ಅಪರಾಧ
ಆರು ವರ್ಷದ ಬಾಲಕಿಗೆ ಐಸ್ ಕ್ರೀಂ ಕೊಡಿಸುವ ಆಮೀಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ – ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಪುತ್ತೂರಿನ ನ್ಯಾಯಾಲಯ
ಪುತ್ತೂರು : ನ 8 : ಆರು ವರ್ಷದ ಬಾಲಕಿಗೆ ಐಸ್ ಕ್ರೀಂ ಕೊಡಿಸುವ ಆಮೀಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಪ್ರಕರಣವೂ 6 ವರ್ಷದ ಹಿಂದೆ 2015ರಲ್ಲಿ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿತ್ತು. ಜಾಲ್ಸೂರು ನಿವಾಸಿ ಸತೀಶ್ ಜೈಲು ಶಿಕ್ಷೆಗೆ ಒಳಗಾದವ. ಈತನಿಗೆ 10 ವರ್ಷಗಳ ಕಾರಗೃಹ ಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿ ಪುತ್ತೂರು 5ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವೂ ತೀರ್ಪು ಘೋಷಿಸಿದೆ.
2015 ರ ಡಿ. 2೦ರಂದು ಸತೀಶನೂ ಮಧ್ಯಾಹ್ನ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಚಾಕೋಲೇಟ್ ಮತ್ತು ಐಸ್ಕ್ರೀಮ್ ಕೊಡುವ ಆಮಿಷವೊಡ್ಡಿ ಮನೆಯೊಳಗೆ ಕರೆದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ಬಾಲಕಿಯ ತಾಯಿ ದೂರು ನೀಡಿದ್ದು ಸುಳ್ಯ ಠಾಣೆಯಲ್ಲಿ ಆರೋಪಿಯ ವಿರುದ್ದ ಐಪಿಸಿ ಕಲಂ 376 ಮತ್ತು ಪೋಕ್ಸೋ ಕಾಯ್ದೆ ಕಲಂ 4, 6, 8, 1೦ ರಡಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ಪಿರೇರಾ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯೆ ಡಾ. ಶುಲ್ ಸುವರಿಸ್ ವಿಡಿಯೋ ಕಾನ್ನರೆನ್ಸ್ ಮೂಲಕ ಹಾಗೂ ಪ್ರಕರಣದ ತನಿಖಾಧಿಕಾರಿಗಳಾದ ಚಂದ್ರಶೇಖರ ಹೆಚ್.ವಿ. ಮತ್ತು ಆಗಿನ ವೃತ್ತ ನಿರೀಕ್ಷಕರಾಗಿದ್ದ ಬಿ.ಎಸ್, ಸತೀಶ್ ರವರು ನ್ಯಾಯಾಲಯಕ್ಕೆ ಹಾಜರಾಗಿ ವಿವರವಾದ ಸಾಕ್ಷಿ ನುಡಿದಿದ್ದರು.
ಆರೋಪಿಯೂ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿರುವುದು ದೃಢಪಟ್ಟಿರುವುದಾಗಿ ನ್ಯಾಯಾದೀಶರು ತೀರ್ಪು ಪ್ರಕಟಿಸಿದರು.
ಶಿಕ್ಷೆಯ ಪ್ರಮಾಣ:
ಭಾ.ದಂ.ಸಂ ಕಲಂ 376 ಹಾಗೂ 511 ರಡಿ ಮತ್ತು ಪೋಕ್ಸೋ ಕಾಯ್ದೆ ಕಲಂ 4,6,8 ರಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 25,000 ದಂಡವನ್ನು ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ದಂಡದ ಮೊತ್ತದಲ್ಲಿ ರೂ. 20 ಸಾವಿರವನ್ನು ಸಂತೃಸ್ತ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಲಯ ಆದೇಶಿಸಿದೆ. ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ದಂ.ಪ.ಸಂ. ಕಲಂ 357(A) ರಡಿ ರೂ. ಒಂದು ಲಕ್ಷ ರೂಪಾಯಿಯನ್ನು ಸಂತೃಸ್ತೆಗೆ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.
ಅಪರಾಧ
Kodagu-ಕೊಡಗು : SSLC ಪಾಸಾದ ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಕೊಂದು ತಲೆಯೊಂದಿಗೆ ಪರಾರಿಯಾದ ಕ್ರೂರಿಯ ಬಂಧನ – ಇನ್ನೂ ಸಿಗದ ರುಂಡ
ಮಡಿಕೇರಿ: ಬಾಲಕಿಯನ್ನು ಕೊಂದು ರುಂಡದ ಸಮೇತ ಪರಾರಿಯಾಗಿದ್ದ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಳ ಗ್ರಾಮದ ಪ್ರಕಾಶ್ನನ್ನು (33) ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಆದರೆ ಬಾಲಕಿಯ ರುಂಡ ಪತ್ತೆಯಾಗಿಲ್ಲ.
ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಬೆಳಿಗ್ಗೆ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿತು. ಕೂಡಲೇ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವುದು ನಿಜ. ಆದರೆ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಏಕೈಕ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೀನಾ (16) ಪರೀಕ್ಷೆ ಫಲಿತಾಂಶ ದಿನವೇ ಬರ್ಬರವಾಗಿ ಹತ್ಯೆ ಆಗಿದ್ದಳು. ಆಕೆಯ ರುಂಡ ಕತ್ತರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಕೆಯ ತಲೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದನು. ಸೂರ್ಲಬ್ಬಿ ಶಾಲೆ ಏಕೈಕ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿದ್ದ ಮೀನಾ ಉತ್ತೀರ್ಣಳಾಗಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಆಕೆಯ ಬರ್ಬರ ಹತ್ಯೆ ನಡೆದಿತ್ತು.
ಹತ್ಯೆಯಾದ ವಿದ್ಯಾರ್ಥಿನಿ ಮೀನಾ, ಮುಟ್ಲು ಗ್ರಾಮದಿಂದ 5 ಕಿಮೀ ದೂರದಲ್ಲಿರುವ ಸೂರ್ಲಬ್ಬಿ ಶಾಲೆಗೆ ಪ್ರತಿನಿತ್ಯ ನಡೆದುಕೊಂಡೇ ಬರುತ್ತಿದ್ದಳು. ಕುಗ್ರಾಮದಿಂದ ಬಂದ ಆಕೆ 314 ಅಂಕಗಳನ್ನು ಪಡೆದಿರುವುದು ಹೆಮ್ಮೆ ವಿಚಾರ ಎಂದು ಸೂರ್ಲಬ್ಬಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಡರದಾನಿ ಸಂತಸ ವ್ಯಕ್ತಪಡಿಸಿದ್ದರು.
ಹತ್ಯೆಗೆ ಕಾರಣವೇನು?
ಅಪ್ರಾಪ್ತ ಬಾಲಕಿ ಮೀನಾಳ ಜೊತೆ ಆರೋಪಿ ಮೊಣ್ಣಂಡ ಪ್ರಕಾಶ್ ಮದುವೆಗೆ ಮುಂದಾಗಿದ್ದನು. ಹೀಗಾಗಿ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದನು. ಆದರೆ ಬಾಲ್ಯವಿವಾಹದ ವಿಚಾರ ತಿಳಿದ ಸೋಮವಾರ ಪೇಟೆ ಪೋಲೀಸರು ಬಾಲಕಿಯ ನಿಶ್ಚಿತಾರ್ಥ ತಡೆದು ಬುದ್ದಿ ಹೇಳಿದ್ದರು. ಹೀಗಾಗಿ ಬಾಲಕಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲು ಎರಡು ಕುಟುಂಬಗಳು ಮುಂದಾಗಿದ್ದವು. ಬಾಲಕಿಗೆ 18 ವರ್ಷ ಆಗದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್ಸಿಲಿಂಗ್ ಮಾಡಿ, ಎಂಗೇಜ್ಮೆಂಟ್ ತಡೆದಿದ್ದರು.
ಇದರಿಂದ ತೀವ್ರ ಸಿಟ್ಟಿಗೆದ್ದ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಜಗಳವಾಡಿದ್ದ. ಹತ್ಯೆಗೂ ಮುನ್ನ ಹುಡುಗಿಯ ಮನೆಗೆ ನುಗ್ಗಿದ್ದ ಪಾಪಿ ಪ್ರಕಾಶ್ ಹುಡುಗಿಯ ತಂದೆ ತಾಯಿಯೊಂದಿಗೆ ಕೂಡ ಗಲಾಟೆ ಮಾಡಿ ಅವರ ಮೇಲೆ ಕೂಡ ಹಲ್ಲೆನಡೆಸಿದ್ದ, ಬಳಿಕ ಬಾಲಕಿ ಮೀನಾಳನ್ನು 100 ಮೀಟರ್ ದೂರ ಬಲವಂತಾಗಿ ಮನೆಯಿಂದ ಎಳೆದೊಯ್ದು ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಬಳಿಕ ನಿನ್ನ ಸಂಜೆ ಆತ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿ ಹಬ್ಬಿತ್ತು ಹಾಗೂ ಹಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದವು. ಆದರೇ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳು ರಾತ್ರಿ ವೇಳೆ ಸ್ಪಷ್ಟಪಡಿಸಿದ್ದರು.ಆದಾದ ಬಳಿಕ ಆರೋಪಿಯನ್ನು ಬಂಧಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪರಾಧ
PUTTUR-ಪುತ್ತೂರು : ಆತ್ಮಹತ್ಯೆಯ ಕಟ್ಟು ಕಥೆ ಕಟ್ಟಿದ್ದ ಪ್ರಕರಣದ ನೈಜ್ಯತೆ ಬೆಳಕಿಗೆ – ಮಗನ ಕಾಟ ತಾಳಲಾರದೇ, ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದು ಹೆತ್ತ ತಾಯಿಯಿಂದಲೇ ಬರ್ಬರ ಕೊಲೆ – ತಾಯಿ ಜತೆ ನೆರೆಮನೆಯ ಇಸುಬು ಪೊಲೀಸ್ ವಶ
ಪುತ್ತೂರು : ಹೆತ್ತ ತಾಯಿಯೇ ಮಗನ ಕಾಟ ತಾಳಲಾರದೇ ಆತನ ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದುಕೊಂಡು ಹೋಗಿ ಕೊಲೆ ನಡೆಸಿದ ಭೀಭತ್ಸ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ನಡೆದಿದೆ. ಬೆಟ್ಟಂಪಾಡಿ ಗ್ರಾಮದ ಬರೆ ಕಾನುಮೂಲೆ ನಿವಾಸಿ ದಿ. ಕೊರಗಪ್ಪ ಶೆಟ್ಟಿ ಎಂಬವರ ಪುತ್ರ ಚೇತನ್ ಶೆಟ್ಟಿ (35) ಮೃತಪಟ್ಟ ಯುವಕ.
ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಉಮಾವತಿ ಕೆ ಶೆಟ್ಟಿ ಹಾಗೂ ಪಕ್ಕದ ಮನೆ ನಿವಾಸಿ ಇಸುಬು ಎಂಬಾತನನ್ನು ಕೊಲೆ ನಡೆಸಿದ ಸಂಶಯದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಚೇತನ್ ಶೆಟ್ಟಿಗೆ ವಿಪರೀತ ಕುಡಿತದ ಚಟವಿದ್ದು, ನಿತ್ಯ ಮನೆ ಮಂದಿಯೊಂದಿಗೆ ಗಲಾಟೆ ನಡೆಸುತ್ತಿದ್ದ. ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ಮಾತ್ರವಲ್ಲದೇ ನೆರೆ ಮನೆಯ ಇಸುಬು ಎಂಬವರ ಮನೆಗೂ ಹೋಗಿ ಅಲ್ಲಿಯೂ ಗಲಾಟೆ ಮಾಡುತ್ತಿದ್ದ.
ಗುರುವಾರ ರಾತ್ರಿ ಚೇತನ್ ಶೆಟ್ಟಿ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ. ತಾಯಿಯೊಂದಿಗೆ ತಡರಾತ್ರಿ ಮನೆಯಲ್ಲಿ ಜಗಳವಾಡಿ ಬಳಿಕ ನೆರೆಯ ನಿವಾಸಿ ಇಸುಬುರವರ ಮನೆಗೆ ಹೋಗಿ ಬಾಗಿಲು ಬಡಿಯುತ್ತಾ ದಾಂದಲೆ ಎಬ್ಬಿಸಿದ್ದ. ಈ ವಿಚಾರವನ್ನು ಯೂಸುಫ್ ಅವರು ಉಮಾವತಿ ಅವರಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ.
ವಿಷಯ ತಿಳಿದು ತಾಯಿ ಉಮಾವತಿ ಚೇತನನ್ನು ಮನೆಗೆ ಕರೆದುಕೊಂಡು ಬರಲು ನಾಯಿಯನ್ನು ಕಟ್ಟಿಹಾಕುವ ಸಂಕೋಲೆ ಹಿಡಿದುಕೊಂಡು ಇಸುಬು ಅವರ ಮನೆಗೆ ಹೋಗಿದ್ದರು. ಅಲ್ಲಿದ್ದ ಚೇತನ್ನನ್ನು ಇಸುಬು ಅವರ ಸಹಕಾರದೊಂದಿಗೆ ಸಂಕೋಲೆಯಲ್ಲಿ ಕಟ್ಟಿಹಾಕಿ ಎಳೆದು ಕೊಂಡು ಮನೆಗೆ ಬರುತ್ತಿದ್ದ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದ ಪರಿಣಾಮವಾಗಿ ಮನೆಗೆ ತಲುಪಿದ ವೇಳೆ ಚೇತನ್ ತೀರಾ ಅಸ್ವಸ್ಥಗೊಂಡಿದ್ದರು. ಬಳಿಕ ಆತನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಆದರೇ ಈ ಕೊಲೆ ಕೇಸನ್ನು ಮುಚ್ಚಿ ಹಾಕುವ ಉದ್ದೇಶದಿಂದ ಉಮಾವತಿ ಶೆಟ್ಟಿಯವರು ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದರು. ಮಗ ಚೇತನ್ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಮೇ ೯ರಂದು ಗುರುವಾರ ರಾತ್ರಿಯಿಂದ ಮೇ ೧೦ ರ ಬೆಳಗ್ಗಿನ ಜಾವದ ಅವಧಿಯಲ್ಲಿ, ಜೀವನದಲ್ಲಿ ಜಿಗುಪ್ಸೆಗೊಂಡು, ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಸಂಪ್ಯ ಪೊಲೀಸರು ಪುತ್ತೂರು ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಂಕೋಲೆಯಿಂದ ಬಿಗಿದ ಗುರುತುಗಳು ಕಂಡು ಬಂದಿತ್ತು ಅಲ್ಲದೇ ಮೃತದೇಹದ ಕುತ್ತಿಗೆ, ಬೆನ್ನು, ಸೊಂಟ, ಎಡಕಾಲು ಮತ್ತು ತೋಳು,ಬಲ ಭುಜದ ಮೇಲೆ ಗಾಯಗಳು ಇರುವುದು ಕಂಡು ಬಂತು. ಹೀಗಾಗಿ ಸಂಶಯಗೊಂಡ ಪೊಲೀಸರು ಉಮಾವತಿಯವರನ್ನು ತೀವ್ರ ರೀತಿಯಲ್ಲಿ ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಳಿಕ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಲಂ 302 ,201 ಜೊತೆಗೆ 34 IPC ರಂತೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಮತ್ತು ಮೃತದೇಹ ಇಟ್ಟಿದ್ದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಮಹಜರು ನಡೆಸಲು ಮಂಗಳೂರಿನ ದೇರಳಕಟ್ಟೆಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೆಯ್ಯಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸಂಖ್ಯೆ ಪೊಲೀಸರು ಚೇತನ್ ತಾಯಿ ಉಮಾವತಿ ಮತ್ತು ನೆರೆಯ ನಿವಾಸಿ ಯೂಸುಫ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಪರಾಧ
Mangaluru-ಮಂಗಳೂರು: ಸೆಂಟ್ರಲ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ‘ಹೊಯ್ ಕೈ’ ವೀಡಿಯೊ ವೈರಲ್
ಮಂಗಳೂರು:ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಹೊರಗಡೆ ಮಂಗಳವಾರ ಬೆಳ್ಳಂಬೆಳಗ್ಗೆ 7:30ರ ಸುಮಾರಿಗೆ ಪಾರ್ಕಿಂಗ್ ವಿಚಾರಕ್ಕೆ ನಡೆದ ವಾಗ್ವಾದ ‘ಹೊಯ್ ಕೈ’ ಮಾಡುವಲ್ಲಿಗೆ ತಿರುಗಿದ ವೀಡಿಯೊ ವೈರಲ್ ಆಗಿದೆ.
ಚೆನ್ನೈನಿಂದ ಆಗಮಿಸಿರುವ ದಂಪತಿಯನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಸ್ಥಳೀಯರಿಬ್ಬರು ಬೈಕ್ ನಲ್ಲಿ ಬಂದಿದ್ದರು. ಆದರೆ ರೈಲ್ವೇ ನಿಲ್ದಾಣದಲ್ಲಿ ನಿಯಮದ ಪ್ರಕಾರ, ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಎಲ್ಲಾ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮುಖ್ಯಗೇಟ್ನ ಮುಂದೆ ಪಿಕಪ್ ಮತ್ತು ಡ್ರಾಪ್ ಅನ್ನು ಮಾತ್ರ ಅನುಮತಿಸಲಾಗುತ್ತದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬಾತ ಹಾಗೂ ದಂಪತಿಯನ್ನು ಕರೆದೊಯ್ಯಲು ಬಂದಿರುವ ಇಬ್ಬರು ನಡುವೆ ಆರಂಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಚಂದನ್ ಬೆಂಬಲವಾಗಿ, ಒಂದಿಬ್ಬರು ಆಟೋರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ವಾಗ್ವಾದ ಮತ್ತಷ್ಟು ಬೆಳೆದು ಹೊಯ್ ಕೈ ಆಗುವಲ್ಲಿಗೆ ಹೋಗಿದೆ. ಈ ವೇಳೆ ಮಹಿಳೆಯ ಬೊಬ್ಬೆ ಹಾಕುವುದು ವೀಡಿಯೊದಲ್ಲಿ ದಾಖಲಾಗಿದೆ.
ಈ ಬಗ್ಗೆ ಆಟೋ ಚಾಲಕರ ಗುರುತು ಪತ್ತೆ ಹಚ್ಚಲಾಗಿದ್ದು, ಶೀಘ್ರ ಕ್ರಮ ಕೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ
-
ಅಪರಾಧ2 days ago
PUTTUR-ಪುತ್ತೂರು : ಆತ್ಮಹತ್ಯೆಯ ಕಟ್ಟು ಕಥೆ ಕಟ್ಟಿದ್ದ ಪ್ರಕರಣದ ನೈಜ್ಯತೆ ಬೆಳಕಿಗೆ – ಮಗನ ಕಾಟ ತಾಳಲಾರದೇ, ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದು ಹೆತ್ತ ತಾಯಿಯಿಂದಲೇ ಬರ್ಬರ ಕೊಲೆ – ತಾಯಿ ಜತೆ ನೆರೆಮನೆಯ ಇಸುಬು ಪೊಲೀಸ್ ವಶ
-
ಬಿಗ್ ನ್ಯೂಸ್1 day ago
ಕಡಬ : ಸಿಡಿಲು ಬಡಿದು ಓರ್ವ ಮೃತ್ಯು- ಇಬ್ಬರು ಗಂಭೀರ
-
ದಕ್ಷಿಣ ಕನ್ನಡ23 hours ago
Puttur Love Affair: ಪುತ್ತೂರು : ಬಹಿರಂಗವಾದ ಪ್ರೇಮ ಸಂಬಂಧ – ಅವಮಾನ ತಾಳಲಾರದೇ ವಿವಾಹಿತ ಆತ್ಮಹತ್ಯೆ; ನೂತನ ಮನೆಯ ಗೃಹ ಪ್ರವೇಶದ ಕೆಲ ದಿನದಲ್ಲೆ ಮನೆ ಯಜಮಾನನ ದುರಂತ ಅಂತ್ಯ
-
ಬಿಗ್ ನ್ಯೂಸ್19 hours ago
Sand Mafia | ಕುಮಾರಧಾರ ನದಿಯಲ್ಲಿ ಅಕ್ರಮ ಮರಳು ದಂಧೆಗೆ ತುಂಬಿದ ಡ್ಯಾಮ್ ಖಾಲಿ..! : ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚೆನ್ನಪ್ಪ ಗೌಡರ ವಿರುದ್ಧ ಬರೋಬ್ಬರಿ 6 ಎಫ್ಐಆರ್ ದಾಖಲು – ಬೃಹತ್ ಮರಳು ದಂಧೆಯ ಅಡ್ಡೆಗೆ ಪೊಲೀಸ್ ದಾಳಿ ಸಂದರ್ಭ ತಪ್ಪಿಸಿ ಓಡುವಾಗ ಬಿದ್ದು ಎರಡು ಕೈ ಮುರಿತ..!
-
ದಕ್ಷಿಣ ಕನ್ನಡ22 hours ago
ಕುಂಬ್ರ : ಪೊಲೀಸ್ ಸಹಾಯವಾಣಿ ೧೧೨ ಎಡವಟ್ಟು – ಕೀ ಸಮೇತ ಯಾರೋ ನಿಲ್ಲಿಸಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆಸಿದ ವ್ಯಕ್ತಿಯ ಅವಾಂತರಕ್ಕೆ ಜನತೆ ಕಂಗಾಲು! ವಾಹನದಲ್ಲಿತ್ತು ಬಂದೂಕು!!!
-
ಅಪರಾಧ2 days ago
Kodagu-ಕೊಡಗು : SSLC ಪಾಸಾದ ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಕೊಂದು ತಲೆಯೊಂದಿಗೆ ಪರಾರಿಯಾದ ಕ್ರೂರಿಯ ಬಂಧನ – ಇನ್ನೂ ಸಿಗದ ರುಂಡ
-
ಸುಳ್ಯ2 days ago
Missing-ನಾಪತ್ತೆಯಾಗಿದ್ದ ಎಂಎಸ್ಸಿ ವಿದ್ಯಾರ್ಥಿನಿ ಸುಳ್ಯದಲ್ಲಿ ಪತ್ತೆ
-
ಸಿನೆಮಾ2 days ago
Manjummel Boys-20ಕೋಟಿಯಲ್ಲಿ ನಿರ್ಮಾಣವಾದ ಮಂಜುಮ್ಮೆಲ್ ಬಾಯ್ಸ್ 250ಕೋಟಿ ಕಲೆಕ್ಷನ್: ಈ ರಿಯಲ್ ಸ್ಟೋರಿಯ ನೈಜ ಬಾಯ್ಸ್ ಗಳ ಹುಡುಕಾಡಿದ ನೆಟ್ಟಿಗರು