ಉಡುಪಿ
Chaithra Kundapura | ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 7 ಕೋಟಿಯಷ್ಟು ಪಂಗನಾಮ – ಬೆಂಕಿ ಚೆಂಡು ಖ್ಯಾತಿಯ ಚೈತ್ರ ಕುಂದಾಪುರಳನ್ನು ಸಿನಿಮಿಯ ರೀತಿ ವಶಕ್ಕೆ ಪಡೆದ ಸಿಸಿಬಿ
ಉಡುಪಿ : ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಮುಖ ಆರೋಪಿ ಹಿಂದೂ ಸಂಘಟನೆಗಳ ನಾಯಕಿ , ವಾಗ್ಮಿ ಚೈತ್ರ ಕುಂದಾಪುರಳನ್ನು (Chaithra Kundapura) ಪೊಲೀಸ್ ರು ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ, ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ , ಬೆಂಗಳೂರಿನ ಶೆಫ್ಟಾಕ್ ಫುಡ್ & ಹಾಸ್ಪಿಟಾಲಿಟಿ ಪ್ರೈ.ಲಿ ನ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೇಟ್ ಕೊಡಿಸುವ ನೆಪದಲ್ಲಿ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿದ್ದರು.
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರು, ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಾರೆ. ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರಿನ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಸುಮಾರು ಮೂರು ಹಂತದಲ್ಲಿ ಏಳು ಕೋಟಿ ರೂಪಾಯಿ ಪೀಕಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಹಿಂದೂತ್ವದ ಬೆಂಕಿ ಚೆಂಡು ಎಂದೇ ಖ್ಯಾತಿಯಾಗಿದ್ದ ಚೈತ್ರ ಕುಂದಾಪುರ ಹಾಗೂ ಇತರರ ಮೂವರನ್ನು ವಶಕ್ಕೆ ಪಡೆದ ಸಿಸಿಬಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಹಲವು ವ್ಯಕ್ತಿಗಳಿಗೆ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಬೇರೆ ಬೇರೆ ತಂಡಗಳು ಇದೇ ರೀತಿ ವಂಚಿಸಿರುವ ಬಗ್ಗೆ ಬಂದಿರುವ ದೂರುಗಳನ್ನು ಗಂಭೀರವಾಗಿ ಪೊಲೀಸ್ ಇಲಾಖೆ ಪರಿಗಣಿಸಿದೆ ಎನ್ನಲಾಗಿದೆ.
ಉಡುಪಿ
Raghupathi Bhat-ಕಲ್ಕುಡ ದೈವ ಆಶೀರ್ವಾದ ನನಗೆ ಸಿಕ್ಕಿದೆ : ಬಿಜೆಪಿ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ಮೇ.16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ: ಜನಸಂಘದ ಕಾಲದಲ್ಲಿ ಪಕ್ಷ ಕಟ್ಟಿದವರು ನನ್ನ ಚುನಾವಣ ಕಚೇರಿ ಉದ್ಘಾಟಿಸಲಿದ್ದಾರೆ: ರಘುಪತಿ ಭಟ್ ಘೋಷಣೆ
ಉಡುಪಿ: ಬಿಜೆಪಿ ನಾಯಕ, ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ರವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು ಜನ ಸಂಘದ ಕಾಲದಿಂದ ಪಕ್ಷ ಕಟ್ಟಿದವರು ನನ್ನ ಚುನಾವಣೆ ಕಚೇರಿ ಉದ್ಘಾಟಿಸಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಮಈ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬುದಕ್ಕೆ ಇದೆ ಸ್ಪಷ್ಟ ಸಂಖ್ಯಾತ ಎಂದು ಹೇಳಿದ್ದಾರೆ.
ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂಬ ಸಂಶಯ ಯಾರಿಗೂ ಬೇಡ. ನಾಳೆ ಮೈಸೂರಿನಲ್ಲಿ ಮಧ್ಯಾಹ್ನ 1.30 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. 28 ವಿಧಾನಸಭಾ ಕ್ಷೇತ್ರದಿಂದ ಬೆಂಬಲಿಗರು ಮೈಸೂರಿಗೆ ಬರುತ್ತಾರೆ. ಜನಸಂಘದ ಪ್ರಮುಖರು ಬಂದಿರುವುದರಿಂದ ಆತ್ಮಸ್ಥೈರ್ಯ ಹೆಚ್ಚಿದೆ. ಪ್ರಧಾನಿ ಮೋದಿ ನನ್ನ ಆದರ್ಶ. ಅವರ ಅಭಿಮಾನಿಯಾಗಿ ಮೋದಿ ಫೋಟೋ ಹಾಕಿಕೊಳ್ಳುವ ಅರ್ಹತೆ ನನಗೆ ಇದೆ. ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಶಿವಮೊಗ್ಗದಲ್ಲಿ ಹಗಲಿರುಳು ಕೆಲಸ ಮಾಡಿದ್ದೇನೆ. ಡಾ. ವಿ. ಎಸ್ ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ ನನ್ನ ರಾಜಕೀಯದ ಪ್ರೇರಕರು ಎಂದು ಹೇಳಿದರು.
ಪ್ರತಿ ವರ್ಷ ನಮ್ಮ ಮನೆಯಲ್ಲಿ ದೈವ ಕೋಲ ನಡೆಯುತ್ತದೆ ಹಾಗೂ ಮನೆಯ ಗೃಹಪ್ರವೇಶದ ಪ್ರಯುಕ್ತ ಕೋಲ ಮಾಡಿಸಿದ್ದೇವೆ. ನನಗೆ ಕಲ್ಕುಡ ದೈವದ ಆಶೀರ್ವಾದ ಸಿಕ್ಕಿದೆ. ನಿನ್ನ ನಿಲುವು ಸರಿ ಇದೆ ನೂರಕ್ಕೆ ನೂರು ಗೆದ್ದು ಬರುತ್ತಿ ಎಂಬ ಅಭಯ ದೈವಗಳು ನೀಡಿದೆ. ನಾನು ದೈವವನ್ನು ಬಹಳ ನಂಬುತ್ತೇನೆ. ಇದರಿಂದಾಗಿ ನನಗೆ ಹುಮ್ಮಸ್ಸು ಬಂದಿದೆ ಎಂದು ಹೇಳಿದರು.
ಪಕ್ಷದಲ್ಲಿ ದುಡಿದವರಿಗೆ ಕಾರ್ಯಕರ್ತರಿಗೆ ಬೆಲೆ ಇಲ್ಲ. ಲೋಕಸಭೆ, ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಯನ್ನು ಹಿಂದೆ ಹಿಂದೆ ಬೂತ್ ಮಟ್ಟದಲ್ಲಿ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತಿದ್ದರು. ವಿಧಾನಸಭಾ ಅಭ್ಯರ್ಥಿಗಾಗಿ ವೋಟಿಂಗ್ ಮಾಡಿದರು ಆ ವೋಟನ್ನು ಲೆಕ್ಕವೇ ಮಾಡಿಲ್ಲ. ಹಿರಿಯ ಕಾರ್ಯಕರ್ತರನ್ನು ಬಿಟ್ಟು ಚಮಚಾಗಿರಿ ಮಾಡುವವರಿಗೆ ಟಿಕೆಟ್ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗುವ ಸ್ವಭಾವದವನಲ್ಲ. ನಾನು ಕಾರ್ಯಕರ್ತರ ಜೊತೆ ಇರುತ್ತೇನೆ ಹಾಗಾಗಿ ಪ್ರತಿ ಬಾರಿ ಟಿಕೆಟ್ ನಿರಾಕರಣೆ ಆಗುತ್ತದೆ. ನಾನು ಚಮಚಾಗಿರಿ ಮಾಡಲ್ಲ.. ಚಮಚಾಗಿರಿ ಮಾಡಿದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಪಕ್ಷಕ್ಕಾಗಿ ದುಡಿದ ಎಲ್ಲಾ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಉಡುಪಿಯಲ್ಲಿ ಬಿಜೆಪಿ ನಾಯಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ
Legislative Council elections-ವಿಧಾನ ಪರಿಷತ್ ಚುನಾವಣೆ – ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯ ಸ್ಪರ್ಧೆಯ ಬಿಸಿ – ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ..!
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂದು ಹೆಸರುವಾಸಿ, ಶಿಸ್ತಿನ ಪಕ್ಷ ಎಂಬ ಮನ್ನಣೆ. ಬಿಜೆಪಿಯ ನಾಯಕರು ತಮ್ಮ ಅತೃಪ್ತಿ, ಅಸಮಾಧನ, ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ, ಹೈಕಮಾಂಡ್ ನಿರ್ಧಾರವನ್ನು ಶಿರಸಾವಹಿಸಿ ಪಾಲಿಸುತ್ತಾರೆ ಎನ್ನುವ ಬಾವನೆ ಸಾರ್ವಜನಿಕ ವಲಯದಲ್ಲಿದೆ. ಆದರೇ ಉಭಯ ಜಿಲ್ಲೆಗಳಲ್ಲಿ ಪಕ್ಷ ಅಶಿಸ್ತಿನ ಆಗರವಾಗುತ್ತಿದೆ ಎನ್ನುವುದಕ್ಕೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸಾಕ್ಷಿಯಾಗುತ್ತಿದೆ.
ನೈಋತ್ಯ ಪದವೀಧರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರ ಎರಡರಲ್ಲೂ ಬಿಜೆಪಿಯ ಬಂಡಾಯದ ಬಿಸಿ ಎದುರಿಸುತ್ತಿದೆ. ಬಿಜೆಪಿ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಉಡುಪಿ ಮಾಜಿ ಶಾಸಕ ಬಿಜೆಪಿಯ ರಘುಪತಿ ಭಟ್ ರವರು ಜೂನ್ 3ರಂದು ನಡೆಯುವ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತ ಎಸ್. ಆರ್. ಹರೀಶ್ ಆಚಾರ್ಯ ಕೂಡ ಪಕ್ಷೇತರ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಕರಾವಳಿಗೆ ಪಕ್ಷದಿಂದ ಅನ್ಯಾಯವಾಗಿದೆ. ಪಕ್ಷದ ವರಿಷ್ಠರು ಟಿಕೆಟ್ ಭರವಸೆ ನೀಡಿದ್ದರು. ಈಗ ನಿರ್ಧಾರ ಬದಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಜನರೊಂದಿಗೆ ಇದ್ದು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ” ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಇನ್ನೂ ಇತ್ತ ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಸ್. ಆರ್.ಹರೀಶ್ ಆಚಾರ್ಯ “ ಕರಾವಳಿ ಜಿಲ್ಲೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಈ ಬಾರಿಯ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಂಪೂರ್ಣ ನಿರ್ಲಕ್ಷಿಸಿದ್ದು ಕರಾವಳಿ ಜಿಲ್ಲೆಯ ಯಾರೊ ಬ್ಬರಿಗೂ ಟಿಕೆಟ್ ನೀಡಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಮೈತ್ರಿ ಪಕ್ಷಕ್ಕೆ ನೀಡಲಾಗಿದೆ. ಕರಾವಳಿಗರನ್ನು ಪೂರ್ತಿ ಕಡೆಗಣಿಸಿರುವುದರಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದು, ಮೇ 15ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಅಭ್ಯರ್ಥಿಯಾಗಿ ಸ್ಪರ್ಧೆ: ಸಹಕಾರ ಭಾರತಿ ಸಂಘಟನೆಯ ಹಿನ್ನೆಲೆಯಿಂದ ಬಂದ ನಾನು ಬಂಡಾಯ, ಪಕ್ಷೇತರನಾಗಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಓರ್ವ ʻಅಭ್ಯರ್ಥಿ’ಯಾಗಿ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿ ಹಿರಿಯ ಮುಖಂಡರ ಬಳಿ ನನ್ನ ಸ್ಪರ್ಧೆಯ ಕುರಿತು ಈ ಹಿಂದೆಯೇ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ಉಡುಪಿ
Raghupathi Bhat-ರಘುಪತಿ ಭಟ್ ಗೆ ಟಿಕೇಟ್ ಮಿಸ್: ವಿಧಾನಪರಿಷತ್ ಗೆ ಪಕ್ಷೇತರನಾಗಿ ಸ್ಪರ್ಧೆ ಘೋಷಣೆ
ಉಡುಪಿ: ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷವು ರಘುಪತಿ ಭಟ್ರವರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲು ನಿರಾಕರಿಸಿತ್ತು. ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದರು.
ರಘುಪತಿ ಭಟ್ ಅವರು ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದು ಕೊನೆ ಕ್ಷಣದಲ್ಲಿ ಪಕ್ಷವು ಅವರಿಗೆ ಕೈಕೊಟ್ಟಿದೆ. ಶಿವಮೊಗ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಭಟ್ ಆಸೆಗೆ ತಣ್ಣೀರೆರಚಿದೆ. ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನ ಗೊಂಡಿರುವ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಪದವೀಧರರ ಹೊಸ ಮತದಾರ ಸೇರ್ಪಡೆಗೆ ತುಂಬಾ ಪ್ರಯತ್ನ ಮಾಡಿದ್ದೇನೆ. 36 ಸಾವಿರ ಹೊಸ ಮತದಾರ ಸೇರ್ಪಡೆ ಮಾಡಲು ಕಾರ್ಯಕರ್ತರ ಜೊತೆ ಶ್ರಮಿಸಿದ್ದೇನೆ. ಇದೇ ಪದವೀಧರರು ಒತ್ತಡ ಹಾಕಿ ನಿಮಗೆ ತುಂಬಾ ಅನ್ಯಾಯ ಆಗಿದ್ದು, ಕೆಲಸಗಾರನನ್ನು ಪಕ್ಷವು ನಿರ್ಲಕ್ಷಿಸಿರುವುದು ದುರಂತ ಎಂದು ಸಿಡಿಮಿಡಿಗೊಂಡಿದ್ದಾರೆ.
ಹಿರಿಯ ಕಾರ್ಯಕರ್ತನಿಗೆ ನೀಡಿದ್ದರೆ ನಾನು ಗೌರವಿಸುತ್ತಿದ್ದೆ. ಗಿರೀಶ್ ಪಾಟೀಲ್, ದತ್ತಾತ್ರೆಯ, ಜ್ಞಾನೇಶ, ವಿಕಸ್ ಪುತ್ತೂರು ಇದ್ದರು ಅವರಿಗೂ ನೀಡದೆ ಅನ್ಯಾಯವಾಗಿದೆ. ದುಡಿದ ಕಾರ್ಯಕರ್ತನಿಗೆ ನೀಡದೆ, ಇತ್ತೀಚೆಗೆ ಬಂದ ನಾಯಕನಿಗೆ ನೀಡಿದ್ದು ಬಹಳ ಬೇಸರವಾಗಿದೆ ಎಂದರು.
-
ಬಿಗ್ ನ್ಯೂಸ್1 day ago
Naturals Ice-Cream | ನ್ಯಾಚುರಲ್ಸ್ ಐಸ್ ಕ್ರೀಂ ಸ್ಥಾಪಕ, ಮಂಗಳೂರಿನ ಪ್ರಖ್ಯಾತ ‘ಬೊಂಡ ಪ್ಯಾಕ್ಟರಿ’ ಯ ಮಾಲಕ ರಘುನಂದನ್ ಕಾಮತ್ ಇನ್ನಿಲ್ಲ – ಮಂಗಳೂರಿನ ಹಣ್ಣು ವ್ಯಾಪಾರಿಯ ಮಗ 300ಕೋಟಿಯ ಬ್ರ್ಯಾಂಡ್ ಕಟ್ಟಿದ ಕಥೆ ಇಲ್ಲಿದೆ
-
ದಕ್ಷಿಣ ಕನ್ನಡ2 days ago
Heavy Rain Alert: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಒಂದು ವಾರ ಭಾರೀ ಮಳೆ – 2 ದಿನ ಆರೆಂಜ್ ಅಲರ್ಟ್ , 2 ದಿನ ಯೆಲ್ಲೋ ಅಲರ್ಟ್ – ಯಾವಾಗ ? ಇಲ್ಲಿದೆ ಮಾಹಿತಿ
-
ಬಿಗ್ ನ್ಯೂಸ್2 days ago
New Ration Card-ಜೂನ್ ಮೊದಲ ವಾರದಿಂದ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ – ನೀವು ಸಲ್ಲಿಸಬೇಕಾದ ದಾಖಲೆಗಳ ವಿವರ ಇಲ್ಲಿದೆ
-
ಅಂತರ ರಾಜ್ಯ2 days ago
PM Modi-ಮಾಧ್ಯಮಗಳು ಮೊದಲಿನಂತೆ ಪತ್ರಿಕಾ ಧರ್ಮ ಪಾಲಿಸುತ್ತಿಲ್ಲ..! ಹಾಗಾಗಿ ನಾನು 10 ವರ್ಷಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ : ನರೇಂದ್ರ ಮೋದಿ
-
ಅಪರಾಧ2 days ago
Mangaluru-ಮಂಗಳೂರು: ದಂಡ ಕಟ್ಟಲು ಹೇಳಿದ ಕೋಪದಲ್ಲಿ ಪೊಲೀಸ್ ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿ – ಪೊಲೀಸ್ ಕಮೀಷನರ್ ಮಾಡಿದ್ದೇನು ?
-
ಚಿನ್ನ-ಬೆಳ್ಳಿ ದರ2 days ago
Gold Rate Today-ಮತ್ತೆ ಏರಿಕೆ ಕಂಡ ಚಿನ್ನ – ಗಗನಕ್ಕೆರಿದ ಬೆಳ್ಳಿ ದರ ; ಇಲ್ಲಿದೆ ಇಂದಿನ ರೇಟ್
-
ನಿಧನ ವಾರ್ತೆ1 day ago
Baby dies-ಡಾಕ್ಟ್ರು ಹೇಳಿದರೆಂದು ನವಜಾತ ಶಿಶುವನ್ನು ನೇರ ಬಿಸಿಲಿನಲ್ಲಿಟ್ಟ ಹೆತ್ತವರು – 5 ದಿನದ ಹಸುಗೂಸು ಮೃತ್ಯು
-
ಬಿಗ್ ನ್ಯೂಸ್2 days ago
Dakshina Kannada Sand Mafia | ದಕ್ಷಿಣ ಕನ್ನಡದ ಅಕ್ರಮ ಮರಳು ಮಾಫಿಯಾದ ಕರಾಳ ಮುಖ ಅನಾವರಣ : ಮಾಫಿಯಾದವರಿಂದ ಖುದ್ದು ಎಸಿಪಿ ಇನ್ಸ್ ಪೆಕ್ಟರ್ ಗೆ ಹೆಚ್ಚಿನ ಭದ್ರತೆ ನೀಡಲು ಸಾರ್ವಜನಿಕರಿಂದಲೇ ಮನವಿ