ಉಡುಪಿ
ಉಡುಪಿ : ನಡು ರಸ್ತೆಯಲ್ಲಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ – ವಿಡಿಯೋ ವೈರಲ್
ಉಡುಪಿ: ನಡು ರಸ್ತೆಯಲ್ಲಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಸಿಬ್ಬಂದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಉಡುಪಿ – ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ರಸ್ತೆಯಲ್ಲೇ ಜಗಳ ನಡೆದಿದೆ.
ಬಸ್ಗೆ ಸೈಡ್ ಕೊಡುವ ವಿಚಾರದಲ್ಲಿ ಬಸ್ಸಿನ ಸಿಬಂದಿಗಳ ಮಧ್ಯೆ ಜಗಳ ಅರಂಭಗೊಂಡಿದೆ. ಬಳಿಕ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿದ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ನ ನಿರ್ವಾಹಕ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಖಾಸಗಿ ಬಸ್ಸಿನ ನಿರ್ವಾಹಕ ಅವಾಚ್ಯ ಶಬ್ದಗಳಿಂದ ಸರ್ಕಾರಿ ಬಸ್ಸಿನ ಚಾಲಕನಿಗೆ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಚಾಲಕ ಸೈಯದ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾನೆ.
ಸದ್ಯ ಚಾಲಕ ಮತ್ತು ನಿರ್ವಾಹಕನ ಗಲಾಟೆಯನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಸಿಟ್ಟಿನಲ್ಲಿ ಚಾಲಕ ತನ್ನ ಚಪ್ಪಲಿ ತೆಗೆದುಕೊಂಡು ಖಾಸಗಿ ಬಸ್ಸಿನ ನಿರ್ವಾಹಕನಿಗೆ ಹೊಡೆದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆಯೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ಸಿನ ಸಿಬ್ಬಂದಿಗಳ ನಡುವೆ ಜಗಳ ನಡೆದಿದೆ.
ವೈರಲ್ ವಿಡಿಯೋ
ನಿಧನ ವಾರ್ತೆ
Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ
ಕುಂದಾಪುರ: ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರು ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದರು.
ಸುಬ್ರಹ್ಮಣ್ಯ ಧಾರೇಶ್ವರರವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು. ಯಕ್ಷರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.
ದಿ. ಉಪ್ಪೂರು ನಾರಣಪ್ಪ ಭಾಗವತರ ಶಿಷ್ಯರಾಗಿ ದಿ. ಕಾಳಿಂಗ ನಾವಡ ಅವರ ಅಬ್ಬರದ ಕಾಲದಲ್ಲೂ ಸರಿಸಾಟಿಯಾಗಿ ಬೆಳೆದ ಧಾರೇಶ್ವರರ ತಾಳಕ್ಕೆ ಕುಣಿಯದ ಕಲಾವಿದರಿಲ್ಲ. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ ಹೀಗೆ ಬಹುತೇಕ ಎಲ್ಲ ಕಲಾವಿದರಿಗೂ ಭಾಗವತಿಕೆ ಮಾಡಿದ್ದಾರೆ
1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು.
ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.
ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬದುಕಿನುದ್ದಕ್ಕೂ ತಮ್ಮ ಸ್ವರದ ಮೂಲಕವೇ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದ್ದ ಭಾಗವತರ ಅಗಲುವಿಕೆ ನಿಜಕ್ಕೂ ಮಾತಾಡದ ಸ್ಥಿತಿ ತಂದಿದೆ.
ಯಕ್ಷಗಾನದಲ್ಲಿ ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಸುಬ್ರಮಣ್ಯ ಧಾರೇಶ್ವರ ಎನ್ನುವ ಹೆಸರು ಜನಪ್ರಿಯತೆಯಲ್ಲಿರುವಾಗಲೇ ಏಕಾಏಕಿ ಮೇಳ ತಿರುಗಾಟ ನಿಲ್ಲಿಸಿದ್ದರು. 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸುಬ್ರಮಣ್ಯ ಧಾರೇಶ್ವರ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಭಾಗವತರಾಗಿ ಯಕ್ಷ ಸೇವೆ ಸಲ್ಲಿಸಿದ್ದರು.
ಉಡುಪಿ
Udupi-Chikkamagaluru-ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ। ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗಿಂತ ಅವರ ಪತ್ನಿ ಶ್ರೀಮಂತೆ
ಉಡುಪಿ, ಎ.3: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಒಟ್ಟು ಸುಮಾರು 1.11 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿದಾವತ್ನಲ್ಲಿ ತಿಳಿಸಿದ್ದಾರೆ.
ಆದರೆ ಕೋಟ ಅವರು ಬ್ಯಾಂಕಿನಲ್ಲಿ 40.64 ಲಕ್ಷ ರೂ.ಗಳ ಸಾಲವನ್ನು ತೋರಿಸಿದ್ದಾರೆ. ಕೋಟರ ಪತ್ನಿ ಶಾಂತ ಅವರ ಹೆಸರಿನಲ್ಲಿ ಒಟ್ಟು 1.73 ಕೋಟಿ ರೂ. ಸಂಪತ್ತಿದ್ದರೂ, ಅವರ ಹೆಸರಿನಲ್ಲೂ 35.43 ಲಕ್ಷ ರೂ. ಸಾಲವನ್ನೂ ತೋರಿಸಲಾಗಿದೆ. ಮಗ ಶಶಿಧರ ಬಳಿ 47.59 ಲಕ್ಷ ರೂ., ಮಗಳು ಸ್ವಾತಿ ಬಳಿ 3.70 ಲಕ್ಷ ರೂ. ಹಾಗೂ ಮಗಳು ಶೃತಿ ಬಳಿ 66,466ರೂ. ಸಂಪತ್ತಿದೆ.
ಅಫಿದಾವತ್ನಲ್ಲಿ ಕೋಟ ತಿಳಿಸಿದಂತೆ ಅವರ ಬಳಿ 90,000 ರೂ., ಪತ್ನಿ ಶಾಂತ ಬಳಿ 20,000ರೂ., ಮಗಳು ಸ್ವಾತಿ ಬಳಿ 10ಸಾವಿರ ರೂ., ಮಗ ಶಶಿಧರ ಬಳಿ 25 ಸಾವಿರ ರೂ. ನಗದು ಹಣ ಬ್ಯಾಂಕಿನಲ್ಲಿದೆ. ಮಗಳು ಶೃತಿ ಅವರಲ್ಲಿ ಯಾವುದೇ ಹಣವಿಲ್ಲ. ಕೋಟ ಅವರಲ್ಲಿ ಮಾರುತಿ ಅಲ್ಲೋ ಹಾಗೂ 22 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರಿದೆ. ಮಗ ಶಶಿಧರನ ಹೆಸರಿನಲ್ಲಿ 16.5 ಲಕ್ಷ ರೂ. ಮೌಲ್ಯದ ಹೊಂಡಾ ಸಿಟಿ ಕಾರಿದೆ.
ಕೋಟ ಅವರ ಹೆಸರಿನಲ್ಲಿ ಕೋಟತಟ್ಟು ಗ್ರಾಮದಲ್ಲಿ 13 ಸೆನ್ಸ್ ಹಾಗೂ ಪತ್ನಿಯ ಹೆಸರಿನಲ್ಲಿ 56 ಸೆನ್ಸ್ ಜಾಗವಿದೆ. ಇದನ್ನವರು 20110 ನವೆಂಬರ್ ತಿಂಗಳಲ್ಲಿ ಖರೀದಿಸಿದ್ದರು. ಅದರ ಮೌಲ್ಯ ಈಗ ಕ್ರಮವಾಗಿ 8 ಲಕ್ಷ ರೂ. ಹಾಗೂ 55ಲಕ್ಷ ರೂ.ಗಳಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ 63,850 ರೂ.ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರವಿದೆ. ಪತ್ನಿ ಬಳಿ 9.57ಲಕ್ಷ ರೂ.ಮೌಲ್ಯದ 150 ಚಿನ್ನಾಭರಣವಿದ್ದರೆ, ಮಗಳು ಸ್ವಾತಿ ಬಳಿ 3.19ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಮಗ ಶಶಿಧರ ಹಾಗೂ ಪುತ್ರಿ ಶೃತಿ ಬಳಿ ತಲಾ 10ಗ್ರಾಂ (63,850ರೂ.) ತೂಕದ ಚಿನ್ನಾಭರಣಗಳಿವೆ.
ಕೋಟ ಅವರಿಗೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸರಕಾರ ನೀಡಿದ 50+8 ಅಡಿ ವಿಸ್ತೀರ್ಣದ ಜಾಗವಿದ್ದು, ಈಗ ಅದರ ಮೌಲ್ಯ 40 ಲಕ್ಷ ರೂ. ಪತ್ನಿ ಶಾಂತ ಅವರ ಹೆಸರಿನಲ್ಲಿ ಗಿಳಿಯಾರುಗ್ರಾಮದಲ್ಲಿ 2019ರಲ್ಲಿ ಖರೀದಿಸಿದ 13.5 ಸೆನ್ಸ್ ಜಾಗವೂ ಇದೆ. ಈಗ ಅದರ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಿಳಿಯಾರು ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು ಅದರ ಅಂದಾಜು ಮೌಲ್ಯ 97.50 ಲಕ್ಷ ರೂ. ಎಂದು ಅಫಿದಾತ್ನಲ್ಲಿ ತಿಳಿಸಲಾಗಿದೆ. ಕೋಟ ಅವರಿಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ 40.64 ಲಕ್ಷ ರೂ. ಹಾಗೂ ಪತ್ನಿ ಶಾಂತರಿಗೆ ಬ್ರಹ್ಮಾವರದ ಸ್ಟೇಟ್ಬ್ಯಾಂಕಿನಲ್ಲಿ 35.43 ಲಕ್ಷ ಸಾಲವಿದೆ. ಮಗ ಶಶಿಧರರ ಹೆಸರಿನಲ್ಲೂ ವಿವಿಧ ಬ್ಯಾಂಕುಗಳಲ್ಲಿ 28.35 ಲಕ್ಷ ರೂ. ಸಾಲವಿದೆ.
ಉಡುಪಿ
Udupi Nejaru-ಉಡುಪಿಯ ನೇಜಾರು ಸಾಮೂಹಿಕ ಹತ್ಯಾಕಾಂಡ: ಆರೋಪಿ ಪ್ರವೀಣ ಚೌಗುಲೆಯಿಂದ ಕೋರ್ಟಿನಲ್ಲಿ ಶಾಕಿಂಗ್ ಹೇಳಿಕೆ – ಆರೋಪಿಯನ್ನು ಕರೆ ತಂದ ಕುಡಿತದ ಮತ್ತಿನಲ್ಲಿದ್ದ ಅಧಿಕಾರಿ…!
ನಾಲ್ಕು ತಿಂಗಳ ಹಿಂದೆ ಉಡುಪಿಯ ನೇಜಾರಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ಆರೋಪಿ ಬೆಳಗಾವಿಯ ಪ್ರವೀಣ ಚೌಗುಲೆ (39) ಬುಧವಾರ ಉಡುಪಿ ಜಿಲ್ಲಾನ್ಯಾಯಾಲಯದಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದು, ತಾನು ನಿರಪರಾಧಿ, ಯಾವುದೇ ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ.
ಪ್ರವೀಣ ಚೌಗುಲೆಯನ್ನು ಬುಧವಾರ ಉಡುಪಿ ಜಿಲ್ಲಾನ್ಯಾಯಾಲಯಕ್ಕೆ ದೋಷಾರೋಪಣೆಗೆ ಹಾಜರುಪಡಿಸಲಾಯಿತು. ಮಾ.13ರಂದು ದೋಷಾರೋಪಣೆ ಪ್ರಕ್ರಿಯೆ ನಡೆಯಬೇಕಾಗಿತ್ತಾದರೂ, ಚೌಗುಲೆಗೆ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದ್ದರಿಂದ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಪೊಲೀಸರು ಉಡುಪಿಯ ಜಿಲ್ಲಾ ನ್ಯಾಯಲಯಕ್ಕೆ ಹಾಜರುಪಡಿಸಿದರು.
ಬೆಂಗಳೂರಿನಿಂದ ಉಡುಪಿಗೆ ಆರೋಪಿಯನ್ನು ಕರೆ ತಂದಿದ್ದ ಪೊಲೀಸರ ಪೈಕಿ ಒಬ್ಬ ಅಧಿಕಾರಿ ಮದ್ಯಪಾನದ ಮತ್ತಿನಲ್ಲಿದ್ದ. ನ್ಯಾಯಾಲಯದ ಹಿಂದಿನ ಬಾಗಿಲಿನಿಂದ ಚೌಗಲೆಯನ್ನು ಒಳಗೆ ಕರೆತಂದಾಗ, ಅಲ್ಲಿ ಕುತೂಹಲದಿಂದ ಸೇರಿದ್ದ ಜನರನ್ನು ನಿಯಂತ್ರಿಸುವ ನೆಪದಲ್ಲಿ ಮತ್ತಿನಲ್ಲಿದ್ದ ವಾಗ್ವಾದಕ್ಕಿಳಿದರು.
ತಾವು ಉಮೇಶ್ ರೆಡ್ಡಿ ಎಂಬ ಗಾಂಜಾ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತಿದ್ದೇವೆ ಎಂದು ಸುಳ್ಳು ಕೂಡ ಹೇಳಿದರು. ಯಾವ ಪ್ರಕರಣ, ಯಾರು ಆರೋಪಿ ಎಂಬುದೇ ಪೊಲೀಸ್ ಅಧಿಕಾರಿಗೆ ತಿಳಿದಿಲ್ಲ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಎಸ್ಪಿ ಅತ್ಯಂತ ಗಂಭೀರವಾದ ಪ್ರಕರಣದ ಆರೋಪಿಯನ್ನು ಕರೆ ತರುವ ವೇಳೆ ಅನುಚಿತ ವರ್ತನೆ ತೋರಿಸ ಅಧಿಕಾರಿಯ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
ಕೋರ್ಟಿನಲ್ಲಿ ಏನಾಯಿತು ?
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆತನ ಮೇಲೆ ಹೊರಿಸಲಾಗಿರುವ ಆರೋಪಪಟ್ಟಿಯನ್ನು ಓದಿ ಹೇಳಲಾಯಿತು. ಅದನ್ನು ಆಲಿಸಿದ ಆತ ಅವುಗಳನ್ನು ನಿರಾಕರಿಸಿದ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ. ಇದರಿಂದ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಅವರು ಪ್ರಕರಣದ ವಿಚಾರಣೆಗೆ ಮೊದಲು ಏ.5ರಂದು ಆರೋಪಿಗೆ ಪ್ರಿ ಟ್ರಾಯಲ್ ಕಾನ್ಸರೆನ್ಸ್ ನಡೆಸಲು ಆದೇಶಿಸಿದರು.
ಏರ್ಇಂಡಿಯಾ ಏಕ್ಸ್ಪ್ರೆಸ್ ಲ್ಲಿ ಉದ್ಯೋಗಿಯಾಗಿದ್ದ ದೀಪಕ್ ಚೌಗುಲೆ, ತನ್ನ ಸಹೋದ್ಯೋಗಿಯಾಗಿದ್ದ ಐನಾಜ್ ಮತ್ತು ಆಕೆಯ ತಾಯಿ, ಸಹೋದರಿ ಮತ್ತು ಸಹೋದರನನ್ನು ನ.12ರಂದು ಐನಾಜ್ ಳ ನೇಜಾರಿನ ಮನೆಯಲ್ಲಿ ಹಾಡಹಗಲೇ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ನಂತರ ಆತನನ್ನು ಬಂಧಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು.
ಏನಿದು ಪ್ರಿ ಟ್ರಾಯಲ್ ಕಾನ್ಸರೆನ್ಸ್?
ಪ್ರಿ ಟ್ರಾಯಲ್ ಕಾನ್ಸರೆನ್ಸ್ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ವಿಚಾರಣೆಗೆ ಯಾವೆಲ್ಲ ಸಾಕ್ಷಿಗಳ ಅಗತ್ಯ ಇದೆ ಎಂಬುದನ್ನು ತೀರ್ಮಾನಿಸಿ, ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ.
-
ಸಾಮಾಜಿಕ ಮಾಧ್ಯಮ1 day ago
Hasana sex tape : ಚುನಾವಣೆ ಹೊಸ್ತಿಲಲ್ಲಿ ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್ ಡ್ರೈವ್ ಸೌಂಡ್ ! ಅಸಲಿಯ / ನಕಲಿಯ ತೀವ್ರ ಚರ್ಚೆ
-
ದಕ್ಷಿಣ ಕನ್ನಡ1 day ago
Student harrased in bus ಉಪ್ಪಿನಂಗಡಿ: ಸ್ಲೀಪರ್ ಕೋಚ್ ಬಸ್ನಲ್ಲಿ ವಿದ್ಯಾರ್ಥಿನಿಗೆ ಜತೆ ಸಹ ಪ್ರಯಾಣಿಕನಿಂದ ಕಿರುಕುಳ – ಯುವತಿ ವ್ಯಗ್ರಗೊಳ್ಳುತ್ತಾಳೆ ಕಿಟಕಿಯಿಂದ ಹಾರಿ ಆರೋಪಿ ಪರಾರಿ – ಮುಂದೇನಾಯಿತು ?
-
ಬಿಗ್ ನ್ಯೂಸ್2 days ago
NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ
-
ನಿಧನ ವಾರ್ತೆ1 day ago
Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ
-
ಮಂಗಳೂರು1 day ago
Janardhana Poojary-ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ- ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಪದ್ಮರಾಜ್ ಆರ್ ಪೂಜಾರಿಯನ್ನು ಗೆಲ್ಲಿಸುವ ಮೂಲಕ ಆಗಬೇಕಿದೆ :ಜನಾರ್ದನ ಪೂಜಾರಿ
-
ಸ್ಥಳೀಯ1 day ago
Mithun Rai-ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮೂಡುಬಿದಿರೆ ಬಿಜೆಪಿ ಶಾಸಕರ ಪ್ರಾಮಾಣಿಕ ಪ್ರಯತ್ನ – ಮಿಥುನ್ ರೈ ಶಾಕಿಂಗ್ ಹೇಳಿಕೆ
-
ಬಿಗ್ ನ್ಯೂಸ್7 hours ago
ಕುಟುಂಬ ಸಮೇತ ಮತ ಚಲಾಯಿಸಲು ಪದ್ಮರಾಜ್ ಬಂದಾಗ ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ – ಪೊಲೀಸ್ ಅಧಿಕಾರಿಯನ್ನು ತಳ್ಳಾಡಿ ಪುಂಡಾಟ : ಮಾಧ್ಯಮದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ
-
ಅಪರಾಧ24 hours ago
Bantwal-ಬಂಟ್ವಾಳ : ಬಾಲಕಿಯೊಂದಿಗೆ ಅನುಚಿತ ವರ್ತನೆ – ಯುವಕನ ವಿರುದ್ಧ ಪ್ರಕರಣ ದಾಖಲು