ಮಂಗಳೂರು : ಚಿಲಿಂಬಿ ಗುಡ್ಡದಲ್ಲಿ ಭಿನ್ನ ಕೋಮಿನ ಯುವಕರು ಮತ್ತು ಯುವತಿಯರು – ಠಾಣೆಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು

WhatsApp Image 2021-10-03 at 18.01.15
Ad Widget

Ad Widget

Ad Widget

ಭಿನ್ನ ಕೋಮಿಗೆ ಸೇರಿದ ಯುವಕರು ಮತ್ತು ಯುವತಿಯರು ಜತೆಯಾಗಿ ತಿರುಗಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಬಜ್ಪೆ ಪೋಲಿಸ್ ಠಾಣೆಗೆ ಕರೆದೊಯ್ದ ಘಟನೆ ಭಾನುವಾರ ಸಂಜೆ ನಡೆದಿದೆ.

Ad Widget

  ಬಜ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ  ಗುರುಪುರ ಸಮೀಪದ  ಚಿಲಿಂಬಿ ಗುಡ್ಡೆ ಎಂಬಲ್ಲಿ ಇಬ್ಬರು ಹಿಂದೂ ಯುವತಿಯರು, ಇಬ್ಬರು ಯುವಕರು ಜತೆಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಅಕ್ಷೇಪಿಸಿದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಇಬ್ಬರು ಯುವಕರ ಪೈಕಿ ಒರ್ವ ಹಿಂದೂ ಧರ್ಮಿಯ ಹಾಗೂ ಇನ್ನೊರ್ವ ಮುಸ್ಲಿಂ ಧರ್ಮೀಯ ಎಂದು  ಮೂಲಗಳು ತಿಳಿಸಿವೆ.

Ad Widget

Ad Widget

Ad Widget

ಆ ನಾಲ್ವರು ಚಿಲಿಂಬಿ ಗುಡ್ಡೆಗೆ ಕಾರಿನಲ್ಲಿ ಆಗಮಿಸಿದ್ದು, ಆ ಕಾರಿಗೆ ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಬಂದಿದ್ದು ಇದು ಸ್ಥಳೀಯರಲ್ಲಿ ಅನುಮಾನ ಸೃಷ್ಟಿಸಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.  

Ad Widget

 ನಂಬರ್‌ ಪ್ಲೇಟ್‌ ಇಲ್ಲದ ಕಾರು ಬಳಸಿರುವ ಹಿನ್ನಲೆಯಲ್ಲಿ ಇದರ ಹಿಂದೆ ಬಹು ದೊಡ್ಡ ಸಂಚು ಅಡಗಿದೆ, ಇದರ ಅಮೂಲಗ್ರ ತನಿಖೆ ನಡೆಸಬೇಕು ಹಾಗೂ ಇದರ ಹಿಂದಿರುವ ನಿಗೂಢತೆಯನ್ನು ಭೇದಿಸಬೇಕು ಎಂದು ಬಜರಂಗದಳದ ನಾಯಕರು ಆಗ್ರಹಿಸಿದ್ದಾರೆ.

Ad Widget

Ad Widget

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: