ದಕ್ಷಿಣ ಕನ್ನಡ
ಪುತ್ತೂರು ಮುಳಿಯದಲ್ಲಿ ನ.10ರಿಂದ ನ.30ರವರೆಗೆ ನಡೆಯಲಿರುವ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬ ʼಮುಳಿಯ ಚಿನ್ನೋತ್ಸವʼಕ್ಕೆ ಚಾಲನೆ
ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಎನ್ನುವುದು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಚಿನ್ನ ಸೌಂದರ್ಯ ವರ್ಧಕ ಮಾತ್ರವಲ್ಲದೆ, ಆರೋಗ್ಯ ದೃಷ್ಟಿಯಿಂದಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 78ವರ್ಷ ಗಳಿಂದ ಈ ಸಂಸ್ಥೆ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಇಲ್ಲಿ ಖರೀದಿಸಿದ ಚಿನ್ನಾಭರಣಗಳು ಶುದ್ದತೆಯೊಂದಿಗೆ ಪರಿಪೂರ್ಣೆತೆಯನ್ನು ಹೊಂದಿದೆ ಎಂದು ಪುತ್ತೂರು ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಗೂ ನಿವೃತ್ತ ಸಿಡಿಪಿಒ ಶಾಂತಿ ಟಿ. ಹೆಗಡೆ ಹೇಳಿದರು.
ಅವರು ಶುಕ್ರವಾರ ಪುತ್ತೂರು ಮುಳಿಯದಲ್ಲಿ ನ.10ರಿಂದ ನ.30ರವರೆಗೆ ನಡೆಯಲಿರುವ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬ ಮುಳಿಯ ಚಿನ್ನೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುಳಿಯದ ಆಭರಣಗಳು ಶುದ್ಧತೆಯಿಂದ ಕೂಡಿದ್ದು, ಕಳೆಗುಂದಿಲ್ಲ ಹಾಗೂ ಹೊಳವು ಮಾಸಿಲ್ಲ. ಮಳಿಗೆಯಲ್ಲಿ ಚಿನ್ನಾಭರಣಗಳ ಆಪೂರ್ವ ಸಂಗ್ರಹವಿದ್ದು, ವೈವಿಧ್ಯತೆಗಳು ಹಾಗೂ ಬಹು ಆಯ್ಕೆಗಳಿದ್ದು, ಗ್ರಾಹಕರ ಮೆಚ್ಚುಗೆಯನ್ನು ಪಡೆದಿದೆ. ಸರಳ ಸಜ್ಜನಿಕೆಯ ಮನುಷ್ಯರಿರುವಲ್ಲಿ ಯಶಸ್ಸಿಯಿರುತ್ತದೆ ಎಂದು ತಿಳಿಸಿದರು.
ಚಿನ್ನೋತ್ಸವದ ಮೊದಲ ಗ್ರಾಹಕರಾದ ಮಂಗಳೂರು ಟ್ರಾವೆಲ್ಸ್ ಇಂಡಿಯಾ ಹಾಲಿಡೇಸ್ ಮಾಲಿಕ ಆಕಾಶ್ ರೈ ಮಾತನಾಡಿ ಆಭರಣದ ಹಲವು ಸಂಗ್ರಹ ಇದ್ದು, ವಿವಿಧ ಆಯ್ಕೆಗಳು ಇದೆ. ಮೊದಲ ಬಾರಿ ಚಿನ್ನವನ್ನು ಖರೀದಿಸುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ಸಿಬ್ಬಂದಿಯವರ ಆತ್ಮೀಯತೆ ಹೆಚ್ಚು ಖುಷಿಯನ್ನು ತಂದಿದೆ ಎಂದು ತಿಳಿಸಿದರು.
ಬಂಗಾರ ಬದುಕಿಗೆ ಭರವಸೆ ಆತ್ಮವಿಶ್ವಾಸವನ್ನು ನೀಡುತ್ತದೆ. ಒಳ್ಳೆಯ ಭಾವವನ್ನು ನೀಡುತ್ತಾದೆ. ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂದು ಅಡಳಿತ ನಿರ್ದೇಶಕಿ ಕೃಷ್ಣವೇಣಿ ಮುಳಿಯರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ವಹಿಸಿದ್ದರು. ಶಾಖ ಪ್ರಭಂದಕ ಪ್ರಸ್ತಾವನೆಗೈದರು. ಯತೀಶ್ ಸ್ವಾಗತಿಸಿ, ಪ್ರವೀಣ್ ಧನ್ಯವಾದ ತಿಳಿಸಿದರು.
ಬಿಗ್ ನ್ಯೂಸ್
ಬಂಧಿತ ರೌಡಿ ಶೀಟರ್, ಅಕ್ರಮ ಕಲ್ಲುಗಾಣಿಗಾರಿಕೆಯ ಆರೋಪಿ ಬಿಜೆಪಿ ಮುಖಂಡನನ್ನು ಕಾನೂನು ಬಾಹಿರವಾಗಿ ರಿಲೀಸ್ ಮಾಡುವಂತೆ ಶಾಸಕ ಪಂಜಾರಿಂದ ಪೊಲೀಸರಿಗೆ ಒತ್ತಡ,ಬೆದರಿಕೆ ಅವ್ಯಾಚವಾಗಿ ನಿಂದನೆ : FIR ದಾಖಲು; ಆರೋಪಿ ಪರ ನಿಂತ ಶಾಸಕರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಿಯನ್ನು ಬಂಧಿಸಿದನ್ನು ಪ್ರಶ್ನಿಸಿ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿ ತನ್ನ ಪಕ್ಷದ ಕಾರ್ಯಕರ್ತನಾಗಿರುವ ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಕಲ್ಲಿನ ಕೋರೆಗೆ ದಾಳಿ ಮಾಡಿದ ಪೊಲೀಸರು ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಅಕ್ರಮವಾಗಿ ಸ್ಫೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದರು. ಇನ್ನೊರ್ವ ಆರೋಪಿ ಬಿಜೆಪಿ ಪ್ರಮೋದ್ ಉಜಿರೆ ವಿರುದ್ದವು ಇದೆ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಶಶಿರಾಜ್ ಶೆಟ್ಟಿಯ ಬಂಧಿಸಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ತನ್ನ ಪಟಲಾಂನೊಂದಿಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಕಾನೂನು ಬಾಹಿರವಾಗಿ ಹೊರತರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಠಾಣೆಯ ಮುಂದೆ ಧರಣಿ ನಡೆಸಿ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಈ ವೇಳೆ ಪೊಲೀಸರಲ್ಲಿ ಆರೋಪಿಯನ್ನು ತಕ್ಷಣ ಬಿಡುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಠಾಣೆ ನಿಮ್ಮ ಅಪ್ಪನದ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ಶಾಸಕ ಪೂಂಜಾ ಮುಂದೆ ನನ್ನ ಸರಕಾರ ಬರುತ್ತಾದೆ. ಆಗ ಇಲ್ಲಿನ ಸಿಬ್ಬಂದಿಯನ್ನು ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೂಂಜಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ರೌಡಿಶೀಟರ್ ಪರ , ಅದರಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದ ಪರವಾಗಿ ಒಬ್ಬ ಚುನಾಯಿತ ಶಾಸಕರು ಠಾಣೆಯಲ್ಲಿ ಬಂದು ಕೂಗಾಡಿದ್ದು ಅಕ್ಷಮ್ಯ ತಪ್ಪು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಲೇ, ಠಾಣೆಯ ಒಳಗಡೆ ನೆಲದ ಮೇಲೆ ಕೂತು ಆರೋಪಿಯನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಪೂಂಜಾ ತನ್ನ ಬೆಂಬಲಿಗರ ಜತೆ ಧರನಿ ನಡೆಸಿದ್ದರು. ಆದರೆ ಯಾವುದೇ ಒತ್ತಡಗಳಿಗೆ ಮಣಿಯದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಶಿರಾಜ್ ಶೆಟ್ಟಿಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
FIRನಲ್ಲಿ ಏನಿದೆ ?
ಇದೀಗ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು, ಇತರ ಕೆಲವು ಜನರೊಂದಿಗೆ, ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಶಾಸಕರು ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು FIRನಲ್ಲಿ ನಮೋದಿಸಲಾಗಿದೆ.
ಶಾಸಕರಾದ ಹರೀಶ್ ಪೂಂಜಾರವರ ವಿರುದ್ಧ IPC ಕಲಂ:353, 504 ರಂತೆ ಪ್ರಕರಣ ದಾಖಲಾಗಿದೆ.
ಉದ್ಯೋಗ
Bindu’s-ಬೆಂಗಳೂರಿನ ಬನಶಂಕರಿಯಲ್ಲಿ ಬಿಂದುವಿನ 7ನೇ ಫ್ಯಾಕ್ಟರಿ ಔಟ್ ಲೆಟ್ ಶುಭಾರಂಭ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ತಂಪು ಪಾನೀಯ ತಯಾರಿಕಾ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಬಿಂದುವಿನ 7ನೇ ಫ್ಯಾಕ್ಟರಿ ಔಟ್ಲೆಟ್ ಬೆಂಗಳೂರಿನ ಬನಶಂಕರಿಯಲ್ಲಿ ಮೇ 10ರಂದು ಶುಭಾರಂಭಗೊಂಡಿತು. ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕಿ ಮೇಘಾ ಶಂಕರ್ರವರು ಔಟ್ಲೆಟ್ನ್ನು ಉದ್ಘಾಟಿಸಿದರು.
ಸಂಸ್ಥೆಯ ಸಿಇಓ ಸುಶಿಲ್ ವೈದ್ಯ ಮಾತನಾಡಿ ಗ್ರಾಹಕರ ಮೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು, ಸಿಪ್ ಆನ್, ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ಫ್ರೂಝಾನ್ ಬ್ರಾಂಡ್ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ನ್ಯಾಕ್ಸ್ ಅಪ್ ಬ್ರಾಂಡ್ನ ಸ್ನ್ಯಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ ಸುಮಾರು 50ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದಕ್ಷಿಣ ಭಾರತದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ಲಭ್ಯವಿದೆ. ನಮ್ಮ ಎಲ್ಲಾ ಉತ್ಪನ್ನಗಳು ಬಿಂದು ಫ್ಯಾಕ್ಟರಿ ಔಟ್ಲೆಟ್ನಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಎಂದರು ಹಾಗೂ ಸಂಸ್ಥೆಯ ಸಿಇಓ ಸುಶಿಲ್ ವೈದ್ಯರವರು ಪ್ರಥಮ ಖರೀದಿ ಮಾಡಿದರು.
1 ಕರ್ನಾಟಕದಲ್ಲಿ 50 ಫ್ಯಾಕ್ಟರಿ ಔಟ್ಲೆಟ್ಗಳನ್ನು ಈ ಒಂದು ವರ್ಷದಲ್ಲಿ ಆರಂಭಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
2 ಮುಂಬರುವ 5 ವರ್ಷದಲ್ಲಿ 500 ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರಿಂದ ಸಮಾಜದಲ್ಲಿ ಉದ್ಯೋಗವಕಾಶ ದೊರೆಯಲಿದೆ ಎಂದು ಹೇಳಿದರು.
3 ಮೇಘಾ ಫೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಎಲ್ಲಾ ರಾಜ್ಯಗಳಲ್ಲಿ ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು,
ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕರಾದ ಮನಸ್ವಿತ್ ಶಂಕರ್, ನ್ಯಾಷನಲ್ ಕಮರ್ಷಿಯಲ್ ಬ್ರಾಂಡಿಂಗ್ ಮ್ಯಾನೇಜರ್ ಹರಿಪ್ರಸಾದ್, ಬಿಸಿನೆಸ್ ಹೆಡ್ ದೇವರಾಜ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Mandovi-ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ಮೇ 17, 18ರಂದು ಮೆಗಾ ಎಕ್ಸ್ಚೇಂಜ್, ಲೋನ್ ಮೇಳ
ಪ್ರತ್ತೂರು: ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮೆಗಾ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಮೇ 17 ರಂದು ಗೂಡ್ಸ್ ಲಾರಿ ಮಾಲಕ ಚಾಲಕ ಸಂಘ ದರ್ಬೆ ಇದರ ಬಳಿ ಹಾಗೂ ಪುರುಷರಕಟ್ಟೆ ಜಂಕ್ಷನ್ ನಲ್ಲಿ ಉದ್ಘಾಟನೆಗೊಂಡಿತು. ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ಎಕ್ಸ್ಚೇಂಜ್ ಹಾಗೂ ಲೋನ್ ಮೇಳವು ಮೇ 18 ರಂದು ಕೊನೆಗೊಳ್ಳಲಿದೆ. ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.
ವಿಶೇಷ ರಿಯಾಯಿತಿ: ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಕೃಷಿಕರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ಹರಿಕಿರಣ್ ರೈ ಎಸ್. 7259 014047, ಸುಮಿತ್ ಎನ್. 7259014043, ಆಕಾಂಶ 7795034056, ಇಬ್ರಾಹಿಂ ನಬೀಲ್ 7022126707 ಅವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಾರುತಿ ಸುಜುಕಿಯವರ ಹೊಸ ಕಾರು ದ ಎಪಿಕ್ ನ್ಯೂ ಸ್ವಿಫ್ಟ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು ಇದರ ಬುಕ್ಕಿಂಗ್ ಆರಂಭಗೊಂಡಿದೆ.
-
ಬಿಗ್ ನ್ಯೂಸ್15 hours ago
ಬೆಳ್ತಂಗಡಿ : ಅಕ್ರಮ ಕಲ್ಲುಗಣಿಗಾರಿಕೆಗೆ ದಿಡೀರ್ ಪೊಲೀಸ್ ದಾಳಿ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ – ಬಂಧಿತನ ಬಿಡಿಸಲು ಬೆಳಿಗ್ಗೆವರೆಗೆ ಠಾಣೆಯಲ್ಲಿ ನೆಲದಲ್ಲಿ ಕುಳಿತ ಶಾಸಕ ಪೂಂಜಾ : ಕ್ಯಾರೇ ಮಾಡದ ಪೊಲೀಸರು – ಪೊಲೀಸರಿಗೆ ಠಾಣೆಯೊಳಗೆ ಬೆದರಿಕೆ ಹಾಕಿದ ಶಾಸಕ..!
-
ಚಿನ್ನ-ಬೆಳ್ಳಿ ದರ1 day ago
Gold Rate Today -ಗೋಲ್ಡ್ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆಯಾದ ಚಿನ್ನ, ಬೆಳ್ಳಿ ದರ – ಇಲ್ಲಿದೆ ಇವತ್ತಿನ ರೇಟ್
-
ಸ್ಥಳೀಯ2 days ago
Tumakuru-ಬರದಿಂದ ಬಸವಳಿದು ಅಡಕೆಯತ್ತ ಮುಖಮಾಡಿದ ತುಮಕೂರಿನ ರೈತರು; 4 ವರ್ಷದಲ್ಲಿ 32 ಸಾವಿರ ಹೆಕ್ಟೇರ್ ಅಡಕೆ ಪ್ರದೇಶ ಹೆಚ್ಚಳ
-
Uncategorized2 days ago
Pavitra jayaram ನಟಿ ಪವಿತ್ರಾ ಸಾವಿನಿಂದ ನೊಂದು ಸಹನಟ ಚಂದು ಆತ್ಮಹತ್ಯೆ ; ತೆಲುಗು ಕಿರುತೆರೆ ಶಾಕ್
-
ಸಿನೆಮಾ2 days ago
Devil | ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್ʼ ಗೆ ನಾಯಕಿಯಾಗಿ ಆಯ್ಕೆಯಾದ ಪುತ್ತೂರಿನ ರಚನಾ ರೈ
-
ನಿಧನ ವಾರ್ತೆ1 day ago
Pavithra Jayaram-ಪವಿತ್ರಾ ಜಯರಾಂಗೆ ನನ್ನ ಪತಿ ಚಂದು ಆರನೇಯವನು : ನಟ ಚಂದ್ರಕಾಂತ್ ಪತ್ನಿ ಶಿಲ್ಪಾ ಗಂಭೀರ ಆರೋಪ
-
ಅಂತರ ರಾಜ್ಯ1 day ago
Priest-ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಖಾಸಗಿ ಟಿವಿ ನಿರೂಪಕಿಯ ಅತ್ಯಾಚಾರವೆಸಗಿದ ಅರ್ಚಕ
-
ಅಂತರ ರಾಜ್ಯ2 days ago
Delhi-ದೆಹಲಿ ಮದ್ಯ ನೀತಿ ಪ್ರಕರಣ; ಆಮ್ ಆದ್ಮಿ ಪಕ್ಷ ಆರೋಪಿ; ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿಸಿದ ದೇಶದ ಮೊದಲ ಕೇಸ್