ಆರೋಗ್ಯ
Monitoring BP In Winter: ಚಳಿಗಾಲದಲ್ಲಿ ವಾರಕ್ಕೊಮ್ಮೆ ಬಿಪಿ ಯನ್ನು ಚೆಕ್ ಮಾಡಿಕೊಳ್ಳಿ – ಯಾಕೇ ಗೊತ್ತೇ?

ಚಳಿಗಾಲದಲ್ಲಿ ಕಡಿಮೆ ತಾಪಮಾನವು ನಮ್ಮ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಮ್ಮ ರಕ್ತದೊತ್ತಡದ ಮಟ್ಟವು ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸೂಕ್ತವಾದ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಚಳಿಗಾಲದಲ್ಲಿ ತುಂಬಾ ಜಾಗರೂಕರಾಗಿರಬೇಕು.
ದೇಹದ ಉಷ್ಣತೆಯನ್ನು ನಿಯಂತ್ರಿಸುವುದರಿಂದ, ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಕಿರಿದಾದ ಜಾಗದಲ್ಲಿ ರಕ್ತದ ಹರಿವು ವೇಗವಾಗಿ ಹರಿಯುತ್ತದೆ. ಇದು ಹೃದಯವನ್ನು ಗಟ್ಟಿಯಾಗಿ ಪಂಪ್ ಮಾಡಲು ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡದ ಸೂಕ್ಷ್ಮ ಲಕ್ಷಣಗಳನ್ನು ಗಮನಿಸುವುದು ಮುಖ್ಯ.
ನಿಮಗೆ ಚಳಿಗಾಲದಲ್ಲಿ ಇದ್ದಕ್ಕಿದ್ದಂತೆ ಬಿಪಿ ಕಂಟ್ರೋಲ್ ತಪ್ಪಬಹುದು ಹುಷಾರು. ಸಡನ್ ಆಗಿ ತಲೆ ಸುತ್ತು ಬರುವುದು, ತಲೆ ನೋವು ಬರುವುದು, ದವಡೆ ಮತ್ತು ಭುಜ ನೋವು ಕಾಣಿಸುವುದು ಈ ರೀತಿಯ ಲಕ್ಷಣಗಳು ಎದುರಾದರೆ ಅವುಗಳನ್ನು ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ.
ಏಕೆಂದರೆ ಇವೆಲ್ಲವೂ ನಿಮಗೆ ಇಷ್ಟರಲ್ಲೇ ಹಾರ್ಟ್ ಅಟ್ಯಾಕ್ ಆಗುತ್ತದೆ ಎಂಬುದನ್ನು ಸೂಚಿಸುವ ಲಕ್ಷಣಗಳಾಗಿವೆ. ಹಾಗಾಗಿ ಚಳಿಗಾಲದ ಸಂದರ್ಭದಲ್ಲಿ ನೀವು ನಿಮ್ಮ ರಕ್ತದ ಒತ್ತಡವನ್ನು ವೈದ್ಯರ ಬಳಿ ವರಕೊಮ್ಮೆ ಚೆಕ್ ಮಾಡಿಸಿ ಕೊಂಡರೂ ಪರವಾಗಿಲ್ಲ.ಬಿಪಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ.ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಜೊತೆಗೆ ರಕ್ತದ ಒತ್ತಡ ಕೂಡ ಏರುಪೇರು ಆಗುವ ಸಂದರ್ಭ ಈ ಸಮಯದಲ್ಲಿ ಎದುರಾಗುತ್ತದೆ. ಈ ಬಗ್ಗೆ ಡಾಕ್ಟರ್ ಏನು ಹೇಳುತ್ತಾರೆ ನೋಡೋಣ ಬನ್ನಿ.
- ಚಳಿಗಾಲದಲ್ಲಿ ಮೊದಲಿನಷ್ಟು ಸರಾಗವಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾ ಗುವುದಿಲ್ಲ. ಇದರಿಂದ ರಕ್ತದ ಒತ್ತಡ ಸಹಜವಾಗಿ ಏರಿಕೆ ಕಾಣುತ್ತದೆ. ಇದರ ಜೊತೆಗೆ ಚಳಿಗಾಲದಲ್ಲಿ ಆಗಾಗ ನೆಗಡಿ, ಕೆಮ್ಮು, ಶೀತ, ಜ್ವರ ಆಗುತ್ತಲೇ ಇರುತ್ತದೆ. ಇದಕ್ಕೆ ಒಂದು ವೇಳೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರಿಂದಲೂ ಕೂಡ ರಕ್ತದ ಒತ್ತಡ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ವೆಂಕಟೇಶ್ವರ ಹಾಸ್ಪಿಟಲ್ ನಲ್ಲಿ ಹೃದ್ರೋಗ ತಜ್ಞರಾಗಿರುವ ಡಾ. ಅಶೋಕ್ ಕೆ ರಜಪೂತ್ ರವರು ಹೇಳುವ ಹಾಗೆ ಯಾವಾಗ ಹೊರಗಡೆ ಚಳಿ ಹೆಚ್ಚಾ ಗುತ್ತದೆ ಆ ಸಂದರ್ಭದಲ್ಲಿ ಹೃದಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಪ್ರಮುಖವಾಗಿ ಹೃದಯ ರಕ್ತನಾಳದ ಕಾಯಿಲೆಗಳು ಸಹ ಈ ಸಂದರ್ಭದಲ್ಲಿ ಕಂಡುಬರುವುದು ಉಂಟು.
*ತುಂಬಾ ಜನರಿಗೆ ಹಾರ್ಟ್ ಅಟ್ಯಾಕ್ ಮತ್ತು ಪಾರ್ಶ್ವವಾಯು ಈ ಸಂದರ್ಭ ದಲ್ಲಿ ಸಾಕಷ್ಟು ಕಂಡುಬರುತ್ತದೆ. ರಕ್ತದ ಒತ್ತಡಕ್ಕೆ ಮಾತ್ರೆ ಗಳನ್ನು ತೆಗೆದು ಕೊಳ್ಳುತ್ತಿದ್ದರೂ ಕೂಡ ಈ ರೀತಿ ಆಗುವುದು ಸಹಜ. ಹೀಗಾಗಿ ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳು ವುದು ಮಾತ್ರವಲ್ಲದೆ ಆಗಾಗ ಇದಕ್ಕೆ ಸಂಬಂಧಪಟ್ಟಂತೆ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಕೂಡ ಒಳ್ಳೆಯದು.
ಆರೋಗ್ಯ
Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವುದಾದರೆ ತುಪ್ಪ ಬಹಳ ಮಹತ್ವದ ಆಹಾರವಾಗಿದೆ. ಅದು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ತುಪ್ಪವನ್ನು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ. ಹಾಗಾಗಿ ದಿನನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವುದರಿಂದ ಪ್ರಯೋಜನ ಪಡೆದುಕೊಳ್ಳಿ..
*ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ:ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅಡುಗೆಯಲ್ಲಿ ತುಪ್ಪವನ್ನು ಬಳಸುವುದು ಸೂಕ್ತವಾಗಿದೆ. ಇದು ತನ್ನದೇ ಆದ ವಿಶಿಷ್ಟ ಪರಿಮಳವನ್ನು ಹೊಂದಿದೆ, ಅದು ಯಾವುದೇ ಊಟದ ರುಚಿಯನ್ನು ಹೆಚ್ಚಿಸುತ್ತದೆ.
*ತುಪ್ಪದ ಬಳಕೆಯಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ:
ತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಶುದ್ಧ ಹಸುವಿನ ತುಪ್ಪದ ಕೆಲವು ಬೆಚ್ಚಗಿನ ಹನಿಗಳನ್ನು ಮೂಗಿನಲ್ಲಿ ಹಾಕಿದರೆ ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.
*ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ:
ತುಪ್ಪವು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು, ಏಕೆಂದರೆ ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ, ಇದು ನಿಮ್ಮ ಮುಖದ ಮೇಲಿನ ಚರ್ಮದ ವಿನ್ಯಾಸ ಮತ್ತು ಹೊಳಪನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ನೇರವಾಗಿ ಮುಖದ ಮೇಲಿನ ಚರ್ಮಕ್ಕೆ ಹಚ್ಚಿಕೊಳ್ಳಬಹುದು.
*ಕರುಳಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:ಪೌಷ್ಟಿಕಾಂಶಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆರವಾಗುತ್ತದೆ.
ಅಂದ್ರೆ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುವಂತೆ ಮಾಡುತ್ತದೆ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ತುಪ್ಪ ವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ
*ಕಟ್ಟಿದ ಮೂಗಿಗೂ ಇದು ಒಳ್ಳೆಯದು
ಶೀತದಿಂದ ನಿಮ್ಮ ಮೂಗು ಮುಚ್ಚಿದ್ದರೆ ಅಥವಾ ಕಟ್ಟಿದ್ದರೆ ಸಹ ಅದನ್ನು ನಿವಾರಿಸಿಕೊಳ್ಳಲು ತುಪ್ಪವು ತುಂಬಾನೇ ಪ್ರಯೋಜನಕಾರಿಯಾಗಿದೆ. ನಿಮಗೆ ಉಸಿರಾಟದ ತೊಂದರೆ ಆದರೆ, ನಿಮ್ಮ ರುಚಿ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ದಣಿವನ್ನು ಈ ತುಪ್ಪವು ನಿವಾರಿಸುತ್ತದೆ
ಆರೋಗ್ಯ
Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್ಸಿಆರ್ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Heart Attack deaths Increased in India ನವದೆಹಲಿ: ಕೊರೊನಾ ಬಾಧಿಸಿದ (Corona panadamic) ಕಳೆದ 3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದಯಾಘಾತ (Heart Attack) ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ 2022ನೇ ಸಾಲಿನಲ್ಲಿ ಹೃದಯಾಘಾತವಾಗಿ ಸಾಯುವವರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ 12.5% ಏರಿಕೆಯಾಗಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (National Crime Record Bureau) (ಎನ್ಸಿಆರ್ಬಿ) ದೇಶದಲ್ಲಿ ಹೆಚ್ಚಳ ವಾಗುತ್ತಿರುವ ಹೃದಯಘಾತ ಸಂಬಂದಿ ಸಾವಿನ ಅಂಕಿ ಅಂಶಗಳನ್ನು ( Heart Attack death percentage) ಬಿಡುಗಡೆ (ncrb report on Heart Attack) ಮಾಡಿದೆ. ಈ ವರದಿಯ ಬಳಿಕ ಸಾಂಕ್ರಾಮಿಕ ರೋಗಕ್ಕೂ ಹೃದಯಘಾತಕ್ಕೂ ಸಂಬಂಧವಿದೆ ಈ ಬಗ್ಗೆ ವಿಸ್ತ್ರತ ತನಿಖೆ ನಡೆಯಬೇಕು ಎಂದು ತಜ್ಙರು ಆಗ್ರಹಿಸುತ್ತಿದ್ದಾರೆ
ಎನ್ಸಿಆರ್ಬಿ ವರದಿ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 2021ರಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ 28,413. ಈ ಅಂಕಿ ಅಂಶ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 2020ರಲ್ಲಿ 28579 ಮಂದಿ ಹಾರ್ಟ್ ಅಟ್ಯಾಕ್ (Heart attack ) ನಿಂದ ಮೃತಪಟ್ಟಿದ್ದಾರೆ.
ಹಠಾತ್ ಸಾವಿನ ಪ್ರಮಾಣದಲ್ಲೂ ಏರಿಕೆ
ಹಠಾತ್ ಸಾವುಗಳ (sudden death) ಒಟ್ಟಾರೆ ಸಂಖ್ಯೆಯಲ್ಲೂ ದೇಶದಲ್ಲಿ ಗಮನಾರ್ಹ ಏರಿಕೆ ಕಾಣಿಸಿದೆ. ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳ ಕಂಡು ಬಂದಿದೆ. ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವನ್ನು ಎನ್ಸಿಆರ್ಬಿ ಹಠಾತ್ ಮರಣದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು
ತಜ್ಞರು ಏನೂ ಹೇಳುತ್ತಾರೆ
ಹೃದಯದ ಆರೋಗ್ಯದ ಮೇಲೆ ಇದ್ದಕ್ಕಿದಂತೆ ಆಗಾಧ ಪರಿಣಾಮ ಬೀರುತ್ತಿರುವುದರ ಹಿಂದೆ ಸಾಂಕ್ರಮಿಕ ರೋಗದ ಬಳಿಕ ಉದ್ಭವಿಸಿದ ಪರಿಣಾಮಗಳು ಕಾರಣ ಎಂಬ ಅಭಿಪ್ರಾಯ ವೈದಕೀಯ ಲೋಕದಿಂದ ಕೇಳಿ ಬರುತ್ತಿದೆ. ವೈದಕೀಯ ಜಗತ್ತಿನ ಒಂದು ವರ್ಗದ ಪ್ರಕಾರ ಕೊರೊನಾ ಬಾಧಿಸಿದ ಸಂದರ್ಭ ಹಾಗೂ ಕೊರೊನೋತ್ತರ ಕಾಲದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದು ವರ್ಗದ ಪ್ರಕಾರ ಕೊರೊನಾ ಲಸಿಕೆಯ ಪರಿಣಾಮವು ಇದಾಗಿರಬಹುದು. ಹೀಗಾಗಿ ಈ ಸಾವಿನ ಹೆಚ್ಚಳದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡಬೇಕು . ಇದರ ಜತೆಗೆ ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
Bitter Gourd health benefits: ಹಾಗಲಕಾಯಿ ನಾಲಿಗೆಗೆ ಕಹಿ – ಉದರಕ್ಕೆ ಸಿಹಿ… ಇಲ್ಲಿದೆ ಅದರ ಆರೋಗ್ಯ ಪ್ರಯೋಜನಗಳು
ಜೀವನ ಶೈಲಿ ಬದಲಾಯಿಸಿ
ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚಳವಾಗಲು ಬದಲಾದ ಜೀವನ ಶೈಲಿಯು ಒಂದು ಕಾರಣ. ದೈಹಿಕ ವ್ಯಾಯಮವಿಲ್ಲದ ಉದ್ಯೋಗಗಳು ಹೆಚ್ಚಾಗಿರುವುದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
ಆರೋಗ್ಯ
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು

ದಾಳಿಂಬೆ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಪ್ರೋಟೀನ್, ಫೈಬರ್, ವಿಟಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.
ಅಷ್ಟೇ ಅಲ್ಲ ಈ ಕೆಂಪು ಹಣ್ಣಿನಲ್ಲಿ ವೈನ್ ಅಥವಾ ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚಿನ ಆಂಟಿ-ಆಕ್ಸಿಡೆಂಟ್ ಗಳು ಇರುತ್ತವೆ. ಹಾಗಾದರೆ ದಾಳಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
*ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ:ದಾಳಿಂಬೆ ಹಣ್ಣನ್ನು ತಿನ್ನಬೇಕು ಎನ್ನುವುದಕ್ಕೆ ಮುಖ್ಯ ಕಾರಣವೇ ಇದು. ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶಗಳು ಪಾಲಿಫಿನಾಲ್ ರೂಪದಲ್ಲಿ ಸಿಗುತ್ತದೆ.
ಬೇರೆ ಯಾವುದೇ ಹಣ್ಣುಗಳಿಗೆ ಹೋಲಿಸಿದರೆ ದಾಳಿಂಬೆ ಹಣ್ಣುಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯನ್ನು ತಪ್ಪಿಸಲು ಇವು ನೆರವಾಗುತ್ತವೆ.
*ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಲಿದೆ:
ಬಹಳಷ್ಟು ಜನರಿಗೆ ಕರುಳಿನ ಭಾಗದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ ಈ ಸಮಸ್ಯೆಯನ್ನು ದಾಳಿಂಬೆ ಹಣ್ಣು ತಪ್ಪಿಸುತ್ತದೆ.
ಬಹಳಷ್ಟು ಮಹಿಳೆಯರು ಇನ್ಫಾಮೇಟರಿ ಬೋವಲ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ದಾಳಿಂಬೆ ಹಣ್ಣು ಮತ್ತು ಅದರ ಒಂದು ವರದಾನ ಎಂದು ಹೇಳಬಹುದು.
*ಪುರುಷರಿಗೆ ಪ್ರಯೋಜನಕಾರಿ:
ದಾಳಿಂಬೆ ಸೇವನೆಯು ದೈಹಿಕ ದೌರ್ಬಲ್ಯ, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಪ್ರತಿದಿನ ದಾಳಿಂಬೆಯನ್ನು ಸೇವಿಸಬೇಕು.
*ಕ್ಯಾನ್ಸರ್ ತಡೆಯಲು ಸಹಕಾರಿ:
ತಜ್ಞರ ಪ್ರಕಾರ, ನೀವು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸಿದರೆ, ನೀವು ಕ್ಯಾನ್ಸರ್ ನಂತಹ ರೋಗಗಳನ್ನು ತಪ್ಪಿಸಬಹುದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಹಾಗೂ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
*ಅಜೀರ್ಣ ಸಮಸ್ಯೆಗೆ ಪರಿಹಾರ: ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.
*ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ವೈದ್ಯರು ಸಹ ಹೃದ್ರೋಗದಲ್ಲಿ ದಾಳಿಂಬೆಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ
*ರಕ್ತಹೀನತೆಯಲ್ಲಿ ಪ್ರಯೋಜನಕಾರಿ:
ರಕ್ತಹೀನತೆ, ಕಾಮಾಲೆ, ರಕ್ತಹೀನತೆ ಮುಂತಾದ ರೋಗಗಳನ್ನು ಹೊಂದಿರುವ ಜನರು ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆಯಲ್ಲಿ ಕಬ್ಬಿಣ ಕಂಡುಬರುತ್ತದೆ, ಇದು ರಕ್ತದ ಕೊರತೆಯನ್ನು ನಿವಾರಿಸುತ್ತದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು24 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ