Connect with us

ರಾಜಕೀಯ

MLA Son Arrest | ವಿಪಕ್ಷಗಳ 40% ಕಮಿಷನ್ ಆರೋಪದ ನಡುವೆ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಬಿಜೆಪಿ ಶಾಸಕರ ಪುತ್ರ ಬಂಧನ – ಲೋಕಾಯುಕ್ತ ದಾಳಿ ವೇಳೆ 6 ಕೋಟಿ ನೋಟಿನ ಕಂತೆ ಪತ್ತೆ : ಅಧಿಕಾರಿಗಳೇ ದಂಗು

Ad Widget

Ad Widget

Ad Widget

Ad Widget

ಬೆಂಗಳೂರು: ವಿರೋಧ ಪಕ್ಷ ಕಾಂಗ್ರೆಸ್ ನ 40% ಕಮಿಷನ್ ಬೆನ್ನಲ್ಲೇ ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿ 40 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ (MLA Son Arrest). ಮಾಡಾಳ್ ವಿರೂಪಾಕ್ಷಪ್ಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ.

Ad Widget

Ad Widget

Ad Widget

ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್‌ಗಾಗಿ KSDL ಅಧ್ಯಕ್ಷರ ಪರವಾಗಿ ಹಣ ಸ್ವೀಕರಿಸುವಾಗ ಪ್ರಶಾಂತ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ವರದಿಯ ಪ್ರಕಾರ 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 40 ಲಕ್ಷ ರೂಪಾಯಿ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Ad Widget

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್(ಕೆಎಸ್‌ಡಿಎಲ್) ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್‌ಗಾಗಿ ಕೆಎಸ್‌ಡಿಎಲ್ ಅಧ್ಯಕ್ಷರ ( ಮಾಡಾಳು ವಿರೂಪಾಕ್ಷಪ್ಪ) ಪರವಾಗಿ ಗುತ್ತಿಗೆದಾರರೊಬ್ಬರಿಗೆ 81ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಬಳಿಕ 40 ಲಕ್ಷ ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿ ಪ್ರಶಾಂತ್ ಮಾಡಾಳು ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

Ad Widget

Ad Widget

ಬಳಿಕ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಪರಿಶೀಲಿಸಿದಾಗ 6 ಕೋಟಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹಣದ ಕಂತೆ ಕಂಡು ದಾಳಿ ಮಾಡಿದ ಅಧಿಕಾರಿಗಳಿಗೆ ಅಚ್ಚರಿಯಾಗಿದೆ. ಹಣವನ್ನು ಎಣಿಕೆ ಮಾಡುವ ದೃಶ್ಯ ವೈರಲ್ ಆಗಿದೆ.

Ad Widget

Ad Widget

Ad Widget

ಕಾರ್ಯಾಚರಣೆ ಹೇಗಿತ್ತು? ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್, ಕೆಎಸ್‌ಡಿಎಲ್‌ನ ಕಚ್ಚಾ ವಸ್ತುಗಳ ಪೂರೈಕೆ ಮಾಡಲು ಟೆಂಟರ್ ನೀಡಲು ಗುತ್ತಿಗೆದಾರರೊಬ್ಬರಿಗೆ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿರುವ ತಮ್ಮ ತಂದೆ ಮಾಡಾಳು ವಿರೂಪಾಕ್ಷಪ್ಪ ಅವರ ಪರವಾಗಿ 81 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು 40 ಲಕ್ಷ ರೂ.ಲಂಚವನ್ನು ನಗದು ರೂಪದಲ್ಲಿ ಪಡೆಯಲು ಮುಂದಾಗಿದ್ದರು. ಲಂಚ ನೀಡಲು ಇಚ್ಛಿಸದ ಗುತ್ತಿಗೆದಾರ ಈ ಸಂಬಂಧ ಲೋಕಾಯುಕ್ತ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತದ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ 40 ಲಕ್ಷ ನಗದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ಟ್ರಾಪ್ ಕಾರ್ಯಾಚರಣೆ ವೇಳೆ ಐವರು ಬಲೆಗೆ ಬಿದ್ದಿದ್ದು ಸಿಕ್ಕಿರುವ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಶ್ಯಪ್ ಕಂಪನಿಯ ಮೂವರೊಂದಿಗೆ 40 ಲಕ್ಷ ರೂ. ತಂದಿದ್ದರು. ಸದ್ಯ ಪ್ರಶಾಂತ್, ಆತನ ಅಕೌಟೆಂಟ್ ಹಾಗೂ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಐವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಶಾಸಕರ ಮನೆಯ ಮೇಲೆಯೂ ದಾಳಿ..! ಇತ್ತ ಪುತ್ರ ಪ್ರಶಾಂತ್ ಅವರ ಬಂಧನವಾಗುತ್ತಿದಂತೆ ಅತ್ತ ಡಾಲರ್ಸ್ ಕಾಲನಿಯಲ್ಲಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲೆಯೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ದಾಳಿಯ ವೇಳೆ ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಪ್ರಶಾಂತ್ ಅವರು 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಟ್ರ್ಯಾಪ್ ಮಾಡಿದ 40 ಲಕ್ಷ ರೂ. ನಗದು ಹಾಗೂ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ನಗದು ಪತ್ತೆಯಾಗಿದೆ. ಈ ಸಂಬಂಧ ಹಲವು ಸ್ಥಳಗಳ ಮೇಲೆ ಮಾಡಲಾಗುತ್ತಿದೆ. ಕಚೇರಿಯಲ್ಲಿ ಸಿಕ್ಕಿರುವ ಹಣದ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಐಜಿ ಸುಬ್ರಮಣ್ಯರಾವ್ ಹೇಳಿದ್ದಾರೆ.

Click to comment

Leave a Reply

ಅಂತರ ರಾಜ್ಯ

PM Modi-ಮುಂದಿನ 5 ವರ್ಷ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರಿಗೂ ತಕ್ಕ ಶಾಸ್ತ್ರಿ ಮಾಡಲಾಗುವುದು : ನರೇಂದ್ರ ಮೋದಿ

Ad Widget

Ad Widget

Ad Widget

Ad Widget

ಎನ್‌ಡಿಎ ಸರಕಾರ ಭ್ರಷ್ಟರ ನಿಜ ಬಣ್ಣವನ್ನು ಬಯಲು ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರಿಗೂ ಕಾನೂನಿನ ಪ್ರಕಾರ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

Ad Widget

Ad Widget

Ad Widget

ಝಾರ್ಖಂಡ್‌ನ ಪಲಮು ಮತ್ತು ಸಿಸಾಯ್‌ನಲ್ಲಿ ಚುನಾವಣಾ ರ್‍ಯಾಲಿಗಳಲ್ಲಿ ಮಾತನಾಡಿದ ಪ್ರಧಾನಿ, ಜೈಲಲ್ಲಿರುವ ಝಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಹೆಸರೆತ್ತದೇ ಪರೋಕ್ಷವಾಗಿ ಅವರನ್ನು ಉಲ್ಲೇಖಿಸಿದ ಮೋದಿ, ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂಡಿಯಾ ಒಕ್ಕೂಟವು ಜೈಲಲ್ಲಿರುವ ಭ್ರಷ್ಟರನ್ನು ಬೆಂಬಲಿಸಿ ರ್‍ಯಾಲಿ ನಡೆಸುತ್ತದೆ. ಇದು ಅವರ ನೈಜ ಮುಖವನ್ನು ಬಯಲು ಮಾಡಿದೆ’ ಎಂದಿದ್ದಾರೆ.

Ad Widget

‘ಕಾಂಗ್ರೆಸ್‌ನವರು ಹೇಡಿಗಳು. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಹಿಂದಿನ ಕಾಂಗ್ರೆಸ್ ಸರಕಾರ ಜಾಗತಿಕ ವೇದಿಕೆಯಲ್ಲಿ ಹೋಗಿ ಅಳುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪಾಕಿಸ್ಥಾನವೇ ಅಳುತ್ತಾ, ಸಹಾಯಕ್ಕಾಗಿ ಬೊಬ್ಬಿರಿಯುತ್ತಿದೆ’ ಎಂದರು.

Ad Widget

Ad Widget

ಕಾಂಗ್ರೆಸ್ ಸರಕಾರವು ಶಾಂತಿಯ ನಿರೀಕ್ಷೆಯಲ್ಲಿ ಪಾಕಿಸ್ಥಾನಕ್ಕೆ ಲವ್ ಲೆಟರ್ ಬರೆಯುತ್ತಿತ್ತು. ಅದಕ್ಕೆ ಬದಲಾಗಿ ನೆರೆರಾಷ್ಟ್ರವು ಮತ್ತಷ್ಟು ಉಗ್ರರನ್ನು ಇಲ್ಲಿಗೆ ಕಳುಹಿಸುತ್ತಿತ್ತು. ಈಗಿರುವುದು ನವ ಭಾರತ. ಇಲ್ಲಿ ನಾವು ಉಗ್ರರ ನೆಲಕ್ಕೇ ನುಗ್ಗಿ ಹೊಡೆದು ಬರುತ್ತೇವೆ. ಅದೇ ಕಾರಣಕ್ಕೆ ಪಾಕಿಸ್ಥಾನವು ‘ಶಹಜಾದಾ’ (ರಾಹುಲ್) ಪ್ರಧಾನಿಯಾಗಲೆಂದು ಬೇಡುತ್ತಿದೆ’ ಎಂದಿದ್ದಾರೆ.

Ad Widget

Ad Widget

Ad Widget
Continue Reading

ಅಂತರ ರಾಜ್ಯ

Suvendu Adhikari’s-ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಹೊಸ ತಿರುವು : ಬಿಜೆಪಿ ನಾಯಕರೊರ್ವರ ವಿಡಿಯೋ ವೈರಲ್ : ಸುವೇಂದು ಅಧಿಕಾರಿ ಸೂಚನೆಯಂತೆ ಪ್ರಕರಣ ಸೃಷ್ಟಿ..?

Ad Widget

Ad Widget

Ad Widget

Ad Widget

ಕೋಲ್ಕೋತಾ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಪಶ್ಚಿಮ ಬಂಗಾಳದ ಸಂದೇಶ್‌ ಖಾಲಿ ಮಹಿಳಾ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

Ad Widget

Ad Widget

Ad Widget

ಮಹಿಳಾ ದೌರ್ಜನ್ಯದ ಆರೋಪಗಳನ್ನು ಬಿಜೆಪಿ ನಾಯಕರೊಬ್ಬರ ನಿರ್ದೇಶನದಂತೆ ರೂಪಿಸಲಾಗಿತ್ತು ಎಂದು ಹೇಳಲಾಗಿರುವ ವಿಡಿಯೊವೊಂದು ವೈರಲ್ ಆಗಿದೆ. ಬಿಜೆಪಿಯ ಮಂಡಲ ಸಭಾಪತಿ ಗಂಗಾಧರ್ ಕೋಯಲ್ ಅವರದು ಎನ್ನಲಾದ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, “ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೂಚನೆಯಂತೆ ಸಂದೇಶ್‌ ಖಾಲಿ ಪ್ರಕರಣ ಸೃಷ್ಟಿಸಲಾಯಿತು. ಮಹಿಳೆಯರಿಂದ ದೂರು ಕೊಡಿಸಲಾಯಿತು. ಆದರೆ, ಅಂತಹ ಯಾವುದೇ ದೌರ್ಜನ್ಯಗಳು ನಡೆದೇ ಇಲ್ಲ,” ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

Ad Widget

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ, “ಬಿಜೆಪಿ ನಾಯಕರಿಂದ ಸತ್ಯ ಹೊರಬಿದ್ದಿದೆ. ಇಡೀ ಪ್ರಕರಣ ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ. ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಎಲ್ಲವೂ ಬಿಜೆಪಿ ನಾಯಕರೇ ಮಾಡಿದ್ದಾರೆ. ಟಿಎಂಸಿ ಪಕ್ಷಕ್ಕೆ ಕೆಟ್ಟ ಹೆಸರು ತರಲು ಹೂಡಿದ ಷಡ್ಯಂತ್ರ ಅನ್ನೋದು ಸಾಬೀತಾಗಿದೆ,” ಎಂದು ವಿರುದ್ಧ ವಾಗ್ದಾಳಿ ನಡೆಸಿದರು.

Ad Widget

Ad Widget

ವೈರಲ್ ವಿಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗಾಧರ್ ಕೋಯಲ್, “ಹೊಸ ತಂತ್ರಜ್ಞಾನ ಬಳಸಿಕೊಂಡು ನನ್ನ ಧ್ವನಿಯನ್ನು ಎಡಿಟ್ ಮಾಡಿ, ವಿಡಿಯೊ ಹರಿಬಿಡಲಾಗಿದೆ. ಇದೆಲ್ಲಾ ಟಿಎಂಸಿ ಕುತಂತ್ರ,” ಎಂದು ಆರೋಪಿಸಿದ್ದಾರೆ.

Ad Widget

Ad Widget

Ad Widget

ಇದೇ ವೇಳೆ ನಕಲಿ ಅಥವಾ ಡೀಪ್‌ ಫೇಕ್ ವಿಡಿಯೊ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಬಿಜೆಪಿ ನಾಯಕರು ದೂರು ನೀಡಿದ್ದಾರೆ.

Continue Reading

ಅಂತರ ರಾಜ್ಯ

Kangana Ranaut-ತೇಜಸ್ವಿ ಸೂರ್ಯ ಯುಗಾದಿ ಹಬ್ಬದ ವೇಳೆ ಮೀನು ತಿಂದು ಗೂಂಡಾಗಿರಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ : ವಿವಾದಾತ್ಮಕ ನಟಿ , ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಪ್ರತಿಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಬಾಯಿ ತಪ್ಪಿ ಸ್ವಪಕ್ಷದ ಸಂಸದರನ್ನೇ ಟೀಕಿಸಿದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಣಾವತ್ ಮುಜುಗರಕ್ಕೀಡಾದ ಘಟನೆ ನಡೆದಿದೆ.

Ad Widget

Ad Widget

Ad Widget

ಬಿಹಾರ ಮಾಜಿ ಡಿಸಿಎಂ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರೇಳಿ ವಾಗ್ದಾಳಿ ನಡೆಸುವ ಬದಲು, ʻಯುಗಾದಿ ಹಬ್ಬದ ವೇಳೆ ಮೀನು ತಿಂದ ಘಟನೆ ಉಲ್ಲೇಖಿಸಿ ಗೂಂಡಾಗಿರಿ ಮಾಡಿಕೊಂಡು ಮೀನು ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿರುವ ತೇಜಸ್ವಿ ಸೂರ್ಯ,” ಎಂದು ಕಂಗನಾ ಹೇಳಿದರು. ತಪ್ಪು ಹೆಸರೇಳಿದ ಅರಿವಾದ ಕೂಡಲೇ, ”ಕ್ಷಮಿಸಿ, ತೇಜಸ್ವಿ ಯಾದವ್ ಹೆಸರೇಳುವ ಬದಲು ಸೂರ್ಯ ಎಂದೇಳಿದೆ,” ಎಂದು ಸಮಜಾಯಿಷಿ ನೀಡಿದರು.

Ad Widget

ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ವಿರುದ್ಧ ಕಿಡಿಕಾರಿದ ಕಂಗನಾ, “ಹಾಳಾದ ಎರಡು ಪಕ್ಷಗಳಲ್ಲಿ ಇಬ್ಬರು ರಾಜಕುಮಾರರಿದ್ದಾರೆ. ಒಬ್ಬರು (ರಾಹುಲ್ ಗಾಂಧಿ) ಚಂದ್ರನ ಅಂಗಳದಲ್ಲಿ ಆಲೂಗಡ್ಡೆ ಬೆಳೆಯುವ ಬಯಕೆ ವ್ಯಕ್ತಪಡಿಸಿದರೆ, ತೇಜಸ್ವಿ ಸೂರ್ಯ ಎಂಬಾತ ಹಿಂದೂಗಳಿಗೆ ಅವಮಾನ ಮಾಡಲು ಹಬ್ಬದ ಸಮಯದಲ್ಲಿ ಮೀನು ತಿಂದು ಮಾಡಿಕೊಂಡಿದ್ದಾನೆ,” ಎಂದು ಟೀಕಿಸಿದರು.

Ad Widget

Ad Widget

ಬಾಯಿ ತಪ್ಪಿ ಹೇಳಿಕೆ ನೀಡಿದ ಕಂಗಾನಾ ವಿಡಿಯೊ ವೈರಲ್ ಆದ ಬೆನ್ನಿಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಯಾದವ್, “ಬಾಯಿಗೆ ಬಂದಂತೆ ಮಾತನಾಡುವ ಈ ಮಹಿಳೆ ಯಾರು?,” ಎಂದು ಪ್ರಶ್ನಿಸಿದ್ದಾರೆ.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading