ಪುತ್ತೂರು
Puttur By Election | ಪುತ್ತೂರು ನಗರಸಭೆ ಉಪಚುನಾವಣೆ : ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಬಿಜೆಪಿ ಸೇರ್ಪಡೆ
ಪುತ್ತೂರು : ಪುತ್ತೂರಿನಲ್ಲಿ ನಗರಸಭೆ ಉಪಚುನಾವಣೆಯ (Puttur By Election) ಕಾವು ಕಾವೇರಿದೆ. ಈ ನಡುವೆ ಕಾಂಗ್ರೇಸ್ನ ಟಿಕೇಟ್ ಆಕಾಂಕ್ಷಿಯೊರ್ವ ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ.
ನೆಲ್ಲಿಕಟ್ಟೆ ವಾರ್ಡ್ ನಂ.11ರಲ್ಲಿ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತ ರೋಹಿತ್ ಟಿಕೇಟ್ ಆಕಾಂಕ್ಷಿಯಾಗಿದ್ದರು. ಟಿಕೇಟ್ ತನಗೆ ಸಿಕ್ಕಿಲ್ಲ ಎಂದು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆಯಾದರು.
ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ರೋಹಿತ್ ಅವರು ಪಕ್ಷದ ಮುಖಂಡರಿಗೆ ಕೋರಿಕೆ ಸಲ್ಲಿಸಿದ್ದರು. ಆದರೆ ಅವರಿಕೆ ಅವಕಾಶ ದೊರೆಯದೆ ದಾಮೋದರ್ ಭಂಡಾರ್ಕರ್ ಅವರಿಗೆ ಪಕ್ಷ ಅವಕಾಶ ನೀಡಿದೆ. ಇದರಿಂದ ಅಸಮಾಧಾನಗೊಂಡು ರೋಹಿತ್ ಅವರು ಬಿಜೆಪಿ ಅಭ್ಯರ್ಥಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿ ರಮೇಶ್ ರೈಯವರ ಪ್ರಚಾರದಲ್ಲಿ ರೋಹಿತ್ ಪಾಲ್ಗೊಂಡರು.
ನೆಲ್ಲಿಕಟ್ಟೆ ವಾರ್ಡ್ ನಂ.11ರಲ್ಲಿ ಬಿಜೆಪಿಯಿಂದ ರಮೇಶ್ ರೈ , ಕಾಂಗ್ರೇಸ್ನಿಂದ ದಾಮೋದರ್ ಭಂಡಾರ್ಕರ್ ಹಾಗೂ ಪುತ್ತಿಲ ಪರಿವಾರದಿಂದ ಚಿಂತನ್.ಪಿ ಸ್ಪರ್ಧಿಸುವ ಮೂಲಕ ತ್ರಿಕೋಣ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದೆ.
ದಕ್ಷಿಣ ಕನ್ನಡ
Muliya Chinnotsava ಮುಳಿಯ ಚಿನ್ನೋತ್ಸವ ಸ್ಪೆಷಲ್ – ರುದ್ರಾಕ್ಷಿ ಕಲೆಕ್ಷನ್ ಅನಾವರಣ
ಪುತ್ತೂರು: ಶಿವನಿಗೆ ಸಂಬಂಧಿಸಿದ ರುದ್ರಾಕ್ಷ ಕಂಕಣವು ಜನಸಾಮಾನ್ಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹಿಂದೂ ಧರ್ಮದಲ್ಲಿ, ರುದ್ರಾಕ್ಷ ಕಂಕಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ, ಇದು ಜೀವನಕ್ಕೆ ಸಂಬಂಧಿಸಿದ ಕಷ್ಟಗಳು ಮತ್ತು ಸಮಸ್ಯೆಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಂತಹ ರುದ್ರಾಕ್ಷಿಗಳನ್ನು ಇತ್ತೀಚಿಗಿನ ದಿನದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ ರುದ್ರಾಕ್ಷಿ ಕಲೆಕ್ಷನ್ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನಲ್ಲಿ ಅನಾವರಣಗೊಂಡಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ರುದ್ರಾಕ್ಷಿ ಹೊಸ ವಿನ್ಯಾಸದ ಸಂಗ್ರಹವನ್ನು ಅನಾವರಣಗೊಳಿಸಿದರು. ಆರಂಭದಲ್ಲಿ ದೀಪ ಪ್ರಜ್ವಲಿಸಿ, ಬಳಿಕ ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದರು. ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದವನ್ನು ಮುಳಿಯ ಜ್ಯುವೆಲ್ಸ್ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರಿಗೆ ನೀಡಿ ಸಂಸ್ಥೆಗೆ ಶ್ರೀ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿದರು.
ಆರೋಗ್ಯ ಪೂರಿತ ಜೀವನ ವೃದ್ಧಿಸಲು ರುದ್ರಾಕ್ಷಿ ಮಹತ್ವ ಪಡೆದಿದೆ:
ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಆರೋಗ್ಯ ಪೂರಿತ ಜೀವನವನ್ನು ವೃದ್ಧಿಸಲು ಪೂರಕವಾಗಿ ರುದ್ರಾಕ್ಷಿ ಸರ, ಕೈಯ ಆಭರಣ ಬಹಳ ಮಹತ್ವ ಪಡೆದಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಭಕ್ತಿಯ ಮಾರ್ಗದರ್ಶನ ನೀಡುತ್ತಿರುವ ಮುಳಿಯ ಜ್ಯುವೆಲ್ಸ್ಗೆ ಪರಿವಾರ ಸಹಿತ ಮಹಾಲಿಂಗೇಶ್ವರ ದೇವರ ಪೂರ್ಣ ಅನುಗ್ರಹ ಇರಲಿ. ಗ್ರಾಹಕರಿಗೂ ರುದ್ರಾಕ್ಷಿ ಮಾಲೆಯನ್ನು ಧರಿಸುವ ಯೋಗ ಭಾಗ್ಯ ಬರಲಿ ಎಂದು ಹಾರೈಸಿದರು.
ಮನಸ್ಸಿನ ಆರೋಗ್ಯ ವೃದ್ಧಿಗೆ ರುದ್ರಾಕ್ಷಿ ಅಗತ್ಯ:
ಮುಳಿಯ ಜ್ಯುವೆಲ್ಸ್ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ರುದ್ರಾಕ್ಷಿ ವಿಶೇಷ ಆಭರಣ ಯಾಕೆಂದರೆ ‘ಸುಖಸ್ಯ ಮೂಲ ಧರ್ಮ’ ಎಂದು ಆಚಾರ್ಯರಾಗಿರುವ ಚಾಣಕ್ಯ ಹಿಂದೆ ಹೇಳಿದ್ದಾರೆ. ನಿತ್ಯ ದೇವರ ದ್ಯಾನ ಮಾಡಲು ತುಳಸಿ ಮಾಲೆ, ರುದ್ರಾಕ್ಷಿ ಮಹತ್ವ ಪಡೆದಿದೆ. ಮನಸ್ಸಿನ ಆರೋಗ್ಯ ವೃದ್ದಿಯಾಗಲು ರುದ್ರಾಕ್ಷಿ ಮಹತ್ವ ಪಡೆದಿದದೆ. ಇದನ್ನು ಪ್ರತಿಯೊಬ್ಬರು ಧರಿಸಬಹುದು ಎಂಬುದಕ್ಕೆ ಸಣ್ಣ ಸಣ್ಣ ರುದ್ರಾಕ್ಷಿಯನ್ನು ಸಣ್ಣ ಸಣ್ಣ ಮಾಲೆಯನ್ನಾಗಿ ಕೈ ಬಳೆ, ಉಂಗುರವನ್ನಾಗಿ, ಸರವನ್ನಾಗಿ ಸಿದ್ಧಪಡಿಸಲಾಗಿದೆ. ಹಿಂದೆ ಗ್ರಾಹಕರು ಮಾಡಿಸಿ ಧರಿಸುತ್ತಿದ್ದರು. ಇದೀಗ ಗ್ರಾಹಕರಿಗೆ ಅನುಕೂಲವಾಗಲು ರುದ್ರಾಕ್ಷಿ ಕಲೆಕ್ಷನ್ ಸಿದ್ದಪಡಿಸಲಾಗಿದೆ ಎಂದರು
ಆರ್ಡರ್ ಕೊಟ್ಟು ಮಾಡಿಸುವ ಬದಲು ನೇರ ಬಂದು ಖರೀದಿ ಮಾಡಬಹುದು. ರುದ್ರಾಕ್ಷ ಮಣಿಗಳ ಕೈ ಬಳೆಯು ಕುತ್ತಿಗೆಗೆ ದೊಡ್ಡ ಮಾಲೆಯನ್ನು ಧರಿಸಲು ಇಷ್ಟಪಡದವರಿಗೆ ಸೂಕ್ತವಾಗಿದೆ ಎಂದ ಅವರು ರುದ್ರಾಕ್ಷಿ ದೇಹಕ್ಕೂ ಮನಸ್ಸಿಗೂ ವೃದ್ದಿ ಸಿಗುತ್ತದೆ. ಕೈ ಆಭರಣ, ಗಂಟಾಭರಣ, ಪೆಂಡೆಂಟ್, ಪದಕ ಸಹಿತ ಹಲವು ಕಲೆಕ್ಷನ್ ನಮ್ಮಲಿ ಇವೆ ಎಂದು ಹೇಳಿದರು.
ಮುಳಿಯ ಜ್ಯುವೆಲ್ಸ್ನ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಕಾರ್ಯ ನಿರ್ವಹಣಾ ಅಧಿಕಾರಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಬಂಧಕರಾದ ಸಂಜೀವ, ಶಂಕರ್ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಣ
Pendulum-ಪುತ್ತೂರು : ಪೆಂಡ್ಯೂಲಮ್ ಡೌಸಿಂಗ್ ತರಗತಿಗಳು ಮೇ. 20ರಿಂದ ಪ್ರಾರಂಭ
ಪುತ್ತೂರಿನ ಎ. ಪಿ. ಎಂ. ಸಿ. ರಸ್ತೆಯ ಅಲ್ಫಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ಇಲ್ಲಿ ಪೆಂಡ್ಯೂಲಮ್ ಡೌಸಿಂಗ್ ತರಗತಿಗಳು ಮೇ. 20ರಿಂದ ಪ್ರಾರಂಭವಾಗಲಿವೆ.
ಈ ತರಗತಿಯಲ್ಲಿ ವಿಶ್ವಶಕ್ತಿಯನ್ನು ಬಳಸಿಕೊಂಡು ನಮ್ಮ ಸಂಕಲ್ಪಗಳಿಗೆ ಶಕ್ತಿ ತುಂಬುವುದು, ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯುವ ವಿಧಾನ. ನಮ್ಮ ದೇಹ ಪ್ರಭಾವಳಿಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುವ ತಂತ್ರ. ಹೀಲಿಂಗ್ ಥೆರಫಿ ಮಾಡುವ ವಿಧಾನ. ನಮ್ಮಲ್ಲಿರುವ ಅನಾರೋಗ್ಯ ಸಮಸ್ಯೆಗಳನ್ನು ಸುಪ್ತ ಪ್ರಜ್ಞೆಯನ್ನು ಬಳಸಿ ಗುಣಪಡಿಸುವ ವಿಧಾನ, ವಾಸ್ತು ನೋಡುವುದು, ಜಲನಿಧಿ ಶೋಧನೆ ಇವೆಲ್ಲವನ್ನೂ ಕಲಿಯಬಹುದಾಗಿದೆ.
ಮೈಸೂರಿನ ಶ್ರೀ ಲಗಧ ಮಹರ್ಷಿ ಜ್ಯೋತಿರ್ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆದ ಶಿವಪ್ರಸಾದ್ ಭಾರದ್ವಾಜ್ ರವರು ಈ ತರಗತಿಗಳನ್ನು ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448410257
ಪುತ್ತೂರು
Sridhar Bhat Brothers-ಪುತ್ತೂರು ಶ್ರೀಧರ್ ಭಟ್ ಬ್ರದರ್ಸ್ ನಲ್ಲಿ ವಿದ್ಯಾರ್ಥಿಗಳಿಗಾಗಿ ನೂತನ ಮಾದರಿಯ ಸ್ಕೂಲ್ ಬ್ಯಾಗ್, ನೋಟ್ ಬುಕ್ ಲಭ್ಯ
ಪುತ್ತೂರು : ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀಧರ ಭಟ್ ಬ್ರದರ್ಸ್ ಮಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವಂತಹ ಎಲ್ಲಾ ಸಾಮಾಗ್ರಿಗಳು ಲಭ್ಯವಿರುತ್ತದೆ.
ವಿವಿಧ ಮಾದರಿಯ ಬ್ಯಾಗ್, ನೋಟ್ ಬುಕ್ಸ್, ಟಿಪಿನ್ ಬಾಕ್ಸ್ ಮತ್ತು ಟಿಪಿನ್ ಬ್ಯಾಗ್, ಕೊಡೆ ಮತ್ತು ರೈನ್ಕೋಟ್ಗಳ ಹೊಸ ಸಂಗ್ರಹ ಲಭ್ಯವಿದ್ದು, ವಿದ್ಯಾರ್ಥಿಗಳು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಮಾಲಕರು ತಿಳಿಸಿದ್ದಾರೆ.
-
ಚಿನ್ನ-ಬೆಳ್ಳಿ ದರ2 days ago
Gold Rate Today – ಗೋಲ್ಡ್ಪ್ರಿಯರಿಗೆ ಸಿಹಿ ಸುದ್ದಿ; ಸತತವಾಗಿ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ರೇಟ್
-
ಬಿಗ್ ನ್ಯೂಸ್2 days ago
Puttur | ಪುತ್ತೂರು : ಚಿಕಿತ್ಸೆಗೆ ಬಂದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಮೃತ್ಯು : ಸೇರಿದ ಜನ – ದೂರು ದಾಖಲು
-
ಸುಳ್ಯ2 days ago
ಸುಬ್ರಹ್ಮಣ್ಯ : ಗಾಳಿ – ಮಳೆಯಿಂದ ಕರುವನ್ನು ರಕ್ಷಿಸಲು ತೋಟಕ್ಕೆ ಹೋದ ಮಹಿಳೆಯ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಮೃತ್ಯು
-
ಶಿಕ್ಷಣ2 days ago
8 new courses-ಡಿಪ್ಲೋಮಾದ 8 ಹೊಸ ಕೋರ್ಸ್ಗಳಿಗೆ ಎಂಜಿನಿಯರಿಂಗ್ ಗೆ ಲ್ಯಾಟರಲ್ ಎಂಟ್ರಿಗೆ ಅವಕಾಶ ನೀಡಲು ತೀರ್ಮಾನಿಸಿದ ಉನ್ನತ ಶಿಕ್ಷಣ ಇಲಾಖೆ
-
ಬಿಗ್ ನ್ಯೂಸ್21 hours ago
America Student in Tulunadu | ತುಳುನಾಡಿನ ಮನೆಮಗನಾಗಿರುವ ಅಮೇರಿಕಾದ ಸ್ಯಾಮ್ : ತುಳು ಸಂಸ್ಕೃತಿ ಆಚರಣೆಗೆ ಫಿಧಾ – ಈತನ ತುಳು ಭಾಷೆ ಹೇಗಿದೆ ನೋಡಿ
-
ಬಿಗ್ ನ್ಯೂಸ್21 hours ago
Ullala ISIS Terrorist Activity | ‘ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ’ – ಎನ್ಐಎ ಬಂಧನದಲ್ಲಿರುವ ಉಳ್ಳಾಲದ ಮಾಜಿ ಶಾಸಕ ದಿ.ಇದ್ದಿನಬ್ಬ ಮೊಮ್ಮಗನ ಐಸಿಸ್ ನಂಟು ಕೇಸ್ ನಲ್ಲಿ ಮಹತ್ವದ ಬೆಳವಣಿಗೆ – ದೆಹಲಿ ಹೈಕೋರ್ಟ್ ಜಾಮೀನು – ಆರೋಪ ಸಾಬೀತು ಮಾಡುವಲ್ಲಿ ಎನ್ಐಎ ಗೆ ತೀವ್ರ ಹಿನ್ನಡೆ – ಹೈಕೋರ್ಟ್ ಹೇಳಿದ್ದೇನೂ..? : ಇದಿನಬ್ಬ ಸೊಸೆ ದೀಪ್ತಿ ಮಾರ್ಲಗೆ ಮುಂದುವರಿದ ಶಿಕ್ಷೆ ..!
-
ಸಿನೆಮಾ2 days ago
Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ
-
ಉಡುಪಿ2 days ago
Raghupathi Bhat-ಕಲ್ಕುಡ ದೈವ ಆಶೀರ್ವಾದ ನನಗೆ ಸಿಕ್ಕಿದೆ : ಬಿಜೆಪಿ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ಮೇ.16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ: ಜನಸಂಘದ ಕಾಲದಲ್ಲಿ ಪಕ್ಷ ಕಟ್ಟಿದವರು ನನ್ನ ಚುನಾವಣ ಕಚೇರಿ ಉದ್ಘಾಟಿಸಲಿದ್ದಾರೆ: ರಘುಪತಿ ಭಟ್ ಘೋಷಣೆ