ಮನರಂಜನೆ
Google-ಗೂಗಲ್ ಗ್ರಾಹಕರ ಫೋನ್ ಸಂಭಾಷಣೆ ಆನಂದದಾಯಕವಾಗಿಸಲು ಪರಿಚಯಿಸುತ್ತಿದೆ “ಆಡಿಯೋ ಎಮೋಜಿ”
ಎಷ್ಟೇ ದೂರದಲ್ಲಿದ್ದರೂ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧನವಾಗಿ ಫೋನ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಫೋನ್ ಸಂಭಾಷಣೆಯನ್ನು ಮತ್ತಷ್ಟು ಆನಂದದಾಯಕವಾಗಿಸಲು ಗೂಗಲ್ ತನ್ನ ಫೋನ್ ಅಪ್ಲಿಕೇಶನ್ನಲ್ಲಿ “ಆಡಿಯೋ ಎಮೋಜಿ” ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈ ಕುರಿತಂತೆ 9to5Google ವರದಿ ಮಾಡಿದ್ದು, ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರು ಫೋನ್ ಕರೆ ಸಮಯದಲ್ಲಿ ಆರು ರೀತಿಯ ಧ್ವನಿಗಳನ್ನು ಪ್ಲೇ ಮಾಡಬಹುದು. ಈ ಶಬ್ದಗಳು ದುಃಖ, ಚಪ್ಪಾಳೆ, ಸಂಭ್ರಮಾಚರಣೆ, ನಗು, ಡ್ರಮ್ ರೋಲ್ ಮತ್ತು ಪೂಪ್ ರೀತಿ ಇರುತ್ತದೆ ಎಂದು ತಿಳಿಸಿದೆ.
ಗಮನಾರ್ಹವಾಗಿ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ “ಆಡಿಯೋ ಎಮೋಜಿ” ವೈಶಿಷ್ಟ್ಯವನ್ನು ಮೊದಮೊದಲು “ಸೌಂಡ್ ರಿಯಾಕ್ಷನ್” ಎಂದು ಕರೆಯಲಾಗುತ್ತಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ, ಇದೀಗ ಗೂಗಲ್ ಹೊಸ ವೈಶಿಷ್ಟ್ಯವು ಗೂಗಲ್ ಫೋನ್ ಅಪ್ಲಿಕೇಶನ್ನ ಪರೀಕ್ಷಾ ಆವೃತ್ತಿಯಲ್ಲಿ ಚಾಲನೆಯಲ್ಲಿದೆ. ಶೀಘ್ರದಲ್ಲೇ, ಬಳಕೆದಾರರಿಗೆ ಈ ವೈಶಿಷ್ಟ್ಯ ಲಾಭವಾಗುವ ಸಾಧ್ಯತೆ ಇದೆ. ಇದರಲ್ಲಿ ಬಳಕೆದಾರರು ಯಾವುದೇ ಧ್ವನಿ ಎಮೋಜಿಯನ್ನು ಪ್ಲೇ ಮಾಡಿದಾಗ, ಪರದೆಯ ಮೇಲೆ ಸಣ್ಣ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಈ ಅನಿಮೇಷನ್ ಅನ್ನು ಕರೆ ಮಾಡುವವರು ಮತ್ತು ಕೇಳುವವರು ಇಬ್ಬರೂ ನೋಡಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದಾಗ್ಯೂ, ಧ್ವನಿ ಕರೆಯನ್ನು ಕರೆ ಮಾಡುವವರು ಮತ್ತು ಕರೆ ಸ್ವೀಕರಿಸುವವರಿಬ್ಬರೂ ಆನಂದಿಸಬಹುದು ಎಂದು ತಿಳಿದುಬಂದಿದೆ.
ಆಡಿಯೊ ಎಮೋಜಿಯನ್ನು ಹೇಗೆ ಬಳಸುವುದು?
ಈ ವೈಶಿಷ್ಟ್ಯವು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು ಪ್ರಾಯೋಗಿಕ ಬಳಕೆದಾರರಿಗಷ್ಟೇ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಮೊದಲಿಗೆ ಫೋನ್ ಸೆಟ್ಟಿಂಗ್ಗಳನ್ನು ತೆರೆಯಿರಿ.
- ಸ್ಕ್ರಾಲ್ ಡೌನ್ ಮಾಡಿ ಇದರಲ್ಲಿಸಾಮಾನ್ಯ ವಿಭಾಗಕ್ಕೆ ಹೋಗಿ.
- ಇದರಲ್ಲಿ ಕಾಣುವ “ಆಡಿಯೋ ಎಮೋಜಿಗಳು” ಮೇಲೆ ಟ್ಯಾಪ್ ಮಾಡಿ.
- “ಆಡಿಯೋ ಎಮೋಜಿಗಳ” ವೈಶಿಷ್ಟ್ಯವನ್ನು ಬಳಸಲು ಸ್ವಿಚ್ ಆನ್ ಆಯ್ಕೆಯನ್ನು ಆರಿಸಿ.
ಒಮ್ಮೆ “ಆಡಿಯೋ ಎಮೋಜಿಗಳ” ವೈಶಿಷ್ಟ್ಯವನ್ನು ಆನ್ ಮಾಡಿದ ಬಳಿಕ ನೀವು ಕರೆ ಮಾಡುವಾಗ ಪರದೆಯ ಮೇಲೆ ತೇಲುವ ಬಟನ್ ಕಾಣಿಸಿಕೊಳ್ಳುತ್ತದೆ. ಅದು ನಿಮಗೆ ಧ್ವನಿ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ.
ಇದರಲ್ಲಿ ‘ಆಡಿಯೋ ಎಮೋಜಿಯನ್ನು ಪ್ರಯತ್ನಿಸಿ’ ಎಂಬ ಆಯ್ಕೆಯನ್ನು ಆರಿಸಿ ಅದರಲ್ಲಿ ಗೋಚರಿಸುವ ಯಾವುದೇ ಎಮೋಜಿಗಳನ್ನು ಆಯ್ಕೆ ಮಾಡಿ. ಈ ವೈಶಿಷ್ಟ್ಯವು ಸ್ಪೀಕರ್ ಮೋಡ್ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಸಿನೆಮಾ
Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ
ತುಳುನಾಡ ಕುವರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಮಿತಾ ಶೆಟ್ಟಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಎಂಡೊಮೆಟ್ರಿಯೊಸಿಸ್ ನಟಿ ಶಮಿತಾ ಶೆಟ್ಟಿ ಅವರನ್ನು ಕಾಡುತ್ತಿರುವ ಖಾಯಿಲೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ಎಲ್ಲಾ ಮಹಿಳೆಯರೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ವಿಡಿಯೋ ಮೂಲಕ ತಮ್ಮ ಆರೋಗ್ಯದ ಕುರಿತಾದ ವಿಷಯ ಹಂಚಿಕೊಂಡಿರುವ ಶಮಿತಾ ಶೆಟ್ಟಿ, ಆಸ್ಪತ್ರೆ ಬೆಡ್ನಿಂದಲೇ ವಿಡಿಯೋ ಮಾಡಿ ವಿವರಣೆ ನೀಡಿದ್ದಾರೆ. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ. ನನ್ನನ್ನು ಕಾಡುತ್ತಿದ್ದ ನೋವಿನ ಮೂಲ ತಿಳಿದುಕೊಂಡು ಚಿಕಿತ್ಸೆ ನೀಡಿದ ಸ್ತ್ರೀವೈದ್ಯೆ ಡಾ. ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ಸದ್ಯ ನಾನು ಈ ರೋಗದಿಂದ ಗುಣ ಮುಖಳಾಗುತ್ತಿದೇನೆ. ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ಎಂಡೊಮೆಟ್ರಿಯೊಸಿಸ್ ಕಾಯಿಲೆಯ ಲಕ್ಷಣ :
ಮಹಿಳೆಯರಲ್ಲಿ ಕಂಡು ಬರುವ ಎಂಡೊಮೆಟ್ರಿಯೊಸಿಸ್ ಕಾಯಿಲೆ ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಮೊದಮೊದಲು ಸೊಂಟ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕೂಡಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.
ಸಿನೆಮಾ
Manjummel Boys-20ಕೋಟಿಯಲ್ಲಿ ನಿರ್ಮಾಣವಾದ ಮಂಜುಮ್ಮೆಲ್ ಬಾಯ್ಸ್ 250ಕೋಟಿ ಕಲೆಕ್ಷನ್: ಈ ರಿಯಲ್ ಸ್ಟೋರಿಯ ನೈಜ ಬಾಯ್ಸ್ ಗಳ ಹುಡುಕಾಡಿದ ನೆಟ್ಟಿಗರು
ತಿರುವನಂತಪುರಂ: ಒಳ್ಳೆಯ ಕತೆಗಳಿಂದಾಗಿ ತುಂಬಾ ಚಿಕ್ಕದಾದರೂ ಮಲಯಾಳಂ ಸಿನಿಮಾ ಇಂಡಸ್ಟ್ರಿ ಜನರ ಮನಸ್ಸನ್ನು ಗೆಲ್ಲುತ್ತಿದೆ. ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿರುವ ಮಲಯಾಳಂ ಸಿನಿಮಾಗಳು ಸಣ್ಣ ಬಜೆಟ್ನಿಂದ ಮಾಡಿದ ಸಿನಿಮಾಗಳಾಗಿವೆ. ಸ್ಟಾರ್ ನಟರು ನಟಿಸಿದ ಬ್ರಹ್ಮಯುಗಂ ಹಾಗೂ ಆಡು ಜೀವಿತಂ ಚಿತ್ರಗಳಲ್ಲದೆ, ಮಂಜುಮ್ಮೇಲ್ ಬಾಯ್ಸ್ ಅಂತಹ ಸಣ್ಣ ಸಿನಿಮಾ ಕೂಡ ಇತ್ತೀಚೆಗೆ ಸೂಪರ್ ಡೂಪರ್ ಹಿಟ್ ಆಯಿತು. ನಾಯಕಿ, ಹಾಡುಗಳಿಲ್ಲದಿದ್ದರೂ ಸಿನಿಮಾ ಹಿಟ್ ಆಗಬಹುದು ಎಂಬುದನ್ನು ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಸಾಬೀತು ಮಾಡಿದೆ. ಕೇವಲ 20 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮಾಲಿವುಡ್ ಸಿನಿಪ್ರಿಯರನ್ನಷ್ಟೇ ಅಲ್ಲ ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಇಂಡಸ್ಟ್ರಿಯನ್ನೂ ತನ್ನತ್ತ ಸೆಳೆಯಿತು.
ಮೇ5 ರಿಂದ OTTನಲ್ಲೂ ಭಾರಿ ಸದ್ದು ಮಾಡುತ್ತಿರುವ ಮಂಜುಮ್ಮೇಲ್ ಬಾಯ್ಸ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಕೊಡೈಕೆನಾಲ್ಗೆ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಹೋಗುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಅವರಲ್ಲಿ ಒಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಸಿನಿಮಾದ ಕತೆ.
2006ರಲ್ಲಿ ನಡೆದ ಈ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಸೌಬಿನ್ ಶಾಹೀರ್, ಶ್ರೀನಾಥ್ ಬಸಿ, ಬಾಲು ವರ್ಗೀಸ್, ಗಣಪತಿ ಎಸ್, ಪೊದುವಲ್ ಲಾಲ್, ದೀಪಕ್ ಪರಂಬೋಲ್ ಮತ್ತು ಇತರರು ಇದರಲ್ಲಿ ನಟಿಸಿದ್ದಾರೆ. ಪರವ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಾಯಕ ಸೌಬಿನ್ ಶಾಹೀರ್, ಬಾಬು ಶಾಹೀರೋ ಮತ್ತು ಶಾನ್ ಆಂಟೋನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಳವಾದ ಕಣಿವೆಯಲ್ಲಿ ಬಿದ್ದ ಸುಭಾಷ್ ಪಾತ್ರವನ್ನು ಶ್ರೀನಾಥ್ ಬಾಸಿಲ್ ಮಾಡಿದ್ದಾರೆ. ಆತನನ್ನು ಹೊರಗೆ ಕರೆತರುವ ನಾಯಕ ಕುಟ್ಟನ್ ಪಾತ್ರವನ್ನು ಸೌಬಿನ್ ಶಾಹೀರ್ ಮಾಡಿದ್ದಾರೆ. ಇತರೆ ಸ್ನೇಹಿತರು ಅವನಿಗೆ ಸಹಾಯ ಮಾಡುತ್ತಾರೆ.
ಮಂಜುಮ್ಮೇಲ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಅನೇಕ ನೆಟ್ಟಿಗರು ನಿಜವಾದ ಸುಭಾಷ್ ಯಾರು ಮತ್ತು ಮಂಜುಮ್ಮೇಲ್ ಬಾಯ್ಸ್ ಯಾರು ಎಂದು ಹುಡುಕುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕಣಿವೆಯಲ್ಲಿ ಬಿದ್ದು ಬದುಕುಳಿದ ಏಕೈಕ ವ್ಯಕ್ತಿ ಸುಭಾಷ್. ಇಡೀ ಸಿನಿಮಾ ಅವನ ಸುತ್ತ ಸುತ್ತುತ್ತದೆ. ಸುಭಾಷ್ ಪಾತ್ರದಲ್ಲಿ ಶ್ರೀನಾಥ್ ಬಸಿ ನಟಿಸಿದ್ದಾರೆ. ತಮ್ಮ ಕತೆಯನ್ನಾಧರಿಸಿ ಸಿನಿಮಾ ಮಾಡಿದ ನಂತರ ಸುಭಾಷ್ ಮತ್ತು ಸ್ನೇಹಿತರಿಗೆ ಮನ್ನಣೆ ಸಿಕ್ಕಿತು. ಇದರೊಂದಿಗೆ ರಿಯಲ್ ಮಂಜುಮ್ಮೇಲ್ ಬಾಯ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸತತ ಸಂದರ್ಶನಗಳಿಂದ ತುಂಬಾ ಖ್ಯಾತಿ ಗಳಿಸಿದ್ದಾರೆ.
ಮೇಲಿನ ಫೋಟೋದಲ್ಲಿರುವ ವ್ಯಕ್ತಿಯೇ ನಿಜವಾದ ಸುಭಾಷ್. ಸುಭಾಷ್ ಪೂರ್ಣ ಹೆಸರು ಸುಭಾಷ್ ಚಂದ್ರನ್. ಈಗ ಸ್ನೇಹಿತರೆಲ್ಲ ವಿವಿಧೆಡೆ ನೆಲೆಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ಮೇಲೆ ಮತ್ತೊಮ್ಮೆ ಗೆಳೆಯರೆಲ್ಲ ಸೇರಿ, ಕೊಡೈಕೆನಾಲ್ನ ಗುನಾ ಗುಹೆಗಳಿಗೆ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದಾರೆ. ಈಗ ಆ ಫೋಟೋಗಳು ಮತ್ತು ವಿಡಿಯೋಗಳು ಈಗ ವೈರಲ್ ಆಗುತ್ತಿವೆ.
ಸಿನೆಮಾ
Actress Jyoti Rai’s-ನಟಿ ಜ್ಯೋತಿ ರೈಯವರದ್ದು ಎನ್ನಲಾದ ಖಾಸಗಿ ಚಿತ್ರ ಹಾಗೂ ವಿಡಿಯೋಗಳು ವೈರಲ್; ಕಠಿಣ ಕ್ರಮ ಕೈಗೊಳ್ಳುವಂತೆ ನಟಿ ಆಗ್ರಹ
ಸಾಮಾಜಿಕ ಜಾಲತಾಣದಲ್ಲಿ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದೀಗ ನಟಿ ಜ್ಯೋತಿ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕನ್ನಡದ ನಟಿ ಜ್ಯೋತಿ ರೈ ತೆಲುಗು, ತಮಿಳು ಚಿತ್ರರಂಗ ಹಾಗೂ ಟಿವಿ ಲೋಕದಲ್ಲಿ ಜನಪ್ರಿಯರು. ಇನ್ಸ್ಟಾಗ್ರಾಂನಲ್ಲಿ ಸಹ ತಮ್ಮ ಮಾದಕ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರದ್ದೆನ್ನಲಾದ ಕೆಲವು ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿರುವ ಜ್ಯೋತಿ ರೈ, ತಮ್ಮ ನಕಲಿ ವಿಡಿಯೋ ಹಾಗೂ ಚಿತ್ರಗಳನ್ನು ಹರಿಬಿಡುವ ಮೂಲಕ ತಮ್ಮ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿರುವಾಗಲೇ ಕೆಲವು ಕಿಡಿಗೇಡಿಗಳು ನಟಿ ಜ್ಯೋತಿ ರೈರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋ, ಚಿತ್ರಗಳನ್ನು ವೈರಲ್ ಮಾಡುತ್ತಿದ್ದಾರೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇದೀಗ ನಟಿ ಜ್ಯೋತಿ ರೈ ಈ ಬಗ್ಗೆ ಮೌನ ಮುರಿದಿದ್ದು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಟ್ವಿಟ್ಟರ್ನಲ್ಲಿ ಎಡಿಟ್ ಬೈ ಅಭಿ ಹೆಸರಿನ ಖಾತೆಯಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಚಿತ್ರಗಳು ಹಾಗೂ ವಿಡಿಯೋ ಅಪ್ಲೋಡ್ ಆಗಿತ್ತು. ತಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿದರೆ ಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿಯೂ ಆ ಖಾತೆಯಿಂದ ಸಂದೇಶ ಹಂಚಿಕೊಳ್ಳಲಾಗಿತ್ತು. ಆದರೆ ಆ ಬಳಿಕ ವಿಡಿಯೋ ಹಾಗೂ ಚಿತ್ರಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೆ ಹಲವರು ವಿಡಿಯೋ, ಚಿತ್ರಗಳನ್ನು ಡೌನ್ಲೋಡ್ ಮಾಡಿ ವೈರಲ್ ಮಾಡಿಬಿಟ್ಟಿದ್ದಾರೆ.
ನಟಿ ಜ್ಯೋತಿ ರೈ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಆಗಾಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಜೊತೆಗೆ ನಿರ್ದೇಶಕ ಸುಕುಪುವರಾಜ್ ಅವರೊಟ್ಟಿಗೆ ಆಪ್ತವಾಗಿರುವ ಚಿತ್ರಗಳನ್ನು ಸಹ ಅಪ್ಲೋಡ್ ಮಾಡುತ್ತಿರುತ್ತಾರೆ. ಟ್ವಿಟ್ಟರ್ನ ಎಡಿಟ್ ಬೈ ಅಭಿ ಹೆಸರಿನ ಖಾತೆಯ ಬಳಕೆದಾರ, ತಾನು ಜ್ಯೋತಿ ಹಾಗೂ ಸುಕುಪುವರಾಜ್ ಖಾಸಗಿ ವಿಡಿಯೋ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ಜ್ಯೋತಿ ರೈ ಅವರದ್ದೆನ್ನಲಾದ ಖಾಸಗಿ ವಿಡಿಯೋ, ಚಿತ್ರಗಳ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿದ್ದಂತೆ ಆ ಚಿತ್ರಗಳು ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.
ಘಟನೆ ಬಗ್ಗೆ ದೂರು ನೀಡಿರುವ ನಟಿ ಜ್ಯೋತಿ ರೈ, ‘ಸತತವಾಗಿ ಸಂದೇಶಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಯವಿಟ್ಟು ಇಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನನ್ನ ಹಾಗೂ ನನ್ನ ಕುಟುಂಬದ ಘನತೆಗೆ ಧಕ್ಕೆಯಾಗುತ್ತಿದೆ. ಒಂದೊಮ್ಮೆ ನೀವು ಶೀಘ್ರವೇ ಕ್ರಮ ಜರುಗಿಸದಿದ್ದರೆ ಇದು ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಸರಿಪಡಿಸಲಾಗದಷ್ಟು ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ’ ಎಂದಿದ್ದಾರೆ.
-
ಚಿನ್ನ-ಬೆಳ್ಳಿ ದರ2 days ago
Gold Rate Today – ಗೋಲ್ಡ್ಪ್ರಿಯರಿಗೆ ಸಿಹಿ ಸುದ್ದಿ; ಸತತವಾಗಿ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ರೇಟ್
-
ಬಿಗ್ ನ್ಯೂಸ್2 days ago
Puttur | ಪುತ್ತೂರು : ಚಿಕಿತ್ಸೆಗೆ ಬಂದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಮೃತ್ಯು : ಸೇರಿದ ಜನ – ದೂರು ದಾಖಲು
-
ಸುಳ್ಯ2 days ago
ಸುಬ್ರಹ್ಮಣ್ಯ : ಗಾಳಿ – ಮಳೆಯಿಂದ ಕರುವನ್ನು ರಕ್ಷಿಸಲು ತೋಟಕ್ಕೆ ಹೋದ ಮಹಿಳೆಯ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಮೃತ್ಯು
-
ಶಿಕ್ಷಣ2 days ago
8 new courses-ಡಿಪ್ಲೋಮಾದ 8 ಹೊಸ ಕೋರ್ಸ್ಗಳಿಗೆ ಎಂಜಿನಿಯರಿಂಗ್ ಗೆ ಲ್ಯಾಟರಲ್ ಎಂಟ್ರಿಗೆ ಅವಕಾಶ ನೀಡಲು ತೀರ್ಮಾನಿಸಿದ ಉನ್ನತ ಶಿಕ್ಷಣ ಇಲಾಖೆ
-
ಪುತ್ತೂರು2 days ago
Ashok Kumar Rai | ಶಾಸಕರಾಗಿ ವರ್ಷ ಪೂರೈಸಿದ ಅಶೋಕ್ ಕುಮಾರ್ ರೈ – ಹಿರಿಯ ಬಿಜೆಪಿ ಮುಖಂಡರ ಮನೆಗೆ ಸಹಿತ ಉದ್ಯಮಿಗಳ ಭೇಟಿ ಮಾಡಿದ ಶಾಸಕ
-
ಬಿಗ್ ನ್ಯೂಸ್21 hours ago
America Student in Tulunadu | ತುಳುನಾಡಿನ ಮನೆಮಗನಾಗಿರುವ ಅಮೇರಿಕಾದ ಸ್ಯಾಮ್ : ತುಳು ಸಂಸ್ಕೃತಿ ಆಚರಣೆಗೆ ಫಿಧಾ – ಈತನ ತುಳು ಭಾಷೆ ಹೇಗಿದೆ ನೋಡಿ
-
ಬಿಗ್ ನ್ಯೂಸ್21 hours ago
Ullala ISIS Terrorist Activity | ‘ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ’ – ಎನ್ಐಎ ಬಂಧನದಲ್ಲಿರುವ ಉಳ್ಳಾಲದ ಮಾಜಿ ಶಾಸಕ ದಿ.ಇದ್ದಿನಬ್ಬ ಮೊಮ್ಮಗನ ಐಸಿಸ್ ನಂಟು ಕೇಸ್ ನಲ್ಲಿ ಮಹತ್ವದ ಬೆಳವಣಿಗೆ – ದೆಹಲಿ ಹೈಕೋರ್ಟ್ ಜಾಮೀನು – ಆರೋಪ ಸಾಬೀತು ಮಾಡುವಲ್ಲಿ ಎನ್ಐಎ ಗೆ ತೀವ್ರ ಹಿನ್ನಡೆ – ಹೈಕೋರ್ಟ್ ಹೇಳಿದ್ದೇನೂ..? : ಇದಿನಬ್ಬ ಸೊಸೆ ದೀಪ್ತಿ ಮಾರ್ಲಗೆ ಮುಂದುವರಿದ ಶಿಕ್ಷೆ ..!
-
ಸಿನೆಮಾ2 days ago
Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ