Connect with us

ಸಿನೆಮಾ

Naresh Pavitra | ಹಲವು ವಿವಾದಗಳ ಬಳಿಕ ಹಿರಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗಿನ ಹಿರಿಯ ನಟ ನರೇಶ್ ಬಾಬು – ನಟಿ ಪವಿತ್ರಾ ಲೋಕೇಶ್

Ad Widget

Ad Widget

Ad Widget

Ad Widget Ad Widget

ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ಬಾಬು (Naresh) ಅವರು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರೊಂದಿಗೆ ದಾಂಪತ್ಯ ಬದುಕಿಗೆ (Naresh Pavithra) ಕಾಲಿಟ್ಟಿದ್ದಾರೆ. ಈ ಮದುವೆಗೆ ಆಪ್ತರು, ಸ್ನೇಹಿತರು, ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಈ ಮದುವೆಯ ವಿಡಿಯೋವನ್ನು ನರೇಶ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Ad Widget

Ad Widget

Ad Widget

Ad Widget

Ad Widget

ಖ್ಯಾತ ನಟ ಮಹೇಶ್ ಬಾಬು ಸಹೋದರ ಸುಮಾರು 200 ರಷ್ಟು ಚಿತ್ರದಲ್ಲಿ ನಟಿಸಿದ 59 ವರ್ಷ ವಯಸ್ಸಿನ ನರೇಶ್ ಬಾಬು ಹಾಗೂ ಕನ್ನಡದ ಹಾಗೂ ಇತರ ಭಾಷೆಗಳಲ್ಲಿ ನಟಿಸಿದ 44 ವರ್ಷದ ಪ್ರಾಯದ ಪವಿತ್ರ ಲೋಕೇಶ್ 150 ಕ್ಕೂ ಮಿಕ್ಕಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ನರೇಶ್ ಅವರಿಗೆ ನಾಲ್ಕನೇ ವಿವಾಹವಾಗಿದೆ. ಪವಿತ್ರ ಲೋಕೇಶ್ ಗೆ ಇದು ಮೂರನೇ ಮದುವೆಯಾಗಿದೆ. ಪವಿತ್ರ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಜೊತೆ ಎರಡನೇ ಮದುವೆಯಾಗಿದ್ದರು.

Ad Widget

Ad Widget

ಮದುವೆ ವಿಡಿಯೋವನ್ನು ಹಂಚಿಕೊಂಡಿರುವ ನರೇಶ್, ‘ಒಂದು ಪವಿತ್ರ ಬಂಧ, ಎರಡು ಮನಸ್ಸು, ಮೂರು ಗಂಟು, ಏಳು ಹೆಜ್ಜೆ.. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ..’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಅಂದಹಾಗೆ, ನಟ ನರೇಶ್ ಅವರಿಗೆ ಇದು ನಾಲ್ಕನೇ ವಿವಾಹವಾಗಿದೆ. ಈ ವರ್ಷದ ಆರಂಭದಲ್ಲೇ ನಾವಿಬ್ಬರು ಹೊಸ ಜೀವನಕ್ಕೆ ಶೀಘ್ರದಲ್ಲೇ ಕಾಲಿಡಲಿದ್ದೇವೆ ಎಂದು ಘೋಷಿಸಿದ್ದರು ಪವಿತ್ರಾ ಮತ್ತು ನರೇಶ್. ಇದೀಗ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.

Ad Widget

Ad Widget

ವಿವಾದಕ್ಕೆ ಒಳಗಾಗಿದ್ದ ನರೇಶ್ ಮತ್ತು ಪವಿತ್ರಾ ಸಂಬಂಧ!
ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗುತ್ತಾರೆ ಎಂಬ ಮಾತುಗಳು ಹಲವು ತಿಂಗಳಿನಿಂದ ಕೇಳಿಬರುತ್ತಿದ್ದವು. ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್ ಅನ್ನು ನರೇಶ್ ಆಗಲಿ, ಪವಿತ್ರಾ ಲೋಕೇಶ್ ಅವರಗಾಗಲಿ ನಿರಾಕರಣೆ ಮಾಡಿರಲಿಲ್ಲ. ಇನ್ನು, ಪವಿತ್ರಾ ಮತ್ತು ನರೇಶ್‌ ಅವರ ಪ್ರೀತಿ ವಿಚಾರದ ಕುರಿತು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಜಗಳವಾಡಿದ್ದರು. ಈ ವಿವಾದ ಕಳೆದ ವರ್ಷ ಮಾಧ್ಯಮಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು.

Ad Widget

Ad Widget

ಮೈಸೂರಿನಲ್ಲಿ ನಡೆದಿತ್ತು ದೊಡ್ಡ ರಾದ್ಧಾಂತ
ಕಳೆದ ವರ್ಷ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪವಿತ್ರಾ ಲೋಕೇಶ್‌ ಮತ್ತು ನರೇಶ್‌ ಇದ್ದಾಗ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಸ್ಥಳಕ್ಕೆ ಭೇಟಿ ಜಗಳ ಮಾಡಿದ್ದರು. ಆನಂತರ ಎರಡು ಕಡೆಯಿಂದಲೂ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು.

ಇನ್ನು, ರಮ್ಯಾ ರಘುಪತಿ ಕುರಿತು ಪ್ರತಿಕ್ರಿಯೆ ನೀಡಿದ್ದ ನರೇಶ್, ‘ನಾನು ಸನ್ಯಾಸತ್ವ ಸ್ವೀಕರಿಸಬೇಕು ಎಂದುಕೊಳ್ಳುವಾಗ ರಮ್ಯಾ ಅವರ ಪರಿಚಯ ನನಗೆ ಆಗಿತ್ತು. ‘ನನಗೆ ಶುಗರ್ ಕಾಯಿಲೆ ಇದೆ, ನನ್ನನ್ನೂ ಯಾರು ಮದುವೆ ಆಗೋದಿಲ್ಲ..’ ಎಂದು ರಮ್ಯಾ ಹೇಳಿಕೊಂಡಿದ್ದರು. ನನ್ನ ತಾಯಿ ವಿಜಯಾ ನಿರ್ಮಲಾ ಅವರು ಹೇಳಿದ ಮೇಲೆ ರಮ್ಯಾ ಜತೆ ಮದುವೆ ಆದೆ.

ಒಮ್ಮೆ ಮನೆಯವರ ಮುಂದೆಯೇ ಮದ್ಯಪಾನ ಮಾಡಿ, ಅಸಭ್ಯವಾಗಿ ರಮ್ಯಾ ವರ್ತಿಸಿದ್ದಳು. ನಮಗೆ ಮಗ ಹುಟ್ಟಿ 1 ವರ್ಷ ಆಗಿತ್ತು. ಆ ವೇಳೆ ‘ನಾನು ಬ್ಯುಸಿನೆಸ್ ಮಾಡ್ತೀನಿ..’ ಎಂದು ರಮ್ಯಾ ಹೇಳಿದಾಗ, ಅದಕ್ಕೂ ನಾನು ಸಂಪೂರ್ಣ ಸಹಕಾರ ನೀಡಿದೆ. ಅವಳಿಗೆ ಬೇಕಾಗಿದ್ದನ್ನೆಲ್ಲ ನಾನು ನೀಡಿದೆ, ನೀಡುತ್ತಲೇ ಬಂದೆ..’ ಎಂದು ನರೇಶ್ ಪ್ರತಿಕ್ರಿಯೆ ನೀಡಿದ್ದರು.

Click to comment

Leave a Reply

ಸಿನೆಮಾ

Dwarakeesh | ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ : ಪತ್ನಿ ಸತ್ತ ದಿನವೇ ಇಹಲೋಕ ತ್ಯಜಿಸಿದ ವಿಷ್ಣು ಆಪ್ತ

Ad Widget

Ad Widget

Ad Widget

Ad Widget Ad Widget

ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ಏಪ್ರಿಲ್ 16, ಮಂಗಳವಾರ ಬೆಳಗ್ಗೆ 9.45 ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ದ್ವಾರಕೀಶ್ ಚಿರನಿದ್ರೆಗೆ ಜಾರಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಇವತ್ತಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ ತಮ್ಮ ಪ್ರೀತಿಯ ಮಡದಿ ಅಂಬುಜಾರನ್ನ ದ್ವಾರಕೀಶ್ ಕಳೆದುಕೊಂಡಿದ್ದರು. ಪತ್ನಿ ವಿಧಿವಶರಾದ ಮೇಲೆ ದ್ವಾರಕೀಶ್ ಒಬ್ಬಂಟಿಯಾಗ್ಬಿಟ್ಟರು.

Ad Widget

Ad Widget

ಅರ್ಧಾಂಗಿಯನ್ನ ಪ್ರತಿ ಕ್ಷಣ ಮಿಸ್ ಮಾಡಿಕೊಳ್ಳುತ್ತಿದ್ದರು. ಅಂಬುಜಾ ಇಲ್ಲದೆ ನೊಂದುಕೊಂಡಿದ್ದ ದ್ವಾರಕೀಶ್‌, ಪತ್ನಿ ಇಹಲೋಕ ತ್ಯಜಿಸಿದ ದಿನದಂದೇ ನಿಧನರಾಗಿದ್ದಾರೆ.

Ad Widget

Ad Widget

ಇದು ಕಾಕತಾಳೀಯವೋ.. ಅಥವಾ ವಿಧಿಬರಹವೋ.. ದೇವರೇ ಬಲ್ಲ.ಏಪ್ರಿಲ್ 15 ಸೋಮವಾರ ರಾತ್ರಿಯಿಂದಲೂ ದ್ವಾರಕೀಶ್‌ ಅವರಿಗೆ ಸಂಕಟವಾಗುತ್ತಿತ್ತು. ಲೂಸ್‌ ಮೋಷನ್ ಆಗುತ್ತಿತ್ತು. ರಾತ್ರಿ ಪೂರ್ತಿ ನಿದ್ದೆ ಮಾಡಿರಲಿಲ್ಲ. ಏಪ್ರಿಲ್ 16 ಮಂಗಳವಾರ ಬೆಳಗ್ಗೆ ಎದ್ದು ಕಾಫಿ ಕುಡಿದರು. ಬಳಿಕ ‘’ಸುಸ್ತಾಗ್ತಿದೆ. ಸ್ವಲ್ಪ ಹೊತ್ತು ನಿದ್ದೆ ಮಾಡ್ತೀನಿ. 10 ಗಂಟೆ ಸುಮಾರಿಗೆ ಎಬ್ಬಿಸು’’ ಅಂತ ಮಗ ಯೋಗೀಶ್‌ಗೆ ದ್ವಾರಕೀಶ್ ಹೇಳಿದ್ದಾರೆ.

Ad Widget

Ad Widget

ಆನಂತರ, 9.45 ಸುಮಾರಿಗೆ ಅಪ್ಪನನ್ನ ಎಬ್ಬಿಸಲು ಯೋಗೀಶ್‌ ಕೋಣೆಗೆ ತೆರಳಿದ್ದಾರೆ. ಮಲಗಿದ್ದ ದ್ವಾರಕೀಶ್ ಮೇಲೇಳಲೇ ಇಲ್ಲ. ಹೃದಯಾಘಾತದಿಂದ ದ್ವಾರಕೀಶ್‌ ಕೊನೆಯುಸಿರೆಳೆದಿದ್ದಾರೆ.

ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಬಾರದ ಲೋಕಕ್ಕೆ ಪಯಣಿಸಿದರು.

ಇದು ಕಾಕತಾಳೀಯವೋ.. ಅಥವಾ ವಿಧಿಬರಹವೋ.. ದೇವರೇ ಬಲ್ಲ.ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಬಾರದ ಲೋಕಕ್ಕೆ ಪಯಣಿಸಿದರು.

Continue Reading

ಸಿನೆಮಾ

Sonu Gowda-ರೀಲ್ಸ್ ಸ್ಟಾರ್ ಸೋನುಗೌಡಗೆ ಬಿಡುಗಡೆ ಭಾಗ್ಯ

Ad Widget

Ad Widget

Ad Widget

Ad Widget Ad Widget

ಕಾನೂನುಬಾಹಿರವಾಗಿ ಸುಮಾರು ಎಂಟು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಖ್ಯಾತಿ ಗಳಿಸಿರುವ ಸೋನು ಶ್ರೀನಿವಾಸ ಗೌಡ ಅಲಿಯಾಸ್ ಶಾಂಭವಿ (29)ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

Ad Widget

Ad Widget

Ad Widget

Ad Widget

Ad Widget

ಪ್ರಕರಣ ಸಂಬಂಧ ಜಾಮೀನು ಕೋರಿ ಸೋನು ಶ್ರೀನಿವಾಸ ಗೌಡ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯ ಈ ಆದೇಶ ಮಾಡಿದೆ.

Ad Widget

Ad Widget

ಒಂದು ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಜಾಮೀನು ಮಂಜೂ ರಾತಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

Ad Widget

Ad Widget
Continue Reading

ಸಿನೆಮಾ

Urvashi Rautela-ನನ್ನ ಎದೆ ಮುಟ್ಟುವಷ್ಟೂ ಇಲ್ಲ – ಕ್ರಿಕೆಟಿಗ ರಿಷಬ್ ಪಂತ್ ರೇಗಿಸಿದ್ದ ನಟಿ ಊರ್ವಶಿ ರೌಟೇಲಾ; ಪಂತ್‌ ಅಭಿಮಾನಿಗಳು ಗರಂ ಆಗುತ್ತಲೇ ಸ್ಪಷ್ಟನೆ

Ad Widget

Ad Widget

Ad Widget

Ad Widget Ad Widget

ನಟಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ವಿಚಾರ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ಊರ್ವಶಿ ರಿಷಬ್ ಪಂತ್ ಹೈಟ್ ಬಗ್ಗೆ ಟೀಕೆ ಮಾಡಿದ್ದರಿಂದ ಪಂತ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಜಾಹೀರಾತುವೊಂದರಲ್ಲಿ ತನ್ನೊಂದಿಗೆ ಸ್ನೇಹದಲ್ಲಿದ್ದವರ ಹೈಟ್ ಬಗ್ಗೆ ಟೀಕಿಸಿರುವ ಊರ್ವಶಿ, ಕ್ರಿಕೆಟಿಗನೊಬ್ಬನ ಹೈಟ್ ನನ್ನ ಎದೆಮುಟ್ಟುವಷ್ಟೂ ಇಲ್ಲ ಎಂದು ಪರೋಕ್ಷವಾಗಿ ಕುಳ್ಳ ಎಂದಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಊರ್ವಶಿಯನ್ನೂ ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಹಿಂದೆ ರಿಷಬ್ ಪಂತ್ ಅವರು ಕಾರು ಅಪಘಾತವಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಹಿಂದೆಯೂ ಊರ್ವಶಿ ಬಿದ್ದಿದ್ದರು. ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ. ಜೊತೆಗೆ ಊರ್ವಶಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

Ad Widget

Ad Widget

ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದ್ದು, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading