ಕೊಡಗು
Kodagu | ಕೊಡಗು : ಕತ್ತಿಯಿಂದ ಕಡಿದು ಯುವತಿಯ ಬರ್ಬರ ಹತ್ಯೆ ಮಾಡಿದ ಆರೋಪಿ ಶವ ಕೆರೆಯಲ್ಲಿ ಪತ್ತೆ
ಕೊಡಗು: ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ ತಿಮ್ಮಯ್ಯ ಶವ ಅದೇ ಗ್ರಾಮದ (Kodagu) ಕೆರೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ನಾಂಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಯನ್ನು ಜ.16ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಭಾನುವಾರ ರಾತ್ರಿ ಯುವತಿಗೆ ಮೊಬೈಲ್ ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡ ಆರೋಪಿಯು ಆಕೆಯ ಮನೆಯ ಸಮೀಪವೆ ಕತ್ತಿಯಿಂದ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದ.
ನಂತರ ತನ್ನ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿ ಕೆರೆಗೆ ಬಿದ್ದಿದ್ದ. ಕೆರೆಯ ದಡದಲ್ಲಿ ಅರ್ಧ ಖಾಲಿಯಾದ ಕ್ರಿಮಿನಾಶಕದ ಬಾಟಲಿ, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಎರಡು ದಿನಗಳಿಂದ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿತ್ತು.
ಜ.18ರ ಬೆಳಿಗ್ಗೆ ಶವ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆ ಬಳಿ ಮೂರು ಬಾರಿ ಬಂದಿತ್ತು ಶ್ವಾನ..!
ಶ್ವಾನದಳವು ಮೂರು ಬಾರಿ ಕೆರೆಯ ಬಳಿ ಬಂದಿದ್ದರಿಂದ ಕೆರೆಗೆ ಆರೋಪಿ ಬಿದ್ದಿರುವುದು ಬಹುತೇಕ ಖಚಿತವಾಗಿತ್ತು. 20 ಅಡಿ ಆಳದ ಕೆರೆಯಲ್ಲಿ ಆರೋಪಿಯ ಶವ ತಳದಲ್ಲಿ ಸಿಲುಕಿಕೊಂಡಿತ್ತು. ಕೆರೆಯ ಸ್ವಲ್ಪ ಭಾಗದ ನೀರನ್ನು ಹೊರಕ್ಕೆ ಚೆಲ್ಲಿ ಹಿಟಾಚಿ ಯಂತ್ರ ಬಳಸಿ ಶವವನ್ನು ತೆಗೆಯಲಾಯಿತು. ಇದೊಂದು ಅತಿ ಕ್ಲಿಷ್ಟಕರ ಕಾರ್ಯಾಚರಣೆ ಆಗಿತ್ತು ಎಂದು ಹೇಳಿದ್ದಾರೆ
ಅಪರಾಧ
Pushpagiri-ಪುಷ್ಪಗಿರಿ ತಪ್ಪಲಿನಲ್ಲಿ ನಕ್ಸಲರ ಚಲನವಲನ – ಸುಗಮ ಚುನಾವಣೆಗೆ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ
ಮಡಿಕೇರಿ ಠಾಣೆ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್ ಭಾಗದಲ್ಲಿ ವಾರದ ಹಿಂದೆ ಕಾಣಿಸಿಕೊಂಡ ನಕ್ಸಲರು ಬಳಿಕ ಸುಬ್ರಹ್ಮಣ್ಯ ಸಮೀಪದ ಐನೆಕಿದು ಕಾಡಂಚಿನ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿ ಹರಡಿಕೊಂಡಿರುವ ಪುಷ್ಪಗಿರಿ ಅರಣ್ಯ ವ್ಯಾಪ್ತಿಯಲ್ಲಿ ತಮ್ಮ ಇರುವಿಕೆಯನ್ನು ಪ್ರಕಟಿಸಿದ್ದಾರೆ .
ಲೋಕಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ 15 ಕಿ.ಮೀ. ಅಂತರದ ವ್ಯಾಪ್ತಿಯಲ್ಲಿ ಎರಡು ಬಾರಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಪ್ರಜಾಪ್ರಭುತ್ವದ ಮಹಾ ಪರ್ವಕ್ಕೆ ಸವಾಲೊಡ್ದುವ ಸಾದ್ಯತೆಯನ್ನು ಪರೋಕ್ಷವಾಗಿ ಗೋಚರಿಸಿದ್ದಾರೆ.
ಹೀಗಾಗಿ ಅಸುಪಾಸಿನ 5-6 ತಿಂಗಳಿನಲ್ಲಿ ಚುನಾವಣೇ ನಡೆಸುವುದು ಜಿಲ್ಲಾಡಳಿತ ಹಾಗು ಚುನಾವಣೆ ಆಯೋಗಕ್ಕೆ ಸವಾಲು ಆಗಿ ಪರಿಣಮಿಸಿದೆ.
2012ರ ಆಗಸ್ಟ್ ತಿಂಗಳಲ್ಲಿ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಪಳ್ಳಿಗದ್ದೆ ಎಂಬಲ್ಲಿನ ಐದು ಮನೆಗಳಿಗೆ ಭೇಟಿ ನೀಡಿದ್ದ ಶಂಕಿತ ನಕ್ಸಲರು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ 3ರಂದು ರಾತ್ರಿ ಬಿಸಿಲೆ ಪ್ರದೇಶದಲ್ಲಿ ಎಎನ್ಎಫ್ ನಡುವಿನ ಎನ್ಕೌಂಟರ್ನಲ್ಲಿ ನಕ್ಸಲ್ ಯಲ್ಲಪ್ಪ ಪ್ರಾಣ ಕಳೆದುಕೊಂಡಿದ್ದ. ಇದರ ಬೆನ್ನಲ್ಲೇ ಪುಷ್ಪಗಿರಿ ತಪ್ಪಲಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚುನಾವಣಾ ಕಾಲಘಟ್ಟದಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಘೋಷಿಸಲಾಗಿತ್ತು.
ಪ್ರತೀ ಚುನಾವಣೆಯಲ್ಲೂ..
2013ರಲ್ಲಿ ನಡೆದ ವಿಧಾನಸಭೆ ಚುನಾವಣೆ, 2014ರ ಲೋಕಸಭೆ ಚುನಾವಣೆ, 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಯೂ ಸೇರಿದಂತೆ ಸ್ಥಳೀಯಾ ಡಳಿತ ಚುನಾವಣೆಗಳಲ್ಲಿ ಕುಲ್ಕುಂದ, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರ್ ಮತಗಟ್ಟೆಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿತ್ತು. ಹೀಗಾಗಿ ಇಲ್ಲಿಸುಗಮ ಮತ್ತು ಭಯಮುಕ್ತ ಮತದಾನ ನಡೆಸಲು ಭದ್ರತಾ ಕ್ರಮ ಅನುಸರಿಸಲಾಗಿತ್ತು.
ವರ್ಷಗಳು ಉರುಳಿದಂತೆ 2012ರ ನಕ್ಸಲ್ ಸಕ್ರಿಯತೆಯ ಭೀತಿ ಜನಮಾನಸದಿಂದ ದೂರವಾಗುತ್ತಾ ಬಂದಿದ್ದು, ಜನ ನಕ್ಸಲ್ ಚಟುವಟಿಕೆಯನ್ನೇ ಮರೆತಿದ್ದರು. ಆರೇಳು ವರ್ಷ ನಿರಂತರ ಕೂಂಬಿಂಗ್ ನಡೆಸುತ್ತಿದ್ದ ಎಎನ್ಎಎಫ್ ಪಡೆಗಳು ಇತ್ತೀಚಿನ ನಾಲೈದು ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುವ ಅನಿವಾರ್ಯತೆ ಉಂಟಾಗಿರಲಿಲ್ಲ.
ಇದೀಗ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಎರಡೆರಡು ಬಾರಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಲ್ಲದೆ, ಈ ಭಾಗದ ಸುಮಾರು ಐದಾರು ಗ್ರಾಮ ವ್ಯಾಪ್ತಿಗಳು ಮತ್ತು ಅವುಗಳ ಮೇಲ್ತುದಿಯಲ್ಲಿರುವ ಅರಣ್ಯ ಭಾಗದಲ್ಲಿ ತಮ್ಮ ಪಾರಮ್ಯವಿದೆ ಎಂದು ತೋರಿಸಿಕೊಡುವ ಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏ.26ರಂದು ನಡೆಯುವ ಲೋಕಸಭೆ ಚುನಾವಣೆಯನ್ನು ಗರಿಷ್ಠ ಭದ್ರತೆಯಡಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸುವ ಸಾಧ್ಯತೆ ಇದೆ.
ಮತಗಟ್ಟೆಗಳ ವಿವರ
ಸುಬ್ರಹ್ಮಣ್ಣ ಗಾಪಂ ವ್ಯಾಪ್ತಿಯ ಐನೆಕಿದು ಮತ್ತು ಕುಲ್ಕುಂದ ಗ್ರಾಮಗಳಲ್ಲಿ ಸುಮಾರು 1,300 ಮತಗಳಿವೆ. ಐನೆಕಿದು ಶಾಲೆಯಲ್ಲಿ ಮತಗಟ್ಟೆ ಇದ್ದು, ಇದುವರೆಗೆ ಇದು ಸಾಮಾನ್ಯ ಮತಗಟ್ಟೆಯಾಗಿದೆ. ಕುಲ್ಕುಂದ ಶಾಲೆ ಮತಗಟ್ಟೆ ಕಳೆದ 12 ವರ್ಷಗಳಿಂದ ಸೂಕ್ಷ್ಮ ಮತಗಟ್ಟೆಯಾಗಿದೆ. ಹರಿಹರ ಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,500 ಮತಗಳಿವೆ. ಬಾಳುಗೋಡು ಶಾಲೆ ಮತ್ತು ಹರಿಹರ ಶಾಲೆಯಲ್ಲಿ ಮತಗಟ್ಟೆಗಳಿದ್ದು, ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ. ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,000 ಮತಗಳಿವೆ. ಕಲ್ಮಕಾರ್ ಶಾಲೆ ಮತ್ತು ಕೊಲ್ಲಮೊಗ್ರು ಶಾಲೆಯ ಮತಗಟ್ಟೆಗಳು ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ.
ಕೊಡಗು
Gun Miss Fire | ಮಡಿಕೇರಿ : ಅನುಮಾನಾಸ್ಪದವಾಗಿ ಯುವಕ ಸಾವು – ಗನ್ ಮಿಸ್ ಫೈರ್ ಶಂಕೆ ..!
ಮಡಿಕೇರಿ: ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ (Gun Miss Fire) ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ.
ಸುಂದರನಗರದ ನಾರಾಯಣ ಎಂಬುವವರ ಪುತ್ರ ಜನತಾ ಕಾಲೋನಿಯ ಸಂತೋಷ್ (34) ಮೃತಪಟ್ಟ ದುರ್ಧೈವಿ.
ಸ್ನೇಹಿತರೊಂದಿಗೆ ತೆರಳಿದ್ದ ಸಂದರ್ಭ ಕೋವಿಯಿಂದ ಗುಂಡು ಮಿಸ್ ಫೈರ್ ಆಗಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೊಡಗು
Google Map | ಕೊಡಗಿನಲ್ಲಿ ಗೂಗಲ್ ಮ್ಯಾಪ್ ಬಳಸಿ ದಾರಿ ತಪ್ಪುತ್ತಿರುವ ಪ್ರಯಾಣಿಕರು – ಸುಸ್ತಾಗಿ ನಾಮಫಲಕದ ಮೊರೆ ಹೋದ ಹಳ್ಳಿಗರು..!
ಈಗೀನ ಸೋಷಿಯಲ್ ಮೀಡಿಯಾ ಯುಗದಲ್ಲಿ ಗೂಗಲ್ ಮ್ಯಾಪ್ (Google Map) ಬಳಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.
ಕೊಡಗಿನಲ್ಲಿ ಕ್ಲಬ್ ಮಹಿಂದ್ರಾ ರೆಸಾರ್ಟಿಗೆ ಹೋಗುವವರು ಗೂಗಲ್ ಮ್ಯಾಪ್ ಬಳಸಿ, ದಾರಿ ತಪ್ಪಿ ಹೋಗುವವರು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಅದೇ ಕಾರಣಕ್ಕಾಗಿ, ಕೊಡಗಿನ ಹಳ್ಳಿಯೊಂದರಲ್ಲಿ ಗೂಗಲ್ ಮ್ಯಾಪ್ ತಪ್ಪಾಗಿದೆ. ಇದು ಕ್ಲಬ್ ಮಹಿಂದ್ರಾಕ್ಕೆ ಹೋಗುವ ದಾರಿಯಲ್ಲ ಎಂಬ ಫಲಕವನ್ನು ಹಾಕಿದ್ದಾರೆ.
ಇದಕ್ಕೆ ಕಾರಣ, ಹಲವಾರು ಮಂದಿ ದಾರಿ ತಪ್ಪಿ ಅಲ್ಲಿಂದಲೇ ಹೋಗಿ ಹೋಗಿ ಅಲ್ಲಿನ ಸ್ಥಳೀಯರಿಂದ ಇದು ರೆಸಾರ್ಟಿಗೆ ಹೋಗುವ ದಾರಿಯಲ್ಲ ಎಂಬುದು ತಿಳಿದ ತಕ್ಷಣ ಪೇಚಾಗಿ ವಾಪಸ್ಸು ಹೋಗ್ತಾ ಇದ್ದಾರಂತೆ.
ಹೀಗೆ ದಾರಿ ತಪ್ಪಿ ಬಂದವರಿಗೆ ಅಡ್ರೆಸ್ ಹೇಳಿ ಹೇಳಿ ಸುಸ್ತಾದ ಹಳ್ಳಿಗರು ಈ ಥರ ಬೋರ್ಡ್ ಹಾಕಿದ್ದಾರೆ.
-
ಸಾಮಾಜಿಕ ಮಾಧ್ಯಮ2 days ago
Hasana sex tape : ಚುನಾವಣೆ ಹೊಸ್ತಿಲಲ್ಲಿ ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್ ಡ್ರೈವ್ ಸೌಂಡ್ ! ಅಸಲಿಯ / ನಕಲಿಯ ತೀವ್ರ ಚರ್ಚೆ
-
ಬಿಗ್ ನ್ಯೂಸ್23 hours ago
Hasana Sex Tape: ಹಾಸನ ಸಂಸದ ಪ್ರಜ್ವಲ್ ರೇವಣ್ಣರವರದೆಂದು ಬಿಂಬಿಸಿ ಕೊಳಕು, ಮಾರ್ಫ್ ಮಾಡಿದ ವೀಡಿಯೊಗಳು ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರ : ಚುನಾವಣಾ ಏಜೆಂಟ್ ರಿಂದ ಠಾಣೆಗೆ ದೂರು
-
ಬಿಗ್ ನ್ಯೂಸ್22 hours ago
ಕುಟುಂಬ ಸಮೇತ ಮತ ಚಲಾಯಿಸಲು ಪದ್ಮರಾಜ್ ಬಂದಾಗ ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ – ಪೊಲೀಸ್ ಅಧಿಕಾರಿಯನ್ನು ತಳ್ಳಾಡಿ ಪುಂಡಾಟ : ಮಾಧ್ಯಮದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ
-
ದಕ್ಷಿಣ ಕನ್ನಡ2 days ago
Student harrased in bus ಉಪ್ಪಿನಂಗಡಿ: ಸ್ಲೀಪರ್ ಕೋಚ್ ಬಸ್ನಲ್ಲಿ ವಿದ್ಯಾರ್ಥಿನಿಗೆ ಜತೆ ಸಹ ಪ್ರಯಾಣಿಕನಿಂದ ಕಿರುಕುಳ – ಯುವತಿ ವ್ಯಗ್ರಗೊಳ್ಳುತ್ತಾಳೆ ಕಿಟಕಿಯಿಂದ ಹಾರಿ ಆರೋಪಿ ಪರಾರಿ – ಮುಂದೇನಾಯಿತು ?
-
ನಿಧನ ವಾರ್ತೆ2 days ago
Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ
-
ಸ್ಥಳೀಯ2 days ago
Mithun Rai-ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮೂಡುಬಿದಿರೆ ಬಿಜೆಪಿ ಶಾಸಕರ ಪ್ರಾಮಾಣಿಕ ಪ್ರಯತ್ನ – ಮಿಥುನ್ ರೈ ಶಾಕಿಂಗ್ ಹೇಳಿಕೆ
-
ಮಂಗಳೂರು2 days ago
Janardhana Poojary-ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ- ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಪದ್ಮರಾಜ್ ಆರ್ ಪೂಜಾರಿಯನ್ನು ಗೆಲ್ಲಿಸುವ ಮೂಲಕ ಆಗಬೇಕಿದೆ :ಜನಾರ್ದನ ಪೂಜಾರಿ
-
ರಾಜಕೀಯ2 days ago
Belthangady-ಬೆಳ್ತಂಗಡಿ : ಸಿಗದ ಮೂಲಭೂತ ಸೌಕರ್ಯ – ನೋಟಾಗೆ ಮತ ಚಲಾಯಿಸಲು ಮಲೆಕುಡಿಯ ಸಮುದಾಯದ ನಿರ್ಧಾರ