Connect with us

ಸಿನೆಮಾ

Kanthara | ನಟ ರಿಷಬ್ ಶೆಟ್ಟಿ ದಂಪತಿ ಧರ್ಮಸ್ಥಳಕ್ಕೆ ಭೇಟಿ – ‘ಕಾಂತಾರ’ ದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ – ರಿಷಬ್

Ad Widget

Ad Widget

Ad Widget

Ad Widget

ಉಜಿರೆ: ಕಾಂತಾರ (Kanthara) ಚಲನಚಿತ್ರದ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಬುಧವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Ad Widget

Ad Widget

Ad Widget

Ad Widget

ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಇತ್ತೀಚೆಗೆ ಮಂಗಳೂರಿನಲ್ಲಿ “ಕಾಂತಾರ” ಚಲನಚಿತ್ರ ನೋಡಿದ್ದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು.ನಟ ಪ್ರಮೋದ್ ಶೆಟ್ಟಿ ಕೂಡಾ ಉಪಸ್ಥಿತರಿದ್ದರು.

Ad Widget

Ad Widget

Ad Widget

Ad Widget

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿನಿಮಾ ತಯಾರಿ ಮೊದಲೆ ಧರ್ಮಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ.

Ad Widget

Ad Widget

Ad Widget

Ad Widget

ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ದೇವರೇ ಸಿನಿಮಾ ನೋಡಿ ಆಶೀರ್ವದಿಸಿದಂತಾಗಿದೆ ಎಂದು ಹೇಳಿದ ರಿಷಬ್ ಶೆಟ್ಟಿ ಎಲ್ಲಾ ಕಡೆಗಳಲ್ಲಿ ಎರಡು ತಿಂಗಳಿಗೂ ಮಿಕ್ಕಿ ಜನರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Ad Widget

Ad Widget

Ad Widget

ಹಿಂದಿ, ತುಳು ಹಾಗೂ ಇತರ ಭಾಷೆಗಳಲ್ಲ್ಲಿಯೂ ಸದ್ಯದಲ್ಲಿಯೇ ಕಾಂತಾರ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದರು. ಪತ್ನಿ ಪ್ರಗತಿ ಶೆಟ್ಟಿ ಮಾತನಾಡಿ ಇನ್ನು ಎರಡು ತಿಂಗಳು ತೀರ್ಥಯಾತ್ರೆ ಮಾಡುವ ಕಾರ್ಯಕ್ರಮವಿದ್ದು ಬಳಿಕ ಕೊಂಚ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದರು.

Click to comment

Leave a Reply

ಸಿನೆಮಾ

Devil | ದರ್ಶನ್‌ ಅಭಿನಯದ ಬಹುನಿರೀಕ್ಷಿತ ‘ಡೆವಿಲ್‌ʼ ಗೆ ನಾಯಕಿಯಾಗಿ ಆಯ್ಕೆಯಾದ ಪುತ್ತೂರಿನ ರಚನಾ ರೈ

Ad Widget

Ad Widget

Ad Widget

Ad Widget

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಡೆವಿಲ್‌ ದಿ ಹೀರೋʼ ಸಿನಿಮಾ ಅನೌನ್ಸ್‌ ಆದ ದಿನದಿಂದ ಅಭಿಮಾನಿಗಳ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.ʼಕಾಟೇರʼ ಭರ್ಜರಿ ಯಶಸ್ಸಿನ ಬಳಿಕ ನಟ ದರ್ಶನ್ ಪ್ರಕಾಶ್‌ ವೀರ್‌ ಆಕ್ಷನ್‌ ಕಟ್‌ ಹೇಳುತ್ತಿರುವ ʼಡೆವಿಲ್‌ʼ (Devil) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ad Widget

Ad Widget

Ad Widget

Ad Widget

ಈ ಹಿಂದೆ ಪ್ರಕಾಶ್‌ ದರ್ಶನ್‌ ಜೊತೆ ʼತಾರಕ್‌ʼ ಸಿನಿಮಾ ಮಾಡಿದ್ದರು.ಈಗಾಗಲೇ ʼಡೆವಿಲ್‌ʼ ಚಿತ್ರದ ಫಸ್ಟ್‌ ಗ್ಲಿಂಫ್ಸ್‌ ರಿಲೀಸ್‌ ಮಾಡಲಾಗಿದ್ದು, ದರ್ಶನ್‌ ಅವರ ನ್ಯೂಲುಕ್‌ ಸಖತ್‌ ಗಮನ ಸೆಳೆದಿದೆ.ಇದೀಗ ʼಡೆವಿಲ್‌ʼ ನಾಯಕಿಯನ್ನು ಚಿತ್ರತಂಡ ಪರಿಚಯ ಮಾಡಿದೆ. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ “ರಚನಾ ರೈ” ಎಂದು ಬರೆದು ನಟಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಈಗಾಗಲೇ ತುಳುವಿನ ʼಸರ್ಕಸ್‌ʼ ಹಾಗೂ ಕನ್ನಡದ ʼವಾಮನʼ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಚನಾ ʼಡೆವಿಲ್‌ʼ ಸಿನಿಮಾದ ನಾಯಕಿ ಎಂದು ಈ ಹಿಂದೆಯೇ ಮಾತುಗಳು ಹರಿದಾಡಿತ್ತು. ಇದೀಗ ಅಧಿಕೃತವಾಗಿ ಚಿತ್ರತಂಡ ಅನೌನ್ಸ್‌ ಮಾಡಿದೆ.ಅಂದಹಾಗೆ ಈಗಾಗಲೇ ʼಡೆವಿಲ್‌ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

Ad Widget

Ad Widget

Ad Widget

Ad Widget

ಶೀಘ್ರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆಯಿದೆ.ಮಾಸ್‌ ಸಿನಿಮಾವೆಂದು ಹೇಳಲಾಗುತ್ತಿರುವ ಈ ಸಿನಿಮಾ ಇದೇ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ರಿಲೀಸ್‌ ಆಗುವ ಸಾಧ್ಯತೆಯಿದೆ.ʼಡೆವಿಲ್‌ʼ ಗೆ ಸುಧಾಕರ್‌ ಛಾಯಾಗ್ರಹಣ ಹಾಗೂ ಅಜನೀಶ್‌ ಲೋಕನಾಥ್‌ ಸಂಗೀತ ಇರಲಿದೆ.

Ad Widget

Ad Widget

Ad Widget
Continue Reading

ಸಿನೆಮಾ

Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

Ad Widget

Ad Widget

Ad Widget

Ad Widget

ತುಳುನಾಡ ಕುವರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಮಿತಾ ಶೆಟ್ಟಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

Ad Widget

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ನಟಿ ಶಮಿತಾ ಶೆಟ್ಟಿ ಅವರನ್ನು ಕಾಡುತ್ತಿರುವ ಖಾಯಿಲೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ಎಲ್ಲಾ ಮಹಿಳೆಯರೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ವಿಡಿಯೋ ಮೂಲಕ ತಮ್ಮ ಆರೋಗ್ಯದ ಕುರಿತಾದ ವಿಷಯ ಹಂಚಿಕೊಂಡಿರುವ ಶಮಿತಾ ಶೆಟ್ಟಿ, ಆಸ್ಪತ್ರೆ ಬೆಡ್‌ನಿಂದಲೇ ವಿಡಿಯೋ ಮಾಡಿ ವಿವರಣೆ ನೀಡಿದ್ದಾರೆ. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ. ನನ್ನನ್ನು ಕಾಡುತ್ತಿದ್ದ ನೋವಿನ ಮೂಲ ತಿಳಿದುಕೊಂಡು ಚಿಕಿತ್ಸೆ ನೀಡಿದ ಸ್ತ್ರೀವೈದ್ಯೆ ಡಾ. ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಶಸ್ತ್ರಚಿಕಿತ್ಸೆಯಿಂದ ಸದ್ಯ ನಾನು ಈ ರೋಗದಿಂದ ಗುಣ ಮುಖಳಾಗುತ್ತಿದೇನೆ. ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ಕಾಯಿಲೆಯ ಲಕ್ಷಣ :
ಮಹಿಳೆಯರಲ್ಲಿ ಕಂಡು ಬರುವ ಎಂಡೊಮೆಟ್ರಿಯೊಸಿಸ್ ಕಾಯಿಲೆ ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಮೊದಮೊದಲು ಸೊಂಟ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕೂಡಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.

Continue Reading

ಸಿನೆಮಾ

Manjummel Boys-20ಕೋಟಿಯಲ್ಲಿ ನಿರ್ಮಾಣವಾದ ಮಂಜುಮ್ಮೆಲ್ ಬಾಯ್ಸ್ 250ಕೋಟಿ ಕಲೆಕ್ಷನ್: ಈ ರಿಯಲ್ ಸ್ಟೋರಿಯ ನೈಜ ಬಾಯ್ಸ್ ಗಳ ಹುಡುಕಾಡಿದ ನೆಟ್ಟಿಗರು

Ad Widget

Ad Widget

Ad Widget

Ad Widget

ತಿರುವನಂತಪುರಂ: ಒಳ್ಳೆಯ ಕತೆಗಳಿಂದಾಗಿ ತುಂಬಾ ಚಿಕ್ಕದಾದರೂ ಮಲಯಾಳಂ ಸಿನಿಮಾ ಇಂಡಸ್ಟ್ರಿ ಜನರ ಮನಸ್ಸನ್ನು ಗೆಲ್ಲುತ್ತಿದೆ. ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿರುವ ಮಲಯಾಳಂ ಸಿನಿಮಾಗಳು ಸಣ್ಣ ಬಜೆಟ್​ನಿಂದ ಮಾಡಿದ ಸಿನಿಮಾಗಳಾಗಿವೆ. ಸ್ಟಾರ್​ ನಟರು ನಟಿಸಿದ ಬ್ರಹ್ಮಯುಗಂ ಹಾಗೂ ಆಡು ಜೀವಿತಂ ಚಿತ್ರಗಳಲ್ಲದೆ, ಮಂಜುಮ್ಮೇಲ್​ ಬಾಯ್ಸ್ ಅಂತಹ ಸಣ್ಣ ಸಿನಿಮಾ ಕೂಡ ಇತ್ತೀಚೆಗೆ ಸೂಪರ್ ಡೂಪರ್ ಹಿಟ್ ಆಯಿತು. ನಾಯಕಿ, ಹಾಡುಗಳಿಲ್ಲದಿದ್ದರೂ ಸಿನಿಮಾ ಹಿಟ್ ಆಗಬಹುದು ಎಂಬುದನ್ನು ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಸಾಬೀತು ಮಾಡಿದೆ. ಕೇವಲ 20 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮಾಲಿವುಡ್ ಸಿನಿಪ್ರಿಯರನ್ನಷ್ಟೇ ಅಲ್ಲ ಕಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್ ಇಂಡಸ್ಟ್ರಿಯನ್ನೂ ತನ್ನತ್ತ ಸೆಳೆಯಿತು.

Ad Widget

Ad Widget

Ad Widget

Ad Widget

ಮೇ5 ರಿಂದ OTTನಲ್ಲೂ ಭಾರಿ ಸದ್ದು ಮಾಡುತ್ತಿರುವ ಮಂಜುಮ್ಮೇಲ್ ಬಾಯ್ಸ್​ ಸಿನಿಮಾ ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಕೊಡೈಕೆನಾಲ್‌ಗೆ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಹೋಗುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಅವರಲ್ಲಿ ಒಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಸಿನಿಮಾದ ಕತೆ.

Ad Widget

Ad Widget

Ad Widget

Ad Widget

2006ರಲ್ಲಿ ನಡೆದ ಈ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಸೌಬಿನ್ ಶಾಹೀರ್, ಶ್ರೀನಾಥ್ ಬಸಿ, ಬಾಲು ವರ್ಗೀಸ್, ಗಣಪತಿ ಎಸ್, ಪೊದುವಲ್ ಲಾಲ್, ದೀಪಕ್ ಪರಂಬೋಲ್ ಮತ್ತು ಇತರರು ಇದರಲ್ಲಿ ನಟಿಸಿದ್ದಾರೆ. ಪರವ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಾಯಕ ಸೌಬಿನ್ ಶಾಹೀರ್, ಬಾಬು ಶಾಹೀರೋ ಮತ್ತು ಶಾನ್ ಆಂಟೋನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಳವಾದ ಕಣಿವೆಯಲ್ಲಿ ಬಿದ್ದ ಸುಭಾಷ್ ಪಾತ್ರವನ್ನು ಶ್ರೀನಾಥ್​ ಬಾಸಿಲ್​ ಮಾಡಿದ್ದಾರೆ. ಆತನನ್ನು ಹೊರಗೆ ಕರೆತರುವ ನಾಯಕ ಕುಟ್ಟನ್ ಪಾತ್ರವನ್ನು ಸೌಬಿನ್ ಶಾಹೀರ್​ ಮಾಡಿದ್ದಾರೆ. ಇತರೆ ಸ್ನೇಹಿತರು ಅವನಿಗೆ ಸಹಾಯ ಮಾಡುತ್ತಾರೆ.

Ad Widget

Ad Widget

Ad Widget

Ad Widget

ಮಂಜುಮ್ಮೇಲ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಅನೇಕ ನೆಟ್ಟಿಗರು ನಿಜವಾದ ಸುಭಾಷ್ ಯಾರು ಮತ್ತು ಮಂಜುಮ್ಮೇಲ್ ಬಾಯ್ಸ್​ ಯಾರು ಎಂದು ಹುಡುಕುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕಣಿವೆಯಲ್ಲಿ ಬಿದ್ದು ಬದುಕುಳಿದ ಏಕೈಕ ವ್ಯಕ್ತಿ ಸುಭಾಷ್. ಇಡೀ ಸಿನಿಮಾ ಅವನ ಸುತ್ತ ಸುತ್ತುತ್ತದೆ. ಸುಭಾಷ್ ಪಾತ್ರದಲ್ಲಿ ಶ್ರೀನಾಥ್ ಬಸಿ ನಟಿಸಿದ್ದಾರೆ. ತಮ್ಮ ಕತೆಯನ್ನಾಧರಿಸಿ ಸಿನಿಮಾ ಮಾಡಿದ ನಂತರ ಸುಭಾಷ್​ ಮತ್ತು ಸ್ನೇಹಿತರಿಗೆ ಮನ್ನಣೆ ಸಿಕ್ಕಿತು. ಇದರೊಂದಿಗೆ ರಿಯಲ್ ಮಂಜುಮ್ಮೇಲ್​ ಬಾಯ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸತತ ಸಂದರ್ಶನಗಳಿಂದ ತುಂಬಾ ಖ್ಯಾತಿ ಗಳಿಸಿದ್ದಾರೆ.

Ad Widget

Ad Widget

Ad Widget

ಮೇಲಿನ ಫೋಟೋದಲ್ಲಿರುವ ವ್ಯಕ್ತಿಯೇ ನಿಜವಾದ ಸುಭಾಷ್. ಸುಭಾಷ್ ಪೂರ್ಣ ಹೆಸರು ಸುಭಾಷ್ ಚಂದ್ರನ್. ಈಗ ಸ್ನೇಹಿತರೆಲ್ಲ ವಿವಿಧೆಡೆ ನೆಲೆಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ಮೇಲೆ ಮತ್ತೊಮ್ಮೆ ಗೆಳೆಯರೆಲ್ಲ ಸೇರಿ, ಕೊಡೈಕೆನಾಲ್​ನ ಗುನಾ ಗುಹೆಗಳಿಗೆ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದಾರೆ. ಈಗ ಆ ಫೋಟೋಗಳು ಮತ್ತು ವಿಡಿಯೋಗಳು ಈಗ ವೈರಲ್ ಆಗುತ್ತಿವೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading