ದಕ್ಷಿಣ ಕನ್ನಡ
Rahul Gandhi : ರಾಹುಲ್ ಗಾಂಧಿ ಆಧುನಿಕ ಕಾಲದ ರಾವಣ – ಬಿಜೆಪಿಯಿಂದ ವಿವಾದತ್ಮಕ ಪೋಸ್ಟರ್ ರಿಲೀಸ್
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮಹತ್ವದ ಸಭೆ ಆಯೋಜಿಸಿರುವ ಬೆನ್ನಲೆ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಟಕ್ಕೆ ಮುಂದಾಗಿದೆ. ಸೋಷಿಯಲ್ ವಾರ್ ನಲ್ಲಿ ಎರಡು ಪಕ್ಷಗಳು ಪೋಸ್ಟರ್ ವಾರ್ ನಲ್ಲಿ ಮುಳುಗಿದ್ದು , ದಿನಕ್ಕೊಂದು ವಿವಾದತ್ಮಾಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ರಾವಣನಂತೆ (Ravan) ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದು ಈಗ ರಾಜಕೀಯ ವಲಯದಲ್ಲಿ ವಿವಾದದ ಸುನಾಮಿ ಎಬ್ಬಿಸಿದೆ. ಈ ವಿವಾದಾತ್ಮಕ ಪೋಸ್ಟರ್ನ್ನು ಬಿಜೆಪಿ (BJP) ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟ್ಟರ್) ಹಂಚಿಕೊಂಡಿದೆ. ಈ ಟ್ವೀಟ್ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ‘ದೊಡ್ಡ ಸುಳ್ಳುಗಾರ’ ಎಂಬ ಶೀರ್ಷಿಕೆ ನೀಡಿ ವ್ಯಂಗವಾಡಿತ್ತು. ಅಲ್ಲದೇ ‘ಜುಮ್ಲಾ ಬಾಯ್’ (ನಾಟಕಕಾರ) ಎಂದು ಟೀಕಿಸಿತ್ತು. ಇದರ ಬೆನ್ನಲ್ಲೇ ಪ್ರತೀಕಾರವಾಗಿ ಬಿಜೆಪಿ ಈ ಪೋಸ್ಟ್ ಬಿಡುಗಡೆ ಮಾಡಿದೆ. ಹೀಗಾಗಿ ಜಾಲತಾಣಗಳಲ್ಲಿ ಉಭಯ ಪಕ್ಷಗಳ ಪೋಸ್ಟರ್ ವಾರ್ ಶುರುವಾಗಿದೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿಯನ್ನು ರಾವಣನ ಪಾತ್ರದಲ್ಲಿ ತೋರಿಸಿ ಸಿನಿಮಾವೊಂದರ ಪೋಸ್ಟರ್ ಎಂಬಂತೆ ಚಿತ್ರಿಸಿರುವ ಬಿಜೆಪಿ ಈ ಚಿತ್ರವನ್ನು ಜಾರ್ಜ್ ಸೊರೋಸ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ. ಪೋಸ್ಟರ್ನಲ್ಲಿ ಬಿಜೆಪಿ, ರಾವಣ, ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ.
ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದೆ. ಅಲ್ಲದೇ ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಇದರ ಜೊತೆ ಹೊಸ ಯುಗದ ರಾವಣ ಬಂದಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಎಕ್ಸ್ ಪೋಸ್ಟ್ನಲ್ಲಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಬಿಜೆಪಿ ಈ ರೀತಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ನಾಯಕ ಕೆ.ಸಿ ವೇಣುಗೋಪಾಲ್ ಅವರು ಸಹ ಬಿಜೆಪಿಯ ಈ ನಡೆಯನ್ನು ಖಂಡಿಸಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದನ್ನು ಖಂಡಿಸಲು ಯಾವುದೇ ಪದಗಳಿಲ್ಲ. ಅವರ ದುಷ್ಟ ಉದ್ದೇಶಗಳು ಸ್ಪಷ್ಟವಾಗಿವೆ. ಆ ಪೋಸ್ಟರ್ನ ಉದ್ದೇಶ ರಾಹುಲ್ ಅವರ ಅಜ್ಜಿ ಹಾಗೂ ತಂದೆಯಂತೆ ಅವರನ್ನು ಕೊಲ್ಲುವುದಾಗಿದೆ ಎಂದು ಬರೆದುಕೊಂಡಿದ್ದಾರೆ.
ಜಾರ್ಜ್ ಸೊರೋಸ್ ಅಮೆರಿಕದ ಉದ್ಯಮಿ ಆಗಿದ್ದು, ಇತ್ತೀಚೆಗೆ ನರೇಂದ್ರ ಮೋದಿ ಸರ್ಕಾರ, ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಹಲವು ಅಕ್ರಮಗಳ ಆರೋಪ ಹೊರಿಸಿದ್ದರು.ಆಗಾಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡುವ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ವಿರುದ್ಧ ಬಿಜೆಪಿ ಕಿಡಿಕಾರುತ್ತಲೇ ಇರುತ್ತದೆ. ಅಲ್ಲದೇ ಭಾರತ ವಿರೋಧಿ ಹೇಳಿಕೆ ನೀಡಿದ ಆರೋಪವು ಜಾರ್ಜ್ ಮೇಲಿವೆ.
ಈ ಪೋಸ್ಟರ್ ಮೂಲಕ ಹಂಗೇರಿಯನ್-ಅಮೆರಿಕನ್ ಉದ್ಯಮಿ ಸೊರೊಸ್ ಅವರನ್ನು ಬಿಜೆಪಿ ಮತ್ತೆ ಎಳೆದು ತಂದಿದೆ. ಪ್ರಪಂಚದಾದ್ಯಂತದ ಅನೇಕ ಗುಂಪುಗಳಿಗೆ ದೇಣಿಗೆಗಳನ್ನು ನೀಡಿ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಮಾತುಗಳು ಅವರ ವಿರುದ್ಧ ಕೇಳಿ ಬಂದಿವೆ.
ಇದೇ ವೇಳೆ ತನ್ನ ‘ಘಮಂಡಿಯಾ ಫೈಲ್ಸ್’ನ 4ನೇ ಸಂಚಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಬಿಜೆಪಿ ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ರಾಜ್ಯದಲ್ಲಿ ಪ್ರತೀ ಹಳ್ಳಿಯಲ್ಲೂ ಹಲ್ಲೆ, ಕೊಲೆ ಮತ್ತು ಹಿಂಸೆ ಮೂಲಕ ಚುನಾವಣೆ ಗೆಲ್ಲಲಾಗುತ್ತಿದೆ ಎಂದು ಆರೋಪಿಸಿದೆ.
ಸುಳ್ಯ
ಕರೆನ್ಸಿ ರಿಚಾರ್ಜ್ ಮಾಡಿಸಲು ಬಂದ ಯುವತಿಯ ಫೋಟೊ ತೆಗೆದ ಅನ್ಯ ಕೋಮಿನ ಯುವಕ – ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು
ಸುಳ್ಯ: ಮೊಬೈಲ್ ಕರೆನ್ಸಿ ರಿಚಾರ್ಜ್ ಮಾಡಿಸಲು ಬಂದ ಯುವತಿಯ ಫೋಟೊವನ್ನು ಅನ್ಯಕೋಮಿನ ಯುವಕನೊಬ್ಬ ತೆಗೆದ ಆರೋಪ ಕೇಳಿ ಬಂದಿದ್ದು ಪ್ರಕರಣ ಸುಳ್ಯ ಠಾಣೆ ಮೆಟ್ಟೀಲೆರಿದೆ. ಯುವತಿ ಸುಳ್ಯದ ಗಾಂಧಿನಗರದಲ್ಲಿರುವ ಏರ್ಟೆಲ್ ಮಳಿಗೆಗೆ ಹೋಗಿದ್ದ ವೇಳೆ ಪ್ರಕರಣ ನಡೆದಿದೆ.
ಗಾಂಧಿನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ತೊಂದರೆಗೆ ಒಳಗಾದವಳು. ಆಕೆ ಮೊಬೈಲ್ ರಿಚಾರ್ಜ್ ಮಾಡಿಸಲೆಂದು ಹತ್ತಿರದ ಏರ್ಟೆಲ್ ಮಳಿಗೆಗೆ ಹೋಗಿದ್ದಾಳೆ. ಮಳಿಗೆಯಲ್ಲಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಕುಳಿತುಕೊಳ್ಳುವಂತೆ ತಿಳಿಸಿ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ.
ಅವನ ನಡವಳಿಕೆಯಿಂದ ಅನುಮಾನಗೊಂಡ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ಅದರಲ್ಲಿ ತನ್ನ ಫೋಟೋ ಇರುವುದನ್ನು ನೋಡಿದ್ದಾಳೆ. ಹಾಗೂ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾಳೆ.
ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.
ಉದ್ಯೋಗ
Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ
ಪುತ್ತೂರಿನ ಪ್ರತಿಷ್ಠಿತ ಮೇಘ ಫ್ರುಟ್ ಪ್ರೋಸೆಸಿಂಗ್ ಪ್ರೈವೇಟ್ ಲಿಮಿಟೆಡ್ (ಬಿಂದು) ಸಂಸ್ಥೆಯ ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಅಚ್ಯುತಾಪುರಂ ಎಸ್ಇಝಡ್ ಕೈಗಾರಿಕಾ ಪ್ರದೇಶದಲ್ಲಿ ಮೇ 2ರಂದು ನಡೆಯಿತು.
ಆರ್ಎಸ್ಪಿ ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ರಮೇಶ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದರು. ಬಿಂದು ಕಂಪನಿಯ ಚೇರ್ಮೆನ್ ಸತ್ಯಶಂಕರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತಾ ಶಂಕರ್, ಸಿಇಒ ಸುಶೀಲ್ ವೈದ್ಯ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.
2000ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಉತ್ಪಾದನ ಘಟಕ ತೆರೆದ ಬಿಂದು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. 2016ರಲ್ಲಿ ತೆಲಂಗಾಣದಲ್ಲಿ ಉತ್ಪಾದನ ಘಟಕ ತೆರೆದ ಬಿಂದು ಇದೀಗ ಆಂದ್ರದಲ್ಲಿ ಶಿಲಾನ್ಯಾಸಗೈದಿದೆ. 2025ರ ವೇಳೆ ಆಂದ್ರದ ಘಟಕ ಉದ್ಘಾಟನೆಯಾಗಲಿದೆ. ಬಿಂದು ಕಂಪನಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.
ಮಂಗಳೂರು
Luxury ship-ಮಂಗಳೂರಿಗೆ ಬಂದ 8ನೇ ಬೃಹತ್ ಐಷಾರಾಮಿ ಹಡಗು
ಪಣಂಬೂರು ಮೇ 5: ಈ ವರ್ಷದ 8ನೇ ಐಷಾರಾಮಿ ಕ್ರೂಸ್ ‘ಎಂಎಸ್ ಇನ್ಸೈನಿಯಾ’ ನವಮಂಗಳೂರು ಬಂದರಿಗೆ ರವಿವಾರ ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ) ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶೀ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ನಾರ್ವೇಜಿಯನ್ ಕ್ರೂಸ್ ಲೈನರ್ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್ ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.
ಕಾರ್ಕಳ ಗೋಮಟೇಶ್ವರ ಬೆಟ್ಟ ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.
-
ಉದ್ಯೋಗ21 hours ago
Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ
-
ರಾಜ್ಯ1 day ago
Heavy rainfall-ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುವ ಸಾಧ್ಯತೆ; ಪ್ರವಾಹ ಎದುರಿಸಲು ಸಜ್ಜಾಗುವಂತೆ ಸೂಚನೆ
-
ಬಿಗ್ ನ್ಯೂಸ್17 hours ago
Anantkumar Hegde | ಚುನಾವಣೆಗೆ ಕೆಲವೇ ಗಂಟೆಗಳಿರುವಾಗ ಮಹತ್ವದ ಬೆಳವಣಿಗೆ : ಬಿಜೆಪಿಗೆ ಓಟ್ ಹಾಕಿ ಎಂದು ತನ್ನ ಫೋಟೋ ಬಳಸಿ ಫೋಸ್ಟ್ ಮಾಡಿದ್ದರ ವಿರುದ್ದ ಫೈರ್ ಬ್ರ್ಯಾಂಡ್ ನಾಯಕ , ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆಯಿಂದ ದೂರು ದಾಖಲು
-
ಉಡುಪಿ22 hours ago
Kapu: Pili Kola-ಕಾಪು : ಪಿಲಿ ಕೋಲ – ನಗರ ಪ್ರದಕ್ಷಿಣೆ ವೇಳೆ ಓರ್ವನ ಸ್ಪರ್ಶಿಸಿ ದೈವಸ್ಥಾನಕ್ಕೆ ಓಡಿ ಬಂದ ದೈವ..!
-
ಮಂಗಳೂರು1 day ago
Panolibail-ಪಣೋಲಿಬೈಲ್ನಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್; ಪೂರ್ಣಗೊಳ್ಳಬೇಕಾದರೆ ಕನಿಷ್ಠ ಎಷ್ಟು ವರ್ಷ ಬೇಕು ಗೊತ್ತೇ ?
-
ಸ್ಥಳೀಯ1 day ago
Marriage cancelled-ಸ್ವೀಟ್ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡ ಮದುವೆ
-
ಚಿನ್ನ-ಬೆಳ್ಳಿ ದರ1 day ago
Gold Rate Today – ಏರಿಕೆಯಾದ ಚಿನ್ನದ ಬೆಲೆ; ಕುಸಿತ ಕಂಡ ಬೆಳ್ಳಿ ಬೆಲೆ
-
ಬಿಗ್ ನ್ಯೂಸ್1 day ago
Heat Wave | ಕರ್ನಾಟಕ ಕರಾವಳಿಯಲ್ಲಿ ಬಿಸಿಗಾಳಿ – ಆರೆಂಜ್ ಎಲರ್ಟ್ ಘೋಷಣೆ