Connect with us

ದಕ್ಷಿಣ ಕನ್ನಡ

Arun Kumar Puttila : ಚುನಾವಣಾ ಪ್ರಚಾರದಲ್ಲಿ ಮೋದಿ, ಯೋಗಿ ಫೋಟೊ ಬಳಕೆ ಪ್ರಕರಣ – ವಿಚಾರಣೆಗೆ ಹಾಜಾರಾಗಲು ಅರುಣ್ ಪುತ್ತಿಲರಿಗೆ ಪೊಲೀಸ್ ನೋಟಿಸ್ – ತನಿಖೆಗೆ ಹೈಕೋರ್ಟ್ ತಡೆ

Ad Widget

Ad Widget

Ad Widget

Ad Widget

ಕಳೆದ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur Constituency) ಪಕ್ಷೇತರ ಅಭ್ಯರ್ಥಿಯಾಗಿ (Independent Candidate) ಸ್ಪರ್ಧಿಸಿದ್ದ ಅರುಣ್‌ ಕುಮಾರ್‌ ಪುತ್ತಿಲರವರು (Arun Kumar Puttila)  ಬಿಜೆಪಿಯ ಸರ್ವೊಚ್ಚ ನಾಯಕರಾದ  ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉತ್ತರ ಪ್ರದೇಶದ ಸಿ ಎಂ ಯೋಗಿ ಅದಿತ್ಯನಾಥ್‌ (Yogi Adityanath) ಅವರ ಭಾವಚಿತ್ರಗಳನ್ನು ಚುನಾವಣಾ ಪ್ರಚಾರದ ವೇಳೆ ಬಳಸಿದ್ದಾರೆಂದು ಪುತ್ತೂರು ಬಿಜೆಪಿ (Puttur Bjp Leader) ನಾಯಕರೊಬ್ಬರು ಚುನಾವಣಾ  ಅಧಿಕಾರಿಗೆ ದೂರು ನೀಡಿದ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟು ತಡೆ ನೀಡಿದೆ.

Ad Widget

Ad Widget

Ad Widget

ಪುತ್ತೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಿರುವ  ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿ  ಅರುಣ್‌ ಪುತ್ತಿಲ ಪೋಸ್ಟರ್ ಹಾಕಿರುವುದಾಗಿ 2023ರ ಮೇ ತಿಂಗಳಿನಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿ(BJP Candidate) ಆಶಾ ತಿಮ್ಮಪ್ಪ  ಪರವಾಗಿ ಅವರ ಏಜೆಂಟ್ ರಾಜೇಶ್ ಬನ್ನೂರು(Rajesh Bannur) ಚುನಾವಣಾ ಅಧಿಕಾರಿಗೆ  ದೂರು ನೀಡಿದ್ದರು. ಅಲ್ಲದೇ ತನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ತಾರಾ ಪ್ರಚಾರಕರಾದ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿದರು.

vAd Widget

Ad Widget

 ದೂರು ಸ್ವೀಕರಿಸಿದ ಚುನಾವಣಾ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುವಂತೆ ಪುತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿ FIR  ದಾಖಲಿಸಿಕೊಂಡ  ಪೊಲೀಸರು 2023ರ ಡಿ 7 ರಂದು ಅರುಣ್‌ ಪುತ್ತಿಲರಿಗೆ ನೋಟಿಸ್‌ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು

Ad Widget

Ad Widget

ನೊಟೀಸ್‌ ನಲ್ಲಿ ಏನಿತ್ತು ?

Ad Widget

Ad Widget

Ad Widget

ಕಲಂ: 41 (ಎ) ಉಪ ಕಲಂ (1) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ,  , ಪುತ್ತೂರು ನಗರ ಠಾಣಾ ಅ.ಕ್ರ 34/2023 ಕಲಂ 123 (a), 125 Representation of People Act 1951& 1988 ಪ್ರಕರಣದಲ್ಲಿ ತನಿಖೆಯ ಸಮಯ  ಈ ಪ್ರಕರಣದಲ್ಲಿನ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪೂರಕ ಕಾರಣಗಳು ಕಂಡು ಬಂದಿರುತ್ತವೆ. ಆದುದರಿಂದ ಈ ನೋಟೀಸ್ ಸ್ವೀಕರಿಸಿದ ಕೂಡಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಖುದ್ದಾಗಿ ಹಾಜರಾಗಲು ಈ ಮೂಲಕ ನಿರ್ದೇಶಿಸಲಾಗಿದೆ ಎಂದು ನಗರ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರು ನೊಟೀಸ್‌ ಜಾರಿ ಮಾಡಿದ್ದರು.

ಇದನ್ನು ಪ್ರಶ್ನಿಸಿ ಅರುಣ್‌ ಪುತ್ತಿಲರುವರು ಹೈ ಕೋರ್ಟ್‌ ಮೊರೆ ಹೋಗಿದ್ದು, ಇದೀಗ ಹೈಕೋರ್ಟ್‌ ತನಿಖೆಗೆ ತಡೆ ಕೋರಿ ಆದೇಶಿಸಿದೆ. ಅರುಣ್‌ ಪುತ್ತಿಲ ಪರ ಖ್ಯಾತ ನ್ಯಾಯವಾದಿಗಳಾದ ಬೆಂಗಳೂರಿನ ಸಚಿನ್‌ ಹಾಗೂ ಪುತ್ತೂರಿನ ನರಸಿಂಹ ಪ್ರಸಾದ್‌ ವಾದಿಸಿದರು.

Click to comment

Leave a Reply

ಸುಳ್ಯ

ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊ ತೆಗೆದ ಅನ್ಯ ಕೋಮಿನ ಯುವಕ – ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Ad Widget

Ad Widget

Ad Widget

Ad Widget

ಸುಳ್ಯ:   ಮೊಬೈಲ್‌ ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊವನ್ನು ಅನ್ಯಕೋಮಿನ ಯುವಕನೊಬ್ಬ  ತೆಗೆದ  ಆರೋಪ ಕೇಳಿ ಬಂದಿದ್ದು ಪ್ರಕರಣ ಸುಳ್ಯ ಠಾಣೆ ಮೆಟ್ಟೀಲೆರಿದೆ.  ಯುವತಿ ಸುಳ್ಯದ  ಗಾಂಧಿನಗರದಲ್ಲಿರುವ  ಏರ್ಟೆಲ್ ಮಳಿಗೆಗೆ ಹೋಗಿದ್ದ  ವೇಳೆ ಪ್ರಕರಣ ನಡೆದಿದೆ.

Ad Widget

Ad Widget

Ad Widget

ಗಾಂಧಿನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ತೊಂದರೆಗೆ ಒಳಗಾದವಳು. ಆಕೆ ಮೊಬೈಲ್‌ ರಿಚಾರ್ಜ್‌ ಮಾಡಿಸಲೆಂದು ಹತ್ತಿರದ ಏರ್ಟೆಲ್ ಮಳಿಗೆಗೆ ಹೋಗಿದ್ದಾಳೆ. ಮಳಿಗೆಯಲ್ಲಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಕುಳಿತುಕೊಳ್ಳುವಂತೆ ತಿಳಿಸಿ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ.

vAd Widget

Ad Widget

ಅವನ ನಡವಳಿಕೆಯಿಂದ ಅನುಮಾನಗೊಂಡ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ಅದರಲ್ಲಿ ತನ್ನ ಫೋಟೋ ಇರುವುದನ್ನು ನೋಡಿದ್ದಾಳೆ. ಹಾಗೂ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾಳೆ.

Ad Widget

Ad Widget

 ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.

Ad Widget

Ad Widget

Ad Widget
Continue Reading

ಉದ್ಯೋಗ

Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ

Ad Widget

Ad Widget

Ad Widget

Ad Widget

ಪುತ್ತೂರಿನ ಪ್ರತಿಷ್ಠಿತ ಮೇಘ ಫ್ರುಟ್ ಪ್ರೋಸೆಸಿಂಗ್ ಪ್ರೈವೇಟ್ ಲಿಮಿಟೆಡ್ (ಬಿಂದು) ಸಂಸ್ಥೆಯ ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಅಚ್ಯುತಾಪುರಂ ಎಸ್‌ಇಝಡ್ ಕೈಗಾರಿಕಾ ಪ್ರದೇಶದಲ್ಲಿ ಮೇ 2ರಂದು ನಡೆಯಿತು.

Ad Widget

Ad Widget

Ad Widget

ಆರ್‌ಎಸ್‌ಪಿ ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ರಮೇಶ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದರು. ಬಿಂದು ಕಂಪನಿಯ ಚೇರ್‌ಮೆನ್ ಸತ್ಯಶಂಕ‌ರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತಾ ಶಂಕರ್, ಸಿಇಒ ಸುಶೀಲ್ ವೈದ್ಯ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

vAd Widget

Ad Widget

2000ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಉತ್ಪಾದನ ಘಟಕ ತೆರೆದ ಬಿಂದು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. 2016ರಲ್ಲಿ ತೆಲಂಗಾಣದಲ್ಲಿ ಉತ್ಪಾದನ ಘಟಕ ತೆರೆದ ಬಿಂದು ಇದೀಗ ಆಂದ್ರದಲ್ಲಿ ಶಿಲಾನ್ಯಾಸಗೈದಿದೆ. 2025ರ ವೇಳೆ ಆಂದ್ರದ ಘಟಕ ಉದ್ಘಾಟನೆಯಾಗಲಿದೆ. ಬಿಂದು ಕಂಪನಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.

Ad Widget

Ad Widget
Continue Reading

ಮಂಗಳೂರು

Luxury ship-ಮಂಗಳೂರಿಗೆ ಬಂದ 8ನೇ ಬೃಹತ್ ಐಷಾರಾಮಿ ಹಡಗು

Ad Widget

Ad Widget

Ad Widget

Ad Widget

ಪಣಂಬೂರು ಮೇ 5: ಈ ವರ್ಷದ 8ನೇ ಐಷಾರಾಮಿ ಕ್ರೂಸ್ ‘ಎಂಎಸ್ ಇನ್‌ಸೈನಿಯಾ’ ನವಮಂಗಳೂರು ಬಂದರಿಗೆ ರವಿವಾರ ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶೀ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

Ad Widget

Ad Widget

Ad Widget

ನಾರ್ವೇಜಿಯನ್ ಕ್ರೂಸ್ ಲೈನರ್ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್‌ ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.

vAd Widget

Ad Widget

ಕಾರ್ಕಳ ಗೋಮಟೇಶ್ವರ ಬೆಟ್ಟ ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading