ಬಿಗ್ ನ್ಯೂಸ್
Big Breaking : ಉಪ್ಪಿನಂಗಡಿ: ಆಟೋ ರಿಕ್ಷಾ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಆಟೋ ರಿಕ್ಷಾದಲ್ಲಿದ್ದ ಮಗು ದುರ್ಮರಣ, ಮೂವರಿಗೆ ಗಾಯ
ಉಪ್ಪಿನಂಗಡಿ, ನ. 29. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯ ಮಠ ಎಂಬಲ್ಲಿ ಅಟೋರಿಕ್ಷಾ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿ ಅಟೋದಲ್ಲಿದ್ದ ಮಗು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಗ್ ನ್ಯೂಸ್
ಪುತ್ತೂರು : ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆ
ಪುತ್ತೂರು : 2024ರ ಸುಡು ಬಿಸಿಲಿನ ತಾಪಮಾನದ ನಡುವೆ ಇಂದು ಭಾರಿ ಮಳೆಯಾಗಿದೆ.
ಪುತ್ತೂರು ,ಕಡಬ ಸಹಿತ ಆಲಿಕಲ್ಲು ಸಿಡಿಲು ಸಹಿತ ಭಾರಿ ಗಾಳಿ ಮಳೆಯಾಗಿದೆ.
ಕಳೆದ ವರ್ಷ ಮೇ.10ರಂದು ಇದೇ ರೀತಿ ಗಾಳಿ ಮಳೆಯಾಗಿತ್ತು. ಈ ವರ್ಷ 2 ದಿನ ಕಳೆದು ಮಳೆಯ ಭರ್ಜರಿ ಎಂಟ್ರಿಯಾಗಿದೆ.
ಮೇ.11ರಂದು ಕಡಬದ ಇಚ್ಲಂಪಾಡಿಯಲ್ಲಿ ಮರಳು ಗಣಿಗಾರಿಕೆಯ ಕಾರ್ಮಿಕರೋರ್ವರು ಸಿಡಿಲಿಗೆ ಬಲಿಯಾಗಿದ್ದಾರೆ.
ಬಿಗ್ ನ್ಯೂಸ್
Prajwal Revanna | ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಹಿಂದೆ ಮಾಜಿ ಶಾಸಕ ಪ್ರೀತಂಗೌಡ ಕೈವಾಡ..? ಪ್ರೀತಂಗೌಡ ಆಪ್ತ ಹಾಗೂ ಕಚೇರಿ ಸಿಬ್ಬಂದಿ ಎಸ್ಐಟಿ ಬಲೆಗೆ
ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಕೇಳಿಬರುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿಶೇಷ ತನಿಖಾ ಅಧಿಕಾರಿಗಳು (SIT) ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಮತ್ತು ಅವರ ಕಚೇರಿ ಸಿಬ್ಬಂದಿ ಚೇತನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ತೀವ್ರಗೊಳಿಸಿದ್ದಾರೆ.ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (SIT) ರಚಿಸಿತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ.ಸದ್ಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಹಾಸನದಲ್ಲಿ ಬೀಡು ಬಿಟ್ಟಿದೆ. ಈ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ.
ಇದೀಗ ಅಧಿಕಾರಿಗಳು ಮಾಜಿ ಶಾಸಕ ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಆಪ್ತ ಲಿಖಿತ್ನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಗ್ ನ್ಯೂಸ್
ಕನ್ನಡ ಹಾಗೂ ತೆಲುಗಿನ ಖ್ಯಾತ ಧಾರಾವಾಹಿ ನಟಿ ಪವಿತ್ರ ಜಯರಾಂ ಭೀಕರ ಅಪಘಾತಕ್ಕೆ ಬಲಿ
ಹೈದರಾಬಾದ್ ಮೇ 12: ಭೀಕರ ರಸ್ತೆ ಅಪಘಾತಕ್ಕೆ ಕನ್ನಡದ ಕಿರುತೆರೆ ನಟಿಯೊಬ್ಬರು ಸಾವನಪ್ಪಿದ ಘಟನೆ ಇಂದು ಮುಂಜಾನೆ ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ನಡೆದಿದೆ.
ಮೃತರನ್ನು ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಎಂದು ಗುರುತಿಸಲಾಗಿದೆ.ಮೆಹಬೂಬ್ ನಗರದಲ್ಲಿ ಪವಿತ್ರಾ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ದುರಂತದಲ್ಲಿ ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪವಿತ್ರ ಜಯರಾಂ ಅವರು ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ಕನ್ನಡದ ರೋಬೋ ಫ್ಯಾಮಿಲಿಯಲ್ಲಿ ಕಿರುತೆರೆಗೆ ಎಂಟ್ರಿಕೊಟ್ಟಿದ್ದರು.ಮೂಲತಃ ಕನ್ನಡಿಗರಾದ ಪವಿತ್ರ ಜಯರಾಂ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು.
ತೆಲುಗಿನ ತ್ರಿನಯನಿ ಮೂಲಕ ತೆಲುಗರ ಮನೆ ಮಾತಾಗಿದ್ದ ಪವಿತ್ರ ಇಂದು ಮುಂಜಾನೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
-
ಅಪರಾಧ2 days ago
PUTTUR-ಪುತ್ತೂರು : ಆತ್ಮಹತ್ಯೆಯ ಕಟ್ಟು ಕಥೆ ಕಟ್ಟಿದ್ದ ಪ್ರಕರಣದ ನೈಜ್ಯತೆ ಬೆಳಕಿಗೆ – ಮಗನ ಕಾಟ ತಾಳಲಾರದೇ, ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದು ಹೆತ್ತ ತಾಯಿಯಿಂದಲೇ ಬರ್ಬರ ಕೊಲೆ – ತಾಯಿ ಜತೆ ನೆರೆಮನೆಯ ಇಸುಬು ಪೊಲೀಸ್ ವಶ
-
ಬಿಗ್ ನ್ಯೂಸ್1 day ago
ಕಡಬ : ಸಿಡಿಲು ಬಡಿದು ಓರ್ವ ಮೃತ್ಯು- ಇಬ್ಬರು ಗಂಭೀರ
-
ದಕ್ಷಿಣ ಕನ್ನಡ21 hours ago
Puttur Love Affair: ಪುತ್ತೂರು : ಬಹಿರಂಗವಾದ ಪ್ರೇಮ ಸಂಬಂಧ – ಅವಮಾನ ತಾಳಲಾರದೇ ವಿವಾಹಿತ ಆತ್ಮಹತ್ಯೆ; ನೂತನ ಮನೆಯ ಗೃಹ ಪ್ರವೇಶದ ಕೆಲ ದಿನದಲ್ಲೆ ಮನೆ ಯಜಮಾನನ ದುರಂತ ಅಂತ್ಯ
-
ದಕ್ಷಿಣ ಕನ್ನಡ20 hours ago
ಕುಂಬ್ರ : ಪೊಲೀಸ್ ಸಹಾಯವಾಣಿ ೧೧೨ ಎಡವಟ್ಟು – ಕೀ ಸಮೇತ ಯಾರೋ ನಿಲ್ಲಿಸಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆಸಿದ ವ್ಯಕ್ತಿಯ ಅವಾಂತರಕ್ಕೆ ಜನತೆ ಕಂಗಾಲು! ವಾಹನದಲ್ಲಿತ್ತು ಬಂದೂಕು!!!
-
ಅಪರಾಧ2 days ago
Kodagu-ಕೊಡಗು : SSLC ಪಾಸಾದ ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಕೊಂದು ತಲೆಯೊಂದಿಗೆ ಪರಾರಿಯಾದ ಕ್ರೂರಿಯ ಬಂಧನ – ಇನ್ನೂ ಸಿಗದ ರುಂಡ
-
ಬಿಗ್ ನ್ಯೂಸ್17 hours ago
Sand Mafia | ಕುಮಾರಧಾರ ನದಿಯಲ್ಲಿ ಅಕ್ರಮ ಮರಳು ದಂಧೆಗೆ ತುಂಬಿದ ಡ್ಯಾಮ್ ಖಾಲಿ..! : ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚೆನ್ನಪ್ಪ ಗೌಡರ ವಿರುದ್ಧ ಬರೋಬ್ಬರಿ 6 ಎಫ್ಐಆರ್ ದಾಖಲು – ಬೃಹತ್ ಮರಳು ದಂಧೆಯ ಅಡ್ಡೆಗೆ ಪೊಲೀಸ್ ದಾಳಿ ಸಂದರ್ಭ ತಪ್ಪಿಸಿ ಓಡುವಾಗ ಬಿದ್ದು ಎರಡು ಕೈ ಮುರಿತ..!
-
ಸುಳ್ಯ2 days ago
Missing-ನಾಪತ್ತೆಯಾಗಿದ್ದ ಎಂಎಸ್ಸಿ ವಿದ್ಯಾರ್ಥಿನಿ ಸುಳ್ಯದಲ್ಲಿ ಪತ್ತೆ
-
ಸಿನೆಮಾ2 days ago
Manjummel Boys-20ಕೋಟಿಯಲ್ಲಿ ನಿರ್ಮಾಣವಾದ ಮಂಜುಮ್ಮೆಲ್ ಬಾಯ್ಸ್ 250ಕೋಟಿ ಕಲೆಕ್ಷನ್: ಈ ರಿಯಲ್ ಸ್ಟೋರಿಯ ನೈಜ ಬಾಯ್ಸ್ ಗಳ ಹುಡುಕಾಡಿದ ನೆಟ್ಟಿಗರು