ಬಿಗ್ ನ್ಯೂಸ್
RTI Activist Body Found | ಬಂಟ್ವಾಳ: ಮಾಹಿತಿ ಹಕ್ಕು ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ : ಅಕ್ರಮ – ಸಕ್ರಮ ಸಮಿತಿ ಭ್ರಷ್ಟಾಚಾರದ ಬಗ್ಗೆ ಜೀವಬೆದರಿಕೆ – ರಕ್ಷಣೆ ನೀಡಲು ಪೊಲೀಸ್ ಮಹಾನಿರ್ದೇಶಕರಿಕೆ ಮನವಿ ಸಲ್ಲಿಸಿದ ಕೆಲವೇ ದಿನದಲ್ಲಿ ಘಟನೆ
ಬಂಟ್ವಾಳ : ಬಂಟ್ವಾಳ ಮಾಹಿತಿ ಹಕ್ಕು ಕಾರ್ಯಕರ್ತ ಪದ್ಮನಾಭ ಸಾಮಾಂತ್ ನ (RTI Activist Body Found) ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಮನೆಯ ಹಿಂಬದಿ ಪತ್ತೆಯಾಗಿದೆ.
ಬಂಟ್ವಾಳ ಅಕ್ರಮ ಸಮಿತಿ ವತಿಯಿಂದ 2018 ರಿಂದ 2023ರವರೆಗೆ ಭಾರಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಮೇತ ಬಹಿರಂಗ ಪಡಿಸಿದ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸೇವಂತ್ ಅವರ ಮೃತದೇಹ ಆತ್ಮಹತ್ಯೆಗೈದ ರೀತಿ ಪತ್ತೆಯಾಗಿದೆ.
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿಯವರ ಆಪ್ತರಿಂದ ನನಗೆ ಹಲ್ಲೆ ಯತ್ನ ನಡೆದಿದೆ ನನಗೆ ಭದ್ರತೆ ಬೇಕೆಂದು ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದರು.
ಪ್ರಮುಖ ನಾಯಕರೊಬ್ಬರ ಹೊಸ ಮನೆ , ರಸ್ತೆ ಕಾಮಗಾರಿ ಅಕ್ರಮ ಬಗ್ಗೆ , ಆಸ್ತಿ ಮಂಜೂರಾತಿ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪಡೆದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.
ಬಂಟ್ವಾಳ ತಾಲೂಕಿನ ಚೆನ್ನೈತೊಡಿ ಗ್ರಾಮದ ತಿಮರಡ್ಡ ಮನೆಯ ಕೃಷ್ಣ ಸೇಮಂತ್ ರವರ ಪುತ್ರರಾದ ಪದ್ಮನಾಭ ಸೇವಂತ್ ಕ್ಯಾಟರಿಂಗ್ ವ್ಯವಹಾರ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ಯಾವೂದೇ ಫೋನ್ ಕರೆ ಸ್ವೀಕರಿಸದ ಬಗ್ಗೆ ಅನುಮಾನಗೊಂಡು ಹುಡುಕಾಡಿದಾಗ ಮನೆಯ ಹಿಂಭಾಗದ ಕಾಡಿನಲ್ಲಿ ಆತ್ಮಹತ್ಯೆಗೈದ ರೀತಿ ಮೃತದೇಹ ಪತ್ತೆಯಾಗಿದೆ.
ಬಿಗ್ ನ್ಯೂಸ್
Mysore Kodagu Rain | ಮೈಸೂರಿನಲ್ಲಿ ಮೊದಲ ಮಳೆಯ ಅಬ್ಬರ – ಹಲವು ವಾಹನಗಳು ಜಖಂ : ಕೊಡಗಿನಲ್ಲೂ ತಂಪಾದ ಇಳೆ – ದಕ್ಷಿಣ ಕನ್ನಡದ ಕೆಲವು ಕಡೆ ಮಳೆ
ಮೈಸೂರು: ಬಿಸಿಲಿನಿಂದ ಬಸವಳಿದಿದ್ದ ಧರೆಗೆ ವರುಣ ತಂಪೆರೆದಿದ್ದಾನೆ.ಮೈಸೂರಿನಲ್ಲಿ (Mysore Kodagu Rain) ಸಂಜೆ ಪ್ರಾರಂಭವಾದ ಮಳೆ ಹಲವು ಅವಾಂತರ ಮಾಡಿದೆ. ಭಾರಿ ಗಾಳಿ ಮಳೆ ಮರಗಳು ಮುರಿದು ಬಿದ್ದು ಹಲವು ವಾಹನಗಳು ಜಖಂ ಆಗಿದೆ.
ಪ್ರವಾಸಿಗರ ಸ್ವರ್ಗ ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದ್ದ ಕೊಡಗು 37 ಡಿಗ್ರಿಯಷ್ಟು ತಾಪಮಾನ ದಾಖಲಿಸಿದ್ದು ಇತಿಹಾಸದಲ್ಲೇ ಪ್ರಥಮ ಬಾರಿಯಾಗಿತ್ತು.
ಇಂದು ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಸಿದ್ದಾಪುರ, ತಿತಿಮತಿ, ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಾಫಿ ಹಾಗೂ ಕಾಳುಮೆಣಸು ಬಿಸಿಲಿನಿಂದ ಒಣಗಿ ಹೋಗಿತ್ತು.
ಈ ಬಾರಿಯ ಕೃಷಿ ಆದಾಯದ ಭರವಸೆಯನ್ನೇ ಬಿಟ್ಟಿದ್ದ ಕೃಷಿಕರಿಗೆ ಈ ಮಳೆ ಸ್ವಲ್ಪ ಮಟ್ಟಿನ ಭರವಸೆ ಮೂಡಿಸಿದೆ.
ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿಭಾಗದ ಕಲ್ಲುಗುಂಡಿ, ಕೊಯನಾಡು, ಸಂಪಾಜೆನಲ್ಲೂ ಸಂಜೆ ಉತ್ತಮ ಮಳೆಯಾಗಿದೆ.
ಬಿಗ್ ನ್ಯೂಸ್
ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಕಾರು ಡಿಕ್ಕಿ – ಟ್ರಾಫಿಕ್ ಜಾಮ್
ಪುತ್ತೂರು: ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಢಿಕ್ಕಿಯಾದ ಘಟನೆ ಕಬಕದಲ್ಲಿ ನಡೆದಿದೆ.
ಅಪಘಾತದಿಂದ ಮಂಗಳೂರು – ಪುತ್ತೂರು ಹಾಗೂ ಪುತ್ತೂರು – ವಿಟ್ಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ರೋಗಿಯ ಕಡೆಯವರನ್ನು ಪರ್ಯಾಯ ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿಗೆ ರೋಗಿಯೋರ್ವರನ್ನು ಕೊಂಡೊಯ್ಯಲಾಗುತ್ತಿತ್ತು.
ಆ್ಯಂಬುಲೆನ್ಸ್ ಗೆ ಕಬಕದ ಶಾಲಾ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ಬಂದ ನ್ಯಾನೊ ಡಿಕ್ಕಿಯಾಗಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಬಂದ ಮತ್ತೊಂದು ಕಾರು ನ್ಯಾನೋಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಬಿಗ್ ನ್ಯೂಸ್
Prajwal Revanna Scandal | ರಾಜತಾಂತ್ರಿಕ ಪಾಸ್ಪೋರ್ಟ್ ನಲ್ಲೇ ವಿದೇಶಕ್ಕೆ ತೆರಳಿದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ..! ಒಪ್ಪಿಕೊಂಡ ಕೇಂದ್ರ ಸರ್ಕಾರ
ಹೊಸದಿಲ್ಲಿ: ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Scandal) ಅವರು ರಾಜತಾಂತ್ರಿಕ ಪಾಸ್ಪೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಜರ್ಮನಿಗೆ ಪ್ರವಾಸ ಮಾಡಿರುವುದನ್ನು ಕೊನೆಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್,’ಜರ್ಮನಿಗೆ ತೆರಳು ಪ್ರಜ್ವಲ್ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆಯಿಂದ ಯಾವುದೇ ರಾಜಕೀಯ ಅನುಮತಿಯನ್ನು ಕೋರಲಾಗಿಲ್ಲ, ನಾವು ನೀಡಿಲ್ಲ’ ಎಂದು ಹೇಳಿದ್ದಾರೆ.ನಿಸ್ಸಂಶಯವಾಗಿ, ಯಾವುದೇ ವೀಸಾವನ್ನು ಸಹ ನೀಡಲಾಗಿಲ್ಲ.
ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ಪ್ರಯಾಣಿಸಲು ಯಾವುದೇ ವೀಸಾ ಅಗತ್ಯವಿಲ್ಲ. ಸಚಿವಾಲಯವು ಹೇಳಿದ ಸಂಸದರಿಗೆ ಬೇರೆ ಯಾವುದೇ ದೇಶಕ್ಕೆ ಯಾವುದೇ ವೀಸಾ ಟಿಪ್ಪಣಿಯನ್ನು ನೀಡಿಲ್ಲ. ಅವರು ರಾಜತಾಂತ್ರಿಕ ಪಾಸ್ಪೋರ್ಟ್ನಲ್ಲಿ ಪ್ರಯಾಣಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದು ವಿಡಿಯೋಗಳು ವೈರಲ್ ಆಗುತ್ತಿದ್ದ ವೇಳೆಯಲ್ಲೇ ಪ್ರಜ್ವಲ್ ಏಪ್ರಿಲ್ 26 ರಂದು ಜರ್ಮನಿಯ ಫ್ರಾಂಕ್ಫರ್ಟ್ಗೆ ತೆರಳಿದ್ದರು.
ವಿರೋಧ ಪಕ್ಷಗಳು ದೇಶಾದ್ಯಂತ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ದ ಧ್ವನಿ ಎತ್ತಿವೆ. ಲೈಂಗಿಕ ದೌರ್ಜನ್ಯ ವಿಡಿಯೋ ಹರಿದಾಡಿದ ನಂತರ ಪ್ರಧಾನಿ ಮೋದಿ ಪ್ರಜ್ವಲ್ ಪರ ಮತಯಾಚನೆ ಮಾಡಿರುವುದೇ ಇದೀಗ ವಿಪಕ್ಷಗಳಿಗೆ ಅಸ್ತ್ರವಾಗಿದೆ.
-
ವೈರಲ್ ನ್ಯೂಸ್2 days ago
Kukke Subrahmanya | ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ : ಕುಲ ಗೋತ್ರದ ದಾಖಲೆ ಸಮೇತ ಟ್ವೀಟ್ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಚಿವ ರೆಡ್ಡಿ – ಸಚಿವರು ದಾಖಲೆ ತೋರಿಸುತ್ತಿದ್ದಂತೆ ಒಂದೊಂದೇ ಪೋಸ್ಟ್ ಡಿಲೀಟ್..!
-
ವೈರಲ್ ನ್ಯೂಸ್2 days ago
Covishield Side Effect | ಪುನೀತ್ ರಾಜ್ ಕುಮಾರ್ ಕೊರೋನಾ ಲಸಿಕೆ ಹಾಕಿಸಿಕೊಂಡಾಗ ಕೋವಿಶೀಲ್ಡ್ ಬಗ್ಗೆ ಎಚ್ಚರಿಸಿದ್ದ ಅಭಿಮಾನಿ..! ಇದೀಗ ವೈರಲ್
-
ಕೊಡಗು2 days ago
Longest Glass Bridge | ಪ್ರವಾಸಿಗರ ಸ್ವರ್ಗ ಕೊಡಗಿನಲ್ಲಿ ತಲೆಯೆತ್ತಿದೆ ಮತ್ತೊಂದು ಗ್ಲಾಸ್ ಬ್ರಿಡ್ಜ್ – ದಕ್ಷಿಣ ಭಾರತದ ಅತಿ ದೊಡ್ಡ ಗಾಜು ಸೇತುವೆಯಲ್ಲಿ ನಡೆಯುವುದೇ ಮೈರೋಮಾಂಚನ..! ಬರ್ತ್ ಡೇ, ಪೋಟೋ ಶೂಟ್ ಗೆ ಇಲ್ಲಿದೆ ಸ್ಪೆಷಲ್ ಗ್ಲಾಸ್ ಗ್ಯಾಲರಿ
-
ಅಂತರ ರಾಜ್ಯ2 days ago
Covishield-ಕೋವಿಶೀಲ್ಡ್ ಲಸಿಕೆಯಿಂದ ಮಕ್ಕಳ ಸಾವು ..! ನ್ಯಾಯಾಲಯದ ಮೆಟ್ಟಿಲೇರಲು ಸಿದ್ದತೆ ನಡೆಸಿರುವ 2 ಭಾರತೀಯ ಕುಟುಂಬಗಳು
-
ಬಿಗ್ ನ್ಯೂಸ್2 days ago
ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಕಾರು ಡಿಕ್ಕಿ – ಟ್ರಾಫಿಕ್ ಜಾಮ್
-
ಬಿಗ್ ನ್ಯೂಸ್2 days ago
Prajwal Revanna Scandal | ರಾಜತಾಂತ್ರಿಕ ಪಾಸ್ಪೋರ್ಟ್ ನಲ್ಲೇ ವಿದೇಶಕ್ಕೆ ತೆರಳಿದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ..! ಒಪ್ಪಿಕೊಂಡ ಕೇಂದ್ರ ಸರ್ಕಾರ
-
ಮನರಂಜನೆ18 hours ago
Speed passenger ship-ಲಕ್ಷದ್ವೀಪ – ಮಂಗಳೂರು ನಡುವೆ ಸ್ಪೀಡ್ ಪ್ಯಾಸೆಂಜರ್ ಹಡಗು ಪ್ರಾರಂಭ – ಪ್ರವಾಸಕ್ಕೆ ಹೋಗಲು ಇನ್ಯಾಕೆ ತಡ ? ಇಲ್ಲಿದೆ ದರ ವಿವರ
-
ದಕ್ಷಿಣ ಕನ್ನಡ2 days ago
Temperature-ದ.ಕ.ಜಿಲ್ಲೆಯಲ್ಲಿ 40 ಡಿಗ್ರಿ ಸನಿಹಕ್ಕೆ ಬಿಸಿಲಿನ ತಾಪಮಾನ; ಹವಮಾನ ಇಲಾಖೆ ನೀಡಿತ್ತು ಕರಾವಳಿಯಲ್ಲಿ ಮಳೆಯ ಮುನ್ಸೂಚನೆ- ಯಾವಾಗ ಗೊತ್ತೆ ?