಾರು ಕೇರಳಕ್ಕೆ ಪ್ರವೇಶ; ಈ ಬಾರಿಯ ಮಳೆಯ ಪ್ರಮಾಣದ ಐಎಂಡಿ ಅಪ್ಡೇಟ್