Connect with us

Uncategorized

ದೇಶ ವಿದೇಶಿ ಅಪರೂಪದ ಭತ್ತದ ತಳಿಗಳ ಸಂರಕ್ಷಿಸುತ್ತಿರುವ ಪೆರ್ಲದ ರೈತ – ಮೈಸೂರು ಮಹಾರಾಜರ ಇಷ್ಟದ ರಾಜಮುಡಿ ಸಹಿತ 650 ವೈವಿಧ್ಯಮಯ ತಳಿಗಳ ಅತ್ಯಾಪೂರ್ವ ಸಂಗ್ರಹ | ಕೇವಲ 10 ಸೆಂಟ್ಸ್ ಜಾಗದಲ್ಲಿದೆ ಈ ತಳಿ ಪ್ರಯೋಗ ಶಾಲೆ

Ad Widget

Ad Widget

Ad Widget

Ad Widget

ದೇಶ ವಿದೇಶಗಳ ನೂರಾರು  ವೈವಿಧ್ಯಮಯ ಭತ್ತದ ತಳಿಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಆ ಮೂಲಕ ಈ  ಅಹಾರ ಬೆಳೆಯ ‌‌ ಅತ್ಯಾಪರೂಪದ  ತಳಿಗಳನ್ನು  ಮುಂದಿನ ಪೀಳಿಗೆಗೂ  ಜತನದಿಂದ ಕಾಪಿಡುವ ಕಾಯಕವನ್ನು ಕರ್ನಾಟಕ ಕೇರಳ ಗಡಿ ಭಾಗದ ರೈತರೊಬ್ಬರು ನಿರಂತರವಾಗಿ ಕಳೆದ 12 ವರ್ಷದಿಂದ ಮಾಡುತ್ತಿದ್ದಾರೆ.  ಯಾವುದೇ ಪ್ರತಿಪಲಾಪೇಕ್ಷೆಯಿಲ್ಲದೆ  ತಪಸ್ಸಿನಂತೆ ಈ ಸತ್ಕಾರ್ಯ ಮಾಡುತ್ತಿರುವ ಕರ್ಮಯೋಗಿ  ಕಾಸರಗೋಡು‌ ಜಿಲ್ಲೆಯ ಬೆಳ್ಳೂರು ಗ್ರಾ.ಪಂ.ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರು ಬೆಳೇರಿಯ ಕೃಷಿಕ  ಸತ್ಯನಾರಾಯಣರವರು.

Ad Widget

Ad Widget

Ad Widget

ಇವರ ಬಳಿ ಸುಮಾರು 650 ವೈವಿಧ್ಯಮಯ, ವಿಶ್ವದ ವಿವಿಧ ಬೌಗೋಳಿಕ ಪರಿಸರದಲ್ಲಿ ಬೆಳೆದ,  ನಾನಾ ಗುಣ  ವೈಶಿಷ್ಟ್ಯದ,  ಭಿನ್ನ ಭಿನ್ನ ಗಾತ್ರ ರುಚಿಯ,  ಭತ್ತದ ತಳಿಗಳಿದ್ದು ಅದು ಅವರ ಸಂರಕ್ಷಣೆಯಲ್ಲಿ ಜೋಪಾನವಾಗಿವೆ.  ಈ ತಳಿಗಳ ಜೀವ ವೈವಿಧ್ಯವನ್ನು ನೋಡಲು ಆ ಬಗ್ಗೆ ಅಭ್ಯಸಿಸಲು ಕೇರಳ ಹಾಗೂ ಕರ್ನಾಟಕದ ಕೃಷಿ ವಿದ್ಯಾರ್ಥಿಗಳು, ಕೃಷಿಕರು, ಕೃಷಿ ಸಂಶೋಧಕರು ಸತ್ಯನಾರಾಯಣರ ತಳಿ ಪ್ರಯೋಗ ಶಾಲೆಯ ನಿತ್ಯ ಸಂದರ್ಶಕರಾಗಿದ್ದಾರೆ.

vAd Widget

Ad Widget

ಇಷ್ಟು ಅಗಾಧ ಸಂಖ್ಯೆಯ ತಳಿಗಳನ್ನು ಅವರು ಸಂರಕ್ಷಿಸಿ ಪೋಷಿಸುತ್ತಿರುವುದು ಕೇವಲ 10 ಸೆಂಟ್ಸ್ ಜಾಗದಲ್ಲಿ . ಹೌದು ನೀವು ನಂಬಲೆಬೇಕು ಕೇವಲ 10 ಸೆಂಟ್ಸ್ ಜಾಗದಲ್ಲಿ. ಸತ್ಯನಾರಾಯಣ ಅವರ ಬಳಿ  ಐದು ಎಕರೆ ಜಮೀನಿದ್ದು ಆ  ಮಣ್ಣು ಭತ್ತದ ಕೃಷಿಗೆ ಯೋಗ್ಯವಾಗಿಲ್ಲ.  ಎತ್ತರದ ಸ್ಥಳವಾದ ಕಾರಣ ನೀರಿನ ಕೊರತೆಯೂ ಬಾಧಿಸುತ್ತಿದೆ.ನಾಲ್ಕು ಎಕರೆಯಲ್ಲಿ ಇಪ್ಪತ್ತು ವರ್ಷದ ಮೊದಲು ರಬ್ಬರ್‌ ನೆಡಲಾಗಿದ್ದು ಟ್ಯಾಪಿಂಗ್ ನಡೆಸಲಾಗುತ್ತಿದೆ. ಅರ್ಧ ಎಕರೆಯಲ್ಲಿ ಅಡಕೆ, ತೆಂಗು, ಉಳಿದ ಜಾಗದಲ್ಲಿ ಮನೆ, ಅಂಗಳ, ಹಟ್ಟಿ, ಕೈತೋಟವಿದೆ.  ಕೈ ತೋಟದಲ್ಲಿ  ಕಾಳುಮೆಣಸು, ಬಾಳೆ, ವೀಳ್ಯದೆಲೆ ಕೃಷಿ ಮಾಡಲಾಗುತ್ತಿದೆ. ಇನ್ನುಳಿದ ಅಲ್ಪ ಜಾಗದಲ್ಲಿ ಅತ್ಯಂತ ಜಾಣತನದಿಂದ ಜತನದಿಂದ ಮುಂದಿನ ಪೀಳಿಗೆಯ ಅಶಾಕಿರಣವಾಗಿರುವ ವಿವಿಧ ಬಗೆಯ  ಭತ್ತದ ಪೈರುಗಳು ನಳನಳಿಸುತ್ತಿವೆ.

Ad Widget

Ad Widget
ತಳಿ ಪ್ರಯೋಗ ಶಾಲೆಯಲ್ಲಿ ಸತ್ಯನಾರಾಯಣರು

ತಳಿ ಸಂರಕ್ಷಣೆ ಹೇಗೆ ?

Ad Widget

Ad Widget

Ad Widget

ಸತ್ಯನಾರಾಯಣ ರವರು ತಳಿ ಸಂರಕ್ಷಣೆಗೆ ಅನುಸರಿಸಿರುವ ಮಾದರಿ ವಿಶಿಷ್ಡವಾಗಿದೆ.  ಜೀವನೋಪಾಯಕ್ಕೆ ತಮ್ಮಲ್ಲಿರುವ ಭೂಮಿಯನ್ನು ಬಳಸಿ ಉಳಿದ  ಕನಿಷ್ಡ ಜಾಗದಲ್ಲಿಯೇ  ನೂರಾರು ಪ್ರಭೇದಗಳು ಬೆಳವಣಿಗೆ ಹೊಂದಬೇಕಾದ ಅಗತ್ಯತೆ ಇರುವುದರಿಂದ ಈ ವಿಶಿಷ್ಟ ವಿಧಾನ ಅವರಿಗೆ ಅನಿವಾರ್ಯವೂ ಆಗಿದೆ.

ಸಣ್ಣ ಕಾಗದದ ಲೋಟದಲ್ಲಿ ಮಣ್ಣು ಗೊಬ್ಬರದ ಮಿಶ್ರಣ ತುಂಬಿ, ಅದರಲ್ಲಿ 10 ರಿಂದ 20 ಭತ್ತದ ಬೀಜಗಳನ್ನು ಊರಲಾಗುತ್ತದೆ. 3-4 ದಿನಗಳಲ್ಲಿ ಮೊಳಕೆಯೊಡೆದಾಗ ಸಸಿಗಳಿಗೆ ನೀರು ಪೂರೈಸಲಾಗುತ್ತಿದೆ. ಹತ್ತು ದಿನದ ಬಳಿಕ ಈ ಸಸಿಗಳನ್ನು ಗೊಬ್ಬರ, ಮಣ್ಣು ತುಂಬಿ ಸಿದ್ಧಪಡಿಸಿದ 12 ಇಂಚು ಎತ್ತರ 8 ಇಂಚು ಅಗಲದ ಗ್ರೋ ಬ್ಯಾಗ್‌ ಗಳಿಗೆ ವರ್ಗಾಯಿಸಿ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಒತ್ತೊತ್ತಾಗಿ ಜೋಡಿಸುತ್ತಾರೆ.ಸಸಿ ನಾಟಿಯ ವೇಳೆ ಹೆಚ್ಚು ಸಾವಯವ ಗೊಬ್ಬರ ಪೂರೈಸುವುದರಿಂದ, ಮತ್ತೆ ಮೇಲುಗೊಬ್ಬರದ ಅಗತ್ಯವಿಲ್ಲ.ಬದಲಿಗೆ ಒಂದೆರಡು ಸಲ ಜೀವಾಮೃತವನ್ನು ಪೂರೈಸುತ್ತಾರೆ.ಸಸಿ ಬೆಳೆಸುವ ಅವಧಿಯಲ್ಲಿ ಉತ್ತಮ ಮಳೆಯಾದರೆ ಪೈರುಗಳಿಗೆ ನೀರುಣಿಸುವ ಅಗತ್ಯವಿಲ್ಲ.

ಅಸ್ಸಾಂ ಬ್ಲ್ಯಾಕ್‌

ನೀರಿನಲ್ಲಿ ಗ್ರೋಬ್ಯಾಗ್‌ ಮೂಲಕ‌‌ ತಳಿ ಅಭಿವೃದ್ಧಿ :

ಭತ್ತದ ಪೈರುಗಳು ಸಸಿಯಾಗಿ ಹೂವಾಡುವಾಗ, ಜಮೀನಿನ ಸಮತಟ್ಟಾದ ಭಾಗದಲ್ಲಿ 3 ಮೀಟರ್ ಅಗಲ, 10 ಮೀಟರ್ ಉದ್ದದಷ್ಟು ಜಾಗದಲ್ಲಿ ಟರ್ಪಾಲು ಹಾಸಿ, ಅದರ ಸುತ್ತ 1 ಮೀಟರ್ ಎತ್ತರದ ಬದು ಕಟ್ಟಿ, ತೊಟ್ಟಿ ಯಾಕಾರದ ರಚನೆ ಮಾಡುತ್ತಾರೆ.ಅದರಲ್ಲಿ ‌ಗ್ರೋಬ್ಯಾಗ್‌ ಅರ್ಧ ಭಾಗ ಮುಳುಗುವಷ್ಟು ನೀರು ತುಂಬಿಸುತ್ತಾರೆ. ತಳಿ ಶುದ್ಧತೆ (ಪರಾಗಸ್ಪರ್ಷವಾಗದಂತೆ) ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೆನೆಗಳು ಹೂವಾಡುವ ಹಂತದಲ್ಲಿ, ಭತ್ತದ ಸಸಿಗಳ ನಡುವೆ ಅಂತರವಿರಿಸಲಾಗುತ್ತದೆ. ತೆನೆ ಮೂಡಿದಂತೆ ಗ್ರೋಬ್ಯಾಗ್‌ಗಳನ್ನು ನೀರು ತುಂಬಿಸಿದ ತೊಟ್ಟಿಯಲ್ಲಿ ಇರಿಸಿ ಮೇಲ್ಬಾಗದಿಂದ ಸನ್ ಶೇಡ್ ಅಥವಾ ಸೊಳ್ಳೆಪರದೆ ಹಾಕಲಾಗುತ್ತಿದೆ.ಈ ವಿಧಾನದಿಂದ ಇಲಿ, ಹೆಗ್ಗಣ, ಕೀಟಬಾಧೆ, ಹಕ್ಕಿ, ನವಿಲು, ವನ್ಯ ಜೀವಿಗಳ ಕಾಟದಿಂದ ತೆನೆಗಳನ್ನು ರಕ್ಷಿಸಬಹುದು.ತೊಟ್ಟಿಯ ನೀರಿನಲ್ಲಿ ಸೊಳ್ಳೆ ಸೃಷ್ಟಿಯಾದರೆ ಸಣ್ಣ ಮೀನಿನ ಮರಿಗಳ ‌ಮೂಲಕ ಅದನ್ನು ನಿಯಂತ್ರಿಸುವ ಸತ್ಯನಾರಾಯಣರ ವಿಧಾನ ಕೃಷಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ‌.

ಗಂಗಡಲೆ

ಆಸಕ್ತಿ ಕುದುರಿದ್ದು ಹೇಗೆ ?

 ಪ್ರಗತಿಪರ ಕೃಷಿಕರಾದ ಅವರು ಅಡಿಕೆ ಪತ್ರಿಕೆ‌ ಹಾಗೂ  ಇತರ ಪತ್ರಿಕೆಗಳಲ್ಲಿ ಪ್ರಕಟವಾಗುವ ಕೃಷಿ‌ ಮಾಹಿತಿ, ರೇಡಿಯೋ, ಟಿವಿಯಲ್ಲಿ ಬಿತ್ತರವಾಗುವ ಕೃಷಿ ಪಾಠದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಪ್ರಖ್ಯಾತ  ಗಾಂಧಿವಾದಿ, ನೈಜ ರೀತಿಯ ಕೃಷಿಕ ಮತ್ತು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿದ್ದ ದಿ.ಚೆರ್ಕಾಡಿ ರಾಮಚಂದ್ರ ರಾವ್ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ‌‌ಓದಿ ಭತ್ತದ ತಳಿ ಸಂಗ್ರಹ, ಸಂರಕ್ಷಣೆಯ ಹಂಬಲ ಅವರ ಮನದಲ್ಲಿ ಚಿಗುರೊಡೆದಿದೆ.ಲೇಖನದಲ್ಲಿದ್ದ ವಿಳಾಸದಲ್ಲಿ ಅವರನ್ನು ಸಂಪರ್ಕಿಸಿ ಅಂಚೆ ಮೂಲಕ ಒಂದು ಮುಷ್ಟಿ ’ರಾಜಕಯಮೆ’ ದೇಸಿ ತಳಿಯ ಭತ್ತವನ್ನು ಪಡೆದು‌ ಇರುವ ಅಲ್ಪ ಸ್ವಲ್ಪ ಸ್ಥಳದಲ್ಲಿ ನಾಟಿ‌ ಮಾಡಿದ್ದರು.

ಗ್ರೋ ಬ್ಯಾಗ್‌

ಹಳೆಯ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವ ಬೀಜ ಸಂರಕ್ಷಕ ಬೆಳ್ತಂಗಡಿ ಮಿತ್ತಬಾಗಿಲು ಅಮೈಯ  ಬಿ.ಕೆ.ದೇವರಾವ್ ಮತ್ತು ಪುತ್ರ ಬಿ.ಕೆ.ಪರಮೇಶ್ವರ ರಾವ್ ಅವರಿಂದ ಪ್ರೇರಿತರಾಗಿ ಅವರಿಂದಲೇ ಹಲವಾರು ದೇಸಿ ತಳಿಗಳನ್ನು ಪಡೆದು ಬಿತ್ತನೆ ನಡೆಸಿ ತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದರು.

ದೇಶದ ನಾನಾ ಭಾಗದಿಂದ ತಳಿ ಸಂಗ್ರಹ

 ಈ ಬಗ್ಗೆ  ಆಸಕ್ತಿ ಇನ್ನಷ್ಟು ವೃದ್ಧಿಸಿ ಕೇರಳದ ಮಲಪ್ಪುರಂ, ಪಟ್ಟಾಂಬಿ, ವಯನಾಡು,‌ ಕುಟ್ಟನಾಡು, ಕರ್ನಾಟಕದ ಬೆಳ್ತಂಗಡಿ, ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರ, ಮೈಸೂರು, ಮಂಡ್ಯ, ದಾವಣಗೆರೆ, ಬೆಳಗಾವಿ, ಓಡಾಡಿ ತಳಿ ಹಲವಾರು ಸಂಗ್ರಹಿಸಿದ್ದಾರೆ.ದೆಹಲಿ ಸೀಡ್ ಬ್ಯಾಂಕ್ ನಿಂದ ಹಲವು ತಳಿಗಳು ಲಭಿಸಿವೆ.ಬೀಜ ಮೇಳಗಳಿಗೆ ಭೇಟಿ ನೀಡುತ್ತಾ ತಳಿ ಸಂಗ್ರಹದ ಅಭಿಯಾನ ‌ನಡೆಸಿದ್ದಾರೆ. ಪ್ರಸ್ತುತ ಇರುವ ಅಲ್ಪ ಜಾಗದಲ್ಲಿ ಸುಮಾರು 650 ದೇಸಿ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸಿ ಅವುಗಳ ಬೀಜವನ್ನು ಸಂಗ್ರಹಿಸಿಟ್ಟಿದ್ದಾರೆ.

ಗುಲ್ವಾಡಿ

 ಪ್ರಮುಖ ತಳಿಗಳು :

ಮೈಸೂರು ರಾಜರ ಪ್ರಿಯ ತಳಿ ರಾಜಮುಡಿ, ಫಿಲಿಪ್ಪೀನ್ಸ್ ನ ‘ಮನಿಲ’, ಉಪ್ಪುನೀರಿನಲ್ಲಿ ಬೆಳೆಯುವ ಕಗ್ಗ, ಬರನಿರೋಧಕ ವೆಳ್ಳತ್ತೆವುನ್, ಪ್ರವಾಹ ಎದುರಿಸಿ ಬೆಳೆಯುವ, ನೀರಿನಲ್ಲೇ 40 ದಿನ ಕಾಲ ಕೊಳೆಯದೆ ಉಳಿಯುವ ನೆರೆಗೂಳಿ, ಪುಟ್ಟ ಭತ್ತ, ಮತ್ತು ಏಡಿಕುಣಿ, 60 ದಿನದಲ್ಲಿ ಕೊಯ್ಲಿಗೆ ಸಿದ್ದವಾಗುವ ಕಷಿಕಾ ಶಾಲಿ, ಎರಡು ಅಕ್ಕಿ ಕಾಳಿನ ಜುಗಲ್, ಅವಲಕ್ಕಿ‌ ತಯಾರಿಗೆ ಬೇಕಾದ ಸ್ವರಟಾ, ನೇರಳೆ ಬಣ್ಣದ‌ ಡಾಂಬಾರ್ ಕಾಳಿ, ಕಾರ್‌ರೆಡ್‌ರೈಸ್, ಕಲಾಬತಿ, ನಜರ್ ಬಾತ್(ಕಲೆ ನಿವಾರಣೆ), ನೇರಳೆ ಬಣ್ಣದ ಅಕ್ಕಿಯ ಮಣಿಪುರ ಭತ್ತ, ಹಸಿರು ಬಣ್ಣದ ಗ್ರೀನ್ ರೈಸ್, ಕಪ್ಪು ಬಣ್ಣದ ಅಸ್ಸಾಂ ಬ್ಲೇಕ್ ರೈಸ್, ಔಷಧೀಯ ಗುಣದ ತಳಿಗಳಾದ ರಕ್ತ ವೃದ್ದಿಸುವ ರಕ್ತಶಾಲಿ, ಕಬ್ಬಿಣದ ಅಂಶ ಹೆಚ್ಚಿಸುವ ಕರಿಗಕಾವಲಿ, ಜ್ವರ ನಿವಾರಿಸುವ ಅರಿಹಕ್ಕಳ ಶಾಲಿ, ಎದೆಹಾಲು ವೃದ್ಧಿಯ ಅಂಬೆಮೊಹರ್, ಸಂದುನೋವು ನಿವಾರಣೆಯ ಬರ್ಮಾಬ್ಲಾಕ್, ಕ್ಯಾನ್ಸರ್ ತಡೆಯುವ ಅತಿಕಾರಿ, ಎಲುಬು ಗಟ್ಟಿಗೊಳಿಸುವ ನವರ, ಸಕ್ಕರೆ ಕಾಯಿಲೆಗೆ ಸಿಂಧೂರ, ಮಧುಶಾಲೆ, ‌ಮೂಲ ವ್ಯಾಧಿ ನಿವಾರಣೆಯ ಕಳಮೆ, ನರರೋಗ ನಿವಾರಣೆಯ ನವರ, ವಿಶೇಷ ಪರಿಮಳದ ಗಂಧಸಾಲೆ, ಗಂಗಡಲೆ, ಜೀರಿಗೆಸಾಲೆ, ಕುಂಕಮಶಾಲಿ, ಬಾಸ್ಮತಿ, ತೆಂಗಿನ ಹೂವಿನಂತೆ ಅರಳುವ ನಾರಿಕೇಳ,  ಬೆಂದಾಗ ಬಲಿಯುವ ಎಚ್ಎಂಟಿ, ಕರ್ಕಾಟಕ ಮಾಸದಲ್ಲಿ ಉಣ್ಣುವ ನವರ ಹಾಗೂ ರಾಜಭೋಗ, ಮೈಸೂರು ಮಲ್ಲಿಗೆ, ಜಾಸ್ಮಿನ್‌, ಕರಿಜೆಡ್ಡು, ಜಿಡ್ಡುಹಳ್ಳಿಗ, ಸುಗ್ಗಿಕಯಮೆ ಮೊದಲಾದ ವೈವಿಧ್ಯಮಯ ಬಹುತೇಕ ಎಲ್ಲಾ ರಾಜ್ಯಗಳ ದೇಸಿ ಹಾಗೂ ವಿದೇಶೀ ತಳಿಗಳನ್ನು ಬೆಳೆಸಿ ಸಂರಕ್ಷಿಸಿದ್ದಾರೆ.

ಕಗ್ಗ

ತೆನೆ ಕೊಯ್ಲು ಮತ್ತು ಬೀಜಗಳ ಸಂಗ್ರಹ :

ಸತ್ಯನಾರಾಯಣ ಅವರು ಬೆಳೆಸಿದ ಹಲವಾರು ತಳಿಗಳು ಬಲಿತು ಕಟಾವಿನ ಹಂತದಲ್ಲಿದೆ.ಬಲಿತ ತೆನೆಗಳನ್ನು ಎಚ್ಚರಿಕೆಯಿಂದ ಕಟಾವು ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಕಾಳು ಬೇರ್ಪಡಿಸಿ ಪೇಪರ್‌ ಕವರ್‌ನಲ್ಲಿ ಸಂರಕ್ಷಿಸಿಡುತ್ತಾರೆ.ಇದೇ ಕಾಳುಗಳನ್ನೇ ಮುಂದಿನ ಬಿತ್ತನೆಗೆ ಉಪಯೋಗಿಸುತ್ತಾರೆ.ಪ್ರತಿ ಚೀಲದಿಂದ 100 ರಿಂದ 150 ಗ್ರಾಂ ಉತ್ತಮ ಭತ್ತದ ಬೀಜಗಳು ದೊರೆಯುತ್ತವೆ.ಈ ವಿಧಾನದಿಂದ ಕಡಿಮೆ ಸ್ಥಳದಲ್ಲಿ ಹೆಚ್ಚು ತಳಿಗಳನ್ನು ಬೆಳೆಸಬಹುದು ಎನ್ನುತ್ತಾರೆ‌.

ಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಅವರ ಮೂಲಕ ಕೃಷಿ ಸಂಶೋಧಕರು, ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಪರಿಚಯ ಬೆಳೆಸಿದ ಸತ್ಯನಾರಾಯಣ ಅವರಿಗೆ ಶಿವಮೊಗ್ಗದ ಸಾವಯವ ವಿಶ್ವವಿದ್ಯಾಲಯದ ಡಾ.ಉಲ್ಲಾಸ ಎಂ.ವೈ.ವಿವಿಧ ರಾಜ್ಯಗಳ‌ ಭತ್ತದ ಮೂಲ ತಳಿಗಳನ್ನು ನೀಡಿ ಸಹಕರಿಸುತ್ತಿದ್ದಾರೆ.ಮಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ವೈಜ್ಞಾನಿಕ ಮಾಹಿತಿ ನೀಡುತ್ತಿದ್ದಾರೆ.

ಮಣಿಲ

ಸತ್ಯನಾರಾಯಣರ ಬಗ್ಗೆ ಒಂದಿಷ್ಟು …

ತಳಿಗಳ ಜತೆ ಸತ್ಯನಾರಯಣ

ಬೆಳೇರಿಯ ದಿ.ಕುಂಞಿ ರಾಮನ್ ಮಣಿಯಾಣಿ ಮತ್ತು ಜಾನಕಿಯ ದಂಪತಿ ಪುತ್ರ ಸತ್ಯನಾರಾಯಣ ಅವರು ಸಾಹಿತ್ಯ, ಬರಹ, ವ್ಯಂಗ್ಯ ಚಿತ್ರ, ಜೇನು ಸಾಕಣೆ ಮತ್ತು ಗಿಡಗಳ ಕಸಿಕಟ್ಟುವಿಕೆಯಲ್ಲೂ ನಿಪುಣರಾಗಿದ್ದಾರೆ.ಭತ್ತದ ತಳಿ ಸಂರಕ್ಷಣೆಯ ಸರಣಿ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.ಮಂಗಳೂರು ಆಕಾಶವಾಣಿ ಕೃಷಿರಂಗ ವಿಭಾಗದ ಸರಣಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆದಿದ್ದಾರೆ.ದಶಕಗಳ ಭತ್ತದ ತಳಿ ಸಂರಕ್ಷಣೆ ಆರ್ಥಿಕ ಲಾಭ ತರದಿದ್ದರೂ ಬೆಲೆಕಟ್ಟಲಾಗದ ಜೀವನದ ಭಾಗವಾಗಿದೆ.ಪತ್ನಿ ಜಯಶ್ರೀ, ಪುತ್ರಿಯರು ನವ್ಯಶ್ರೀ, ಗ್ರೀಷ್ಮ, ಪುತ್ರ ಅಭಿನವ್.

ಮಣಿಪುರ ಭತ್ತ

ತಳಿ ಅಭಿವೃದ್ದಿಗೆ ಬೀಜ ನೀಡಲು ಸಿದ್ದ :

ಇಂತಹ ಅಪೂರ್ವ ತಳಿಗಳ ಸಂಗ್ರಹ ತನ್ನ ಬಳಿಯೇ ಇರಬೇಕು ಎನ್ನುವ ಸ್ವಾರ್ಥವೂ ಅವರ ಬಳಿ ಇಲ್ಲ . ತಾನು ಕಷ್ಟಪಟ್ಟು ಸಂಗ್ರಹಿಸಿದನ್ನು  ಬೇರೆ ಯಾರದರೂ  ಆಸಕ್ತರು  ಕೇಳಿದರೆ ಕೊಡಲು ಅವರು ಸಿದ್ದ . ಈ ರೀತಿ ಅವರು ವಯನಾಡು, ಪಟ್ಟಾಂಬಿ, ಪಡನ್ನಕಾಡ್, ಮಂಗಳೂರು ಕೆವಿಕೆ, ಶಿವಮೊಗ್ಗ ಸಾವಯವ ವಿವಿ, ಮೈಸೂರು ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭತ್ತದ ತಳಿಗಳನ್ನು ನೀಡಿದ್ದಾರೆ.  ಹಂಚುವಷ್ಟು‌ ಬೀಜಗಳ ದಾಸ್ತಾನು ಅವರಲ್ಲಿ ಇಲ್ಲದಿದ್ದರೂ, ತಳಿ ಅಭಿವೃದ್ಧಿಗೆ ಬೇಕಾದ ಮುಷ್ಟಿಯಷ್ಟು ಬೀಜಗಳನ್ನು ನೀಡಲು ಸಿದ್ಧರಿದ್ದಾರೆ.

ನಝರ್‌ ಬಾತ್‌

‘ಅನ್ನದ ಬಟ್ಟಲುಗಳಂತಿದ್ದ ಗದ್ದೆಗಳು ಇಂದು ವಾಣಿಜ್ಯ ಬೆಳೆಗಳತ್ತ ವಾಲುತ್ತಿದೆ.ಕೃಷಿಕರು ಲಾಭದ ಧೃಷ್ಟಿಯಲ್ಲಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.ಇದು ಆಹಾರ ಪದಾರ್ಥಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತಿದೆ’

-ಸತ್ಯನಾರಾಯಣ ಬೆಳೇರಿ

ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಅವರ ತಳಿ ಸಂರಕ್ಷಣೆ ಅಭಿಯಾನದ ಅವಲೋಕನ ನಡೆಸಿದ್ದೇನೆ. ನೂರಾರು ತಳಿಗಳ ಬಿತ್ತನೆ ನಡೆಸಿ, ಅದನ್ನು ಸಂರಕ್ಷಿಸಿ, ಆವರ್ತನ ರೀತಿ ಕೊಯ್ಲು ನಡೆಸಿ, ಭತ್ತ ಸಂಗ್ರಹಿಸಿ ಮತ್ತೆ ಬಿತ್ತನೆ ನಡೆಸುವ ಪ್ರಕ್ರಿಯೆ ಅತ್ಯದ್ಭುತ.ಹನ್ನೆರಡು ವರ್ಷಗಳಿಂದ ತಳಿ ಸಂರಕ್ಷಣೆಯ ಪಣ ತೊಟ್ಟಿರುವ  ಅವರ ಸಾಹಸ ಹಾಗೂ ತಾಳ್ಮೆಯ ಭಗೀರಥ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಲಿ’

ವಿಶ್ವನಾಥ ಬೈಲಮೂಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,

ಕಿನ್ಯಾ ಗ್ರಾ.ಪಂ.ಮಂಗಳೂರು

ಗ್ರೋ ಬ್ಯಾಗ್ ನಲ್ಲಿ ಬೆಳೆದಿರುವುದು
ರಾಜಕಯಂ
ರಾಮಗಳಿ
ಪರ್ಪಲ್‌
Click to comment

Leave a Reply

Uncategorized

ಹುಬ್ಬಳ್ಳಿ : ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿ ಸದ್ದಾಂ ಹುಸೇನ್ ಗೆ ಪೊಲೀಸರಿಂದ ಗುಂಡೇಟು  – ಬಂಧನ

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಮತ್ತೊಂದು  ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ನೀಡಿದ್ದ ಪ್ರಕರಣ ನಡೆದಿದ್ದು, ಆರೋಪಿ ಸದ್ದಾಂ ಹುಸೇನ್ ನನ್ನು  ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ.

vAd Widget

Ad Widget

ಆರೋಪಿ ಸದ್ದಾಂ ವಿರುದ್ದ  16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ಎಸಗಿ  ಗರ್ಭಿಣಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ FIR ದಾಖಲಾದ   ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು,  ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸ್ಥಳಾಂತರಿಸುವ ವೇಳೆ ಆರೋಪಿ ಸುತ್ತಗಟ್ಟಿ ಗ್ರಾಮದ ಸಮೀಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಗೆ ಗುಂಡೇಟು ಹೊಡೆದಿದ್ದಾರೆ.

Ad Widget

Ad Widget

  ಪೊಲೀಸರು ಆರೋಪಿ ಸದ್ದಾಂ ಹುಸೇನ್ ಎಡಗಾಲಿಗೆ ಗುಂಡು ಹಾರಿಸಿ (Firing) ಬಂಧಿಸಿದ್ದಾರೆ. ಆರೋಪಿ ಸದ್ದಾಂ ಹುಸೇನ್ ಹಲ್ಲೆ  ನಡೆಸಿದ್ದರಿಂದ  ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ಹಾಗೂ ಕಾನ್ಸ್ಟೇಬಲ್ ಅರುಣ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಖಲಿಸಲಾಗಿದೆ. ಆರೋಪಿ ಸದ್ದಾಂ ಹುಸೇನ್ನನ್ನು ಧಾರವಾಡ (Dharwad) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಆಸ್ಪತ್ರೆಗೆ  ಭೇಟಿ ನೀಡಿದ್ದು  ಈ ವೇಳೆ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.” ಎಪಿಎಂಸಿ ಕೇಸ್ ಪತ್ತೆ ಹಚ್ಚಲು ಟೀಮ್ ಕಳಿಹಿಸಿದ್ವಿ. ಅದರಲ್ಲಿ ಒಂದು ಟೀಮ್ಗೆ ಈತ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಐದಾರು ಕಿಮೀ ದೂರದಲ್ಲಿರೋದು ತಿಳಿಯುತ್ತೆ. ಆಗ ಆತನನ್ನು ಬಂಧಿಸಿ ಕರೆತರಲು ತೆರಳಿದ್ದರು. ಆ ವೇಳೆಯಲ್ಲಿ ವಿದ್ಯಾಗಿರಿ ಇನ್ಸ್ಪೆಕ್ಟರ್ ನೇತೃತ್ವದ ಟೀಮ್ ಹೋಗಿತ್ತು. ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ಬಳಿಕ ಆರೋಪಿಯನ್ನು ಬಂಧಿಸಿ ಜೀಪ್ ಹತ್ತಿಸುವಾಗ ಪೆನ್ ನೈಪ್ ನಿಂದ ಎಡ ಭುಜಕ್ಕೆ ಚುಚ್ಚಿದ್ದಾನೆ. ಕಾನ್ಸ್ ಟಬಲ್ ಅರುಣ ಮೇಲೆ ಮೊದಲು ಹಲ್ಲೆ ಮಾಡುತ್ತಾನೆ. ಆಗ ಕಂಟ್ರೋಲ್ ಮಾಡಲು ಆತನನ್ನು ಕೆಳಗೆ ತಳ್ಳಿದ್ದರು. ಆಗ ಅದೇ ಚಾಕುವಿನಿಂದ ಇನ್ಸಪೆಕ್ಟರ್ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡುತ್ತಾನೆ. ಅವನನ್ನ ಕಂಟ್ರೋಲ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಎಡಗಾಲಿಗೆ ಫೈರ್ ಮಾಡಿದ್ದಾರೆ. ಆರೋಪಿ ಸೇರಿ ಮೂರು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ರೇಣುಕಾ ಸುಕುಮಾರ ಎಂದಿದ್ದಾರೆ.

ಸಿಪಿಐ ಮತ್ತು ಕಾನ್ಸಟೇಬಲ್ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು ಒಂದು ಕೇಸ್ ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ಗರ್ಭಿಣಿಯಾದ ಬಾಲಕಿ

ಆರೋಪಿ ಸದ್ದಾಂ ಹುಸೇನ್ ಲಿಂಬುವಾಲೆ ಹುಬ್ಬಳ್ಳಿಯ ಈಶ್ವರನಗರದವನು ಎಂದು ಗುರುತಿಸಲಾಗಿದೆ. ಅಪ್ರಾಪ್ತ ಜತೆ ಸಲುಗೆ ಬೆಳೆಸಿ, ಪ್ರೀತಿಸುವಂತೆ ನಂಬಿಸಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮನೆಯಲ್ಲಿ ಹೇಳಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಕಳೆದ ಮೂರ್ನಾಲ್ಕು ದಿನದಿಂದ ಬಾಲಕಿ ವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೂ ವಾಂತಿ ಕಡಿಮೆಯಾಗದಿ ದ್ದಾಗ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಆ ವೇಳೆ ಬಾಲಕಿ ವಿಚಾರಿಸಿದಾಗ ಸದ್ದಾಂ ಹುಸೇನ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ.

Continue Reading

Uncategorized

Prajwal Revanna Sex Scandal: ಹಾಸ್ಟೆಲ್‌ ಕುರಿತು ವಿಚಾರಿಸಲು ಹೋಗಿದ್ದ ವೇಳೆ ಕೈ ಹಿಡಿದೆಳೆದು ರೂಮಿನ ಬಾಗಿಲು ಹಾಕಿದರು-  ಗನ್‌ ತೋರಿಸಿ ಬಟ್ಟೆ ಬಿಚ್ಚು ಎಂದರು; ರೇಪ್‌ ಮಾಡಿ ಮೊಬೈಲ್‌ ನಲ್ಲಿ ವಿಡಿಯೋ ಮಾಡಿಕೊಂಡ್ರು: ಮಾಜಿ ಜಿಪಂ ಸದಸ್ಯೆಯಿಂದ  ಪ್ರಜ್ವಲ್‌ ರೇವಣ್ಣ ಮೇಲೆ ಅತ್ಯಾಚಾರ ಪ್ರಕರಣ  

Ad Widget

Ad Widget

Ad Widget

Ad Widget

ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌ ಡಿ ರೇವಣ್ಣ  ಪುತ್ರ ಹಾಸನ  ಸಂಸದ ಪ್ರಜ್ವಲ್ ರೇವಣ್ಣ ಸಂಕಷ್ಟ ದಿನೇ ದಿನೆ ಹೆಚ್ಚಾಗುತ್ತಿದೆ. ರಾಸಲೀಲೆಯ ಪೆನ್‌ ಡ್ರೈವ್‌ ಬಹಿರಂಗವಾಗುತ್ತಲೇ, ಮನೆಯ ಮಹಿಳಾ ಕೆಲಸದಾಳು ನೀಡಿದ ದೂರಿನ ಮೇರೆಗೆ ಅಪ್ಪ ಮಗನ ಮೇಲೆ ಹೊಳೆನರಸಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಜ್ವಲ್‌ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

 ಹಾಸನದ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆಯೊಬ್ಬಳಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ ಬಗ್ಗೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗಳ ವಿಡಿಯೋ ಚಿತ್ರಿಕರಣ ನಡೆಸಿರುವ ಬಗ್ಗೆ  ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

vAd Widget

Ad Widget

2ನೇ ದೂರುದಾರೆ ಹಾಸನ ಜಿಲ್ಲೆಯಯರಾಗಿದ್ದು, ಆಕೆಗೀಗ  44 ವರ್ಷ. ಗುರುವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಂತ್ರಸ್ತೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಎಫ್ ಐಆ‌ರ್ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ

Ad Widget

Ad Widget

ದೂರಿನಲ್ಲಿ ಏನಿದೆ ?

Ad Widget

Ad Widget

Ad Widget

 ದೂರುದಾರೆಯೂ ಚುನಾಯಿತ ಪ್ರತಿನಿಧಿಯಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಸಿಕೊಡಲು ಶಾಸಕರು, ಸಂಸದರನ್ನು ಭೇಟಿಯಾಗುತ್ತಿದ್ದರು.  ಒಂದು ದಿನ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸುವ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣರ ಬಳಿ ಮನವಿ ಮಾಡಲು ತೆರಳಿದ್ದೆ. ಅಂದು ಸಂಸದರ ಕಚೇರಿ ಮತ್ತು ವಸತಿ ಗೃಹದಲ್ಲಿ ತುಂಬಾ ಜನರು ಇದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನೀವು ವಸತಿ ಗೃಹದ ಮಹಡಿಯಲ್ಲಿ ಇರುವಂತೆ ನನಗೆ ಸೂಚಿಸಿದರು. ಅದರಂತೆ ನಾನು ಮಹಡಿಗೆ ತೆರಳಿದೆ. ಅಲ್ಲಿ ಕೆಲ ಮಹಿಳೆಯರು ಇದ್ದರು.’ ಕೈ ಹಿಡಿದು ಎಳೆದು ರೂಮ್ ಬಾಗಿಲು ಲಾಕ್:

“ಸ್ವಲ್ಪ ಸಮಯದ ಬಳಿಕ ಮಹಡಿಗೆ ಬಂದ ಪ್ರಜ್ವಲ್ ರೇವಣ್ಣ ಅಲ್ಲಿಂದ ಬೇರೆ ಮಹಿಳೆಯರ ಅಹವಾಲು ಆಲಿಸಿ ಕಳುಹಿಸಿದರು. ಬಳಿಕ ನಾನು ಒಬ್ಬನೇ ಇದ್ದಿದ್ದರಿಂದ ನನ್ನನ್ನು ರೂಮ್‌ಗೆ ಕರೆದರು. ನಾನು ಒಳಗೆ ಹೋಗುತ್ತಿದ್ದಂತೆ ಕೈ ಹಿಡಿದು ಎಳೆದುಕೊಂಡು ರೂಮ್‌ನ ಬಾಗಿಲು ಹಾಕಿದರು. ಆಗ ಏಕೆ ಬಾಗಿಲು ಹಾಕುತ್ತೀರಿ ಎಂದು ನಾನು ಕೇಳಿದೆ. ಆಗ ಅವರು ಏನೂ ಆಗುವುದಿಲ್ಲ ಎಂದು ನನ್ನನ್ನು ಬೆಡ್ ಮೇಲೆ ಕೂರಿಸಿಕೊಂಡರು.’

ಹೇಳಿದ ಹಾಗೆ ಕೇಳು:

 ‘ನಿನ್ನ ಗಂಡ ಜೋರು, ಕಡಿಮೆ ಮಾತನಾಡಲು ಹೇಳು. ಇಲ್ಲವಾದರೆ ಅವನನ್ನು ಬಿಡುವುದಿಲ್ಲ, ಅವನಿಂದ ನಮ್ಮ ಅಮ್ಮನ ಎಂಎಲ್‌ಎ ಟಿಕೆಟ್‌ ತಪ್ಪಿತು.ನಿನ್ನಗಂಡರಾಜಕೀಯವಾಗಿ ಬೆಳಯಬೇಕು ಎಂದರೆ ನಾನು ಹೇಳಿದ ಹಾಗೆ ಮಾಡು ಎನ್ನುತ್ತಾ ನನ್ನನ್ನು ಮಂಚದ ಮೇಲೆ ಮಲಗಿ ಬಟ್ಟೆ ಬಿಚ್ಚು ಎಂದರು. ನಾನು ಬಿಚ್ಚುವುದಿಲ್ಲ ಎಂದರೂ ಬಿಚ್ಚುವಂತೆ ಒತ್ತಾಯ ಮಾಡಿದರು’ ಎಂದು ದೂರಿನಲ್ಲಿಆರೋಪಿಸಿದ್ದಾರೆ.

ನನ್ನ ಬಳಿ ಗನ್ ಇದೆ:

 ‘ಈ ವೇಳೆ ನಾನು ಕೂಗುತ್ತೇನೆ ಎಂದು ಹೇಳಿದಾಗ, ನನ್ನ ಬಳಿ ಗನ್ ಇದೆ. ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ, ನಿನ್ನನ್ನು ಮತ್ತು ನಿನ್ನ ಗಂಡನನ್ನು ಬಿಡುವುದಿಲ್ಲ, ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದರು. ಬಳಿಕ ನನ್ನನ್ನು ಬಲಾತ್ಕಾರ ಮಾಡಲು ಪ್ರಯತ್ನಿಸಿದರು. ನಾನೇ ಎಷ್ಟೇ ಪ್ರತಿರೋಧ ಒಡ್ಡಿದರೂ ಬಿಗಿಯಾಗಿ ನನ್ನ ಕೈ ಹಿಡಿದು ಕೂಗಬೇಡ ಎಂದು ಬೆದರಿಸಿದರು. ಆಗ ನಾನು ಭಯಪಟ್ಟೆ. ಆಗ ಅವರು ಮೊಬೈಲ್ ತೆಗೆದರು. ಇದರಿಂದ ಹೆದರಿ ಅವರು ಹೇಳಿದಂತೆ ನಾನು ಕೇಳಿದೆ. ಅವರು ಹೇಳಿದಂತೆ ನಡೆದುಕೊಂಡೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮೊಬೈಲ್‌ನಲ್ಲಿ ಚಿತ್ರೀಕರಣ:

‘ನನ್ನನ್ನು ಬಲಾತ್ಕಾರ,ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ  ಚಿತ್ರೀಕರಣ ಮಾಡಿಕೊಂಡರು. ನೀನೇನಾದರೂ ಈ ವಿಚಾರವನ್ನು ಬಾಯಿ ಬಿಟ್ಟರೆ, ನಿನ್ನ ವಿಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ. ಈ ವಿಡಿಯೊದಲ್ಲಿ ನನ್ನ ಮುಖ ಇಲ್ಲ. ನಿನ್ನದೇ ಮಾನ-ಮರ್ಯಾದೆ ಹೋಗುತ್ತದೆ ಎಂದು ಹೇಳಿ ಭಯಪಡಿಸಿದರು. ಈ ವಿಡಿಯೊವನ್ನು ಹೀಗೇ ಇರಿಸಿಕೊಂಡಿರುತ್ತೇನೆ. ನಾನು ಕರೆದಾಗಲೆಲ್ಲಾ ನೀನು ನನ್ನ ಜತೆ ಮಲಗಬೇಕು. ಇಲ್ಲವಾದರೆ, ವಿಡಿಯೋವನ್ನು ಬಹಿರಂಗಪಡಿಸುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದರು.’

ಮುಂದುವರೆದು, ‘ನಿನ್ನ ಗಂಡ ನನ್ನ ಜತೆ ಇರುತ್ತಾನೆ. ಅವನನ್ನೂ ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿದರು. ಪದೇ ಪದೇ ನನಗೆ ಕರೆ ಮಾಡಿ, ವಿಡಿಯೋ ಕರೆ ಮಾಡಿ, ನಿನ್ನ ದೇಹವನ್ನು ನಗ್ನವಾಗಿ ತೋರಿಸು, ಬಟ್ಟೆ ಬಿಚ್ಚು ಎಂದು ಪೀಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ದೈಹಿಕವಾಗಿ ಆನೇಕ ಬಾರಿ ನನ್ನನ್ನು ಬಲಾತ್ಕಾರ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜ್ವಲ್ ಮೇಲೆ ಕ್ರಮ ಆಗಬೇಕು:

‘ಪ್ರಜ್ವಲ್ ರೇವಣ್ಣ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ನನ್ನ ಮೇಲೆ ಬಲಾತ್ಕಾರ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳುಮಾಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಇಷ್ಟು ದಿನ ನಾನು ಪ್ರಜ್ವಲ್ ರೇವಣ್ಣ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡು ನನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯದ ಸಂಬಂಧ ದೂರು ನೀಡುತ್ತಿದ್ದೇನೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಪದೇ ಪದೇ ಕರೆ ಮಾಡಿ, ವಿಡಿಯೋ ಕರೆ ಮಾಡಿ, ನಿನ್ನ ದೇಹವನ್ನು ನಗ್ನವಾಗಿ ತೋರಿಸು, ಬಟ್ಟೆ ಬಿಚ್ಚು ಎಂದು ಪೀಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ದೈಹಿಕ ವಾಗಿ ಅನೇಕ ಬಾರಿ ನನ್ನನ್ನು ಬಲಾತ್ಕಾರ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ.

ದೂರಿನಲ್ಲಿ ಮಹಿಳೆ ಹೇಳಿದ್ದು

Continue Reading

Uncategorized

ವಿಟ್ಲದ ದಂಪತಿಗಳಿದ್ದ ಕಾರು ಸಂಪಾಜೆಯಲ್ಲಿ ಅಪಘಾತ – ಮಹಿಳೆ ಮೃತ್ಯು

Ad Widget

Ad Widget

Ad Widget

Ad Widget

ಪುತ್ತೂರು: ಮಡಿಕೇರಿಯ ಕಡೆಗೆ ಸಂಚರಿಸುತ್ತಿದ್ದ ಕಾರು ಸಂಪಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ ಒಂದಕ್ಕೆ ಡಿಕ್ಕಿ ಹೊಡೆದು ಪತ್ನಿ ಮೃತಪಟ್ಟು ಪತಿ ಗಂಭೀರ ಗಾಯಗೊಂಡ ಘಟನೆ ಮೇ 3ರಂದು ನಡೆದಿದೆ.

Ad Widget

Ad Widget

Ad Widget

ಅಡ್ಯನಡ್ಕ ನಿವಾಸಿ ಅನುರಾಧ ಪೈ ಮೃತ ಪಟ್ಟಿದ್ದು, ಪತಿ ಅರವಿಂದ ಪೈ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

vAd Widget

Ad Widget

ಕಾರಿನ ಮುಂಭಾಗ ಕುಳಿತಿದ್ದ ಅನುರಾಧ ಪೈ ಅವರು ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading