ದಕ್ಷಿಣ ಕನ್ನಡ
Police Failure: ಪುತ್ತೂರು : ಜನಸಂದಣಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಬೀಭತ್ಸ ಕೊಲೆಗಳು – ಪೇಟೆಗೆ ಬರಲು ಜನರಿಗೆ ಭಯ..! ಪೊಲೀಸರು ಎಚ್ಚರಿಕೆ ವಹಿಸಿದ್ರೆ ಈ 5 ಕೊಲೆಗಳನ್ನು ತಡೆಯಬಹುದಿತ್ತು
ಕಳೆದ ಕೆಲ ವರ್ಷಗಳಲ್ಲಿ ಹುಲಿ ಕುಣಿತ ವೇಷ ತಂಡದಲ್ಲಿ ಭಾರೀ ಖ್ಯಾತಿಯನ್ನು ಸಂಪಾದಿಸಿದ ಕಲ್ಲೇಗ ಟೈಗರ್ಸ್ ನ ಅಕ್ಷಯ್ (26) ಹತ್ಯೆಯ ರೀತಿ ಮತ್ತು ಕಾರಣ ಜನಮಾನಸದಲ್ಲಿ ಭೀತಿ ಸೃಷ್ಟಿಸಿದ್ದು, ಪುತ್ತೂರು ನಗರದಾದ್ಯಂತ ಭಯದ ವಾತವಾರಣ ಉಂಟು ಮಾಡಿದೆ. ಕೋಮು ವಿಷಯ ಹೊರತು ಪಡಿಸಿ ಪುತ್ತೂರು ಪೇಟೆ ಅತ್ಯಂತ ಶಾಂತ ಹಾಗೂ ನೆಮ್ಮದಿಯ ಪ್ರದೇಶ ಎಂದೆ ಬಿಂಬಿತವಾಗಿತ್ತು. ಕೋಮು ವಿಚಾರದಲ್ಲೂ ಕಳೆದೆರಡು ದಶಕಗಳಲ್ಲಿ ಹೇಳಿಕೊಳ್ಳುವಂತಹ ಗಲಾಟೆ, ಗಲಭೆ ನಡೆದದ್ದಿಲ್ಲ.
1980ರಿಂದ 90ರ ದಶಕದವರೆಗೆ ಪುತ್ತೂರು ಪೇಟೆಯಲ್ಲಿ ಗೂಂಡಾಗಳ ಕಾರುಬಾರು ಇದ್ದಿದ್ದು ನಿಜ . ಬೊಳ್ವಾರು ಹಾಗೂ ದರ್ಭೆ ಎಂಬ ಎರಡು ಗ್ಯಾಂಗ್ ಗಳು ಪರಸ್ಪರ ಇಲ್ಲಿ ಕಾದಾಟ ನಡೆಸುತ್ತಿದ್ದವು. ಈ ಸಂದರ್ಭ ಮಚ್ಚಿನೆಟ್ಟಿಗೆ , ಗುಂಡಿನ ದಾಳಿಗೆ ಕೆಲ ಹೆಣಗಳು ಇಲ್ಲಿ ಉರುಳಿದ್ದವು. ಬಳಿಕದ ದಿನಗಳಲ್ಲಿ ಬಾಬ್ರಿ ಮಸೀದಿ ವಿವಾದ ಸೌಮ್ಯ ಭಟ್ ಹಾಗೂ ಅಕ್ಷತ ಕೊಲೆ ಪ್ರಕರಣ ಸಂದರ್ಭ ಪುತ್ತೂರು ಉದ್ವೀಗ್ನ ದಿನಗಳನ್ನು ಕಂಡಿತಾದರೂ ಬಳಿಕದ ದಿನಗಳಲ್ಲಿ ಇಲ್ಲಿ ಶಾಂತಿ ನೆಲೆಸಿತ್ತು, ನೆಮ್ಮದಿ ಕಾಣಿಸಿತ್ತು. ಆದರೇ ಕಳೆದ ಕೆಲ ವರ್ಷಗಳಲ್ಲಿ ಇಲ್ಲಿ ಉತ್ತರ ಭಾರತದ ಮಾದರಿ ಕೊಲೆಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
ಕೌಟುಂಬಿಕ ಕಲಹಕ್ಕೂ , ವೈಯುಕ್ತಿಕ ದ್ವೇಷಕ್ಕೂ ಕೊಲೆಗಳು ಎಲ್ಲ ಕಡೆಗಳಲ್ಲಿ ನಡೆಯುವುದು ಸಾಮಾನ್ಯ . ಪ್ರತಿ ಠಾಣೆಯಲ್ಲಿ ಪ್ರತಿ ವರ್ಷವು ಈ ರೀತಿಯ ಕನಿಷ್ಟ ಒಂದಾದರೂ ಪ್ರಕರಣ ದಾಖಲಾಗುತ್ತಿರುತ್ತದೆ. ಆದರೇ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ಸಿನಿಮೀಯ ಶೈಲಿ ಕೊಲೆಗಳು. ಜನನಿಬಿಡ ಪ್ರದೇಶದಲ್ಲಿ ಮಾರಕಾಯುಧಗಳನ್ನು ಬಳಸಿ ಅತ್ಯಂತ ಬರ್ಬರವಾಗಿ, ಬೀಭತ್ಸವಾಗಿ, ಅಟ್ಟಾಡಿಸಿ ಹತ್ಯೆ ಮಾಡಲಾಗುತ್ತಿದೆ.
4 ವರ್ಷದಲ್ಲಿ 5 ಬೀಭತ್ಸ ಹತ್ಯೆ
2019ರಲ್ಲಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಂಪ್ಯ ಠಾಣೆಯ ಕೂಗಳತೆ ದೂರದಲ್ಲಿ ನೂರಾರು ಜನರ ಸಮ್ಮುಖ ಹಿಂದೂ ಸಂಘಟನೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆ ನಡೆಸಲಾಗಿತ್ತು. ಕಿರಣ್, ಚರಣ್ ಹಾಗೂ ಪ್ರಿತೇಶ್ ಎಂಬವರು ಹಲವು ಬಾರಿ ಇರಿದು ಹತ್ಯೆ ಮಾಡಿದ್ದರು. ಈ ಹತ್ಯೆಯ ಕಾರಣವಾಗಿ ಹಲವು ಊಹಾಪೋಹಗಳು ಸೃಷ್ಟಿಯಾಗಿತ್ತಾದರೂ ಪೊಲೀಸರು ನಿಖರ ಕಾರಣ ಇವತ್ತಿನವರೆಗೆ ತಿಳಿಸಿಲ್ಲ. ಈ ಹತ್ಯೆ ನಡೆವ ಕೆಲ ತಿಂಗಳುಗಳ ಹಿಂದೆ ನಡೆದ ಹಲ್ಲೆ ಪ್ರಕರಣವೊಂದರ ಮುಂದುವರಿದ ಭಾಗವಾಗಿ ಕಾರ್ತಿಕ್ ಹತ್ಯೆ ನಡೆದಿತ್ತು ಎಂದು ಹೇಳಲಾಗಿತ್ತಾದರೂ, ಆ ಹಲ್ಲೆ ಪ್ರಕರಣದ ಸಂದರ್ಭ ಕಾರ್ತಿಕ್ ಸ್ಥಳದಲ್ಲೆ ಇರಲಿಲ್ಲ ಎನ್ನುವುದು ವಿಶೇಷ.
2022ರ ಜೂನ್ ತಿಂಗಳಿನಲ್ಲಿ ತನ್ನ ಅಂಗಡಿಯ ಶುಭಾರಂಭದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರೈಯನ್ನು ಹಾಡುಹಗಲೇ ಪುತ್ತೂರು ತಾಲೂಕಿನ ಗ್ರಾಮೀಣ ಭಾಗವಾದ ಪೆರ್ಲಂಪಾಡಿಯ ಪೇಟೆಯಲ್ಲಿ ಜನರ ಸಮ್ಮುಖವೇ ಅಟ್ಟಾಡಿಸಿ ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿತ್ತು. ಕಾರ್ತಿಕ್ ಮೇರ್ಲ ಸಂಬಂಧಿ ಕಿಶೋರ್ ಹಾಗೂ ಸಹಚರರು ಕೃತ್ಯ ಎಸಗಿದ್ದರು.
2022ರ ಜುಲೈ ತಿಂಗಳ ಅಂತ್ಯದಲ್ಲಿ ಕೋಳಿ ಅಂಗಡಿಯ ಮಾಲೀಕ ಹಾಗೂ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ನನ್ನು ಬೈಕ್ ನಲ್ಲಿ ಬಂದ ಮೂವರು ಬೆಳ್ಳಾರೆ ಪೇಟೆಯಲ್ಲಿದ್ದ ಆತನ ಅಂಗಡಿಯ ಮುಂಭಾಗವೇ ರಾತ್ರಿ 8 ಗಂಟೆ ಸುಮಾರಿಗೆ ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಈ ವೇಳೆ ಪ್ರವೀಣ್ ಅಂಗಡಿಯ ಕೆಲಸದಾತ ಅಂಗಡಿಯ ಒಳಗಡೆಯೇ ಇದ್ದರು. ಬೆಳ್ಳಾರೆ ಪೇಟೆಯಲ್ಲಿ ಆ ವೇಳೆ ಜನ ಸಂಚಾರವಿತ್ತು. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಕೆಲ ಆರೋಪಿಗಳು ಇವತ್ತಿನವರೆಗೂ ಪತ್ತೆಯಾಗಿಲ್ಲ
2023ರ ಅಗಷ್ಟ್ ತಿಂಗಳ ಅಂತ್ಯದಲ್ಲಿ ಪುತ್ತೂರು ಬಸ್ಸು ನಿಲ್ದಾಣದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿಟ್ಲದ ಯುವತಿ ಗೌರಿಯನ್ನು ಪುತ್ತೂರು ಮಹಿಳಾ ಠಾಣೆಯ ಮುಂಭಾಗ ಪಾಗಲ್ ಪ್ರೇಮಿ ಪದ್ಮರಾಜ್ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಹತ್ಯೆ ನಡೆದ ಸಂದರ್ಭವು ಆ ಪ್ರದೇಶದಲ್ಲಿ ಜನ ಸಂಚಾರವಿತ್ತು.
ಕಾಲೇಜ್ ರಸ್ತೆಯಲ್ಲೆ ಹತ್ಯೆ
ಇದೀಗ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪುತ್ತೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಗೆ ತೆರಳುವ ರಸ್ತೆ ಮಧ್ಯೆ ಅಕ್ಷಯ್ ಕಲ್ಲೇಗ ರನ್ನು ಅವರ ಇಬ್ಬರು ಸ್ನೇಹಿತರ ಸಮ್ಮುಖವೇ ರಾತ್ರಿ 11.30ರ ಸುಮಾರಿಗೆ ಹತ್ಯೆ ಮಾಡಲಾಗಿದೆ. ಪ್ರಖರ ಬೀದಿ ದೀಪದ ಬೆಳಕಿನಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಅಟ್ಟಾಡಿಸಿ ಹತ್ಯೆ ಮಾಡಲಾಗಿದ್ದು, ಮೃತನ ದೇಹದ ಮೇಲೆ ೫೨ ಗಾಯದ ಗುರುತುಗಳಿದ್ದವು. ಹತ್ಯೆ ನಡೆದ ಪಕ್ಕದಲ್ಲೆ ಹೊಟೇಲ್ ಇದ್ದು ಅಲ್ಲಿ ರಾತ್ರಿ ತಂಗುವ ಕೆಲಸಗಾರರಿದ್ದರು. ಈ ಹತ್ಯೆಯ ಕುರಿತಾಗಿ ಪೊಲೀಸ್ FIRನಲ್ಲಿ ದಾಖಲಾದ ಕಾರಣಗಳು ಅಸ್ಪಷ್ಟವಾಗಿದೆ. ಕೃತ್ಯ ನಡೆದ ಸ್ಥಳ ಪುತ್ತೂರು ನಗರ ಠಾಣೆಯಿಂದ ಕೇವಲ ಒಂದೂವರೆ ಕಿಮೀ ದೂರದಲ್ಲಿದೆ.
ಇಷ್ಟು ಕೊಲೆಗಳ ಸಂದರ್ಭ ಹಂತಕರು ಸಾರ್ವಜನಿಕರು ಹಾಗೂ ಪೊಲೀಸರನ್ನು ಲೆಕ್ಕಿಸದೆ ಯಾವುದೇ ಭಯ ಭಿಡೆ ಇಲ್ಲದೇ ಕೃತ್ಯ ಎಸಗಿರುವುದು ಸ್ಪಷ್ಟ. ಕಾನೂನು ಹಾಗೂ ಪೊಲೀಸರ ಬಗ್ಗೆ ಭಯ ರಹಿತ ವಾತಾವರಣವಿದ್ದಾಗವಷ್ಟೆ ಈ ರೀತಿಯ ಕೊಲೆಗಳು ನಡೆಯಲು ಸಾಧ್ಯ . ತಾಲೂಕಿನಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದು, ಪೊಲೀಸ್ ಇಂಟೆಲಿಜೆನ್ಸ್ ನಿದ್ರೆಗೆ ಜಾರಿರುವುದು, ನಗರ ಪ್ರದೇಶದಲ್ಲೂ, ಅದು ಕೂಡ ಅಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಇಲ್ಲದಿರುವುದು ಕಾನೂನು ಭಂಜಕರಿಗೆ ವರದಾನವಾಗಿ ಪರಿಣಮಿಸಿದೆ.
5 ಕೊಲೆಗಳಲ್ಲೂ ಪೊಲೀಸ್ ವೈಫಲ್ಯವಿದೆ
ಕಾರ್ತಿಕ್ ಮೇರ್ಲ ಕೊಲೆಗೆ ಕೆಲ ತಿಂಗಳ ಹಿಂದೆ ಎರಡು ತಂಡದ ಮಧ್ಯೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟೀಲೆರಿತ್ತು. ಈ ವೇಳೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಎರಡು ತಂಡಕ್ಕೂ ಸೂಕ್ತ ಎಚ್ಚರಿಕೆ ನೀಡಿ ಅವರ ಮೇಲೆ ಒಂದು ಕಣ್ಣಿಟ್ಟಿದ್ದರೇ ಮೇರ್ಲ ಹತ್ಯೆ ತಡೆಯಬಹುದಿತ್ತು. ಇನ್ನು ಈ ಪ್ರಕರಣದ ಆರೋಪಿಗಳು ಪೊಲೀಸರ ಗಳಸ್ಯ ಕಂಠಸ್ಯರಾಗಿದ್ದರು.
ಇನ್ನು ಚರಣ್ ಮೇಲೆ ಕೊಲೆಯ ತೂಗುಕತ್ತಿ ಬೀಸುತಿತ್ತು ಮತ್ತು ಆಪಾಯ ಯಾರಿಂದ ಇತ್ತು ಎನ್ನುವುದು ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ಸ್ಪಟಿಕದಷ್ಟು ನಿಚ್ಚಳವಾಗಿತ್ತು. ಕೊಲೆಗೆ ಕೆಲ ತಿಂಗಳುಗಳ ಹಿಂದೆ ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ಹಾಗೂ ದರ್ಬೆ ಪೆಟ್ರೋಲ್ ಬಂಕ್ ಬಳಿ ನಡೆದ ವಿದ್ಯಮಾನ ಇದಕ್ಕೆ ಸ್ಪಷ್ಟ ಉದಾಹರಣೆ. ಇಷ್ಟಾದರೂ ಪೊಲೀಸರು ನಿಗಾ ವಹಿಸದ್ದು ವಿಪರ್ಯಾಸ
ಪ್ರವೀಣ್ ನೆಟ್ಟಾರ್ ಹತ್ಯೆ ಬೆಳ್ಳಾರೆಯ ಮಸೂದು ಹತ್ಯೆಯ 20 ದಿನಗಳ ಬಳಿಕ ಪ್ರತಿಕಾರದ ರೂಪದಲ್ಲಿ ನಡೆದಿತ್ತು. ಮಸೂದ್ ಹತ್ಯೆಯ ಬಳಿಕ ಸಂಘಟನೆಯೊಂದು ನಿಗಿ ನಿಗಿ ಕೆಂಡದಂತಾಗಿತ್ತು ಹಾಗು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬನ ಹತ್ಯೆಗೆ ಹಾತೊರೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು. ಹಾಗಾಗಿಯೂ ಬೆಳ್ಳಾರೆಯಲ್ಲೆ ಹತ್ಯೆ ನಡೆಯಲು ಎಡೆ ಮಾಡಿಕೊಟ್ಟದ್ದು ಪೊಲೀಸ್ ವೈಫಲ್ಯವಲ್ಲದೇ ಮತ್ತೇನು ?
ವಿಟ್ಲದ ಯುವತಿ ಗೌರಿಯ ತಾಯಿ ಆಕೆಯ ಕೊಲೆಗಾರ ಪದ್ಮರಾಜ್ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಹಲವು ಬಾರಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಎಚ್ಚೆತ್ತುಕೊಂಡು ಪದ್ಮರಾಜ್ ಗೆ ಬಿಸಿ ಮುಟ್ಟಿಸುತ್ತಿದ್ದರೇ ಗೌರಿ ಬದುಕಿ ಉಳಿಯುತ್ತಿದ್ದಳು.
ಅಕ್ಷಯ್ ಕೊಲೆಯೂ ತಪ್ಪಿಸಬಹುದಿತ್ತು…!
ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್ ಮುಖಂಡ ಪ್ರದೀಪ್ ರೈ ಪಾಂಬಾರು ಎಂಬವರು ಕಲ್ಲೇಗದ ಯುವಕರು ವಾಹನ ಅಪಘಾತದ ವಿಚಾರದ ಗಲಾಟೆ ಎಬ್ಬಿಸಿ ಪರ್ಸು ಹಾಗೂ ಚಿನ್ನದ ಸರವನ್ನು ಎಳೆದುಕೊಂಡಿದ್ದರು ಎಂದು ದೂರು ನೀಡಿದ್ದರು. ಇದೀಗ ಕಲ್ಲೇಗದ ಯುವಕನ ಹತ್ಯೆ ವಾಹನ ಅಪಘಾತ ಹಾಗೂ ಹಣದ ವಿಚಾರವಾಗಿ ನಡೆದಿತ್ತು. ಈ ಎರಡು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೇ ಒಬ್ಬ ವ್ಯಕ್ತಿ ಈ ಎರಡು ಪ್ರಕರಣದಲ್ಲಿ ʼಕಾಮನ್ʼ ಆಗಿದ್ದ. ಆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಂತೆ ʼಓರ್ವ ಪೊಲೀಸ್ʼ ರಕ್ಷಣೆಗೆ ನಿಂತಿದ್ದರು. ಈ ಘಟನೆಯ ಬಳಿಕ ಆ ಪೊಲೀಸ್ ವರ್ಗಾವಣೆಗೊಂಡಿದ್ದರು.
ಇನ್ನೂ ಆ ಪ್ರದೇಶದಲ್ಲಿ ಆಗಾಗ ಸಣ್ಣ ಅಪಘಾತಗಳು ನಡೆಯುವುದು ಬಳಿಕ ಹಣಕಾಸಿನ ವಿಚಾರವಾಗಿ ಹಲವು ಬಾರಿ ʼಕಿರಿಕ್ʼ ಆಗಿ ರಾಜಿಯಲ್ಲಿ ಮುಕ್ತಾಯವಾದ ಘಟನೆಗಳು ನಡೆದಿರುವುದು ಈಗ ಒಂದೊಂದಾಗಿ ಹೊರ ಬರುತ್ತಿದೆ. ಪ್ರತಿ ಬಾರಿಯೂ ಈ ವಿಷಯ ಪೊಲೀಸರ ಗಮನಕ್ಕೆ ಬರುತಿತ್ತು ಹಾಗೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಅಥಾವ ಈ ರೀತಿಯ ಪ್ರಕರಣದ ಪೋಷಕರಾಗಿದ್ದರು ಎಂಬ ಮಾತುಗಳು ನಗರದ ಸಂದಿ ಸಂದಿಯಲ್ಲಿ ಕೇಳಿ ಬರುತ್ತಿದೆ.
ಮಾದಕ ಪದಾರ್ಥ ಮಾರಾಟದ ಅಡ್ಡೆ
ಇನ್ನೂ ಹತ್ಯೆ ನಡೆದ ಕಾಲೇಜು ರಸ್ತೆಯಲ್ಲಿ ರಾತ್ರಿ ಓಡಾಡಲು ಜನರು ಹೆದರುವ ಪರಿಸ್ಥಿತಿಯಿದೆ. ಅಲ್ಲಿ ಕೆಲ ಅಯಕಟ್ಟಿನ ಸ್ಥಳಗಳಲ್ಲಿ ಮಾದಕ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಇದನ್ನು ಅಲ್ಲೇ ಸೇವಿಸಿ ನಶೆಯ ಮತ್ತಿನಲ್ಲಿ ಹೋಗಿ ಬರುವವರಿಗೆ ಕಿರಿಕ್ ಮಾಡುತ್ತಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದರೂ ಸ್ಥಳೀಯ ಪೊಲೀಸರು ಈ ಕುರಿತು ನಿಗಾ ವಹಿಸದ್ದು ಯಾಕೇ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ವೇಳೆ ಒಂದು ಪೊಲೀಸ್ ಇರಲಿಲ್ಲ ಎನ್ನುವುದು ಆಘಾತಕಾರಿ ವಿಷಯ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಸಿಸಿಟಿವಿ ಕಾಯರ್ಚರಿಸುತಿತ್ತು. ಆದರೇ ಅಕ್ರಮ ದಂಧೆಗಳಿಗೆ ಇದು ಅಡ್ಡಿಯಾಗದಂತೆ ಅದು ಕೆಲಸ ಮಾಡದಂತೆ ನೋಡಿಕೊಳ್ಳಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಬಿಗ್ ನ್ಯೂಸ್
ಬಂಧಿತ ರೌಡಿ ಶೀಟರ್, ಅಕ್ರಮ ಕಲ್ಲುಗಾಣಿಗಾರಿಕೆಯ ಆರೋಪಿ ಬಿಜೆಪಿ ಮುಖಂಡನನ್ನು ಕಾನೂನು ಬಾಹಿರವಾಗಿ ರಿಲೀಸ್ ಮಾಡುವಂತೆ ಶಾಸಕ ಪಂಜಾರಿಂದ ಪೊಲೀಸರಿಗೆ ಒತ್ತಡ,ಬೆದರಿಕೆ ಅವ್ಯಾಚವಾಗಿ ನಿಂದನೆ : FIR ದಾಖಲು; ಆರೋಪಿ ಪರ ನಿಂತ ಶಾಸಕರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಿಯನ್ನು ಬಂಧಿಸಿದನ್ನು ಪ್ರಶ್ನಿಸಿ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿ ತನ್ನ ಪಕ್ಷದ ಕಾರ್ಯಕರ್ತನಾಗಿರುವ ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಕಲ್ಲಿನ ಕೋರೆಗೆ ದಾಳಿ ಮಾಡಿದ ಪೊಲೀಸರು ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಅಕ್ರಮವಾಗಿ ಸ್ಫೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದರು. ಇನ್ನೊರ್ವ ಆರೋಪಿ ಬಿಜೆಪಿ ಪ್ರಮೋದ್ ಉಜಿರೆ ವಿರುದ್ದವು ಇದೆ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಶಶಿರಾಜ್ ಶೆಟ್ಟಿಯ ಬಂಧಿಸಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ತನ್ನ ಪಟಲಾಂನೊಂದಿಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಕಾನೂನು ಬಾಹಿರವಾಗಿ ಹೊರತರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಠಾಣೆಯ ಮುಂದೆ ಧರಣಿ ನಡೆಸಿ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಈ ವೇಳೆ ಪೊಲೀಸರಲ್ಲಿ ಆರೋಪಿಯನ್ನು ತಕ್ಷಣ ಬಿಡುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಠಾಣೆ ನಿಮ್ಮ ಅಪ್ಪನದ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ಶಾಸಕ ಪೂಂಜಾ ಮುಂದೆ ನನ್ನ ಸರಕಾರ ಬರುತ್ತಾದೆ. ಆಗ ಇಲ್ಲಿನ ಸಿಬ್ಬಂದಿಯನ್ನು ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೂಂಜಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ರೌಡಿಶೀಟರ್ ಪರ , ಅದರಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದ ಪರವಾಗಿ ಒಬ್ಬ ಚುನಾಯಿತ ಶಾಸಕರು ಠಾಣೆಯಲ್ಲಿ ಬಂದು ಕೂಗಾಡಿದ್ದು ಅಕ್ಷಮ್ಯ ತಪ್ಪು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಲೇ, ಠಾಣೆಯ ಒಳಗಡೆ ನೆಲದ ಮೇಲೆ ಕೂತು ಆರೋಪಿಯನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಪೂಂಜಾ ತನ್ನ ಬೆಂಬಲಿಗರ ಜತೆ ಧರನಿ ನಡೆಸಿದ್ದರು. ಆದರೆ ಯಾವುದೇ ಒತ್ತಡಗಳಿಗೆ ಮಣಿಯದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಶಿರಾಜ್ ಶೆಟ್ಟಿಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
FIRನಲ್ಲಿ ಏನಿದೆ ?
ಇದೀಗ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು, ಇತರ ಕೆಲವು ಜನರೊಂದಿಗೆ, ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಶಾಸಕರು ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು FIRನಲ್ಲಿ ನಮೋದಿಸಲಾಗಿದೆ.
ಶಾಸಕರಾದ ಹರೀಶ್ ಪೂಂಜಾರವರ ವಿರುದ್ಧ IPC ಕಲಂ:353, 504 ರಂತೆ ಪ್ರಕರಣ ದಾಖಲಾಗಿದೆ.
ಉದ್ಯೋಗ
Bindu’s-ಬೆಂಗಳೂರಿನ ಬನಶಂಕರಿಯಲ್ಲಿ ಬಿಂದುವಿನ 7ನೇ ಫ್ಯಾಕ್ಟರಿ ಔಟ್ ಲೆಟ್ ಶುಭಾರಂಭ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ತಂಪು ಪಾನೀಯ ತಯಾರಿಕಾ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಬಿಂದುವಿನ 7ನೇ ಫ್ಯಾಕ್ಟರಿ ಔಟ್ಲೆಟ್ ಬೆಂಗಳೂರಿನ ಬನಶಂಕರಿಯಲ್ಲಿ ಮೇ 10ರಂದು ಶುಭಾರಂಭಗೊಂಡಿತು. ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕಿ ಮೇಘಾ ಶಂಕರ್ರವರು ಔಟ್ಲೆಟ್ನ್ನು ಉದ್ಘಾಟಿಸಿದರು.
ಸಂಸ್ಥೆಯ ಸಿಇಓ ಸುಶಿಲ್ ವೈದ್ಯ ಮಾತನಾಡಿ ಗ್ರಾಹಕರ ಮೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು, ಸಿಪ್ ಆನ್, ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ಫ್ರೂಝಾನ್ ಬ್ರಾಂಡ್ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ನ್ಯಾಕ್ಸ್ ಅಪ್ ಬ್ರಾಂಡ್ನ ಸ್ನ್ಯಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ ಸುಮಾರು 50ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದಕ್ಷಿಣ ಭಾರತದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ಲಭ್ಯವಿದೆ. ನಮ್ಮ ಎಲ್ಲಾ ಉತ್ಪನ್ನಗಳು ಬಿಂದು ಫ್ಯಾಕ್ಟರಿ ಔಟ್ಲೆಟ್ನಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಎಂದರು ಹಾಗೂ ಸಂಸ್ಥೆಯ ಸಿಇಓ ಸುಶಿಲ್ ವೈದ್ಯರವರು ಪ್ರಥಮ ಖರೀದಿ ಮಾಡಿದರು.
1 ಕರ್ನಾಟಕದಲ್ಲಿ 50 ಫ್ಯಾಕ್ಟರಿ ಔಟ್ಲೆಟ್ಗಳನ್ನು ಈ ಒಂದು ವರ್ಷದಲ್ಲಿ ಆರಂಭಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
2 ಮುಂಬರುವ 5 ವರ್ಷದಲ್ಲಿ 500 ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರಿಂದ ಸಮಾಜದಲ್ಲಿ ಉದ್ಯೋಗವಕಾಶ ದೊರೆಯಲಿದೆ ಎಂದು ಹೇಳಿದರು.
3 ಮೇಘಾ ಫೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಎಲ್ಲಾ ರಾಜ್ಯಗಳಲ್ಲಿ ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು,
ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕರಾದ ಮನಸ್ವಿತ್ ಶಂಕರ್, ನ್ಯಾಷನಲ್ ಕಮರ್ಷಿಯಲ್ ಬ್ರಾಂಡಿಂಗ್ ಮ್ಯಾನೇಜರ್ ಹರಿಪ್ರಸಾದ್, ಬಿಸಿನೆಸ್ ಹೆಡ್ ದೇವರಾಜ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Mandovi-ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ಮೇ 17, 18ರಂದು ಮೆಗಾ ಎಕ್ಸ್ಚೇಂಜ್, ಲೋನ್ ಮೇಳ
ಪ್ರತ್ತೂರು: ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮೆಗಾ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಮೇ 17 ರಂದು ಗೂಡ್ಸ್ ಲಾರಿ ಮಾಲಕ ಚಾಲಕ ಸಂಘ ದರ್ಬೆ ಇದರ ಬಳಿ ಹಾಗೂ ಪುರುಷರಕಟ್ಟೆ ಜಂಕ್ಷನ್ ನಲ್ಲಿ ಉದ್ಘಾಟನೆಗೊಂಡಿತು. ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ಎಕ್ಸ್ಚೇಂಜ್ ಹಾಗೂ ಲೋನ್ ಮೇಳವು ಮೇ 18 ರಂದು ಕೊನೆಗೊಳ್ಳಲಿದೆ. ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.
ವಿಶೇಷ ರಿಯಾಯಿತಿ: ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಕೃಷಿಕರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ಹರಿಕಿರಣ್ ರೈ ಎಸ್. 7259 014047, ಸುಮಿತ್ ಎನ್. 7259014043, ಆಕಾಂಶ 7795034056, ಇಬ್ರಾಹಿಂ ನಬೀಲ್ 7022126707 ಅವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಾರುತಿ ಸುಜುಕಿಯವರ ಹೊಸ ಕಾರು ದ ಎಪಿಕ್ ನ್ಯೂ ಸ್ವಿಫ್ಟ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು ಇದರ ಬುಕ್ಕಿಂಗ್ ಆರಂಭಗೊಂಡಿದೆ.
-
ಬಿಗ್ ನ್ಯೂಸ್2 days ago
Naturals Ice-Cream | ನ್ಯಾಚುರಲ್ಸ್ ಐಸ್ ಕ್ರೀಂ ಸ್ಥಾಪಕ, ಮಂಗಳೂರಿನ ಪ್ರಖ್ಯಾತ ‘ಬೊಂಡ ಪ್ಯಾಕ್ಟರಿ’ ಯ ಮಾಲಕ ರಘುನಂದನ್ ಕಾಮತ್ ಇನ್ನಿಲ್ಲ – ಮಂಗಳೂರಿನ ಹಣ್ಣು ವ್ಯಾಪಾರಿಯ ಮಗ 300ಕೋಟಿಯ ಬ್ರ್ಯಾಂಡ್ ಕಟ್ಟಿದ ಕಥೆ ಇಲ್ಲಿದೆ
-
ಚಿನ್ನ-ಬೆಳ್ಳಿ ದರ1 day ago
Gold Rate Today -ಗೋಲ್ಡ್ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆಯಾದ ಚಿನ್ನ, ಬೆಳ್ಳಿ ದರ – ಇಲ್ಲಿದೆ ಇವತ್ತಿನ ರೇಟ್
-
ಸ್ಥಳೀಯ1 day ago
Tumakuru-ಬರದಿಂದ ಬಸವಳಿದು ಅಡಕೆಯತ್ತ ಮುಖಮಾಡಿದ ತುಮಕೂರಿನ ರೈತರು; 4 ವರ್ಷದಲ್ಲಿ 32 ಸಾವಿರ ಹೆಕ್ಟೇರ್ ಅಡಕೆ ಪ್ರದೇಶ ಹೆಚ್ಚಳ
-
ಬಿಗ್ ನ್ಯೂಸ್13 hours ago
ಬೆಳ್ತಂಗಡಿ : ಅಕ್ರಮ ಕಲ್ಲುಗಣಿಗಾರಿಕೆಗೆ ದಿಡೀರ್ ಪೊಲೀಸ್ ದಾಳಿ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ – ಬಂಧಿತನ ಬಿಡಿಸಲು ಬೆಳಿಗ್ಗೆವರೆಗೆ ಠಾಣೆಯಲ್ಲಿ ನೆಲದಲ್ಲಿ ಕುಳಿತ ಶಾಸಕ ಪೂಂಜಾ : ಕ್ಯಾರೇ ಮಾಡದ ಪೊಲೀಸರು – ಪೊಲೀಸರಿಗೆ ಠಾಣೆಯೊಳಗೆ ಬೆದರಿಕೆ ಹಾಕಿದ ಶಾಸಕ..!
-
Uncategorized2 days ago
Pavitra jayaram ನಟಿ ಪವಿತ್ರಾ ಸಾವಿನಿಂದ ನೊಂದು ಸಹನಟ ಚಂದು ಆತ್ಮಹತ್ಯೆ ; ತೆಲುಗು ಕಿರುತೆರೆ ಶಾಕ್
-
ಸಿನೆಮಾ2 days ago
Devil | ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್ʼ ಗೆ ನಾಯಕಿಯಾಗಿ ಆಯ್ಕೆಯಾದ ಪುತ್ತೂರಿನ ರಚನಾ ರೈ
-
ನಿಧನ ವಾರ್ತೆ1 day ago
Pavithra Jayaram-ಪವಿತ್ರಾ ಜಯರಾಂಗೆ ನನ್ನ ಪತಿ ಚಂದು ಆರನೇಯವನು : ನಟ ಚಂದ್ರಕಾಂತ್ ಪತ್ನಿ ಶಿಲ್ಪಾ ಗಂಭೀರ ಆರೋಪ
-
ಅಂತರ ರಾಜ್ಯ1 day ago
Priest-ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಖಾಸಗಿ ಟಿವಿ ನಿರೂಪಕಿಯ ಅತ್ಯಾಚಾರವೆಸಗಿದ ಅರ್ಚಕ