ರಾಜಕೀಯ
ಪುತ್ತೂರಿನ ಇಂದಿನ ಬಿಜೆಪಿ ರೋಡ್ ಶೋ ಸಮಯ ಬದಲಾವಣೆ – ನಡುಮಧ್ಯಾಹ್ನ ನಡೆಸಲಿದ್ದಾರೆ ಅಣ್ಣಾಮಲೈ ರೋಡ್ ಶೋ
ಪುತ್ತೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪುತ್ತೂರಿನಲ್ಲಿ ರೋಡ್ ಶೋ ನಡೆಸುವ ಸಮಯ ಬದಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಅಣ್ಣಾಮಲೈ ಎ.23ರಂದು ಪುತ್ತೂರಿನಲ್ಲಿ ಬೆಳಿಗ್ಗೆ 10.30 ಕ್ಕೆ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು.
ಆದರೆ ರೋಡ್ ಶೋ ಸಮಯ ಬದಲಾಗಿದ್ದು ಮಧ್ಯಾಹ್ನ 12ಕ್ಕೆ ಪುತ್ತೂರಿನ ದರ್ಬೆಯಿಂದ ರೋಡ್ ಶೋ ಪಡೆಯಲಿದೆ ಎಂದು ಪಕ್ಷದ ಖಾತೆಗಳಲ್ಲಿ ಪೋಸ್ಟರ್ ವೈರಲ್ ಆಗಿದೆ.
ಸುಡು ಬಿಸಿಲಿನಲ್ಲಿ ಪುತ್ತೂರು ಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಅಂತರ ರಾಜ್ಯ
Actor Dev-ಪ್ರಕೃತಿ ಉಳಿಸುವ ಆಶ್ವಾಸನೆ ಮೂಲಕ ಮತಭೇಟೆಗೆ ಹೊರಟ ಅಭ್ಯರ್ಥಿ : ಗಳಿಸಿದ ಮತದಷ್ಟೇ ಗಿಡ ನೆಡುತ್ತೇನೆ ಎಂದ ಟಿಎಂಸಿ ಅಭ್ಯರ್ಥಿ ನಟ ದೇವ್
ಕೋಲ್ಕತಾ: ಬಂಗಾಲಿ ಸೂಪರ್ ಸ್ಟಾರ್ ದೇವ್(ದೀಪಕ್ ಅಧಿಕಾರಿ) ಗುರುವಾರ ಪಶ್ಚಿಮ ಬಂಗಾಲದ ಘತಲ್ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ ತಮಗೆ ಎಷ್ಟು ಮತಗಳು ಬರುತ್ತವೆಯೋ ಅಷ್ಟು ಗಿಡಗಳನ್ನು ನೆಡುವುದಾಗಿಯೂ ವಾಗ್ದಾನ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ನಿಮಿತ್ತ ಬೆಂಬಲಿಗರು ಆಯೋಜಿಸಿದ್ದ `ರಕ್ತದಾನ ಶಿಬಿರಕ್ಕೆ ತೆರಳಿ, ರಕ್ತದಾನ ಮಾಡಿದ ಬಳಿಕ ದೇವ್ ನಾಮಪತ್ರ ಸಲ್ಲಿಸಿದ್ದಾರೆ.
ಆ ಬಳಿಕ ಮಾತನಾಡಿ, ನಾನು ಎಷ್ಟು ಮತಗಳಿಸುವೆನೋ ಅಷ್ಟು ಗಿಡಗಳನ್ನು ನೆಡಲು ಯೋಜಿಸಿದ್ದೇನೆ. 9 ಲಕ್ಷ ಮತಗಳು ಬಂದರೆ 9 ಲಕ್ಷಗಿಡಗಳನ್ನು ನೆಡಲಿದ್ದೇನೆ ಎಂದಿದ್ದಾರೆ.
ಸ್ಥಳೀಯ
Shivarajkumar-ನಾನು ರಾಹುಲ್ ಗಾಂಧಿಯ ಫಿಟ್ನೆಸ್ ಅಭಿಮಾನಿ : ನಟ ಶಿವರಾಜ್ ಕುಮಾರ್
ಶಿವಮೊಗ್ಗ ಮೇ 2: ನಾನು ರಾಹುಲ್ ಗಾಂಧಿಯವರ ಅಭಿಮಾನಿ. ಅವರ ಫಿಟ್ನೆಸ್ ಗೆ ಮಾರು ಹೋಗಿದ್ದೇನೆ. ಅವರು ಫಿಟ್ ಆಗಿದ್ದಾರೆ. ಅವರು ಫಿಟ್ ಆಗಿದ್ದರೆ ದೇಶವನ್ನು ಕೂಡ ಫಿಟ್ ಆ್ಯಂಡ್ ಸ್ವೀಟ್ ಆಗಿ ಇಟ್ಟುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ನಟ ಶಿವರಾಜ್ಕುಮಾರ್ ಹೇಳಿದರು.
ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇರುವಂತಹ ವೇದಿಕೆಯಲ್ಲಿ ನಾನು ಹಾಗೂ ದುನಿಯಾ ವಿಜಿ ಪಾಲ್ಗೊಳ್ಳುತ್ತಿರುವುದು ಖುಷಿಯಾಗುತ್ತಿದೆ ಎಂದರು.
ರಾಜಕೀಯ
Prajwal Revanna-ಪ್ರಜ್ವಲ್ ರೇವಣ್ಣ ವಿರುದ್ದ ಲುಕ್ ಔಟ್ ನೋಟಿಸ್ ಜಾರಿ ಮಾಡಿದ SIT
ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣಗೆ ಅವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ವಿಮಾನ ನಿಲ್ದಾಣದ ಇಮಿಗ್ರೇಷನ್ ಲುಕೌಟ್ ನೋಟಿಸ್ ಸರ್ವ್ ಮಾಡಲಾಗಿದೆ.
ಎಲ್ಲಾ ವಿಮಾನ ನಿಲ್ದಾಣದ ಇಮಿಗ್ರೇಷನ್ಗೆ ಎಸ್ಐಟಿ ಅಧಿಕಾರಿಗಳು ಲುಕೌಟ್ ನೋಟಿಸ್ ನೀಡಿದೆ ಎನ್ನಲಾಗಿದ್ದು, ಈ ಮೂಲಕ ಲೊಕೇಟ್ ಆದ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಅಂತ ತಿಳಿದು ಬಂದಿದೆ.
ಪೆನ್ ಡ್ರೈವ್ ಪ್ರಕರಣ ದಾಖಲಾಗುವ 2 ದಿನ ಮುನ್ನಾ ಪ್ರಜ್ವಲ್ ದೇಶದಿಂದ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ. ಪ್ರಜ್ವಲ್ ವಿದೇಶದಲ್ಲಿರುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಪ್ರಜ್ವಲ್ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿ, ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರವಾನಿಸಿದ್ದಾರೆ. ಲುಕ್ಔಟ್ ನೋಟಿಸ್ ಬಳಿಕವೂ ಪ್ರಜ್ವಲ್ ಪತ್ತೆಯಾಗದಿದ್ದರೆ, ಆತನ ಪತ್ತೆಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ಆರೋಪಿಗಳಾಗಿದ್ದಾರೆ
-
ವೈರಲ್ ನ್ಯೂಸ್1 day ago
Kukke Subrahmanya | ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ : ಕುಲ ಗೋತ್ರದ ದಾಖಲೆ ಸಮೇತ ಟ್ವೀಟ್ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಚಿವ ರೆಡ್ಡಿ – ಸಚಿವರು ದಾಖಲೆ ತೋರಿಸುತ್ತಿದ್ದಂತೆ ಒಂದೊಂದೇ ಪೋಸ್ಟ್ ಡಿಲೀಟ್..!
-
ವೈರಲ್ ನ್ಯೂಸ್2 days ago
Covishield Side Effect | ಪುನೀತ್ ರಾಜ್ ಕುಮಾರ್ ಕೊರೋನಾ ಲಸಿಕೆ ಹಾಕಿಸಿಕೊಂಡಾಗ ಕೋವಿಶೀಲ್ಡ್ ಬಗ್ಗೆ ಎಚ್ಚರಿಸಿದ್ದ ಅಭಿಮಾನಿ..! ಇದೀಗ ವೈರಲ್
-
ಕೊಡಗು2 days ago
Longest Glass Bridge | ಪ್ರವಾಸಿಗರ ಸ್ವರ್ಗ ಕೊಡಗಿನಲ್ಲಿ ತಲೆಯೆತ್ತಿದೆ ಮತ್ತೊಂದು ಗ್ಲಾಸ್ ಬ್ರಿಡ್ಜ್ – ದಕ್ಷಿಣ ಭಾರತದ ಅತಿ ದೊಡ್ಡ ಗಾಜು ಸೇತುವೆಯಲ್ಲಿ ನಡೆಯುವುದೇ ಮೈರೋಮಾಂಚನ..! ಬರ್ತ್ ಡೇ, ಪೋಟೋ ಶೂಟ್ ಗೆ ಇಲ್ಲಿದೆ ಸ್ಪೆಷಲ್ ಗ್ಲಾಸ್ ಗ್ಯಾಲರಿ
-
ಅಂತರ ರಾಜ್ಯ2 days ago
Hindu marriage-ಶಾಸ್ತ್ರೋಕ್ತ ಆಚರಣೆಯಿಲ್ಲದೇ ನಡೆದ ಹಿಂದೂ ಮದುವೆಗಳು ಅಸಿಂಧು – ಸುಪ್ರೀಂ ಕೋರ್ಟ್
-
ಅಂತರ ರಾಜ್ಯ2 days ago
Covishield-ಕೋವಿಶೀಲ್ಡ್ ಲಸಿಕೆಯಿಂದ ಮಕ್ಕಳ ಸಾವು ..! ನ್ಯಾಯಾಲಯದ ಮೆಟ್ಟಿಲೇರಲು ಸಿದ್ದತೆ ನಡೆಸಿರುವ 2 ಭಾರತೀಯ ಕುಟುಂಬಗಳು
-
ಬಿಗ್ ನ್ಯೂಸ್2 days ago
ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಕಾರು ಡಿಕ್ಕಿ – ಟ್ರಾಫಿಕ್ ಜಾಮ್
-
ಅಂತರ ರಾಜ್ಯ2 days ago
Health Ministry-ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ ಮೋದಿ ಅವರ ಫೋಟೋ ತೆಗೆದು ಹಾಕಿದ ಆರೋಗ್ಯ ಇಲಾಖೆ – ಅಸ್ಟ್ರಾಜೆನೆಕಾ ಸಂಸ್ಥೆಯ ವರದಿಗೆ ತಳುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
-
ಬಿಗ್ ನ್ಯೂಸ್2 days ago
Prajwal Revanna Scandal | ರಾಜತಾಂತ್ರಿಕ ಪಾಸ್ಪೋರ್ಟ್ ನಲ್ಲೇ ವಿದೇಶಕ್ಕೆ ತೆರಳಿದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ..! ಒಪ್ಪಿಕೊಂಡ ಕೇಂದ್ರ ಸರ್ಕಾರ