ಅಪರಾಧ
ಬೆಳ್ಳಾರೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ – ಸ್ಥಳೀಯ ವ್ಯಕ್ತಿಯ ಬಂಧನ ?
ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೇಜರ್ ಬ್ರೆಕ್ ತ್ರೂ ಲಭಿಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಥಳೀಯ ನಿವಾಸಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಜ್ಯದ ಪ್ರಮುಖ ದೃಶ್ಯ ಮಾದ್ಯಮಗಳು ವರದಿ ಬಿತ್ತರಿಸಿದೆ
ಬೆಳ್ಳಾರೆಯ ಬೂಡು ಪ್ರದೇಶದ ನಿವಾಸಿ ಬಂಧಿಸಲಾಗಿದೆ ಎನ್ನಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದು
ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಆತ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿಯಲ್ಲಿ ತಿಳಿಸಿವೆ.
ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಹಂತಕರ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟಿವಿ ವಾಹಿನಿಗಳು ಪೊಲೀಸ್ ಮೂಲಗಳ ಮಾಹಿತಿಯನ್ನು ಆಧರಿಸಿ ವರದಿ ಮಾಡಿವೆ.
ಇನ್ನು ಪೊಲೀಸರು 15 ಕ್ಕೂ ಹೆಚ್ವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಇದರಲ್ಲಿ ಬಹುತೇಕರು ಒಂದು ಪಕ್ಷಕ್ಕೆ ಸೇರಿದ ಸಂಘಟನೆಯೊಂದರ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪರಾಧ
Anjali Murder Case ಹುಬ್ಬಳಿ : ಅಕ್ಕ ಅಂಜಲಿ ಅಂಬಿಗೇರ ಹತ್ಯೆಯಿಂದ ಮನನೊಂದು ತಂಗಿ ಆತ್ಮಹತ್ಯೆಗೆ ಯತ್ನ
ಮೂರು ದಿನಗಳ ಹಿಂದೆ ನಡೆದ ಹುಬ್ಬಳಿಯ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ನೊಂದ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಅಂಜಲಿ ಸಹೋದರಿ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದವರು . ಇವರು ಮೇ 18 ರಂದು ಸಂಜೆ ಮನೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶನಿವಾರ ಅಂಜಲಿ ಹತ್ಯೆ ಖಂಡಿಸಿ ಹುಬ್ಬಳಿಯಲ್ಲಿ ಪ್ರತಿಭಟನೆ ಸಭೆ ನಡೆದಿತ್ತು.ಇದರಲ್ಲಿ ಯಶೋಧಾ ಭಾಗವಹಿಸಿದ್ದರು. ಬಳಿಕ ಮನೆಗೆ ಮರಳಿದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.
ಏನಿದು ಪ್ರಕರಣ:
ವಿಶ್ವನಾಥ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಯನ್ನು ಹುಬ್ಬಳಿಯ ವೀರಾಪುರ ಓಣಿಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ್ (21) ಎಂಬ ಯುವಕ ಒಪ್ಪಿಕೊಂಡಿಲ್ಲ ಎಂಬ ಸಿಟ್ಟಿನಿಂದ ಬೆಳ್ಳಂಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದನು..
ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ.ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.
ಅಂತರ ರಾಜ್ಯ
Priest-ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಖಾಸಗಿ ಟಿವಿ ನಿರೂಪಕಿಯ ಅತ್ಯಾಚಾರವೆಸಗಿದ ಅರ್ಚಕ
ಚೆನ್ನೈ: ಖಾಸಗಿ ಟಿವಿಯೊಂದರ ನಿರೂಪಕಿಯೊಬ್ಬರಿಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥ ಕುಡಿಸಿ, ನಗರದ ಪ್ರಸಿದ್ಧ ದೇವಾಲಯವೊಂದರ ಅರ್ಚಕರೊಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ನಿರೂಪಕಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಸಾಲಿಗ್ರಾಮಂನ 30 ವರ್ಷದ ದಿವ್ಯ (ಹೆಸರು ಬದಲಿಸಲಾಗಿದೆ) ಘಟನೆಯ ಸಂತ್ರಸ್ತೆಯಾಗಿದ್ದು, ಆಕೆ ತನ್ನ ದೂರಿನಲ್ಲಿ ನಾನು ಆಧ್ಯಾತ್ಮಿಕ ಶ್ರದ್ಧೆಯುಳ್ಳ ಮಹಿಳೆಯಾಗಿದ್ದು, ಚೆನ್ನೈನ ಪ್ಯಾರಿ ಕಾರ್ನರ್ ನಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ನಿತ್ಯ ಭೇಟಿ ನೀಡುತ್ತಿದ್ದೆ ಹಾಗೂ ಈ ಸಂದರ್ಭದಲ್ಲಿ ನನಗೆ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಮುನುಸ್ವಾಮಿಯ ಪರಿಚಯವಾಯಿತು ಎಂದು ಹೇಳಿದ್ದಾರೆ.
ಕಾರ್ತಿಕ್ ಮುನುಸ್ವಾಮಿ ದೇವಾಲಯದಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮಗಳ ಕುರಿತು ಆಕೆಗೆ ವಾಟ್ಸ್ ಆ್ಯಪ್ ನಲ್ಲಿ ಸಂದೇಶ ರವಾನಿಸುತ್ತಿದ್ದ ಎಂದು ಹೇಳಲಾಗಿದೆ. ಅವರಿಬ್ಬರ ನಡುವೆ ಗೆಳೆತನವೇರ್ಪಟ್ಟ ನಂತರ, ಆಕೆ ದೇವಾಲಯಕ್ಕೆ ಭೇಟಿ ನೀಡಿದಾಗಲೆಲ್ಲ ಆಕೆಯನ್ನು ಗರ್ಭಗುಡಿಗೆ ಕರೆದೊಯ್ಯುತ್ತಿದ್ದ ಕಾರ್ತಿಕ್ ಮುನುಸ್ವಾಮಿ, ಆಕೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡುತ್ತಿದ್ದ ಎಂದೂ ದೂರಿನಲ್ಲಿ ಹೇಳಲಾಗಿದೆ.
ದಿನ ಕಳೆದಂತೆ, ಒಂದು ದಿನ ದಾರಿ ಮಧ್ಯೆ ಮನೆಗೆ ಬಿಡುವುದಾಗಿ ಹೇಳಿ ನನ್ನನ್ನು ಕಾರ್ತಿಕ್ ಮುನುಸ್ವಾಮಿ ತನ್ನ ಕಾರ್ ನಲ್ಲಿ ಕರೆದೊಯ್ದ. ಆದರೆ, ಆತ ನನಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥವನ್ನು ನೀಡಿದ. ಅದನ್ನು ಕುಡಿದು ಪ್ರಜ್ಞಾಹೀನಳಾದ ನನ್ನ ಮೇಲೆ ಆತ ಅತ್ಯಾಚಾರ ನಡೆಸಿದ. ನಂತರ, ದೇವಾಲಯದಲ್ಲಿ ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಅಂದಿನಿಂದ ಕಾರ್ತಿಕ್ ಮುನುಸ್ವಾಮಿ ಪದೇ ಪದೇ ನನ್ನ ಮನೆಗೆ ಭೇಟಿ ನೀಡಿದ್ದು, ನಾನು ಗರ್ಭಿಣಿಯಾದೆ. ಆದರೆ, ಸುಳ್ಳು ನೆಪ ಹೇಳಿ ನನ್ನನ್ನು ವಡಾಪಳನಿಯಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ನನಗೆ ಗರ್ಭಪಾತ ಮಾಡಿಸಲಾಯಿತು. ಇದಾದ ನಂತರ ನನ್ನನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಆತ ನನ್ನನ್ನು ಒತ್ತಾಯಿಸಿದ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.
ವಿರುಗಂಬಾಕ್ಕಂ ಮಹಿಳಾ ಪೊಲೀಸರು ಖಾಸಗಿ ಟಿವಿಯ ನಿರೂಪಕಿಯು ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರುದಾರ ಮಹಿಳೆಯೊಂದಿಗೆ ದೇವಾಲಯದ ಅರ್ಚಕ ಕಾರ್ತಿಕ್ ಮುನುಸ್ವಾಮಿ ಇರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೊಗಳು ಪತ್ತೆಯಾಗಿವೆ. ಕಾರ್ತಿಕ್ ಮುನುಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಆರು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಎಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರುವ ದೂರುದಾರ ಮಹಿಳೆ, ಚೆನ್ನೈನ ಖಾಸಗಿ ಟಿವಿಯೊಂದರಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ
Mangaluru-ಮಂಗಳೂರು: ದಂಡ ಕಟ್ಟಲು ಹೇಳಿದ ಕೋಪದಲ್ಲಿ ಪೊಲೀಸ್ ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿ – ಪೊಲೀಸ್ ಕಮೀಷನರ್ ಮಾಡಿದ್ದೇನು ?
ಮಂಗಳೂರು: ಪೊಲೀಸ್ ಗಸ್ತು ವಾಹನದ ವಿಮೆ ಮುಕ್ತಾಯವಾಗಿದೆಯೆಂಬ ವೀಡಿಯೊವೊಂದು ಇಂದು ಬೆಳಗ್ಗಿನಿಂದ ಮಂಗಳೂರಿನ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ವಾಹನ ಸವಾರನೊಬ್ಬನಲ್ಲಿ ಟ್ರಾಫಿಕ್ ಪೊಲೀಸರು ವಾಹನದ ದಾಖಲಾತಿ ಕೇಳಿದ್ದು , ಆಗ ತನಗೆ ಅರ್ಜಂಟ್ ಹೋಗಲಿದೆ ಎಂದು ಹೇಳಿದ ವ್ಯಕ್ತಿ ಬಳಿಕ ಅಲ್ಲಿದ್ದ ಪೊಲೀಸ್ ಗಸ್ತು ವಾಹನಕ್ಕೆ ವಿಮೆ ಇಲ್ಲ ಎಂದು ತಿಳಿಸಿ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದ.
ಇದೀಗ ವಿಡಿಯೋ ಮಾಡಿದವನಿಗೆ ದಂಡ ವಿಧಿಸಿ ಪೊಲೀಸ್ ಕಮಿಷನರ್ ಇಲಾಖೆಯ ವಾಹನದ ವಿಮೆವಿಮೆ ಮುಕ್ತಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ?
ಮೇ 16ರಂದು ಸಂಜೆ ನಗರದ ಕುಂಟಿಕಾನ ಬಳಿ ಕೆಎ-19-ಜಿ-1023 ನೋಂದಣಿಯ ಹೆದ್ದಾರಿ ಗಸ್ತು ವಾಹನ ಕರ್ತವ್ಯದಲ್ಲಿತ್ತು. ಈ ವೇಳೆ ವ್ಯಕ್ತಿಯೋರ್ವನಿಗೆ ಟ್ರಾಫಿಕ್ ಪೊಲೀಸ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರಿಸಿಲ್ಲ ಎಂದು ದಂಡ ವಿಧಿಸಿದ್ದರು.
ಇದರಿಂದ ಕುಪಿತನಾದ ಆತ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಣ ಮಾಡಿ ಅದರ ವಿಮಾ ಅವಧಿಯು ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೊ ವೈರಲ್ ಮಾಡಿದ್ದಾನೆ.
ವಿಡಿಯೋ ರೆಕಾರ್ಡ್ ಮಾಡುವ ವೇಳೆ ಅಲ್ಲಿದ್ದ ಸಿಬ್ಬಂದಿ ಸರಕಾರಿ ವಾಹನದ ವಿಮೆ ಪಾವತಿಯ ಕುರಿತ ಮಾಹಿತಿ ನೀಡಿದರೂ ಆ ವ್ಯಕ್ತಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.
ವೀಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇದು ತಪ್ಪು ಮಾಹಿತಿ. ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳು ಕಡ್ಡಾಯವಾಗಿ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್ಮೆಂಟ್ (ಕೆ.ಜಿ.ಐ.ಡಿ) ವಿಮೆ ಹೊಂದಿರುತ್ತದೆ. ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಣವಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ತೋರಿಸಲಾದ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿ 2025ರ ಅಕ್ಟೋಬರ್ 13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು 2025ರ ಜನವರಿ 8ರವರೆಗೆ ಚಾಲ್ತಿಯಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ ವೀಡಿಯೊ ಮಾಡಿ ವೈರಲ್ ಮಾಡಿರುವ ವ್ಯಕ್ತಿಯ ಬೈಕ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರ್ಪಡಿಸದೇ ಇರುವುದರಿಂದ ಆತನ ಮೇಲೆ ರೂ. 500 ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
-
ಬಿಗ್ ನ್ಯೂಸ್1 day ago
Naturals Ice-Cream | ನ್ಯಾಚುರಲ್ಸ್ ಐಸ್ ಕ್ರೀಂ ಸ್ಥಾಪಕ, ಮಂಗಳೂರಿನ ಪ್ರಖ್ಯಾತ ‘ಬೊಂಡ ಪ್ಯಾಕ್ಟರಿ’ ಯ ಮಾಲಕ ರಘುನಂದನ್ ಕಾಮತ್ ಇನ್ನಿಲ್ಲ – ಮಂಗಳೂರಿನ ಹಣ್ಣು ವ್ಯಾಪಾರಿಯ ಮಗ 300ಕೋಟಿಯ ಬ್ರ್ಯಾಂಡ್ ಕಟ್ಟಿದ ಕಥೆ ಇಲ್ಲಿದೆ
-
ಅಂತರ ರಾಜ್ಯ2 days ago
PM Modi-ಮಾಧ್ಯಮಗಳು ಮೊದಲಿನಂತೆ ಪತ್ರಿಕಾ ಧರ್ಮ ಪಾಲಿಸುತ್ತಿಲ್ಲ..! ಹಾಗಾಗಿ ನಾನು 10 ವರ್ಷಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ : ನರೇಂದ್ರ ಮೋದಿ
-
ಚಿನ್ನ-ಬೆಳ್ಳಿ ದರ2 days ago
Gold Rate Today-ಮತ್ತೆ ಏರಿಕೆ ಕಂಡ ಚಿನ್ನ – ಗಗನಕ್ಕೆರಿದ ಬೆಳ್ಳಿ ದರ ; ಇಲ್ಲಿದೆ ಇಂದಿನ ರೇಟ್
-
ಅಪರಾಧ2 days ago
Mangaluru-ಮಂಗಳೂರು: ದಂಡ ಕಟ್ಟಲು ಹೇಳಿದ ಕೋಪದಲ್ಲಿ ಪೊಲೀಸ್ ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿ – ಪೊಲೀಸ್ ಕಮೀಷನರ್ ಮಾಡಿದ್ದೇನು ?
-
ನಿಧನ ವಾರ್ತೆ2 days ago
Baby dies-ಡಾಕ್ಟ್ರು ಹೇಳಿದರೆಂದು ನವಜಾತ ಶಿಶುವನ್ನು ನೇರ ಬಿಸಿಲಿನಲ್ಲಿಟ್ಟ ಹೆತ್ತವರು – 5 ದಿನದ ಹಸುಗೂಸು ಮೃತ್ಯು
-
Uncategorized1 day ago
Pavitra jayaram ನಟಿ ಪವಿತ್ರಾ ಸಾವಿನಿಂದ ನೊಂದು ಸಹನಟ ಚಂದು ಆತ್ಮಹತ್ಯೆ ; ತೆಲುಗು ಕಿರುತೆರೆ ಶಾಕ್
-
ಕ್ರೀಡೆ2 days ago
Virat Kohli-ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಕುರಿತು ಬಾವುಕರಾದ ಕೊಹ್ಲಿ – ವಿರಾಟ್ ಮಾತು ಕೇಳಿ ಅಭಿಮಾನಿಗಳಿಗೆ ನೋವು
-
ಬಿಗ್ ನ್ಯೂಸ್2 days ago
Dakshina Kannada Sand Mafia | ದಕ್ಷಿಣ ಕನ್ನಡದ ಅಕ್ರಮ ಮರಳು ಮಾಫಿಯಾದ ಕರಾಳ ಮುಖ ಅನಾವರಣ : ಮಾಫಿಯಾದವರಿಂದ ಖುದ್ದು ಎಸಿಪಿ ಇನ್ಸ್ ಪೆಕ್ಟರ್ ಗೆ ಹೆಚ್ಚಿನ ಭದ್ರತೆ ನೀಡಲು ಸಾರ್ವಜನಿಕರಿಂದಲೇ ಮನವಿ