Connect with us

ಸ್ಥಳೀಯ

Twin students-PCMCಯ ಈ ಅವಳಿ ಜವಳಿ ವಿದ್ಯಾರ್ಥಿಗಳು ಪಡೆದ ಅಂಕ ಸಕತ್ ಇಂಟ್ರೆಸ್ಟಿಂಗ್

Ad Widget

Ad Widget

Ad Widget

Ad Widget

ಸಾಗರ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಅವಳಿ ಜವಳಿ ಹೆಣ್ಣು ಮಕ್ಕಳಿಬ್ಬರು ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಿಸಿಎಂಸಿ ವಿಷಯದಲ್ಲಿ ಅವಳಿ ಅಂಕಗಳ ವ್ಯತ್ಯಾಸದೊಂದಿಗೆ ಉತ್ತಮ ಸಾಧನೆ ಮಾಡಿದ್ದು ಫಲಿತಾಂಶ ಬುಧವಾರ ಲಭ್ಯವಾಗಿದೆ.

Ad Widget

Ad Widget

Ad Widget

ನಗರದ ಹವ್ಯಕ ಹಾಸ್ಟೆಲ್‌ನ ನಿವಾಸಿಗಳಾಗಿ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಮುಕ್ತ ವಿ. ಹೆಬ್ಬಾರ್ ಒಟ್ಟು 570 ಅಂಕ ಗಳಿಸಿ ಡಿಸ್ಟಿಂಗ್ಶನ್‌ನಲ್ಲಿ ಉತ್ತೀರ್ಣಳಾಗಿದ್ದರೆ, ಇನ್ನೋರ್ವ ಸಹೋದರಿ ಮಾನ್ಯ ವಿ. ಹೆಬ್ಬಾರ್ 565 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

Ad Widget

ಈ ಇಬ್ಬರು ಅವಳಿ ಜವಳಿಗಳು ಎಸ್‌ಎಸ್‌ಎಲ್‌ಸಿ ಸೇರಿದಂತೆ ಪರೀಕ್ಷೆಗಳಲ್ಲಿ ಸಮಾನ ಅಂಕ ಪಡೆಯವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿ ಕೇವಲ ಶೇ. ಒಂದರಷ್ಟು ಅಂಕ ವ್ಯತ್ಯಾಸವಾಗಿದೆ. ಇವರು ಸೊರಬದ ತಾಲೂಕು ಆಫೀಸ್‌ನಲ್ಲಿ ಎಫ್‌ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕ್ರಂ ಹೆಬ್ಬಾರ್ ಶೈಲಜಾ ಅವರ ಪುತ್ರಿಯರು.

Ad Widget

Ad Widget
Click to comment

Leave a Reply

ದಕ್ಷಿಣ ಕನ್ನಡ

Woman Missing: ಉಪ್ಪಿನಂಗಡಿ : ತಾಯಿ ಮತ್ತು ಒಂದು ವರ್ಷದ ಮಗು ನಾಪತ್ತೆ – ಪತ್ತೆಯಾದಲ್ಲಿ ತಿಳಿಸುವಂತೆ ಮನವಿ

Ad Widget

Ad Widget

Ad Widget

Ad Widget

ಉಪ್ಪಿನಂಗಡಿ:  ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ತಾಯಿ ಮತ್ತು ಒಂದು ವರ್ಷದ ಮಗು ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ತಿಂಗಳ ಏಫ್ರಿಲ್‌ 22 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಯಿ ಮತ್ತು ಮಗು ನಾಪತ್ತೆಯಾಗಿದ್ದಾರೆ.

Ad Widget

Ad Widget

Ad Widget

 ಕೌಕ್ರಾಡಿ ಗ್ರಾಮದ ಕಟ್ಟೆ ಮಜಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್‌ ಅವರ ಪತ್ನಿ ರೀಮಾ ಸೋಂಕರ್‌ (26) ಮತ್ತು ಮಗು ರಿಯಾ (1) ನಾಪತ್ತೆಯಾಗಿರುವರು.    

Ad Widget

ಇಂಟೀರಿಯರ್‌ ಡೆಕೊರೇಟರ್‌ ಆಗಿರುವ ಸೋನು ಸೋಂಕರ್‌ ಉತ್ತರ ಪ್ರದೇಶದ ಅಜಾಮ್‌ ಘರ್‌ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಅವರ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

Ad Widget

Ad Widget

ಸೋನು ಸೋಂಕರ್‌ ಅವರು ಏ 22 ರಂದು ಬೆಳಿಗ್ಗೆ 8 .30 ಕ್ಕೆ ಕಟ್ಟೆ ಮಜಲಿನ ಬಾಡಿಗೆ ಮನೆಯಿಂದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು ಸಂಜೆ 7.30ರ ಸುಮಾರಿಗೆ ಬಂದು ನೋಡಿದಾಗ, ಮನೆಗೆ ಬಾಗಿಲು ಹಾಕಿತ್ತು. ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ತಾಯಿ ಮತ್ತು ಮಗು ಕಾಣೆಯಾಗಿದ್ದು ರೀಮಾ ಬಳಸುತ್ತಿದ್ದ ಮೊಬೈಲ್‌  ಫೋನ್‌ ನೆಲದಲ್ಲಿ ಬಿದ್ದು ಕೊಂಡಿತ್ತು.

Ad Widget

Ad Widget

Ad Widget

ಮನೆ ಮಾಲೀಕರಲ್ಲಿ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ, ಅದೇ ದಿನ ಬೆಳಿಗ್ಗೆ  10 ಗಂಟೆ ಸುಮಾರಿಗೆ ರೀಮಾ  ಮನೆಗೆ ಬೀಗ ಹಾಕಿ ಮಗುವಿನ ಜತೆ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿರುತ್ತಾರೆ. ನಾಪತ್ತೆಯಾಗಿರುವ ತಾಯಿ ಮತ್ತು ಮಗು ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

Continue Reading

ಬೆಂಗಳೂರು

Viral Video: ಮಹಿಳಾ ಪದಾಧಿಕಾರಿಯೊಂದಿಗಿನ ಕಾಂಗ್ರೆಸ್ ಶಾಸಕನದು ಎನ್ನಲಾದ ವಾಟ್ಸ್ ಆಪ್ ಕಾಲ್ ವಿಡಿಯೋ ವೈರಲ್‌

Ad Widget

Ad Widget

Ad Widget

Ad Widget

ರಾಮನಗರ: ದೇಶಾದ್ಯಂತ ಈಗ  ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ನದೇ ಸುದ್ದಿ . ಬಹುಷ: ಒಬ್ಬನೇ ವ್ಯಕ್ತಿಯ ರಾಸಲೀಲೆಯ 2900 ವಿಡಿಯೋ ಗಳು ಸಿಕ್ಕಿರುವುದು ಜಗತ್ತಿನಲ್ಲೆ ಮೊದಲು. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಈ ವಿಚಾರ ಸಹಜವಾಗಿಯೇ ಚುನಾವಣಾ ವಿಷಯವಾಗಿಯೂ ಬದಲಾಗಿದೆ. ವಿಪಕ್ಷ ಕಾಂಗ್ರೆಸ್‌ ಇದನ್ನು ದೇಶದಾದ್ಯಂತ ಬಿಜೆಪಿಯ ವಿರುದ್ದ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.

Ad Widget

Ad Widget

Ad Widget

 ಇದೇ ವೇಳೆ ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್‌  ಹುಸೇನ್ ಮಹಿಳೆಯೊಬ್ಬರ ಜತೆಗೆ ವಾಟ್ಸ್ ಆಪ್ ಕಾಲ್ ನಲ್ಲಿ  ಇರುವ ವಿಡಿಯೋವೊಂದು  ಕಳೆದೆರಡು ದಿನಗಳಿಂದ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸಾಲ್ ಹುಸೇನ್ ಅವರು ಕಾಂಗ್ರೆಸ್ ಪದಾಧಿಕಾರಿ ಎನ್ನಲಾದ ಮಹಿಳೆಯೊಬ್ಬರ ಜತೆಗೆ ವಾಟ್ಸಾಪ್‌ ವಿಡಿಯೋ ಕಾಲ್‌ ನಲ್ಲಿ ಮಾತನಾಡಿದ್ದಾರೆ ಎನ್ನಲಾದ  2 ನಿಮಿಷ 27 ಸೆಕೆಂಡ್‌ನ ವಿಡಿಯೋ ಇದಾಗಿದೆ.

Ad Widget

 ಈ ವಿಡಿಯೋವನ್ನು ಸ್ಟೀನ್ ರೆಕಾರ್ಡರ್ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಸಂಭಾಷಣೆ ಕೇಳಿಸುವುದಿಲ್ಲ. ಅದರೂ ವಿಡಿಯೋ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಈ   ವಿಡಿಯೋದಲ್ಲಿ ಇರುವ ಮಹಿಳೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಹಿರಿಯ ನಾಯಕರೊಟ್ಟಿಗೆ ಫೋಟೋ ತೆಗೆಸಿಕೊಂಡಿರುವುದು ಸಹ ಚರ್ಚೆಗೆ ಕಾರಣವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

Ad Widget

Ad Widget

 ಒಂದೂವರೆ ವರ್ಷ ಹಿಂದಿನದು

Ad Widget

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನನ್ನದೇ ಎಂದು ಒಪ್ಪಿಕೊಂಡಿರುವ ಶಾಸಕ ಇಕ್ಬಾಲ್‌  ಹುಸೇನ್, ಯಾರದ್ದೋ ಕೋಪವನ್ನು ತೀರಿಸಿಕೊಳ್ಳಲು ನನ್ನನ್ನು ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಹಲವಾರು ಮಂದಿ ಕರೆ ಮಾಡುತ್ತಾರೆ ವಿಡಿಯೋ ಕಾಲ್ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕರೆ ಸುಮಾರು ಒಂದೂವರೆ ವರ್ಷ ಹಿಂದಿನದು ಎಂದ ಇಕ್ಬಾಲ್‌  ಹುಸೇನ್, ಹೀಗೆ ಕಾಲ್ ರೆಕಾರ್ಡ್ ಮಾಡಿಕೊಂಡು ಈಗ ನನ್ನ ತೇಜೋವದೆ ಮಾಡಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ  ಎಂದಿದ್ದಾರೆ.

Continue Reading

ದಕ್ಷಿಣ ಕನ್ನಡ

Communal Hatred Murder: ವಿಟ್ಲದ ಹಲ್ಲೆಗೆ ಪ್ರತಿಕಾರವಾಗಿ ಬಂಟ್ವಾಳದಲ್ಲಿ  ಕೋಮು ದ್ವೇಷದಿಂದ ಹತ್ಯೆ : ನಾಲ್ವರಿಗೆ ಜೀವಾವಧಿ ಶಿಕ್ಷೆ

Ad Widget

Ad Widget

Ad Widget

Ad Widget

9 ವರ್ಷಗಳ ಹಿಂದೆ  ಬಂಟ್ವಾಳದ ಸಜಿಪಮೂಡ ಗ್ರಾಮದಲ್ಲಿ ನಡೆದಿದ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರು. ದಂಡ ವಿಧಿಸಿದೆ. 2015ರಲ್ಲಿ ತಂಡವೊಂದು ಮೊಹಮ್ಮದ್ ಮುಸ್ತಾಫ ಮತ್ತು ಮಹಮ್ಮದ್ ನಾಸೀರ್ ಎಂಬವರ ಮೇಲೆ ತಲವಾರ್ ನಡೆಸಿತ್ತು . ಇದರಲ್ಲಿ ಮಹಮ್ಮದ್ ನಾಸೀರ್ ಕೊಲೆಯಾಗಿದ್ದರು . ಕೋಮು ದ್ವೇಷದಿಂದ ಈ ಹತ್ಯೆ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Ad Widget

Ad Widget

Ad Widget

 ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (22), ಅಭಿ ಯಾನೆ ಅಭಿಜಿತ್ (24), ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (24), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (23) ಶಿಕ್ಷೆಗೆ ಒಳಗಾದವರು.

Ad Widget

2015ರ ಆಗಸ್ಟ್‌ 6ರಂದು ರಾತ್ರಿ ಆಟೊದಲ್ಲಿ ಹೋಗುತ್ತಿದ್ದ ಮೊಹಮ್ಮದ್‌ ಮುಸ್ತಾಫ್ ಮತ್ತು ನಾಸೀರ್‌ ಅಲಿಯಾಸ್‌ ಮೊಹ್ಮದ್‌ ನಾಸೀರ್‌ ಅವರ ಮೇಲೆ  ಅಪರಾಧಿಗಳು  ತಲವಾರಿನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ನಾಸೀರ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಮರುದಿನ ಮೃತಪಟ್ಟಿದ್ದರು.

Ad Widget

Ad Widget

ಮೊಹಮ್ಮದ್‌ ಮುಸ್ತಾಫ ಅವರು ತಮ್ಮ ಮಾವನ ಹೆಂಡತಿಯನ್ನು ಹೆರಿಗೆಗಾಗಿ ಬಂಟ್ವಾಳ ಆಸ್ಪತ್ರೆಗೆ ಆಟೊ ರಿಕ್ಷಾದಲ್ಲಿ  ಬಿಟ್ಟು ರಾತ್ರಿ  ಮನೆಗೆ ವಾಪಸ್ಸು ಆಗುತ್ತಿದ್ದರು.  ತಮ್ಮ ಪತ್ನಿಯ ಮನೆಗೆ ಹೋಗುವ ಸಲುವಾಗಿ ನಾಸೀರ್‌ ಅವರು ಮೆಲ್ಕಾರ್‌ ಬಳಿ ಈ ಆಟೊ ಹತ್ತಿದ್ದರು. ಮೆಲ್ಕಾರ್‌ ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾ ಹೋಗುತ್ತಿರುವುದನ್ನು ಕಂಡ ಆರೋಪಿಗಳು, ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ.  ರಾತ್ರಿ 10.45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ತಲುಪುತ್ತಿದ್ದಂತೆ ರಿಕ್ಷಾ ತಡೆದು ನಿಲ್ಲಿಸಿದ್ದಾರೆ.  ಅದರಲ್ಲಿ ಇರುವ ಇಬ್ಬರು  ಮುಸ್ಲಿಂರು ಎನ್ನುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ತಲವಾರಿನಿಂದ ದಾಳಿ ಮಾಡಿದ್ದರು.

Ad Widget

Ad Widget

Ad Widget

ಮುಖ್ಯ ಆರೋಪಿ ವಿಜೇತ್ ಕುಮಾರ್ ತಲವಾರಿನಿಂದ ಮುಸ್ತಾಫ ಅವರ ಕೈ, ಎದೆಗೆ ಬಲವಾಗಿ ಕಡಿದಿದ್ದಾನೆ. 2ನೇ ಆರೋಪಿ ಕಿರಣ್ ಪೂಜಾರಿ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತಿದ್ದನಾಸೀರ್ ಗೆ ತಲವಾರಿನಿಂದ ಕಡಿದಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ನಾಸೀರ್ ಅಹಮ್ಮದ್ಆ.7ರಂದು ಮೃತಪಟ್ಟಿದ್ದಾರೆ. ಅಪರಾಧಿಗಳು ಕೃತ್ಯದ ವೇಳೆ ಧರಿಸಿದ್ದ ರಕ್ತಸಿಕ್ತ ಬಟ್ಟೆಗಳನ್ನು ಪಾಣೆಮಂಗಳೂರು ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರವನ್ನು ಮರೆಮಾಚಿಸಿದ್ದಾರೆ   

ಇದಕ್ಕೂ ಮುನ್ನಾ ದಿನ 2015ರ ಆಗಸ್ಟ್‌ 5ರಂದು ರಾತ್ರಿ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಆಲಬೆ ಎಂಬಲ್ಲಿ ವಿಜೇತ್‌ ಕುಮಾರ್‌ ಮತ್ತು ಅಭಿ ಮೇಲೆ ಮುಸ್ಲಿಂ ಸಮುದಾಯದ 4-5 ಯುವಕರು ಹಲ್ಲೆ ಮಾಡಿದ್ದರು. ಇದರಿಂದಾಗಿ ರೊಚ್ಚಿಗೆದ್ದಿದ್ದ ಈ ಇಬ್ಬರು, ತಮ್ಮ ಇನ್ನಿಬ್ಬರು ಮಿತ್ರರನ್ನು ಕರೆಯಿಸಿಕೊಂಡು, ಪಾಣೆ ಮಂಗಳೂರು ಬಳಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆ ದಾರಿಯಲ್ಲಿ ಸಿಕ್ಕ ಇವರನ್ನು ಕೊಲೆ ಮಾಡಿದರು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಕೆ.ಯು. ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ವಾದ ಮಂಡಿಸಿದ್ದರು.

ನಾಲ್ವರೂ ಆರೋಪಿಗಳಿಗೆ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹1.20 ಲಕ್ಷವನ್ನು ಮೃತ ನಾಸೀರ್‌ ಅವರ ಪತ್ನಿ ರಹಮತ್‌ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿಯೂ ರಹಮತ್‌ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.

ತನಿಖಾಧಿಕಾರಿಯಾಗಿದ್ದ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 40 ದಾಖಲೆಗಳನ್ನು ಗುರುತಿಸಲಾಗಿದೆ. ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಟಾ ಮಾರ್ಗರೇಟ್ ಕ್ರಾಸ್ತ ವಾದ ಮಂಡಿಸಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading