Connect with us

ಕ್ರೀಡೆ

FIFA WORLD CUP | 36 ವರ್ಷದ ಬಳಿಕ ಅರ್ಜೆಂಟೀನಾಕ್ಕೆ ಪುಟ್ಬಾಲ್ ಚಾಂಪಿಯನ್ ಶಿಪ್ – ಪಿಫಾ ಚಾಂಪಿಯನ್ ಶಿಪ್ ಮೂಲಕ ಮೆಸ್ಸಿ ಕನಸು ನನಸು : ಮೆಸ್ಸಿಗೆ ಚಿನ್ನದ ಬಾಲ್, ಎಂಬಾಪೆ ಗೆ ಚಿನ್ನದ ಬೂಟ್: ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ : ಇದು ಭಾರತೀಯರಿಗೆ ಸಂದ ಮೊದಲ ಗೌರವ

Ad Widget

Ad Widget

Ad Widget

Ad Widget Ad Widget

ಕತಾರ್ : 36 ವರ್ಷದ ಬಳಿಕ ವಿಶ್ವಕಪ್‌ ಗೆಲುವಿನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್‌ ಮೆಸ್ಸಿ ನನಸನ್ನಾಗಿಸಿಕೊಂಡಿದ್ದಾರೆ. ತಾವು ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಎಂಬುದನ್ನು ಮತ್ತೊಮ್ಮೆ ಅಚ್ಚತ್ತಿ ಹೇಳಿದ ಅರ್ಜೆಂಟೀನಾದ ನಾಯಕ, ಫ್ರಾನ್ಸ್‌ ವಿರುದ್ಧದ ರೋಚಕ ಫೈನಲ್‌ನಲ್ಲಿ ಗೆಲುವಿನ ರೂವಾರಿಯಾದರು. ಫುಟ್ಬಾಲ್‌ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಪೆನಾಲ್ಟಿ ಶೂಟ್‌ನಲ್ಲಿ ಒತ್ತಡ ಮೆಟ್ಟಿನಿಂತ ಮೆಸ್ಸಿ ಬಳಗ 4-2 ಅಂತರದಲ್ಲಿ 2018ರ ಚಾಂಪಿಯನ್ಸ್‌ ಫ್ರಾನ್ಸ್‌ ತಂಡದ ಸದ್ದಡಗಿಸಿ 2022ರ ಸಾಲಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ (FIFA WORLD CUP) ಟ್ರೋಫಿ ಎತ್ತಿಹಿಡಿಯಿತು.

Ad Widget

Ad Widget

Ad Widget

Ad Widget

Ad Widget


ಅಡಿಡಾಸ್ ಚಿನ್ನದ ಬಾಲ್ ಲಿಯನಲ್ ಮೆಸ್ಸಿ ಗೆ, ಅಡಿಡಾಸ್ ಚಿನ್ನದ ಬೂಟ್ ಕಿಲಿಯನ್ ಎಂಬಾಪೆ ಗೆದ್ದಿದ್ದಾರೆ . ಅಡಿಡಾಸ್ ಚಿನ್ನದ ಗ್ಲೌಸ್ ನ್ನು ಎಮಿಲಿಯನ್ ಮರ್ಟಿನೆಝ್ ಗೆ ಹಾಗೂ ಯಂಗ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ನ್ನು ಎನ್ಝೋ ಫೆರ್ನಾಂಡಿಸ್ ಪಡೆದಿದ್ದಾರೆ.

Ad Widget

Ad Widget

ಬಹುಮಾನ ಹಣ ಎಷ್ಟು ಗೊತ್ತಾ..?
ಮೊದಲ ಬಹುಮಾನ ಪಡೆದ ಅರ್ಜೆಂಟೀನಾ ತಂಡ 42 ಮಿಲಿಯನ್ ಡಾಲರ್ ಅಂದರೆ 347 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ದ್ವಿತೀಯ ಪಡೆದ ಪ್ರಾನ್ಸ್ 30 ಮಿಲಿಯನ್ ಡಾಲರ್ ಅಂದರೆ 247 ಕೋಟಿ ರೂಪಾಯಿ ಬಹುಮಾನದ ಮೊತ್ತ ಪಡೆಯಲಿದ್ದಾರೆ. 3 ನೇ ಸ್ಥಾನಕ್ಕೆ 220 ಕೋಟಿ ಹಾಗೂ ನಾಲ್ಕನೇ 204 ಕೋಟಿ ಬಹುಮಾನ ಮೊತ್ತವಿದೆ.
5 ರಿಂದ 8 ನೇ ಸ್ಥಾನಕ್ಕೆ 138 ಕೋಟಿ , 9-16 ನೇ ಸ್ಥಾನದವರೆಗೆ 106 ಕೋಟಿ ರೂಪಾಯಿ ಹಣ ಪಡೆದರೆ 17 ನೇ ಸ್ಥಾನದಿಂದ 32 ನೇ ಸ್ಥಾನದವರೆಗೆ 74 ಕೋಟಿ ರೂಪಾಯಿ ಹಣ ಪಡೆಯಲಿದ್ದಾರೆ.

Ad Widget

Ad Widget

ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ:

Ad Widget

Ad Widget

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ದುಬಾರಿ ಕ್ರೀಡೆಯಾದ ಫಿಫಾ ವಿಶ್ವಕಪ್‌ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಕತರ್‌ನ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ಗೆ ಮುನ್ನ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ದೀಪಿಕಾರೊಂದಿಗೆ ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಮತ್ತು ನಾಯಕ ಇಕರ್ ಕ್ಯಾಸಿಲಾಸ್ ಇದ್ದರು. ಇದು ಭಾರತೀಯರಿಗೆ ಸಂದ ಮೊದಲ ಗೌರವ ಎನ್ನಲಾಗಿದೆ.

ಮೇ, 2022 ರಲ್ಲಿ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ದೀಪಿಕಾ, ಫೈನಲ್‌ನ ವಿಜೇತರಿಗೆ ನೀಡಲಾಗುವ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ.

ನಟ ಶಾರುಖ್ ಖಾನ್ ಗೆ ಫುಟ್ಬಾಲ್ ಫೈನಲ್ ಪಂದ್ಯಾಟದ ಸ್ಟುಡಿಯೋದಲ್ಲಿ ಅವಕಾಶ ಸಿಕ್ಕಿದೆ.
‘ಪಠಾಣ್’ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ಈ ಮೂಲಕ ಸಿಕ್ಕಿದೆ ಎನ್ನಲಾಗುತ್ತಿದೆ. ಈಗಾಗಲೇ ಬಲಪಂಥೀಯ ವಿರೋಧ ಕಟ್ಟಿಕೊಂಡ ಈ ಸಿನಿಮಾಕ್ಕೆ ವಿಶ್ವ ಶ್ರೇಷ್ಠ ವೇದಿಕೆಯಲ್ಲಿ ಪ್ರಚಾರ ಸಿಕ್ಕಿರುವ ಬಗ್ಗೆ ಭಾರತದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ. ಕೆಲವರು ಬಲಪಂಥೀಯರ ಕಾಲೇಲೆದಿದ್ದಾರೆ.

ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ಅನ್ನು ಮಣಿಸಿತು. ಸೋಲಿನಿಂದ ನಿರಾಶೆಗೊಳಾಗದ ಆಟಗಾರ ಕೆಲಿಯನ್ ಎಂಬಪ್ಪೆ ಅವರನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಂಗಳಕ್ಕೆ ತೆರಳಿ ಸಮಾಧಾನಪಡಿಸಿದರು.

ಪಂದ್ಯದ ಮೊದಲಾರ್ಧದಲ್ಲೇ ಮೆಸ್ಸಿ ಮ್ಯಾಜಿಕ್‌ನೊಂದಿಗೆ 2-0 ಅಂತರದ ಮುನ್ನಡೆ ಪಡೆದಿದ್ದ ಅರ್ಜೆಂಟೀನಾ ಜಯ ದಾಖಲಿಸುವ ಹಾಟ್‌ ಫೇವರಿಟ್‌ ಆಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿತ್ತು. ಫ್ರಾನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ್ದ ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಪೆ 2 ನಿಮಿಷಗಳಲ್ಲಿ ಬ್ಯಾಕ್‌-ಟು-ಬ್ಯಾಕ್‌ ಗೋಲ್‌ ಬಾರಿಸಿ ಪೂರ್ಣ ಸಮಯದ ಅಂತ್ಯಕ್ಕೆ 2-2ರ ಸಮಬಲ ತಂದರು.

ನಿಗದಿತ 90 ನಿಮಷಗಳ ಅಂತ್ಯಕ್ಕೆ ಸ್ಕೋರ್‌ 2-2ರ ಸಮಬಲ ಕಂಡ ಪರಿಣಾಮ ಆಟ ಹೆಚ್ಚುವರಿ 30 ನಿಮಿಷಗಳ ಆಟಕ್ಕೆ ಕಾಲಿಟ್ಟಿತು. ಇಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡಿ ಗೋಲ್‌ ಗಳಿಕೆಗೆ ಸತತ ಪ್ರಯತ್ನ ನಡೆಸಿದ ಅರ್ಜೆಂಟೀನಾ ಪರ ಮತ್ತೆ ಮಿಂಚಿದ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್‌ ಗಳಿಸಿದರು. ಆದರೆ, ಅದರ ಬೆನ್ನಲ್ಲೇ ಡಿಫೆನ್ಸ್‌ನಲ್ಲಿ ಮಾಡಿಕೊಂಡ ಎಡವಟ್ಟಿನ ಕಾರಣ 118ನೇ ನಿಮಿಷದಲ್ಲಿ ಎದುರಾಳಿಗೆ ಪೆನಾಲ್ಟಿ ಸ್ಪಾಟ್‌ ಕಿಕ್‌ ಬಿಟ್ಟುಕೊಟ್ಟು ಬೆಪ್ಪಾಯಿತು. ಇದರ ಲಾಭ ಪಡೆದ ಕಿಲಿಯನ್‌ ಎಂಬಾಪೆ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ 3-3ರ ಸಮಬಲ ತಂದರು. ಇದು ವಿಶ್ವಕಪ್‌ ಫೈನಲ್‌ ಒಂದರಲ್ಲಿ ಮೂಡಿಬಂದ ಮೊದಲ ಹ್ಯಾಟ್ರಿಕ್‌ ಗೋಲಾಗಿದೆ. ಹೆಚ್ಚುವರಿ ಸಮಯದ ಕೊನೇ 2 ನಿಮಿಷಗಳಲ್ಲಿ ಎರಡೂ ತಂಡಗಳಿಗೆ ಗೋಲ್‌ ಗಳಿಕೆಯ ಅವಕಾಶ ಸಿಕ್ಕಿತ್ತಾದರೂ ಕೂದಲೆಳೆ ಅಂತರದಲ್ಲಿ ಅದೃಷ್ಟ ಕೈತಪ್ಪಿ ಹೋಯಿತು. ಫಲಿತಾಂಶಕ್ಕಾಗಿ ಪಂದ್ಯ ಪೆನಾಲ್ಟಿ ಶೂಟ್‌ಔಟ್‌ ಕಡೆಗೆ ಮುಖಮಾಡಿತು.

ಪೆನಾಲ್ಟಿ ಶೂಟ್‌ನಲ್ಲೂ ತಮ್ಮ ಏಕಾಗ್ರತೆ ಕಾಯ್ದುಕೊಂಡ ಎಂಬಾಪೆ ಫ್ರಾನ್ಸ್‌ಗೆ 1-0 ಅಂತರದ ಮುನ್ನಡೆ ಕೊಟ್ಟರು. ಬಳಿಕ ಬಂದ ಮೆಸ್ಸಿ 1-1 ಅಂತರದ ಸಮಬಲ ತಂದರು. ಆದರೆ ಫ್ರಾನ್ಸ್‌ ಪರ 2ನೇ ಮತ್ತು 3ನೇ ಪ್ರಯತ್ನದಲ್ಲಿ ಕಿಂಗ್‌ಸ್ಲೀ ಕೊಮನ್‌ ಮತ್ತು ಅರುಲೆನ್ ತೊಮೆನಿ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಲು ವಿಫಲವಾದರೆ, ನಾಲ್ಕನೇ ಪ್ರಯತ್ನದಲ್ಲಿ ರಾಂಡಲ್‌ ಕೊಲೊ ಗಳಿಸಿದ ಗೋಲ್‌ ಸೋಲಿನ ಅಂತರ ತಗ್ಗಿಸುವುದಕ್ಕಷ್ಟೇ ಸೀಮಿತವಾಯಿತು. ಅರ್ಜೆಂಟೀನಾ ಪರ 2ನೇ, 3ನೇ ಮತ್ತು 4ನೇ ಪ್ರಯತ್ನಗಳಲ್ಲಿ ಪಾಲೊ ಡಿಬಾಲ, ಲಿಯನಾರ್ಡೊ ಪರೇಡಸ್‌ ಮತ್ತು ಗೊನ್ಸಾಲೊ ಮೌಟಿಯೆಲ್‌ ಗೋಲ್‌ ಗಳಿಸುವ ಮೂಲಕ ಇತಿಹಾಸದ ಪುಟದಲ್ಲಿ ತಮ್ಮ ಹೆಸರುಗಳನ್ನು ಅಚ್ಚಳಿಯದಂತೆ ಒತ್ತಿಬಿಟ್ಟರು.

1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಕೊನೆಯ ಬಾರಿ ವಿಶ್ವ ಕಪ್‌ ಗೆದ್ದಿದ್ದ ಅರ್ಜೆಂಟೀನಾ ತಂಡ ಇದೀಗ ಲಿಯೋನೆಲ್‌ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್‌ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ. 2014ರಲ್ಲೂ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ಫೈನಲ್‌ ತಲುಪಿತ್ತಾದರೂ ಜರ್ಮನಿ ವಿರುದ್ಧದ ಫೈನಲ್‌ನಲ್ಲಿ ಮುಗ್ಗರಿಸಿತ್ತು. 1978ರಲ್ಲಿ ಅರ್ಜೆಂಟೀನಾ ತನ್ನ ಮೊದಲ ವಿಶ್ವಕಪ್‌ ಗೆದ್ದಿತ್ತು.

2022ರ ಸಾಲಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು ಮುಗ್ಗರಿಸಿದ ಅರ್ಜೆಂಟೀನಾ ತಂಡ ನಂತರದ ಎಲ್ಲ ಪಂದ್ಯಗಳನ್ನು ಗೆದ್ದು ವಿಶ್ವ ಚಾಂಪಿಯನ್ಸ್‌ ಎನಿಸಿದೆ.

Click to comment

Leave a Reply

ಅಂತರ ರಾಜ್ಯ

Hardik Patel-ಐಪಿಎಲ್ʼನ ಸತತ ಸೋಲಿನಿಂದ ಕಂಗೆಟ್ಟು ದೇವರ ಮೊರೆ ಹೋದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ – ಸೋಮನಾಥ ದೇವಸ್ಥಾನಕ್ಕೆ ಭೇಟಿ

Ad Widget

Ad Widget

Ad Widget

Ad Widget Ad Widget

ಮುಂಬೈ: ಸತತ ಸೋಲು ಮತ್ತು ಪ್ರೇಕ್ಷಕರ ವರ್ತನೆಯಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಈಗ ದೇವರ ಮೊರೆ ಹೋಗಿದ್ದಾರೆ. ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವ ಹಾರ್ದಿಕ್, ವಿಶೇಷ ಪೂಜೆ ಸಲ್ಲಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಸಾಂಪ್ರದಾಯಿಕ ಉಡುಪು ಧರಿಸಿದ ಪಾಂಡ್ಯ ಪೂಜೆ ಸಲ್ಲಿಸಿದ್ದಾರೆ. ಸೋಮನಾಥ ದೇವಾಲಯವು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ವರ್ಷವಿಡೀ ವಿಶ್ವಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ.

Ad Widget

Ad Widget

ಗುಜರಾತ್ ಟೈಟಾನ್ಸ್ ನಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಹಾರ್ದಿಕ್ ಪಾಂಡ್ಯಗೆ ಮುಂಬೈ ನಾಯಕತ್ವ ನೀಡಲಾಗಿದೆ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಕ್ಕಿಳಿಸಿದ ಬಳಿಕ ಅಭಿಮಾನಿಗಳು ಹಾರ್ದಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಿ ಪಂದ್ಯದಲ್ಲಿ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ತವರು ಮೈದಾನ ವಾಂಖೆಡೆಯಲ್ಲೂ ಹಾರ್ದಿಕ್ ಅಭಿಮಾನಿಗಳ ನಿಂದನೆ ಎದುರಿಸಿದ್ದರು.

Ad Widget

Ad Widget

ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೂರು ಪಂದ್ಯಗಳನ್ನೂ ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ ಕೊನೆಯ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಡೆ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ರವಿವಾರ (ಎ.7) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

Ad Widget

Ad Widget
Continue Reading

ಕ್ರೀಡೆ

Mayank Yadav-ವಿಶ್ವಕಪ್‌ಗೆ ಬೇಕು ಈ ಐಪಿಎಲ್‌ ನ ಸೆನ್ಸೆಷನ್‌ “ಸೂಪರ್‌ ಕ್ವಿಕ್‌’ ಬೌಲರ್‌ ಮಾಯಾಂಕ್‌ ಯಾದವ್‌

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ “ಸೂಪರ್‌ ಕ್ವಿಕ್‌’ ಬೌಲರ್‌ ಮಾಯಾಂಕ್‌ ಯಾದವ್‌ ಈ ಐಪಿಎಲ್‌ನಲ್ಲಿ ಭಾರೀ ಸಂಚಲನ ಮೂಡಿಸುತ್ತಿದ್ದಾರೆ. ಶರ ವೇಗದ, ಅಷ್ಟೇ ನಿಖರ ಎಸೆತಗಳಿಂದ ಎದುರಾಳಿಯ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಪಂಜಾಬ್‌, ಬಳಿಕ ಆರ್‌ಸಿಬಿ ಆಟಗಾರರು ಈ ವೇಗಿಯ ದಾಳಿಗೆ ತತ್ತರಿಸಿ ಶರಣಾಗತಿ ಸಾರಿದ್ದಾರೆ. ಮೊನ್ನೆ ಮೊನ್ನೆಯ ತನಕ ಅಪರಿಚಿತರಾಗಿಯೇ ಇದ್ದ ದಿಲ್ಲಿಯ ಈ ಬೌಲರ್‌ ಈಗ ಐಪಿಎಲ್‌ನ ಸೂಪರ್‌ ಸ್ಟಾರ್‌. ಇವರ ಸಾಹಸವನ್ನು ಕೊಂಡಾಡಿದವರೆಲ್ಲ ಮುಂದಿನ ಟಿ20 ವಿಶ್ವಕಪ್‌ಗೆ ಈ ವೇಗಿ ಟೀಮ್‌ ಇಂಡಿಯಾದಲ್ಲಿ ಇರಲೇಬೇಕು ಎಂದು!

Ad Widget

Ad Widget

Ad Widget

Ad Widget

Ad Widget

ಮಾಯಾಂಕ್‌ ಯಾದವ್‌ ಅವರ ವೇಗದ ಬೌಲಿಂಗ್‌ ವಿಶ್ವದ ಸಮಕಾಲೀನ ವೇಗಿಗಳಾದ ಕಾಗಿಸೊ ರಬಾಡ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಮೊದಲಾದವರ ಪ್ರಶಂಸೆಗೆ ಪಾತ್ರವಾಗಿದೆ. ಮಾಯಾಂಕ್‌ ಭಾರತದ ವಿಶ್ವಕಪ್‌ ತಂಡದಲ್ಲಿರಬೇಕು ಎಂಬುದು ಎಲ್ಲರ ಹಾರೈಕೆಯೂ ಆಗಿದೆ.

Ad Widget

Ad Widget

ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್‌ ಉರುಳಿಸಿದ್ದು, ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದದ್ದು ಮಾಯಾಂಕ್‌ ಯಾದವ್‌ ಅವರ ಯಶಸ್ಸಿಗೆ ಸಾಕ್ಷಿ.

Ad Widget

Ad Widget

ಇಶಾಂತ್‌, ಸೈನಿ ಸಲಹೆ
ಮಾಯಾಂಕ್‌ ಯಾದವ್‌ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸೀನಿಯರ್‌ ಬೌಲರ್‌ಗಳಾದ ಇಶಾಂತ್‌ ಶರ್ಮ, ನವದೀಪ್‌ ಸೈನಿ ಅವರು ನೀಡಿದ ಸಲಹೆ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ.

Ad Widget

Ad Widget

“ನಿನ್ನ ಬೌಲಿಂಗ್‌ನಲ್ಲಿ ಯಾವುದೇ ಹೊಸತನ ಬೇಕಿದ್ದರೂ ಅಳವಡಿಸಿಕೊ, ಆದರೆ ಯಾವ ಕಾರಣಕ್ಕೂ ವೇಗದೊಂದಿಗೆ ರಾಜಿ ಮಾಡಿಕೊಳ್ಳಬೇಡ ಎಂದು ಇಶಾಂತ್‌ ಭಾಯ್‌, ಸೈನಿ ಭಾಯ್‌ ಸಲಹೆ ನೀಡಿದ್ದಾರೆ. ಇದನ್ನು ನಾನು ಪಾಲಿಸಿಕೊಂಡು ಬರುತ್ತಿದ್ದೇನೆ’ ಎಂದಿದ್ದಾರೆ ಮಾಯಾಂಕ್‌ ಯಾದವ್‌.

“ವೇಗದ ಎಸೆತಗಳೊಂದಿಗೆ ವಿಕೆಟ್‌ ಕೆಡವಿ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸುವುದು ನನ್ನ ಪ್ರಮುಖ ಗುರಿ. ಆದರೆ ಇಂಥ ವೇಗದ ಎಸೆತಗಳ ವೇಳೆ ಪೇಸ್‌, ಲೈನ್‌-ಲೆಂತ್‌ ಕಾಪಾಡಿ ಕೊಳ್ಳುವುದು ಅತೀ ಮುಖ್ಯ. ಬೌಲಿಂಗ್‌ ವೇಳೆ ವೇಗದ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಪಂದ್ಯದ ಬಳಿಕ ಜನರಲ್ಲಿ ನನ್ನ ವೇಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ’ ಎಂಬುದಾಗಿ ಮಾಯಾಂಕ್‌ ಯಾದವ್‌ ಹೇಳಿದರು.

“ಅತೀ ವೇಗದ ಬೌಲರ್‌ ಆಗುವು ದಕ್ಕಿಂತ ಅತ್ಯುತ್ತಮ ಬೌಲರ್‌ ಆಗ ಬೇಕೆಂಬುದು ನನ್ನ ಕನಸು. ಇದೇ ಯಶಸ್ಸು ಕಾಯ್ದುಕೊಂಡು ಭಾರತ ತಂಡದ ಪರ ಆಡುವುದು ನನ್ನ ಗುರಿ. ಮುಂದಿರುವುದು ಟಿ20 ವಿಶ್ವಕಪ್‌. ನಿರೀಕ್ಷೆಯಂತೂ ಇದೆ. ಏನಾಗುತ್ತದೋ ನೋಡೋಣ. ಸದ್ಯದ ಯೋಚನೆ ಐಪಿಎಲ್‌ ಮಾತ್ರ’ ಎಂದಿದ್ದಾರೆ ಮಾಯಾಂಕ್‌ ಯಾದವ್‌.

ಮಾಯಾಂಕ್‌ ಹಾದಿ…
ಮಾಯಾಂಕ್‌ ಪ್ರಭು ಯಾದವ್‌, ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಕಲ್ಪನೆ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. 7 ವರ್ಷಗಳ ಹಿಂದೆ ಹೊಸದಿಲ್ಲಿ ಸಾನೆಟ್‌ ಕ್ರಿಕೆಟ್‌ ಕ್ಲಬ್‌ಗೆ ಕಾಲಿಟ್ಟಾಗ ಅವರಿಗೆ ಕೇವಲ 14 ವರ್ಷ. ಕೃಶ ಶರೀರ ಹೊಂದಿದ್ದ ಮಾಯಾಂಕ್‌ ಬಳಿ ಯೋಗ್ಯವಾದ ಶೂ ಕೂಡ ಇರಲಿಲ್ಲ.

ಸಾನೆಟ್‌ ಕ್ಲಬ್‌ಗೆ ಒಬ್ಬ ಒಳ್ಳೆಯ ಬೌಲರ್‌ ಬೇಕಿತ್ತು. ಅದೇ ವೇಳೆ ಮಾಯಾಂಕ್‌ ಕ್ಲಬ್‌ ಪ್ರವೇಶಿಸಿದ್ದರು. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ಕುಟುಂಬದ ದಿನದ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಸಾನೆಟ್‌ ಕ್ಲಬ್‌ನ ತಾರಕ್‌ ಸಿನ್ಹಾ ಇವರ ಮೊದಲ ಕೋಚ್‌.

Continue Reading

ಅಂತರ ರಾಜ್ಯ

Rohit Sharma-ಐಪಿಎಲ್ ಪಂದ್ಯದ ವೇಳೆ ವಿಕೆಟ್ ಕೀಳಲು ಬೌಲರ್ ಗೆ ನೆರವಾದ ರೋಹಿತ್ ;ಇದು ಕ್ಯಾಪ್ಟನ್ಸಿ ನೋಡಿ ಕಲಿ – ಪಾಂಡ್ಯಗೆ ಮೊಟಕಿದ ಮುಂಬೈ ಇಂಡಿಯನ್ಸ್ ಫಾನ್ಸ್

Ad Widget

Ad Widget

Ad Widget

Ad Widget Ad Widget

ನವದೆಹಲಿ: ಗುಜಾರತ್ ಟೈಟಾನ್ಸ್ ನಾಯಕನಾಗಿ ಅತ್ಯಧ್ಬುತ ಪ್ರದರ್ಶನ ನೀಡಿದ ಬಾರತದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ತಂಡ ಬದಲಾಯಿಸಿ ಮುಂಬೈ ಇಂಡಿಯನ್ಸ್ ನ ಸಾರಥ್ಯ ವಹಿಸಿದ್ದಾರೆ. ಆ ಬಳಿಕ ಅವರ ಗ್ರಹಗತಿಯೆ ಬದಲಾದಂತಿದೆ. ಮೊದಲು ಮುಂಬೈ ಇಂಡಿಯನ್ಸ್ ಕೋಪಕ್ಕೆ ತುತ್ತಾದ ಅವರು ಇದೀಗ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದಾರೆ

Ad Widget

Ad Widget

Ad Widget

Ad Widget

Ad Widget

ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕಳಪೆ ನಾಯಕತ್ವದಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯ ಅಂತಿಮ ಹಂತದಲ್ಲಿ ಗುಜರಾತ್ ಪಾಲಾಯಿತು.

Ad Widget

Ad Widget

ನಿನ್ನೆ (ಮಾ. 27) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹಾರ್ದಿಕ್ ತಂತ್ರಗಳು ಕೈ ಕೊಟ್ಟವು. ಕೆಟ್ಟ ನಾಯಕತ್ವದ ನಿರ್ಧಾರಗಳಿಂದ ಮುಂಬೈ ತಂಡ ಮತ್ತೊಂದು ಸೋಲು ಕಾಣಬೇಕಾಯಿತು. ಮುಂಬೈ ತಂಡ ಬ್ಯಾಕ್ ಫುಟ್ ನಲ್ಲಿದ್ದಾಗ, ರೋಹಿತ್ ಶರ್ಮಾ ತೋರಿದ ಜಾಣ ನಡೆ ಮುಂಬೈಯನ್ನು ಮತ್ತೆ ಪಂದ್ಯಕ್ಕೆ ಮರಳಿಸಿತ್ತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹೊಡಬಡಿಯ ಬ್ಯಾಟಿಂಗ್ ಪ್ರದರ್ಶಿಸಿದ್ದು, . ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಎದುರಿಸಿದ ಹೆಡ್ 62 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಔಟಾದರು. ಮುಂಬೈ ಬೌಲರ್ಗಳನ್ನು ಹೆಡ್ ಮನಸೋ ಇಚ್ಛೆ ದಂಡಿಸಿದರು. ಹೆಡ್ ಆಟದ ವೇಗವನ್ನು ನೋಡಿದಾಗ ಇನ್ನೂ ಎರಡು ಓವರ್ ಕ್ರೀಸ್ನಲ್ಲಿ ಇದ್ದಿದ್ದರೆ ಶತಕ ಸಿಡಿಸಿಬಿಡುತ್ತಿದ್ದರು.

Ad Widget

Ad Widget

ಆದರೆ, ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ವಹಿಸಿಕೊಂಡರು. ಹೆಡ್ ವಿಕೆಟ್ ಉರುಳಿಸಲು ಬಿಗಿ ಫೀಲ್ಡಿಂಗ್ ಸೆಟ್ ಮಾಡಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಂತೆ ಹಾರ್ದಿಕ್ಗೆ ಸೂಚನೆ ನೀಡಿದರು. ಗೆರಾಲ್ಡ್ ಕೋಟ್ಜಿಗೆ ಬೌಲ್ ಮಾಡಲು ಕೆಲ ಸಲಹೆ ನೀಡಿದರು. ಅದರಂತೆ ಕೋಟ್ಜಿ ಎಸೆದ ಬಾಲ್ ಅನ್ನು ಬಲವಾಗಿ ಹೊಡೆಯಲು ಹೋಗಿ ನಮನ್ ಧಿರ್ಗೆ ಕ್ಯಾಚಿತ್ತು ನಿರ್ಗಮಿಸಿದರು.

Ad Widget

Ad Widget

ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್, ರೋಹಿತ್ ರಣತಂತ್ರ ನೋಡಿ ಒಂದು ಕ್ಷಣ ಹುಬ್ಬೇರಿಸಿದರು. ರೋಹಿತ್ ಅವರ ಸರಿಯಾದ ಅಂದಾಜು, ಸರಿಯಾದ ಯೋಜನೆ, ಬ್ಯಾಟರ್ಗಳನ್ನು ಕೆರಳಿಸುವುದು ಮತ್ತು ಬೌಲರ್ಸ್ಗೆ ಆತ್ಮವಿಶ್ವಾಸ ತುಂಬಿದರೆ ವಿಕೆಟ್ಗಳನ್ನು ಪಡೆಯಬಹುದು ಎಂಬ ರೋಹಿತ್ ತಂತ್ರ ಒಂದು ಕ್ಷಣ ಹಾರ್ದಿಕ್ ಮೈಂಡ್ ಬ್ಲಾಕ್ ಮಾಡಿತು. ತಂಡ ಸಂಕಷ್ಟದಲ್ಲಿದ್ದ ವೇಳೆ ರೋಹಿತ್, ತನ್ನ ಜವಾಬ್ದಾರಿ ಮೆರೆದಿದ್ದನ್ನು ನೋಡಿ, ನೆಟ್ಟಿಗರು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

ಮುಂಬೈಗೆ 5 ಬಾರಿ ಐಪಿಎಲ್ ಕಪ್ ಸುಮ್ಮನೇ ಬಂದಿಲ್ಲ. ನಾಯಕತ್ವ ಎಂದರೆ ಇದೇ ಎನ್ನುತ್ತಾರೆ. ಹಾರ್ದಿಕ್, ರೋಹಿತ್ನಿಂದ ಕಲಿಯಲಿ, ನಾಯಕ ಯಾವತ್ತಿದ್ದರೂ ನಾಯಕನೇ ಎಂದು ರೋಹಿತ್ರನ್ನು ಹೊಗಳುತ್ತಿದ್ದು, ಹಾರ್ದಿಕ್ರನ್ನು ಜುಜುಬಿ ಹೊಸ ನಾಯಕ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  .

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading