Connect with us

ಕ್ರೈಂ

Edapatya Farms arecanut robbery: ಎಡಪತ್ಯ ಫಾರ್ಮ್ಸ್‌ ಅಡಿಕೆ ದರೋಡೆ ಪ್ರಕರಣ : ಬಗೆದಷ್ಟೂ ಹೊರ ಬರುತ್ತಿದೆ ಕಳ್ಳರ ಖದೀಮತನ; ಅಯ್ಯಪ್ಪ ವೃತ್ತಧಾರಿಯಂತೆ ಬಟ್ಟೆ ಧರಿಸಿ ಕಳ್ಳತನ – ಇವರಲ್ಲಿದೆ ಜಿಲ್ಲೆಯ ದೊಡ್ಡ ದೊಡ್ಡ‌ ಅಡಿಕೆ ಬೆಳೆಗಾರರ ಮಾಹಿತಿ – ಸಿಕ್ಕಿಬಿದ್ದಾಗ ಪಾಲು ಕೊಡಲು ಬಂದಿದ್ದರು

Ad Widget

Ad Widget

Ad Widget

Ad Widget

ಪುತ್ತೂರು: ಸವಣೂರಿನ ಎಡಪತ್ಯ ಫಾರ್ಮ್ಸ್‌ ನಲ್ಲಿ ಅಡಿಕೆ ಕಳ್ಳತನ ನಡೆಸಿ ಮನೆಯವರಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಾಗ ತಪ್ಪಿಸಿಕೊಳ್ಳುವ ವೇಳೆ ಕಳ್ಳನೊಬ್ಬ ಮನೆ ಮಾಲೀಕನಿಗೆ ಕಡಿದು ಗಾಯಗೊಳಿಸಿದ ಪ್ರಕರಣದ ಸ್ಥಳ ಪರಿಶೀಲನೆಯನ್ನು ಭಾನುವಾರ ಬೆಳ್ಳಾರೆ ಪೊಲೀಸರು ಮಾಡಿದ್ದಾರೆ. ಈ ವೇಳೆ ಅಡಕೆ ಒಣ ಹಾಕುವ ಕೊಠಡಿಯ ಗೋಡೆಯ ಇಟ್ಟಿಗೆ ತೆಗೆದು, ಸೋಲಾರ್ ಟರ್ಪಾಲ್ ಹರಿದು ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

Ad Widget

Ad Widget

Ad Widget

10 ಲಕ್ಷ ಮೌಲ್ಯದ ಅಡಕೆ ಕಳ್ಳತನ

Ad Widget

ಎಡಪತ್ಯ ಫಾರ್ಮ್ಸ್‌ ಮಾಲೀಕ ರಾಮಚಂದ್ರ ಎಡಪತ್ಯ ಅವರು ಭಾನುವಾರ ಎಲ್ಲಾ ಸೋಲಾರ್ ಕೊಠಡಿಗಳ ಪರಿಶೀಲನೆಯನ್ನು ನಡೆಸಿದ ಸಂದರ್ಭದಲ್ಲಿ ಬಾಗಿಲಿನ ಭಾಗದಲ್ಲಿ ಅಡಕೆ ಗೋಣಿಗಳು ಪೇರಿಸಿಟ್ಟ ರೀತಿಯಲ್ಲಿ ಯಥಾಸ್ಥಿಯಲ್ಲಿವೆ. ಆದರೇ ಹಿಂಭಾಗದಲ್ಲಿ ಅಡಕೆಯನ್ನು ಕಳವು ಮಾಡಿರುವುದು ಪತ್ತೆಯಾಗಿದೆ. 25 ಗೋಣಿ ಚೀಲಕ್ಕಿಂತ ಅಧಿಕ ಪ್ರಮಾಣದ ಅಡಕೆಯನ್ನು ಸೋಲಾರ್ ನಿಂದ ಕಳುವು ಮಾಡಿರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಸದ್ಯ ಲಭಿಸಿದ ಮಾಹಿತಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಸುಮಾರು 10 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ.

Ad Widget

Ad Widget

ಅಯ್ಯಪ್ಪ ವೃತಧಾರಿಗಳ ಬಟ್ಟೆ!

Ad Widget

Ad Widget

Ad Widget

ಕಳ್ಳತನಕ್ಕೆ ಆಗಮಿಸುವ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಬಳಸುವ ಕಪ್ಪು ಬಟ್ಟೆಯನ್ನು ತಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೆಳಗ್ಗಿನ ಜಾವ ಅಯ್ಯಪ್ಪ ವೃತಾಧಾರಿಗಳು ಅನುಷ್ಠಾನಕ್ಕಾಗಿ ತೆರಳುತ್ತಾರೆ. ಇದೇ ಸಮಯದಲ್ಲಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಬಟ್ಟೆಯನ್ನು ಕಳ್ಳರು ಬಳಸಿಕೊಂಡಿದ್ದಾರೆ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಾಗ …!
ಮನೆ ಮಂದಿಗೆ ಸರ್ಪ್ರೈಸ್‌ ನೀಡಲೇಂದು ಬೆಳಗ್ಗಿನ ಜಾವ ಮೈಸೂರಿನಿಂದ ಆಗಮಿಸಿದ ರಾಮಚಂದ್ರ ಎಡಪತ್ಯ ಪುತ್ರ ನಿಷ್ಕಲ್ ರಾಮ್ ಎಡಪತ್ಯ ಅವರಿಗೇ ಮನೆ ಎದುರಿನಲ್ಲಿ ಸರ್ಪ್ರೈಸ್‌ ಕಾದಿತ್ತು. ಅವರು ಮನೆಗೆ ತಲುಪಿದಾಗ ಸೋಲಾರ್ ಕೊಠಡಿಯಲ್ಲಿ ಒಣ ಹಾಕಿದ್ದ ಅಡಕೆಯನ್ನು ಕಳ್ಳ ಕಾರಿಗೆ ತುಂಬುತ್ತಿದ್ದ. ನಿಷ್ಕಲ್ ಪರಿಚಯವಿಲ್ಲದ ಕಳ್ಳ ಆತ ಮನೆ ಸದಸ್ಯ ಎಂಬ ಅರಿವಿಲ್ಲದೆ ಆತನಲ್ಲಿಯೇ ಪಾಲುದಾರಿಕೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಕಳ್ಳತನ ನಡೆಸುವದನ್ನು ಬಹಿರಂಗ ಪಡಿಸಿದೆ ಮುಚ್ಚಿಡಲು ಎಷ್ಟು ಪಾಲು ಕೊಡಬೇಕೆಂದು ಕಳ್ಳ ನಿಷ್ಕಲ್‌ ಬಳಿಯೇ ಕೇಳಿದ್ದಾನೆ. ಕಳ್ಳತನದ ಮಾಲಿನಲ್ಲಿ ದೊಡ್ಡ ಪಾಲು ನೀಡುವ ಆಫರನ್ನು ಕಳ್ಳರಿಬ್ಬರು ನಿಷ್ಕಲ್‌ ಗೆ ನೀಡಿದ್ದರು. ಆದರೇ ಮನೆ ಮಗನೆಂದು ತಿಳಿದಾಗ ತಬ್ಬಿಬ್ಬಾಗಿದ್ದರು

ಕಳ್ಳರ ತಂಡ ಅತೀ ಹೆಚ್ಚು ಅಡಕೆ ಬೆಳೆಯುವ ರೈತರ ಮಾಹಿತಿಯನ್ನು ಸ್ಥಳೀಯರ ಮೂಲಕ ಪಡೆದು ಬಳಿಕ ಕೃತ್ಯ ಎಸಗುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ವಿಚಾರಣೆ ವೇಳೆ ಬಂಧಿತ ಪೊಲೀಸರಿಗೆ ನೀಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಮಾಹಿತಿ ದೊರೆತ ಬಳಿಕ ಮನೆಯವರ ಚಲನವಲನಗಳ ಮೇಲೆ ಕಣ್ಣಿಟ್ಟು ಬಳಿಕ ಅಡಕೆ ದೋಚಲು ಮುಂದಾಗುತ್ತಿದ್ದರು. ಕಳ್ಳರ ಗುಂಪಿನಲ್ಲಿ ಮಹಿಳೆಯರಿದ್ದು ಅವರು ಮಾಹಿತಿ ಸಂಗ್ರಹದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಪುತ್ತೂರು, ಸುಳ್ಯ ಕಡಬ ತಾಲೊಕಿನ ಬಹುತೇಕ ಅಡಕೆ ಬೆಳೆಗಾರರ ಮಾಹಿತಿ ಕಳ್ಳರಲ್ಲಿದೆ. ಒಂದೊಂದೆ ಕಡೆ ಕಳ್ಳತನ ನಡೆಸಲು ಅವರು ಮುಂದಾಗಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ದಶಕದ ಹಿಂದೆ ಅಡಕೆ ಬೆಳೆಗಾರರಿಗೆ ಕಳ್ಳರ ಹಾವಾಳಿ ತೀವ್ರ ಮಟ್ಟದಲ್ಲಿದ್ದು, ಬಂದೂಕು ಹಿಡಿದು ತಾವೇ ತಮ್ಮ ಬೆಳೆಯನ್ನು ರಕ್ಷಣೆ ಮಾಡುವ ಅನಿವಾರ್ಯತೆ ಆಸಂದರ್ಭದಲ್ಲಿತ್ತು. ಈಗ ಮತ್ತೆ ಅದೇ ಕಾಲ ಬರುತ್ತಿದೆಯಾ ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.

ಭಕ್ತಕೋಡಿಯಲ್ಲಿ

ಪುತ್ತೂರು ಸುಬ್ರಹ್ಮಣ್ಯ ಹೆದ್ದಾರಿಯ ಅಂಚಿನಲ್ಲಿರುವ ಭಕ್ತಕೋಡಿಯಲ್ಲಿ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದ್ದು, ಇದಕ್ಕಾಗಿ ತಂದಿಟ್ಟ ಸುಮಾರು 500 ಕೆ.ಜಿ. ಕಬ್ಬಿಣ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಳಿಕ ಕಟ್ಟದ ಮಾಲೀಕರು ಪ್ರತಿ ರಾತ್ರಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೋಗಿ ಪರಿಶೀಲಿಸುವ ಪರಿಪಾಠ ಇರಿಸಿಕೊಂಡಿದ್ದರು. ಇತ್ತೀಚೆಗೆ ಒಂದು ದಿನ ರಾತ್ರಿ 12.30ರ ಸುಮಾರಿಗೆ ಆರೋಪಿ ಬಶೀರ್ ಕಟ್ಟಡದ ಒಳಗೆ ಕಾರು ನಿಲ್ಲಿಸಿ ಬಳಿಯಲ್ಲಿ ನಿಂತಿದ್ದ. ಇದನ್ನು ಗಮನಿಸಿದ ಕಟ್ಟಡದ ಮಾಲೀಕರು ಆ ಕಾರಿಗೆ ತನ್ನ ಕಾರನ್ನು ಅಡ್ಡವಿಟ್ಟು, ಪೊಲೀಸರು ಬರದೆ ಹೋಗುವಂತಿಲ್ಲ ಎಂದು ತಿಳಿಸಿದ್ದರು. ಆಗ ತಕ್ಷಣ ಬಶೀರ್‌ ಕಾರನ್ನು ಜಲ್ಲಿ ರಾಶಿಯ ಮೇಲೆ ಹತ್ತಿಸಿ ಪಲಾಯನಕ್ಕೆ ಮುಂದಾಗಿದ್ದು, ಮಾಲೀಕರು ಕಾರನ್ನು ಅಡ್ಡ ಇಟ್ಟಿದ್ದು, ಅದಕ್ಕೆ ತನ್ನ ಕಾರನ್ನು ಗುದ್ದಿ ಬಶೀರ್‌ ಪರಾರಿಯಾಗಿದ್ದ.

ಕಟ್ಟಡದ ಮಾಲೀಕರು ಕಾರು ನಂಬರ್ ಕೊಟ್ಟು ಸಂಪ್ಯ ಠಾಣೆಗೆ ದೂರು ನೀಡಿದ್ದರು. ಕಾರು ಮುಸ್ಲಿಂ ಮಹಿಳೆಗೆ ಸೇರಿದ್ದಾಗಿದ್ದು, ಆಕೆಯನ್ನು ಠಾಣೆಗೆ ಕರೆಸಿದಾಗ ಏನೂ ಗೊತ್ತಿಲ್ಲದವರ ಹಾಗೇ ಪೆದ್ದು ಪೆದ್ದಾಗಿ ವರ್ತಿಸಿದ್ದರು ಎಂದು ತಿಳಿದು ಬಂದಿದೆ. ಮಧ್ಯಪಾನ ಮಾಡಲೇಂದು ಬಂದಿದ್ದು ಅದೇ ಸಮಯಕ್ಕೆ ಕಟ್ಟಡದ ಮಾಲೀಕರು ಬಂದಿದ್ದರಿಂದ ಹೆದರಿ ವಾಹನಕ್ಕೆ ಗುದ್ದಿಕೊಂಡು ಹೋಗಿದ್ದಾಗಿ ಆಗ ಪೊಲೀಸರು ದೂರುದಾರರಿಗೆ ತಿಳಿಸಿದ್ದರು. ಅಲ್ಲದೇ ಈ ಪ್ರಕರಣ ಠಾಣೆಯಲ್ಲಿ ರಾಜಿ ಪಂಚಾತಿಕೆಯಲ್ಲಿ ಮುಗಿದಿದ್ದು ವಾಹನಕ್ಕಾದ ಹಾನಿಯ ಬಾಬ್ತು 15 ಸಾವಿರ ರೂಪಾಯಿ ಕಾರಿನ ಮಾಲಕರು ಕಟ್ಟಡದ ಮಾಲಕರಿಗೆ ನೀಡಿದ್ದರು ಎನ್ನಲಾಗುತ್ತಿದೆ

Click to comment

Leave a Reply

ಕ್ರೈಂ

Prajwal Revanna Sex Scandal: ತಕ್ಷಣ ತನಿಖೆಗೆ ಹಾಜರಾಗಿ : ಪ್ರಜ್ವಲ್ ರೇವಣ್ಣ ಹಾಗೂ ಎಚ್‌ ಡಿ ರೇವಣ್ಣ  ಮನೆಗೆ ನೋಟಿಸ್‌ ಅಂಟಿಸಿದ SIT

Ad Widget

Ad Widget

Ad Widget

Ad Widget

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ  ಪ್ರಕರಣದ ತನಿಖೆ ಕಳೆದೆರಡು ದಿನಗಳಿಂದ ಎಸ್‍ಐಟಿ ಹೆಗಲೇರಿದೆ.  ತನಿಖೆಯ ಮೂರನೇಯ ದಿನವಾದ ಇಂದು ಇಳಿದಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್  ಜಾರಿ ಮಾಡಿದ್ದಾರೆ.

Ad Widget

Ad Widget

Ad Widget

ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣರ  ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ

Ad Widget

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಹೆಣ್ಣು ಮುಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿತ್ತು.

Ad Widget

Ad Widget

ಪ್ರಕರಣ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ಐದು ಮಂದಿ ಸಂತ್ರಸ್ತರನ್ನು ಸೋಮವಾರ ವಿಚಾರಣೆ ಮಾಡಿದ್ದಾರೆ. ಎಸ್‌ ಐ ಟಿ ಒಟ್ಟು 3 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದೆ.

Ad Widget

Ad Widget

Ad Widget

ನೋಟಿಸ್‌ ನಲ್ಲಿ ಏನಿದೆ ?

ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  

Continue Reading

ಅಪರಾಧ

Prajwal Revanna Sex Scandal : ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ – ನಾವೆಲ್ಲೂ ಓಡಿ ಹೋಗಿಲ್ಲ : ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ವಿಡಿಯೋ ಪ್ರಕರಣದ ಬಗ್ಗೆ ತಂದೆ ಎಚ್.ಡಿ. ರೇವಣ್ಣ ಮೊದಲ ಪ್ರತಿಕ್ರಿಯೆ

Ad Widget

Ad Widget

Ad Widget

Ad Widget

ಬೆಂಗಳೂರು: ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ, ಶಾಸಕ ಎಚ್.ಡಿ. ರೇವಣ್ಣ ಅವರು, ಮೊದಲ ಬಾರಿಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Ad Widget

Ad Widget

Ad Widget

ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್ಐಟಿಗೆ ವಹಿಸಿದೆಯಲ್ಲಾ, ಎಸ್ಐಟಿ ತನಿಖೆ ಮಾಡಲಿ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ
ಇಂದು ನಗರದಲ್ಲಿ ತಮ್ಮ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರೇವಣ್ಣ, ಇಂಥ ಆರೋಪಗಳು ದೇವೇಗೌಡರ ಕುಟುಂಬಕ್ಕೆ ಹೊಸದಲ್ಲ. ಇದೆಲ್ಲಾ ರಾಜಕೀಯ ಪ್ರೇರಿತ ಎಂದರು.

Ad Widget

ಇದೇ ವೇಳೆ ತಮ್ಮ ಮಗ ಪ್ರಜ್ವಲ್ ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ತಾವೆಲ್ಲೂ ಓಡಿ ಹೋಗಿಲ್ಲ. ಆತ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶ ಪ್ರಯಾಣ ಮೊದಲೇ ನಿರ್ಧಾರವಾಗಿತ್ತು. ಎಫ್ಐಆರ್ ಹಾಕ್ತಾರೆ ಅನ್ನೋದು ಗೊತ್ತಿರಲಿಲ್ಲ. ತನಿಖೆಗೆ ಕರೆದರೆ ಅವನೂ ಬರುತ್ತಾನೆ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ. ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು, ನಾನು ದೇವೇಗೌಡರ ಬಳಿ ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ ಎಂದು ಹೇಳಿದ್ದಾರೆ.

Ad Widget

Ad Widget

ಕಳೆದ ವಾರ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳಿದ್ದ ಪೆನ್ ಡ್ರೈವ್ ಬೆಳಕಿಗೆ ಬಂದಿತ್ತು. ನೂರಾರು ಮಹಿಳೆಯರ ಜೊತೆ ಪ್ರಜ್ವಲ್ ರಾಸಲೀಲೆ ನಡೆಸಿದ ವಿಡಿಯೋಗಳು ಇವು. ಕೆಲಸದ ಆಮಿಷ, ಇತ್ಯಾದಿ ವಿಚಾರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಪ್ರಜ್ವಲ್ ರೇವಣ್ಣ ರುಪಯೋಗಪಡಿಸಿಕೊಂಡಿದ್ದಾರೆನ್ನಲಾಗಿದೆ.

Ad Widget

Ad Widget

Ad Widget

ಎಚ್ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪ್ಪ ಮತ್ತು ಮಗ ಪ್ರಮುಖ ಆರೋಪಿಗಳಾಗಿದ್ದಾರೆ.

Continue Reading

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading