ರಾಜಕೀಯ
ದಕ್ಷಿಣ ಕನ್ನಡ ಕಾಂಗ್ರೇಸ್ನ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಯಾಗಿ ರಮಾನಾಥ ರೈ ನೇಮಕ: ಡಿಕೆಶಿ ಆದೇಶ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಸಮಿತಿ ಉಸ್ತುವಾರಿಯಾಗಿ ರಮಾನಾಥ ರೈ ಯನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ರಮಾನಾಥ ರೈಯನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ಸದರಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡಲು ಕೋರುತ್ತೇನೆ ಎಂದು ಡಿಕೆಶಿ ಆದೇಶ ಹೊರಡಿಸಿದ್ದಾರೆ.
ಅಂತರ ರಾಜ್ಯ
PM Modi-ಮುಂದಿನ 5 ವರ್ಷ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರಿಗೂ ತಕ್ಕ ಶಾಸ್ತ್ರಿ ಮಾಡಲಾಗುವುದು : ನರೇಂದ್ರ ಮೋದಿ
ಎನ್ಡಿಎ ಸರಕಾರ ಭ್ರಷ್ಟರ ನಿಜ ಬಣ್ಣವನ್ನು ಬಯಲು ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರಿಗೂ ಕಾನೂನಿನ ಪ್ರಕಾರ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.
ಝಾರ್ಖಂಡ್ನ ಪಲಮು ಮತ್ತು ಸಿಸಾಯ್ನಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದ ಪ್ರಧಾನಿ, ಜೈಲಲ್ಲಿರುವ ಝಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಹೆಸರೆತ್ತದೇ ಪರೋಕ್ಷವಾಗಿ ಅವರನ್ನು ಉಲ್ಲೇಖಿಸಿದ ಮೋದಿ, ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂಡಿಯಾ ಒಕ್ಕೂಟವು ಜೈಲಲ್ಲಿರುವ ಭ್ರಷ್ಟರನ್ನು ಬೆಂಬಲಿಸಿ ರ್ಯಾಲಿ ನಡೆಸುತ್ತದೆ. ಇದು ಅವರ ನೈಜ ಮುಖವನ್ನು ಬಯಲು ಮಾಡಿದೆ’ ಎಂದಿದ್ದಾರೆ.
‘ಕಾಂಗ್ರೆಸ್ನವರು ಹೇಡಿಗಳು. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಹಿಂದಿನ ಕಾಂಗ್ರೆಸ್ ಸರಕಾರ ಜಾಗತಿಕ ವೇದಿಕೆಯಲ್ಲಿ ಹೋಗಿ ಅಳುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪಾಕಿಸ್ಥಾನವೇ ಅಳುತ್ತಾ, ಸಹಾಯಕ್ಕಾಗಿ ಬೊಬ್ಬಿರಿಯುತ್ತಿದೆ’ ಎಂದರು.
ಕಾಂಗ್ರೆಸ್ ಸರಕಾರವು ಶಾಂತಿಯ ನಿರೀಕ್ಷೆಯಲ್ಲಿ ಪಾಕಿಸ್ಥಾನಕ್ಕೆ ಲವ್ ಲೆಟರ್ ಬರೆಯುತ್ತಿತ್ತು. ಅದಕ್ಕೆ ಬದಲಾಗಿ ನೆರೆರಾಷ್ಟ್ರವು ಮತ್ತಷ್ಟು ಉಗ್ರರನ್ನು ಇಲ್ಲಿಗೆ ಕಳುಹಿಸುತ್ತಿತ್ತು. ಈಗಿರುವುದು ನವ ಭಾರತ. ಇಲ್ಲಿ ನಾವು ಉಗ್ರರ ನೆಲಕ್ಕೇ ನುಗ್ಗಿ ಹೊಡೆದು ಬರುತ್ತೇವೆ. ಅದೇ ಕಾರಣಕ್ಕೆ ಪಾಕಿಸ್ಥಾನವು ‘ಶಹಜಾದಾ’ (ರಾಹುಲ್) ಪ್ರಧಾನಿಯಾಗಲೆಂದು ಬೇಡುತ್ತಿದೆ’ ಎಂದಿದ್ದಾರೆ.
ಅಂತರ ರಾಜ್ಯ
Suvendu Adhikari’s-ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಹೊಸ ತಿರುವು : ಬಿಜೆಪಿ ನಾಯಕರೊರ್ವರ ವಿಡಿಯೋ ವೈರಲ್ : ಸುವೇಂದು ಅಧಿಕಾರಿ ಸೂಚನೆಯಂತೆ ಪ್ರಕರಣ ಸೃಷ್ಟಿ..?
ಕೋಲ್ಕೋತಾ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಮಹಿಳಾ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮಹಿಳಾ ದೌರ್ಜನ್ಯದ ಆರೋಪಗಳನ್ನು ಬಿಜೆಪಿ ನಾಯಕರೊಬ್ಬರ ನಿರ್ದೇಶನದಂತೆ ರೂಪಿಸಲಾಗಿತ್ತು ಎಂದು ಹೇಳಲಾಗಿರುವ ವಿಡಿಯೊವೊಂದು ವೈರಲ್ ಆಗಿದೆ. ಬಿಜೆಪಿಯ ಮಂಡಲ ಸಭಾಪತಿ ಗಂಗಾಧರ್ ಕೋಯಲ್ ಅವರದು ಎನ್ನಲಾದ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, “ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೂಚನೆಯಂತೆ ಸಂದೇಶ್ ಖಾಲಿ ಪ್ರಕರಣ ಸೃಷ್ಟಿಸಲಾಯಿತು. ಮಹಿಳೆಯರಿಂದ ದೂರು ಕೊಡಿಸಲಾಯಿತು. ಆದರೆ, ಅಂತಹ ಯಾವುದೇ ದೌರ್ಜನ್ಯಗಳು ನಡೆದೇ ಇಲ್ಲ,” ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ, “ಬಿಜೆಪಿ ನಾಯಕರಿಂದ ಸತ್ಯ ಹೊರಬಿದ್ದಿದೆ. ಇಡೀ ಪ್ರಕರಣ ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ. ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಎಲ್ಲವೂ ಬಿಜೆಪಿ ನಾಯಕರೇ ಮಾಡಿದ್ದಾರೆ. ಟಿಎಂಸಿ ಪಕ್ಷಕ್ಕೆ ಕೆಟ್ಟ ಹೆಸರು ತರಲು ಹೂಡಿದ ಷಡ್ಯಂತ್ರ ಅನ್ನೋದು ಸಾಬೀತಾಗಿದೆ,” ಎಂದು ವಿರುದ್ಧ ವಾಗ್ದಾಳಿ ನಡೆಸಿದರು.
ವೈರಲ್ ವಿಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗಾಧರ್ ಕೋಯಲ್, “ಹೊಸ ತಂತ್ರಜ್ಞಾನ ಬಳಸಿಕೊಂಡು ನನ್ನ ಧ್ವನಿಯನ್ನು ಎಡಿಟ್ ಮಾಡಿ, ವಿಡಿಯೊ ಹರಿಬಿಡಲಾಗಿದೆ. ಇದೆಲ್ಲಾ ಟಿಎಂಸಿ ಕುತಂತ್ರ,” ಎಂದು ಆರೋಪಿಸಿದ್ದಾರೆ.
ಇದೇ ವೇಳೆ ನಕಲಿ ಅಥವಾ ಡೀಪ್ ಫೇಕ್ ವಿಡಿಯೊ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಬಿಜೆಪಿ ನಾಯಕರು ದೂರು ನೀಡಿದ್ದಾರೆ.
ಅಂತರ ರಾಜ್ಯ
Kangana Ranaut-ತೇಜಸ್ವಿ ಸೂರ್ಯ ಯುಗಾದಿ ಹಬ್ಬದ ವೇಳೆ ಮೀನು ತಿಂದು ಗೂಂಡಾಗಿರಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ : ವಿವಾದಾತ್ಮಕ ನಟಿ , ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್
ಹೊಸದಿಲ್ಲಿ: ಪ್ರತಿಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಬಾಯಿ ತಪ್ಪಿ ಸ್ವಪಕ್ಷದ ಸಂಸದರನ್ನೇ ಟೀಕಿಸಿದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಣಾವತ್ ಮುಜುಗರಕ್ಕೀಡಾದ ಘಟನೆ ನಡೆದಿದೆ.
ಬಿಹಾರ ಮಾಜಿ ಡಿಸಿಎಂ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರೇಳಿ ವಾಗ್ದಾಳಿ ನಡೆಸುವ ಬದಲು, ʻಯುಗಾದಿ ಹಬ್ಬದ ವೇಳೆ ಮೀನು ತಿಂದ ಘಟನೆ ಉಲ್ಲೇಖಿಸಿ ಗೂಂಡಾಗಿರಿ ಮಾಡಿಕೊಂಡು ಮೀನು ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿರುವ ತೇಜಸ್ವಿ ಸೂರ್ಯ,” ಎಂದು ಕಂಗನಾ ಹೇಳಿದರು. ತಪ್ಪು ಹೆಸರೇಳಿದ ಅರಿವಾದ ಕೂಡಲೇ, ”ಕ್ಷಮಿಸಿ, ತೇಜಸ್ವಿ ಯಾದವ್ ಹೆಸರೇಳುವ ಬದಲು ಸೂರ್ಯ ಎಂದೇಳಿದೆ,” ಎಂದು ಸಮಜಾಯಿಷಿ ನೀಡಿದರು.
ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ವಿರುದ್ಧ ಕಿಡಿಕಾರಿದ ಕಂಗನಾ, “ಹಾಳಾದ ಎರಡು ಪಕ್ಷಗಳಲ್ಲಿ ಇಬ್ಬರು ರಾಜಕುಮಾರರಿದ್ದಾರೆ. ಒಬ್ಬರು (ರಾಹುಲ್ ಗಾಂಧಿ) ಚಂದ್ರನ ಅಂಗಳದಲ್ಲಿ ಆಲೂಗಡ್ಡೆ ಬೆಳೆಯುವ ಬಯಕೆ ವ್ಯಕ್ತಪಡಿಸಿದರೆ, ತೇಜಸ್ವಿ ಸೂರ್ಯ ಎಂಬಾತ ಹಿಂದೂಗಳಿಗೆ ಅವಮಾನ ಮಾಡಲು ಹಬ್ಬದ ಸಮಯದಲ್ಲಿ ಮೀನು ತಿಂದು ಮಾಡಿಕೊಂಡಿದ್ದಾನೆ,” ಎಂದು ಟೀಕಿಸಿದರು.
ಬಾಯಿ ತಪ್ಪಿ ಹೇಳಿಕೆ ನೀಡಿದ ಕಂಗಾನಾ ವಿಡಿಯೊ ವೈರಲ್ ಆದ ಬೆನ್ನಿಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಯಾದವ್, “ಬಾಯಿಗೆ ಬಂದಂತೆ ಮಾತನಾಡುವ ಈ ಮಹಿಳೆ ಯಾರು?,” ಎಂದು ಪ್ರಶ್ನಿಸಿದ್ದಾರೆ.
-
ದಕ್ಷಿಣ ಕನ್ನಡ2 days ago
woman bathing Video graphed: ಮದುವೆ ಮನೆಯಲ್ಲಿ ಬಾತ್ ರೂಂನಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ಆರೋಪ – ವಿಚಾರಿಸಲು ಮನೆಗೆ ಹೋದಗ ಚೂರಿ ಪ್ರದರ್ಶಿಸಿ ಹಲ್ಲೆ – ಕಡಬ ಠಾಣೆಯಲ್ಲಿ ಪ್ರಕರಣ ದಾಖಲು
-
ಬಿಗ್ ನ್ಯೂಸ್2 days ago
Prajwal Revanna | ಜರ್ಮನಿಯಿಂದ ಅರಬ್ ರಾಷ್ಟ್ರಕ್ಕೆ ಪಲಾಯನಗೈದ ಪ್ರಜ್ವಲ್ ರೇವಣ್ಣ : ಇಂದು ಮಂಗಳೂರಿನಲ್ಲಿ ಶರಣಾಗ್ತಾರ..?
-
ರಾಜ್ಯ17 hours ago
Heavy rainfall-ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುವ ಸಾಧ್ಯತೆ; ಪ್ರವಾಹ ಎದುರಿಸಲು ಸಜ್ಜಾಗುವಂತೆ ಸೂಚನೆ
-
ಮಂಗಳೂರು2 days ago
ವಿಟ್ಲ: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮಗು ಸಹಿತ ಮೂವರಿಗೆ ಗಾಯ
-
ಉದ್ಯೋಗ11 hours ago
Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ
-
ಉಡುಪಿ11 hours ago
Kapu: Pili Kola-ಕಾಪು : ಪಿಲಿ ಕೋಲ – ನಗರ ಪ್ರದಕ್ಷಿಣೆ ವೇಳೆ ಓರ್ವನ ಸ್ಪರ್ಶಿಸಿ ದೈವಸ್ಥಾನಕ್ಕೆ ಓಡಿ ಬಂದ ದೈವ..!
-
ಬಿಗ್ ನ್ಯೂಸ್14 hours ago
Heat Wave | ಕರ್ನಾಟಕ ಕರಾವಳಿಯಲ್ಲಿ ಬಿಸಿಗಾಳಿ – ಆರೆಂಜ್ ಎಲರ್ಟ್ ಘೋಷಣೆ
-
ರಾಜಕೀಯ17 hours ago
Bollywood actress-ಪ್ರಜ್ವಲ್ ರೇವಣ್ಣ ಬದಲು ಆರೋಪಿ ಮುಸ್ಲಿಂ ಆಗಿದ್ರೆ ಬಿಜೆಪಿಯವರು ಬಿಡುತಿದ್ರಾ? ಬಾಲಿವುಡ್ ನಟಿಯ ಪ್ರಶ್ನೆ