Connect with us

ಆರೋಗ್ಯ

Benefits of eating Early in Nights: ರಾತ್ರಿ ಬೇಗ ಊಟ ಮಾಡುವುದರಿಂದ ಇರುವ 5 ಪ್ರಯೋಜನಗಳು

Ad Widget

Ad Widget

ನಾವು ಪ್ರತಿನಿತ್ಯ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುರಿಂದ ಉತ್ತಮ ಅರೋಗ್ಯವನ್ನು ಪಡೆಯಬಹುದು. ನಾವು ರಾತ್ರಿಯ ಸಮಯದಲ್ಲಿ ಬಹಳ ಬೇಗನೆ ಊಟ ಮಾಡಬೇಕು ಮತ್ತು ಬೇಗನೆ ಮಲಗಬೇಕು. ಬನ್ನಿ ಇಂದಿನ ಲೇಖನದಲ್ಲಿ ಬೇಗನೇ ಊಟ ಮಾಡಿ ಮಲಗುವುದರಿಂದ, ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ನೋಡೋಣ..

Ad Widget

Ad Widget

Ad Widget

Ad Widget

*ತೂಕ ಇಳಿಸಿಕೊಳ್ಳಲು ಸಹಾಯಕ

Ad Widget

Ad Widget

Ad Widget

ರಾತ್ರಿ ಬೇಗ ಊಟ ಮಾಡುವುದರಿಂದ ತೂಕ ಹೆಚ್ಚಾಗುವ ಸಮಸ್ಯೆ ಕಡಿಮೆಯಾಗುತ್ತದೆ. ಸಂಜೆಯ ಭೋಜನವು ನಿಮ್ಮ ಚಯಾಪಚಯವನ್ನು ವೇಗಗೊಳಿಸುತ್ತದೆ, ಇದರಿಂದಾಗಿ ನಿಮ್ಮ ಆಹಾರವು ಮಲಗುವ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಜೀರ್ಣವಾಗುತ್ತದೆ. ರಾತ್ರಿಯಲ್ಲಿ ಆಹಾರಕ್ಕಾಗಿ ಹಂಬಲಿಸುವುದಿಲ್ಲ. ಇದರಿಂದಾಗಿ ನೀವು ಅತಿಯಾಗಿ ತಿನ್ನುವುದಿಲ್ಲ.

Ad Widget

*ಉತ್ತಮ ನಿದ್ರೆ

Ad Widget

Ad Widget

ರಾತ್ರಿಯ ಊಟ ಮತ್ತು ನಿದ್ರೆಯ ನಡುವೆ ಹೆಚ್ಚು ಸಮಯ ಸಿಗುವುದರಿಂದ ನೀವು ಉತ್ತಮ ನಿದ್ರೆ ಮಾಡಬಹುದು. ಆಹಾರವು ಸುಲಭವಾಗಿ ಜೀರ್ಣವಾಗುವುದರಿಂದ ಉತ್ತಮ ನಿದ್ರೆ ಬರುತ್ತದೆ. ಹೌದು ಅಜೀರ್ಣ ಸಮಸ್ಯೆ ಕಡಿಮೆಯಾದ ಕಾರಣ ಒಳ್ಳೆಯ ನಿದ್ದೆ ಬರುತ್ತದೆ.

*ಹೃದಯದ ಆರೋಗ್ಯ ಚೆನ್ನಾಗಿ ವೃದ್ಧಿ ಆಗುತ್ತದೆ:

ದಿನನಿತ್ಯ ಸರಿಯಾಗಿ ಆಹಾರಪದ್ಧತಿ, ವ್ಯಾಯಾಮ, ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಹೃದಯದ ಸಮಸ್ಯೆಯಿಂದ ದೂರ ಇರಬೇಕೆಂದರೆ, ಅತಿ ಹೆಚ್ಚು ಉಪ್ಪು ಮತ್ತು ಸಕ್ಕರೆ ಅಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಅಷ್ಟೇ ಅಲ್ಲದೇ ರಾತ್ರಿ ಬೇಗನೆ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ನಿದ್ರೆ ಮಾಡುವುದರಿಂದ , ಜೀರ್ಣಶಕ್ತಿ ಹೆಚ್ಚಾಗಿ, ಪೌಷ್ಟಿಕಾಂಶಗಳು ಕೂಡ ಸರಿಯಾಗಿ ದೇಹಕ್ಕೆ ಸಿಗುವುದರಿಂದ, ನಿದ್ದೆಯ ಗುಣಮಟ್ಟ ಕೂಡ ಹೆಚ್ಚಾಗುತ್ತದೆ, ಇದರಿಂದ ಹೃದಯದ ಸಮಸ್ಯೆ ಕೂಡ ದೂರವಾಗುತ್ತದೆ.

*ಜೀರ್ಣಕ್ರಿಯೆಗೆ ಪ್ರಯೋಜನಕಾರಿ

ರಾತ್ರಿ ಊಟವು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸಂಜೆ ಏಳರ ಸುಮಾರಿಗೆ ಊಟ ಮಾಡುವುದರಿಂದ ಮಲಗುವ ಮುನ್ನ ಸಾಕಷ್ಟು ಸಮಯ ಸಿಗುತ್ತದೆ, ಇದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ತಡವಾಗಿ ರಾತ್ರಿಯ ಊಟ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ಉಬ್ಬುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಆಗ ನಮ್ಮ ದೇಹದ ಕಾರ್ಯಗಳು ನಿಧಾನವಾಗುತ್ತವೆ. ಆದ್ದರಿಂದ, ರಾತ್ರಿ ಬೇಗ ಊಟ ಮಾಡುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ.

*ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ

ರಾತ್ರಿ ಬೇಗನೆ ಊಟ ಮಾಡುವುದರಿಂದ ನಿಮ್ಮ ದೇಹವು ಆಹಾರವನ್ನು ಒಡೆಯಲು ಸಮಯವನ್ನು ನೀಡುತ್ತದೆ ಮತ್ತು ಎಲ್ಲಾ ಪೋಷಕಾಂಶಗಳು ಸರಿಯಾಗಿ ಹೀರಲ್ಪಡುತ್ತವೆ. ರಾತ್ರಿ ಬೇಗ ಊಟವನ್ನು ಮಾಡುವುದರಿಂದ, ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಸಾಧ್ಯವಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ, ಇದರಿಂದಾಗಿ ಮಧುಮೇಹ , ಹೃದಯ ಕಾಯಿಲೆಗಳು ಇತ್ಯಾದಿಗಳ ಅಪಾಯವಿಲ್ಲ.

ಎಷ್ಟು ಗಂಟೆಗೆ ಊಟ ಮಾಡಬೇಕು?

ಹಾಗಾದರೇ ರಾತ್ರಿ ಎಷ್ಟು ಗಂಟೆಗೆ ಊಟ ಮಾಡಿದ್ರೆ ಒಳ್ಳೆಯದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ ಅಲ್ಲವೇ ? ಇಟಲಿಯಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ರಾತ್ರಿ 7 ಗಂಟೆಗೆ ಊಟ ಮಾಡಿದವರು 90 ವರ್ಷಕ್ಕೂ ಅಧಿಕ ಕಾಲ ಜೀವಿಸಿದ್ದು ಕಂಡು ಬಂದಿದೆ. ಇನ್ನೂ ರಾತ್ರಿ ಊಟ ಮಾಡಿದ ಬಳಿಕ ಹಾಸಿಗೆಯಲ್ಲಿ ಮಲಗುವ ಮಧ್ಯೆ ಕನಿಷ್ಟ 2 ಗಂಟೆ ಸಮಯ ಇರಬೇಕು ಎನ್ನುವುದು ಅಧ್ಯಯನವೊಂದರಿಂದ ಕಂಡುಕೊಳ್ಳಲಾಗಿದೆ. ಯಾವಾಗಲೂ ರಾತ್ರಿ 7 ರಿಂದ 8 ಗಂಟೆಯ ಒಳಗೆ ಊಟಮಾಡುವ ಅಭ್ಯಾಸ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಲಗುವ 3 ಗಂಟೆಯ ಮೊದಲು ಊಟ ಮಾಡುವುದು ಹೆಚ್ಚು ಒಳಿತು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.

Click to comment

Leave a Reply

ಆರೋಗ್ಯ

Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

Ad Widget

Ad Widget

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವುದಾದರೆ ತುಪ್ಪ ಬಹಳ ಮಹತ್ವದ ಆಹಾರವಾಗಿದೆ. ಅದು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ತುಪ್ಪವನ್ನು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ. ಹಾಗಾಗಿ ದಿನನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವುದರಿಂದ ಪ್ರಯೋಜನ ಪಡೆದುಕೊಳ್ಳಿ..
*ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ:ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅಡುಗೆಯಲ್ಲಿ ತುಪ್ಪವನ್ನು ಬಳಸುವುದು ಸೂಕ್ತವಾಗಿದೆ. ಇದು ತನ್ನದೇ ಆದ ವಿಶಿಷ್ಟ ಪರಿಮಳವನ್ನು ಹೊಂದಿದೆ, ಅದು ಯಾವುದೇ ಊಟದ ರುಚಿಯನ್ನು ಹೆಚ್ಚಿಸುತ್ತದೆ.
*ತುಪ್ಪದ ಬಳಕೆಯಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ:
ತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಶುದ್ಧ ಹಸುವಿನ ತುಪ್ಪದ ಕೆಲವು ಬೆಚ್ಚಗಿನ ಹನಿಗಳನ್ನು ಮೂಗಿನಲ್ಲಿ ಹಾಕಿದರೆ ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.
*ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ:
ತುಪ್ಪವು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು, ಏಕೆಂದರೆ ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ, ಇದು ನಿಮ್ಮ ಮುಖದ ಮೇಲಿನ ಚರ್ಮದ ವಿನ್ಯಾಸ ಮತ್ತು ಹೊಳಪನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ನೇರವಾಗಿ ಮುಖದ ಮೇಲಿನ ಚರ್ಮಕ್ಕೆ ಹಚ್ಚಿಕೊಳ್ಳಬಹುದು.
*ಕರುಳಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:ಪೌಷ್ಟಿಕಾಂಶಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆರವಾಗುತ್ತದೆ.
ಅಂದ್ರೆ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುವಂತೆ ಮಾಡುತ್ತದೆ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ತುಪ್ಪ ವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ
*ಕಟ್ಟಿದ ಮೂಗಿಗೂ ಇದು ಒಳ್ಳೆಯದು
ಶೀತದಿಂದ ನಿಮ್ಮ ಮೂಗು ಮುಚ್ಚಿದ್ದರೆ ಅಥವಾ ಕಟ್ಟಿದ್ದರೆ ಸಹ ಅದನ್ನು ನಿವಾರಿಸಿಕೊಳ್ಳಲು ತುಪ್ಪವು ತುಂಬಾನೇ ಪ್ರಯೋಜನಕಾರಿಯಾಗಿದೆ. ನಿಮಗೆ ಉಸಿರಾಟದ ತೊಂದರೆ ಆದರೆ, ನಿಮ್ಮ ರುಚಿ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ದಣಿವನ್ನು ಈ ತುಪ್ಪವು ನಿವಾರಿಸುತ್ತದೆ

Ad Widget

Ad Widget

Ad Widget

Ad Widget
Continue Reading

ಆರೋಗ್ಯ

Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್​ಸಿಆರ್​ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Ad Widget

Ad Widget

Heart Attack deaths Increased in India ನವದೆಹಲಿ: ಕೊರೊನಾ ಬಾಧಿಸಿದ (Corona panadamic)  ಕಳೆದ  3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದಯಾಘಾತ (Heart Attack) ಪ್ರಕರಣಗಳಲ್ಲಿ  ಭಾರಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ 2022ನೇ ಸಾಲಿನಲ್ಲಿ  ಹೃದಯಾಘಾತವಾಗಿ ಸಾಯುವವರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ 12.5% ಏರಿಕೆಯಾಗಿದೆ. ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋ (National Crime Record Bureau) (ಎನ್​ಸಿಆರ್​ಬಿ)​ ದೇಶದಲ್ಲಿ ಹೆಚ್ಚಳ ವಾಗುತ್ತಿರುವ ಹೃದಯಘಾತ ಸಂಬಂದಿ ಸಾವಿನ ಅಂಕಿ ಅಂಶಗಳನ್ನು ( Heart Attack death percentage) ಬಿಡುಗಡೆ (ncrb report on Heart Attack) ಮಾಡಿದೆ. ಈ ವರದಿಯ ಬಳಿಕ  ಸಾಂಕ್ರಾಮಿಕ ರೋಗಕ್ಕೂ ಹೃದಯಘಾತಕ್ಕೂ ಸಂಬಂಧವಿದೆ ಈ ಬಗ್ಗೆ ವಿಸ್ತ್ರತ ತನಿಖೆ ನಡೆಯಬೇಕು ಎಂದು ತಜ್ಙರು ಆಗ್ರಹಿಸುತ್ತಿದ್ದಾರೆ

Ad Widget

Ad Widget

Ad Widget

Ad Widget

ಎನ್​ಸಿಆರ್​ಬಿ​  ವರದಿ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. 2022ರಲ್ಲಿ  32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.   2021ರಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ  28,413. ಈ ಅಂಕಿ ಅಂಶ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣದಲ್ಲಿ  ಗಮನಾರ್ಹ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 2020ರಲ್ಲಿ 28579 ಮಂದಿ ಹಾರ್ಟ್‌ ಅಟ್ಯಾಕ್‌ (Heart attack ) ನಿಂದ ಮೃತಪಟ್ಟಿದ್ದಾರೆ.

Ad Widget

Ad Widget

Ad Widget

ಹಠಾತ್ ಸಾವಿನ ಪ್ರಮಾಣದಲ್ಲೂ ಏರಿಕೆ

Ad Widget

ಹಠಾತ್ ಸಾವುಗಳ (sudden death) ಒಟ್ಟಾರೆ ಸಂಖ್ಯೆಯಲ್ಲೂ ದೇಶದಲ್ಲಿ ಗಮನಾರ್ಹ ಏರಿಕೆ ಕಾಣಿಸಿದೆ.  ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್​ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳ  ಕಂಡು ಬಂದಿದೆ.  ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್‌ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವನ್ನು ಎನ್‌ಸಿಆರ್‌ಬಿ ಹಠಾತ್ ಮರಣದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Ad Widget

Ad Widget

ತಜ್ಞರು ಏನೂ ಹೇಳುತ್ತಾರೆ

 ಹೃದಯದ ಆರೋಗ್ಯದ ಮೇಲೆ ಇದ್ದಕ್ಕಿದಂತೆ ಆಗಾಧ ಪರಿಣಾಮ ಬೀರುತ್ತಿರುವುದರ  ಹಿಂದೆ ಸಾಂಕ್ರಮಿಕ ರೋಗದ ಬಳಿಕ ಉದ್ಭವಿಸಿದ ಪರಿಣಾಮಗಳು ಕಾರಣ ಎಂಬ ಅಭಿಪ್ರಾಯ ವೈದಕೀಯ ಲೋಕದಿಂದ ಕೇಳಿ ಬರುತ್ತಿದೆ. ವೈದಕೀಯ ಜಗತ್ತಿನ ಒಂದು ವರ್ಗದ ಪ್ರಕಾರ ಕೊರೊನಾ ಬಾಧಿಸಿದ ಸಂದರ್ಭ ಹಾಗೂ ಕೊರೊನೋತ್ತರ ಕಾಲದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದು ವರ್ಗದ ಪ್ರಕಾರ ಕೊರೊನಾ ಲಸಿಕೆಯ ಪರಿಣಾಮವು ಇದಾಗಿರಬಹುದು.  ಹೀಗಾಗಿ  ಈ ಸಾವಿನ ಹೆಚ್ಚಳದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡಬೇಕು . ಇದರ ಜತೆಗೆ  ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.

ಜೀವನ ಶೈಲಿ ಬದಲಾಯಿಸಿ

ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚಳವಾಗಲು  ಬದಲಾದ  ಜೀವನ ಶೈಲಿಯು ಒಂದು ಕಾರಣ. ದೈಹಿಕ ವ್ಯಾಯಮವಿಲ್ಲದ ಉದ್ಯೋಗಗಳು ಹೆಚ್ಚಾಗಿರುವುದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ  ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.

Continue Reading

ಆರೋಗ್ಯ

Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ  ಹಲವು ಆರೋಗ್ಯವರ್ಧಕ ಅಂಶಗಳು

Ad Widget

Ad Widget

ದಾಳಿಂಬೆ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಪ್ರೋಟೀನ್, ಫೈಬರ್, ವಿಟಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.

Ad Widget

Ad Widget

Ad Widget

Ad Widget

ಅಷ್ಟೇ ಅಲ್ಲ ಈ ಕೆಂಪು ಹಣ್ಣಿನಲ್ಲಿ ವೈನ್ ಅಥವಾ ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚಿನ ಆಂಟಿ-ಆಕ್ಸಿಡೆಂಟ್ ಗಳು ಇರುತ್ತವೆ. ಹಾಗಾದರೆ ದಾಳಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

Ad Widget

Ad Widget

Ad Widget

*ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ:ದಾಳಿಂಬೆ ಹಣ್ಣನ್ನು ತಿನ್ನಬೇಕು ಎನ್ನುವುದಕ್ಕೆ ಮುಖ್ಯ ಕಾರಣವೇ ಇದು. ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶಗಳು ಪಾಲಿಫಿನಾಲ್ ರೂಪದಲ್ಲಿ ಸಿಗುತ್ತದೆ.

Ad Widget

ಬೇರೆ ಯಾವುದೇ ಹಣ್ಣುಗಳಿಗೆ ಹೋಲಿಸಿದರೆ ದಾಳಿಂಬೆ ಹಣ್ಣುಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯನ್ನು ತಪ್ಪಿಸಲು ಇವು ನೆರವಾಗುತ್ತವೆ.

Ad Widget

Ad Widget

*ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಲಿದೆ:

ಬಹಳಷ್ಟು ಜನರಿಗೆ ಕರುಳಿನ ಭಾಗದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ ಈ ಸಮಸ್ಯೆಯನ್ನು ದಾಳಿಂಬೆ ಹಣ್ಣು ತಪ್ಪಿಸುತ್ತದೆ.

ಬಹಳಷ್ಟು ಮಹಿಳೆಯರು ಇನ್ಫಾಮೇಟರಿ ಬೋವಲ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ದಾಳಿಂಬೆ ಹಣ್ಣು ಮತ್ತು ಅದರ ಒಂದು ವರದಾನ ಎಂದು ಹೇಳಬಹುದು.

*ಪುರುಷರಿಗೆ ಪ್ರಯೋಜನಕಾರಿ:

 ದಾಳಿಂಬೆ ಸೇವನೆಯು ದೈಹಿಕ ದೌರ್ಬಲ್ಯ, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಪ್ರತಿದಿನ ದಾಳಿಂಬೆಯನ್ನು ಸೇವಿಸಬೇಕು.

*ಕ್ಯಾನ್ಸರ್ ತಡೆಯಲು ಸಹಕಾರಿ:

ತಜ್ಞರ ಪ್ರಕಾರ, ನೀವು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸಿದರೆ, ನೀವು ಕ್ಯಾನ್ಸರ್ ನಂತಹ ರೋಗಗಳನ್ನು ತಪ್ಪಿಸಬಹುದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಹಾಗೂ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

*ಅಜೀರ್ಣ ಸಮಸ್ಯೆಗೆ ಪರಿಹಾರ: ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ  ಹಣ್ಣನ್ನು ತಿನ್ನುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

*ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ವೈದ್ಯರು ಸಹ ಹೃದ್ರೋಗದಲ್ಲಿ ದಾಳಿಂಬೆಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ

*ರಕ್ತಹೀನತೆಯಲ್ಲಿ ಪ್ರಯೋಜನಕಾರಿ:

ರಕ್ತಹೀನತೆ, ಕಾಮಾಲೆ, ರಕ್ತಹೀನತೆ ಮುಂತಾದ ರೋಗಗಳನ್ನು ಹೊಂದಿರುವ ಜನರು ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆಯಲ್ಲಿ ಕಬ್ಬಿಣ ಕಂಡುಬರುತ್ತದೆ, ಇದು ರಕ್ತದ ಕೊರತೆಯನ್ನು ನಿವಾರಿಸುತ್ತದೆ.

Continue Reading

Trending

error: Content is protected !!