ಕ್ರೀಡೆ
FIFA WorldCup2022 | ಪಿಫಾ ಫೀವರ್ : ಎಸ್ಡಿಪಿಐ ಧ್ವಜ ಎಂದು ತಪ್ಪಾಗಿ ತಿಳಿದು ಪೋರ್ಚುಗಲ್ ಧ್ವಜ ಹರಿದ ಬಿಜೆಪಿ ಕಾರ್ಯಕರ್ತ : ರೊನಾಲ್ಡೋ ಅಭಿಮಾನಿಗಳಿಂದ ಹಿಗ್ಗಾಮುಗ್ಗ ಥಳಿತ

ಕೊಚ್ಚಿ (ನ.21): ಭಾರತದಲ್ಲಿ ಅತೀ ಹೆಚ್ಚು ಫುಟ್ಬಾಲ್ ಪ್ರೇಮಿಗಳಿರುವ ರಾಜ್ಯ ಎಂಬ ಕೀರ್ತಿಗೆ ಕೇರಳ ಸೇರಿದೆ. ಈ ಬಾರಿ ಫಿಫಾ ವರ್ಲ್ಡ್ ಕಪ್ (FIFA WorldCup2022) ಕತಾರ್ನಲ್ಲಿ ನಡೆಯುತ್ತಿದ್ದು ಮಾತ್ರವಲ್ಲ ಕೇರಳದಲ್ಲೂ ಕೂಡ ಫಿಫಾ ಫೀವರ್ ಜೋರಾಗಿದೆ.
ಕೇರಳದ ವಿವಿಧ ಜಿಲ್ಲೆಗಳಲ್ಲಿ ಆಯಾ ದೇಶಗಳನ್ನು ಬೆಂಬಲಿಸಿ, ಆದೇಶದ ಧ್ವಜಗಳನ್ನು ಹಾಕಿ ಅಭಿಮಾನಿಗಳು ಸಪೋರ್ಟ್ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಪೋರ್ಚುಗಲ್, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಿಗೆ ಕೇರಳದಲ್ಲಿ ಬೆಂಬಲ ಹೆಚ್ಚು. ಈ ನಡುವೆ ಪೋರ್ಚುಗಲ್ ದೇಶದ ಧ್ವಜವನ್ನು ವಿವಾದಿತ ಇಸ್ಲಾಮಿಕ್ ಗುಂಪು ಎಸ್ಡಿಪಿಐನ ಧ್ವಜ ಎಂದು ಭಾವಿಸಿದ ವ್ಯಕ್ತಿಯೊಬ್ಬ ಇದನ್ನು ಹರಿದುಹಾಕಿದ್ದ. ಇದರಿಂದ ಕುಪಿತಗೊಂಡ ಕ್ರಿಶ್ಚಿಯಾನೋ ರೊನಾಲ್ಡೋ ಅಭಿಮಾನಿಗಳು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಧ್ವಜವನ್ನು ಹರಿದು ಹಿಗ್ಗಾಮುಗ್ಗ ಥಳಿತಕ್ಕೊಳಕ್ಕಾದ ಬಿಜೆಪಿ ಕಾರ್ಯಕರ್ತ ದೀಪಕ್ ಎಳನ್ಗೋಡ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇರಳದ ಕಣ್ಣೂರಿನ ರಸ್ತೆ ಬದಿಯಲ್ಲಿ ಪೋರ್ಚುಗಲ್ ತಂಡಕ್ಕೆ ಬೆಂಬಲ ನೀಡಿ ಧ್ವಜಗಳನ್ನು ಹಾಕಲಾಗಿತ್ತು. ಕೆಂಪು ಹಾಗೂ ಹಸಿರು ಬಣ್ಣ ಹೊಂದಿರುವ ಈ ಧ್ವಜ, ನಿಷೇಧಿತ ಪಿಎಫ್ಐ ಸಂಘಟನೆಯ ರಾಜಕೀಯ ಅಂಗಸಂಸ್ಥೆಯಾಗಿರುವ ಎಸ್ಡಿಪಿಐನ ಧ್ವಜವನ್ನೇ ಹೋಲುತ್ತದೆ.
ಪೋರ್ಚುಗಲ್ ಧ್ವಜವನ್ನು ಎಸ್ಡಿಪಿಐ ಧ್ವಜ ಎಂದುಕೊಂಡ ದೀಪಕ್, ರಸ್ತೆಯ ಪಕ್ಕ ಹಾಕಿದ್ದ ಎಲ್ಲಾ ಧ್ವಜವನ್ನು ಹರಿದು ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೋರ್ಚುಗಲ್ ಹಾಗೂ ರೊನಾಲ್ಡೋ ಅಭಿಮಾನಿಗಳು ದೀಪಕ್ ಮೇಲೆ ಹಲ್ಲೆ ಮಾಡಿದ್ದಾರೆ.
ದೀಪಕ್ ಹರಿಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಘಟನೆ ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕ್ರೀಡೆ
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?

Jay Shah: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ 2023ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು‘2023 ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾದ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ಅಭಿನಂದನೆಗಳು. ಕ್ರೀಡಾ ಆಡಳಿತದಲ್ಲಿ ಈ ವಿಶೇಷ ಗೌರವವನ್ನು ಪಡೆದ ಮೊದಲ ವ್ಯಕ್ತಿ ಜಯ್ ಶಾ. ಅವರು ನಿಜವಾಗಿಯೂ ಈ ಗೌರವಕ್ಕೆ ಅರ್ಹರು ಎಂದು ಬರೆದುಕೊಂಡಿದೆ.
ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆಯ ಹೊರತಾಗಿ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಈ ಹುದ್ದೆಗೇರುವ ಮೊದಲು ಅವರು ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು
2019 ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಆಯ್ಕೆಯಾದರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್ ಮತ್ತು ಶ್ರೀಲಂಕಾ ಹಾಗೂ ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಶಾ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರಿಗೆ 2023ರ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ಒಲಿದಿದೆ.ಮತ್ತು ವರ್ಷದ ಆರಂಭದಲ್ಲಿ ಎಸಿಸಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.
ಜಯ್ ಶಾ ಅವರು ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ.ಕ್ರಿಕೆಟ್ಗೆ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅವರನ್ನು ಅತ್ಯುತ್ತಮ ಕ್ರೀಡಾ ಉದ್ಯಮ ನಾಯಕ ಎಂದು ಗುರುತಿಸಿದೆ.
ಕ್ರೀಡೆ
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?

ಬೆಂಗಳೂರು : Bangalore: Bomb Threat ಪತಿ ಹಾಗೂ ಪತ್ನಿ ನಡುವೆ ಮತ್ತೊಬ್ಬ ಎಂಟ್ರಿ ಕೊಟ್ಟ ಬಳಿಕ ಉಂಟಾದ ಮನಸ್ತಾಪ ಬಾಂಬ್ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಬೆಳೆದಿದೆ. ಪ್ರಿಯಕರನ ಮಾತು ಕೇಳಿ ಗಂಡನನ್ನು ಕೇಸಿನಲ್ಲಿ ಫಿಟ್ ಮಾಡಲು ಹೋಗಿ ಸ್ವತ: ಪತ್ನಿಯೇ ಜೈಲು ಸೇರಿದ ಘಟನೆ ಬೆಂಗಳುರಿನ ಹೊರ ವಲಯ ಆನೇಕಲ್ನಲ್ಲಿ ಬೆಳಿಕಗೆ ಬಂದಿದೆ
ಆನೇಕಲ್ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ (Uttara Karnataka) ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು. ಇತ್ತೀಚೆಗಿನ ದಿನಗಳಲ್ಲಿ ಒಳ್ಳೊಳ್ಳೆ ಸಂಸಾರಕ್ಕೆ ಹುಳಿ ಹಿಂಡುತ್ತಿರುವ ಸೋಷಿಯಲ್ ಮೀಡಿಯಾ ಇಲ್ಲೂ ಕೂಡ ತನ್ನ ಆಟ ಆಡಿದೆ. ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಬಳಸುವ ಖಯಾಲಿ. ಅದರಲ್ಲಿ ಅವರಿಗೆ ರಾಮ್ ಪ್ರಸಾದ್ ಎಂಬಾತ ಗಂಟು ಬಿದ್ದಿದ್ದಾನೆ. ಇಬ್ಬರ ಮಧ್ಯೆ ಫೋನ್ ನಲ್ಲಿ ಸರಸ ಸಲ್ಲಾಪ ಶುರುವಾಗಿದೆ . ನಿತ್ಯ ನಿರಂತರ ಚ್ಯಾಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ
ಸ್ವಲ್ಪ ದಿನದಲ್ಲೆ ಇದು ವಿದ್ಯಾಳ ಗಂಡ ಕಿರಣ್ ಗೆ ಗೊತ್ತಾಗಿದೆ. ಸಿಟ್ಟುಗೊಂಡ ಆತ ವಿದ್ಯಾಳ ಫೊನನ್ನು ತೆಗೆದು ಎಸೆದಿದ್ದಾನೆ ಅದು ಹುಡಿ ಹುಡಿಯಾಗಿದೆ. ಗಂಡ ಅತ್ತ ಕೆಲಸಕ್ಕೆ ಹೋಗುತ್ತಲೇ ವಿದ್ಯಾ ಇನ್ನೊಂದು ಫೊನ್ ಮೂಲಕ ಪ್ರಿಯಕರನನ್ನು ಸಂಪರ್ಕಿಸಿ ಗಂಡ ಮೊಬೈಲ್ ಒಡೆದು ಹಾಕಿದ ವಿಷಯ ತಿಳಿಸಿದ್ದಾಳೆ.
ತಕ್ಷಣ ತನ್ನ ಪ್ರಿಯತಮೆಯ ಗಂಡನಿಗೆ ಬುದ್ದಿ ಕಳುಹಿಸಲು ಜತೆಗೆ ಆತನನ್ನು ಜೈಲಿಗೆ ಕಳುಹಿಸಲು ರಾಮ್ ಪ್ರಸಾದ್ ಮಾಸ್ಟರ್ ಪ್ಲ್ಯಾನ್ ಹೆಣೆದಿದ್ದಾನೆ. ಅದರಂತೆ ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ವೊಂದನ್ನು ಬರೆದು ವಿದ್ಯಾಳ ಮೊಬೈಲ್ ಗೆ ಫಾರ್ವಾರ್ಡ್ ಮಾಡಿದ್ದಾನೆ. ಇದನ್ನು ಗಂಡನ ಮೊಬೈಲ್ ಗೆ ಫಾರ್ವಾಡ್ ಮಾಡುವಂತೆ ತಿಳಿಸಿದ ಆತ ಬಳಿಕ ಅದನ್ನು ಗಂಡನ ನಂಬರ್ನಿಂದ ಪೊಲೀಸ್ ಅಧಿಕಾರಿಗಳಿಗೆ ಸೆಂಡ್ ಮಾಡುವಂತೆ ತಿಳಿಸಿದ್ದ.
Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?
ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಇತ್ತ ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕ್ರೀಡೆ
PKL 2023: ಪ್ರೊ ಕಬಡ್ಡಿ ಲೀಗ್: ವಿಜಯ ಪತಾಕೆ ಹಾರಿಸಿದ ಗುಜರಾತ್ ಜೈಂಟ್ಸ್ – ರಣ ರೋಚಕ ಪಂದ್ಯದಲ್ಲಿ ಯು ಮುಂಬಾಕ್ಕೆ ಜಯ

ಅಹಮದಾಬಾದ್: ಟ್ರಾನ್ಸ್ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 10ನೇ ಸೀಸನ್ ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.
ಸೋನು ಅವರ ಉತ್ತಮ ರೈಡಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ, ಶನಿವಾರ ಆರಂಭವಾದ ಪ್ರೊ ಕಬಡ್ಡಿ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 38–32 ಪಾಯಿಂಟ್ಸ್ಗಳಿಂದ ಸೋಲಿಸಿತು. ಗುಜರಾತ್ ಜೈಂಟ್ಸ್ ಪರ ಅದ್ಭುತ ರೈಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್ ಗಳ ಮೂಲಕ 5 ಅಂಕ ಗಳಿಸಿದರು.
ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವು 16 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್ ತಂಡ 13 ಪಾಯಿಂಟ್ಸ್ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಕಂಬ್ಯಾಕ್ ಮಾಡಿತು.
ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ 22 ಹಾಗೂ ಟೈಟಾನ್ಸ್ 16 ಅಂಗ ಗಳಿಸಿದರು. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 10 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿದರೆ, ತೆಲುಗು ಟೈಟಾನ್ಸ್ 9 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ 38-32 ಅಂತರದಿಂದ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡವು ಭರ್ಜರಿ ಜಯ ಸಾಧಿಸಿತು.
ಯು ಮುಂಬಾಕ್ಕೆ ಜಯ:
ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 34–31 ಪಾಯಿಂಟ್ಗಳಿಂದ ಯು.ಪಿ ಯೋಧಾಸ್ ತಂಡವನ್ನು ಸೋಲಿಸಿತು.ರಣರೋಚಕ ಹೋರಾಟದಲ್ಲಿ ಒಂದು ಹಂತದಲ್ಲಿ ಉಭಯ ತಂಡಗಳು 30-30 ಅಂಕ ಸಂಪಾದಿಸಿ ಸಮಬಲದ ಹೋರಾಟ ನೀಡಿತ್ತು.
ಯು ಮುಂಬಾ ಪರ ಅಮಿರ್ ಮೊಹಮ್ಮದ್ 6 ರೇಡ್ ಪಾಯಿಂಟ್ಸ್, 5 ಬೋನಸ್ ಹಾಗೂ 1 ಟ್ಯಾಕ್ಲ್ ಪಾಯಿಂಟ್ನೊಂದಿಗೆ 12 ಅಂಕಗಳಿಸಿದರು.ಅವರಿಗೆ ಉತ್ತಮ ಬೆಂಬಲ ನೀಡಿದ ರಿಂಕು 6 ಪಾಯಿಂಟ್ಸ್ ಕಲೆಹಾಕಿದರು. ಇನ್ನು ಯುಪಿ ಯೋಧ ಪರ ಸುರೇಂದರ್ ಗಿಲ್ ಹಾಗೂ ಅನಿಲ್ ಕುಮಾರ್ ತಲಾ 7 ಅಂಕ ಗಳಿಸಿದರು.
-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್13 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ10 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?