ಅಂತರ ರಾಜ್ಯ
Mungekar-ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿಲ್ಲ; ಮೋದಿಯವರ ಹೇಳಿಕೆ ಸುಳ್ಳು ಎಂದು ಕುಟುಕಿದ ಮುಂಗೇಕರ್
ಮುಂಬೈ: ಕಾಂಗ್ರೆಸ್ ನಾಯಕ, ಆರ್ಥಿಕ ತಜ್ಞ ಮತ್ತು ನೀತಿ ಆಯೋಗದ ಸದಸ್ಯರೂ ಆಗಿದ್ದ ಡಾ. ಬಾಲಚಂದ್ರ ಮುಂಗೇಕರ್ರವರು ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿಲ್ಲ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.
ಡಾ. ಸಿಂಗ್ ಅವರ ಹೇಳಿಕೆಯ ಒಂದು ವಾಕ್ಯವನ್ನು ಪ್ರಸ್ತುತಪಡಿಸುವ ಮೂಲಕ ಮೋದಿ ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನು ಸೃಷ್ಟಿಸುವುದು ಬಿಜೆಪಿಯ ತಂತ್ರವಾಗಿದೆ. ಆದರೆ, ಜನರು ಮೋದಿ ಅವರ ಹೇಳಿಕೆಗಳನ್ನು ನಂಬುವುದಿಲ್ಲ ಎಂದು ಮುಂಬೈ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಮುಂಗೇಕರ್ ಹೇಳಿದ್ದಾರೆ.
ಯುಪಿಎ ಸರ್ಕಾರದ ಭಾಗವಾಗಿದ್ದ ಡಾ. ಮುಂಗೇಕರ್, ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿದ್ದು, ಸತ್ಯವನ್ನು ಮುಂದಿಟ್ಟಿದ್ದಾರೆ.
2006ರ ಡಿಸೆಂಬರ್ 9ರಂದು ನಡೆದಿದ್ದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ, ‘ದೇಶದ ದಲಿತರು, ಆದಿವಾಸಿಗಳು, ಒಬಿಸಿ, ಮಹಿಳೆಯರು, ಮಕ್ಕಳು ಅಭಿವೃದ್ಧಿಯ ಫಲವನ್ನು ಸವಿಯಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯವೂ ಪ್ರಯೋಜನ ಪಡೆಯಬೇಕು’ ಎಂದು ಡಾ ಮನಮೋಹನ್ ಸಿಂಗ್ ಹೇಳಿದ್ದರು. ಅವರ ಹೇಳಿಕೆಯ ಅರ್ಥವೇನೆಂದರೆ, ಎಸ್ಸಿ ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ ಎಂಬುದಾಗಿತ್ತು. ಸಭೆಯ ನಂತರ ಡಾ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ನಾನು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೆವು. ಅಲ್ಪಸಂಖ್ಯಾತರು ಎಂದರೆ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರು ಸಹ ಹೌದು. ಸಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು ಎಂದು ಡಾ. ಮುಂಗೇಕರ್ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿರುತ್ತದೆ ಮತ್ತು ಅವರು ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ಅದನ್ನು ಸಮುದಾಯದೊಳಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿರುವುದಾಗಿ ಮೋದಿ ಈಗ ಹೇಳುತ್ತಿರುವುದು ಸರಿಯೇ? ಚುನಾವಣೆಯಲ್ಲಿ ಧಾರ್ಮಿಕ ತಿರುವು ನೀಡಲು ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. 102 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಬಿಜೆಪಿ ಸೋಲುವ ಚಿತ್ರಣ ಸ್ಪಷ್ಟವಾಗಿದೆ. 40ರ ಗಡಿ ತಲುಪಲಾಗದೆ ಮೋದಿ ನಿರಾಸೆಗೊಂಡಿದ್ದಾರೆ’ಎಂದು ಮುಂಗೇಕರ್ ಕುಟುಕಿದ್ದಾರೆ.
ಅಂತರ ರಾಜ್ಯ
Sucharita Mohanty-ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಹಣ ನೀಡದ ಹಿನ್ನೆಲೆ; ಟಿಕೆಟ್ ಹಿಂಪಡೆದ ಸುಚರಿತಾ ಮೊಹಂತಿ
ಭುವನೇಶ್ವರ್: ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿಯವರು ಟಿಕೆಟ್ ಹಿಂದೆ ನೀಡಿದ್ದಾರೆ. ಪಕ್ಷವು ತನಗೆ ಚುನಾವಣಾ ನಿಧಿಯನ್ನು ನಿರಾಕರಿಸಿದೆ ಎಂದು ಮೊಹಂತಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಮೊಹಂತಿಯವರು ಉಮೇದುವಾರಿಕೆ ಹಿಂಪಡೆಯುವ ಪತ್ರದ ಕುರಿತು ಎಎನ್ಐ ಜೊತೆ ಮಾತನಾಡಿದ್ದು, “ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ನಾನು ಟಿಕೆಟ್ ಹಿಂತಿರುಗಿಸಿದ್ದೇನೆ. ಇನ್ನೊಂದು ಕಾರಣವೆಂದರೆ ಏಳು ವಿಧಾನಸಭಾ ಕ್ಷೇತ್ರಗಳ ಕೆಲವು ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲದಿರುವುದು. ಕೆಲವು ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ನನಗೆ ಈ ರೀತಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಾರ್ವಜನಿಕ ಕೊಡುಗೆ ಅಭಿಯಾನದ ಮೂಲಕ ಹಣವನ್ನು ಗಳಿಸುವ ತನ್ನ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಪುರಿ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಹಣಕಾಸಿನ ಕೊರತೆಯಿಂದ ತೀವ್ರ ಹೊಡೆತ ಬಿದ್ದಿದೆ ಎಂದು ಮೊಹಂತಿ ಈ ಹಿಂದೆ ಹೇಳಿದ್ದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿಗೆ ಪಕ್ಷದ ನಾಯಕತ್ವದಿಂದ ಸಹಾಯ ಪಡೆಯಲು ಮೊಹಂತಿ ಪತ್ರ ಬರೆದಿದ್ದಾರೆ. “ಪಕ್ಷವು ನನಗೆ ಹಣ ನೀಡದ ಕಾರಣ ಪುರಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಅಜೋಯ್ ಕುಮಾರ್ ಜಿ ಅವರು ನಾನೇ ಹಣ ಹೊಂದಿಸಬೇಕು ಎಂದು ಹೇಳಿದ್ದಾರೆ. ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತಳಾಗಿದ್ದೆ. ಪುರಿಯಲ್ಲಿ ನನ್ನ ಪ್ರಚಾರಕ್ಕಾಗಿ ನನ್ನ ಬಳಿ ಇರುವ ಎಲ್ಲವನ್ನೂ ನೀಡಿದ್ದೇನೆ” ಎಂದಿದ್ದಾರೆ.
“ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಪ್ರಯತ್ನಿಸಿದೆ, ಇದುವರೆಗೆ ಹೆಚ್ಚು ಯಶಸ್ವಿಯಾಗಲಿಲ್ಲ. ನಾನು ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ಪ್ರಯತ್ನಿಸಿದೆ” ಎಂದು ಅವರು ಹೇಳಿದರು. ಪಕ್ಷದ ಕೇಂದ್ರ ನಾಯಕತ್ವವು ಹಣವನ್ನು ಒದಗಿಸುವಂತೆ ತನ್ನ ಹಲವಾರು ಮನವಿಗಳಿಗೆ ಒಲವು ತೋರಲಿಲ್ಲ ಎಂದು ಅವರು ಹೇಳಿದರು.
ಅಂತರ ರಾಜ್ಯ
Indraneil Rajguru-ಗಾಂಧಿ ಕಪಟ ಸ್ವಭಾವದವರು, ರಾಹುಲ್ ಗಾಂಧಿ ಪ್ರಾಮಾಣಿಕ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಇಂದ್ರನೀಲ್ ರಾಜ್ಗುರು
ಗಾಂಧಿನಗರ: ಗುಜರಾತ್ನ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನೇ ಕಪಟಿ ಎಂದಿದ್ದು ‘ಗಾಂಧಿ ಅವರಿಗಿಂತಲೂ ರಾಹುಲ್ ಗಾಂಧಿಯೇ ಶ್ರೇಷ್ಠ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಇಂದ್ರನೀಲ್ ರಾಜ್ ಗುರು, ಮೇ 1ರಂದು ರಾಜ್ಕೋಟ್ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ‘ಬೇಕಿದ್ದರೆ ಬರೆದಿಟ್ಟುಕೊಳ್ಳಿ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರೇ ಮುಂದಿನ ಮಹಾತ್ಮಾ ಗಾಂಧಿ ಆಗಿ ಹೊರಹೊಮ್ಮಲಿದ್ದಾರೆ. ಗಾಂಧಿ ಅವರು ಸ್ವಲ್ಪ ಮಟ್ಟಿಗೆ ಕಪಟ ಸ್ವಭಾವದವರಾಗಿದ್ದರೂ, ರಾಹುಲ್ ಗಾಂಧಿ ಸಂಪೂರ್ಣವಾಗಿ ಪ್ರಾಮಾಣಿಕ ಮತ್ತು ಹೃದಯವಂತರಾಗಿದ್ದಾರೆ’ ಎಂದಿದ್ದಾರೆ. ಕೆಲವರು ಅವರನ್ನು ಪಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ದೇಶದ ಪ್ರಜೆಗಳು ರಾಹುಲ್ ಗಾಂಧಿಯವರನ್ನು ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕರು ಇಂದ್ರನೀಲ್ರ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ‘ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ರನ್ನೇ ಅವಹೇಳನ ಮಾಡಲಾಗಿದೆ. ಈ ರೀತಿಯ ಕೀಳು ಹೇಳಿಕೆಗಳನ್ನು ಜನ ಕ್ಷಮಿಸುವುದಿಲ್ಲ ಎಂದಿದ್ದಾರೆ. ಗಾಂಧಿ ಅವರು ‘ಬುದ್ಧಿವಂತರು’ ಎಂಬರ್ಥದಲ್ಲಿ ಕಪಟಿ ಪದ ಬಳಸಿದ್ದೇನೆ. ಗಾಂಧಿ ಅವರು ಕಪಟಿ ಎಂಬುದಾಗಿ ಹಲವು ಪುಸ್ತಕಗಳಲ್ಲಿ ಉಲ್ಲೇಖವಿದೆ ಎಂದು ಇಂದ್ರನೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಅಂತರ ರಾಜ್ಯ
Rohit Sharma-ವಿರಾಟ್ ಸ್ಟ್ರೈಕ್ ರೇಟ್ ಬಗೆಗಿನ ಪ್ರಶ್ನೆಗೆ ರೋಹಿತ್ ಶರ್ಮಾ ಅಚ್ಚರಿ ರಿಯಾಕ್ಷನ್
ನವದೆಹಲಿ: ಕ್ರಿಕೆಟ್ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್ಮನ್ನ ಆಟದ ಶೈಲಿ ವಿಭಿನ್ನವಾಗಿರುತ್ತದೆ. ಎಲ್ಲರೂ ಒಂದೇ ರೀತಿ ಆಡುವುದಿಲ್ಲ. ಕೆಲವರು ಮೊದಲ ಎಸೆತದಿಂದಲೇ ಸ್ಪೋಟಕ ಆಟವಾಡಲು ಆರಂಭಿಸುತ್ತಾರೆ. ಇನ್ನೂ ಕೆಲವರು ನಿಧಾನವಾಗಿ ಆಡುತ್ತಾರೆ. ಕೆಲವರು ಆರಂಭದಲ್ಲಿ ನಿಧಾನವಾಗಿ ಆಡಿದರೂ ಗೇರ್ ಬದಲಾಯಿಸಿ ಅಗತ್ಯಕ್ಕೆ ತಕ್ಕಂತೆ ವೇಗ ಹೆಚ್ಚಿಸುತ್ತಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಹೀಗೆ ಆಡುತ್ತಾರೆ.
ಅಂದ ಹಾಗೆ ರಕ್ಷಣಾತ್ಮಕ ಆಟವಾಡುವುದು ತಂಡ ದೊಡ್ಡ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ಇದು ಸೂಕ್ತವಾಗಿದೆ. ಆದರೆ, ಟಿ20 ಪಂದ್ಯಗಳು ಕೊಂಚ ವಿಭಿನ್ನವಾಗಿದೆ. ಇಲ್ಲಿ ಬ್ಯಾಟ್ಸ್ಮನ್ ಸ್ಟ್ರೈಕ್ ರೇಟ್ ತುಂಬಾ ಪ್ರಮುಖವಾಗಿರುತ್ತದೆ. ಸ್ಟ್ರೈಕ್ ರೇಟ್ ಅಂದಕೊಡಲೇ ಇತ್ತೀಚೆಗೆ ವಿರಾಟ್ ಕೊಹ್ಲಿ ನೆನಪಾಗುತ್ತಾರೆ. ಏಕೆಂದರೆ, ಐಪಿಎಲ್-2024ರಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನೀಡಿರುವ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರಸಕ್ತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 509 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿದ್ದಾರೆ. ಆದರೆ, ಕೊಹ್ಲಿ ಸ್ಟ್ರೈಕ್ ರೇಟ್ ಮಾತ್ರ 146. ಹೀಗಾಗಿ ಎಲ್ಲರೂ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದಾರೆ. ಇಷ್ಟು ನಿಧಾನವಾಗಿ ಆಡಿದರೆ ವಿಶ್ವಕಪ್ ಗೆಲ್ಲಲು ಕಷ್ಟವಾಗಬಹುದು, ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವಂತೆ ಕೊಹ್ಲಿಗೆ ಸೂಚಿಸುತ್ತಿದ್ದಾರೆ. ಇದು ಕೊಹ್ಲಿಗೂ ಸಹ ಅರಿವಾಗಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ವೇಗವಾಗಿ ಆಟವಾಡಲು ಆರಂಭಿಸಿದ್ದಾರೆ. ಇದೀಗ ಕೊಹ್ಲಿ ಸ್ಟ್ರೈಕ್ ರೇಟ್ ಈ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಹಿಟ್ಮ್ಯಾನ್ ರೋಹಿತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಎಲ್ಲ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸಿದ ರೋಹಿತ್, ಪತ್ರಕರ್ತರು ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದಾಗ ಜೋರಾಗಿ ನಕ್ಕರು. ಹಿಟ್ಮ್ಯಾನ್ನ ಪಕ್ಕದಲ್ಲಿದ್ದ ಅಗರ್ಕರ್ಗೆ ನಗು ತಡೆಯಲಾಗಲಿಲ್ಲ. ವಿರಾಟ್ ಸ್ಟ್ರೈಕ್ ರೇಟ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ನಗುವನ್ನು ನಿಯಂತ್ರಿಸಿಕೊಂಡು ಅಗರ್ಕರ್ ಹೇಳಿದರು. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಕೊಹ್ಲಿ ಉತ್ತಮವಾಗಿ ಆಡುತ್ತಾರೆ ಎಂದು ಸ್ಪಷ್ಟಪಡಿಸಿದರು.
-
ಅಪರಾಧ2 days ago
Daughter-in-law-ಅತ್ತೆಯನ್ನು ಕೊಂದು ಸಹಜ ಸಾವು ಎಂಬಂತೆ ಬಿಂಬಿಸಿದ ಸೊಸೆ – 15 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ
-
ಬಿಗ್ ನ್ಯೂಸ್2 days ago
Vinayaka Baliga MurderCase | ಪ್ರಮುಖ ಘಟ್ಟ ತಲುಪಿದ ಸಾಮಾಜಿಕ ಕಾರ್ಯಕರ್ತ ಬಿಜೆಪಿ ಸದಸ್ಯ ವಿನಾಯಕ ಬಾಳಿಗ ಕೊಲೆ ಪ್ರಕರಣ : ಮೊದಲು ಕತ್ತಿ ನಾನು ಮಾರಟ ಮಾಡಿಲ್ಲವೆಂದ ಸಾಕ್ಷಿ – ಪಿಪಿ ಬಾಲನ್ ಅವರ ಪಾಟಿ ಸವಾಲಿಗೆ ಕೊಲೆಗೆ ಬಳಸಿದ ಕತ್ತಿ ಗುರುತಿಸಿದ ಸಾಕ್ಷಿ ದೇವದಾಸ್ ಶೆಣೈ : ಆರೋಪಿಗಳಿಗೆ ಸಂಕಷ್ಟ – ಶೀಘ್ರ ತೀರ್ಪು ಸಾಧ್ಯತೆ
-
ಮಂಗಳೂರು2 days ago
Student Fight: ಮಂಗಳೂರು : ಜ್ಯೂನಿಯರ್ಸ್ – ಸೀನಿಯರ್ಸ್ ಗಲಾಟೆ : ಕೈಗೆ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಹೊಡೆದಾಡಿಕೊಂಡ ಕಾಲೇಜು ವಿದ್ಯಾರ್ಥಿಗಳು – ವಿಡಿಯೋ ವೈರಲ್
-
ಸುಳ್ಯ2 days ago
ಕಡಬ : ಮದುವೆ ಔತಣಕೂಟದಲ್ಲಿ ಯುವಕ – ಯುವತಿ ಜತೆಗಿರುವ ಫೋಟೊ ತೆಗೆದ ಆರೋಪ – ತಂಡದಿಂದ ಫೋಟೊ ತೆಗೆದವನ ಮನೆಗೆ ನುಗ್ಗಿ ಹಲ್ಲೆ : ಪ್ರಕರಣ ದಾಖಲು
-
ದಕ್ಷಿಣ ಕನ್ನಡ1 day ago
woman bathing Video graphed: ಮದುವೆ ಮನೆಯಲ್ಲಿ ಬಾತ್ ರೂಂನಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ಆರೋಪ – ವಿಚಾರಿಸಲು ಮನೆಗೆ ಹೋದಗ ಚೂರಿ ಪ್ರದರ್ಶಿಸಿ ಹಲ್ಲೆ – ಕಡಬ ಠಾಣೆಯಲ್ಲಿ ಪ್ರಕರಣ ದಾಖಲು
-
ಮಂಗಳೂರು2 days ago
Kanthabare-Boodabare: ಸಹಸ್ರಮಾನ ಇತಿಹಾಸದ ಜೀವಂತ ಸಾಕ್ಷಿ ಕಾಂತಬಾರೆ-ಬೂದಬಾರೆ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ
-
ಬಿಗ್ ನ್ಯೂಸ್2 days ago
Prajwal Revanna Sex Scandal Case | ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಪ್ರಕರಣ : ಅಪಹರಣವಾಗಿದ್ದ ಸಂತ್ರಸ್ತೆಯನ್ನು ಹುಣಸೂರು ತೋಟದ ಮನೆಯಿಂದ ರಕ್ಷಿಸಿದ ಎಸ್ಐಟಿ
-
ಬಿಗ್ ನ್ಯೂಸ್1 day ago
Prajwal Revanna | ಜರ್ಮನಿಯಿಂದ ಅರಬ್ ರಾಷ್ಟ್ರಕ್ಕೆ ಪಲಾಯನಗೈದ ಪ್ರಜ್ವಲ್ ರೇವಣ್ಣ : ಇಂದು ಮಂಗಳೂರಿನಲ್ಲಿ ಶರಣಾಗ್ತಾರ..?