Connect with us

ಕ್ರೈಂ

ದೈಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಭಕ್ತೆಯ ಹತ್ಯೆ : ಅರ್ಚಕ ಬಂಧನ

Ad Widget

Ad Widget

ಸೇಲಂ: ಇಲ್ಲಿ 28 ವರ್ಷದ ಮಹಿಳಾ ಭಕ್ತೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ 42 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆಯನ್ನು ಸೆಲ್ವಿ ಎಂದು ಗುರುತಿಸಲಾಗಿದೆ. ಬಂಧಿತ ಅರ್ಚಕನನ್ನು ಸೇಲಂನ ಶಿವತಪುರಂ ಬಳಿಯ ಪೆರುಮಾಂಪಟ್ಟಿಯ ವಿ. ಕುಮಾರ್ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಈತ 20 ವರ್ಷಗಳ ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿ ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದ.ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಅರ್ಚಕ ಬಯಸಿದ್ದು, ಮರ್ಯಾದಸ್ಥ ಕುಟುಂಬದ ಸಾತ್ವಿಕ ಹೆಣ್ಣು ಮಗಳಾದ ಸೆಲ್ವಿ ತಿರಸ್ಕರಿಸಿರುವ ಕಾರಣ ಹತ್ಯೆ ನಡೆಸಲಾದ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Ad Widget

Ad Widget

Ad Widget

ಪೊಲೀಸರ ಪ್ರಕಾರ, ಸೆಲ್ವಿ ಮತ್ತು ಆಕೆಯ ಪತಿ ವಿ. ಪಸುವರಾಜ್ ಕ 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ದಂಪತಿಗೆ ಮಗುವಾಗಿರಲಿಲ್ಲ. ಮಗುವಿಗಾಗಿ ಹಂಬಲಿಸಿದ ದೈವಭಕ್ತೆ ಸೆಲ್ವಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥಿಸುತ್ತಿದ್ದರು. ಅಕ್ಟೋಬರ್ 15 ರಂದು ಸೇಲಂ ಜಿಲ್ಲೆಯ ಎಲಂಪಿಳ್ಳೈ ಎಂಬಲ್ಲಿಗೆ ಸ್ನೇಹಿತನನ್ನು ಭೇಟಿ ಮಾಡಲು ಹೋಗುವುದಾಗಿ ಸೆಲ್ವಿ ಮನೆಯಿಂದ ಹೊರಟು ಹೋಗಿದ್ದವಳು ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.

Ad Widget

ಆತಂಕಗೊಂಡ ಪಸುವರಾಜ್ ಗುರುವಾರ ತಾರಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋಧನೆಗಿಳಿದ ಪೊಲೀಸರಿಗೆ ಕುಮಾರ್ ಒಡೆತನದ ದೇವಸ್ಥಾನದ ಬಳಿಯ ಪೊದೆಯಿಂದ ಸೆಲ್ವಿ ಶವ ಪತ್ತೆಯಾಗಿದೆ. ವಿಚಾರಣೆ ವೇಳೆ ಸೆಲ್ವಿ ಒಂದು ವಾರಕ್ಕೂ ಹೆಚ್ಚು ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

Ad Widget

Ad Widget

ಚಂದದ ಬದುಕಿಗಾಗಿ ಮಗುವೊಂದನ್ನು ಬಯಸಿ ದೇವಸ್ಥಾನಗಳಿಗೆ ಸಂದರ್ಶಿಸುತ್ತಿರಿವ ಭಕ್ತೆಯೊಬ್ಬರು ದೇವಸ್ಥಾನದ ಅರ್ಚಕರಿಂದಲೇ ಕೊಲೆಯಾಗಿ ಇಡೀ ಕುಡುಂಬ ಛಿದ್ರವಾಗಿರುವುದು ದುರಂತ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಅರ್ಚಕ ಕುಮಾರ್‌ನ್ನು ಬಂಧಿಸಿದ್ದಾರೆ.

Click to comment

Leave a Reply

ಸುಳ್ಯ

HIt And Run ಶಿರಾಡಿ ಘಾಟ್ ನಲ್ಲಿ ಹಿಟ್‌ ಅಂಡ್‌ ರನ್‌ – ಇಬ್ಬರು ಮೃತ್ಯು

Ad Widget

Ad Widget

ನೆಲ್ಯಾಡಿ, ಡಿ.06. ಶಿರಾಡಿ ಘಾಟ್ ನ ಗುಂಡ್ಯ ಕೆಂಪು ಹೊಳೆ ಸಮೀಪ ವಾಹನವೊಂದು ಗೂಡ್ಸ್‌ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

Ad Widget

Ad Widget

Ad Widget

Ad Widget

ಅಪಘಾತವು ಬುಧವಾರ ಬೆಳಗಿನ ಜಾವ ನಡೆದಿದ್ದು, ಮೃತಪಟ್ಟ ಇಬ್ಬರೂ ಗೂಡ್ಸ್‌ ಟೆಂಪೋದಲ್ಲಿದ್ದವರು ಎಂದು ತಿಳಿದು ಬಂದಿದೆ.

Ad Widget

Ad Widget

Ad Widget


ಯಾವುದೋ ಅಪರಿಚಿತ ಘನ ವಾಹನ ಗೂಡ್ಸ್‌ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗೂಡ್ಸ್‌ ವಾಹನದ ಚಾಲಕ ಹಾಗೂ ಆ ವಾಹನದಲ್ಲಿದ್ದ ಇನ್ನೊರ್ವ ಮೃತಪಟ್ಟಿದ್ದು ಇಬ್ಬರು ಹಾಸನ ಜಿಲ್ಲೆಯವರು ಎನ್ನಲಾಗಿದೆ.

Ad Widget

Arecanut price ಚೇತರಿಕೆ ಕಾಣದ ಅಡಿಕೆ ಧಾರಣೆ -ದರ ಕುಸಿತದ ಹಿಂದಿದೆ ಈ ಕಾರಣಗಳು – ಡೋಲಾಯಮಾನ ಸ್ಥಿತಿಯಲ್ಲಿ ಅಡಿಕೆ ಭವಿಷ್ಯ

Ad Widget

Ad Widget


ಅಪಘಾತದ ತೀವ್ರತೆಗೆ ಗೂಡ್ಸ್‌ ಟೆಂಪೋ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿ ಹೊಡೆದು ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್​ಸಿಆರ್​ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Continue Reading

ಕ್ರೈಂ

Acid Attack ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದೇ ತಪ್ಪಾಯ್ತಾ? ಮಾಲೀಕನ ಮೇಲೆ ಆಸಿಡ್ ದಾಳಿ

Ad Widget

Ad Widget

ಚಿಕ್ಕಮಗಳೂರು: ನಾಯಿ ಬೊಗಳಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ನಾಯಿಯ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಆಸಿಡ್ ದಾಳಿಗೊಳಗಾದ ವ್ಯಕ್ತಿಯನ್ನು ಕುರಗುಂದ ನಿವಾಸಿ ಸುಂದರ್ ರಾಜ್ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ತಾನು ಸಾಕುತ್ತಿರುವ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ್ ನಾಯಿಗೆ ಬೈಯ್ಯುತ್ತಿದ್ದ. ಆದರೆ ಜೇಮ್ಸ್ ಎನ್ನುವ ವ್ಯಕ್ತಿ ತನಗೆ ಬೈಯುತ್ತಿದ್ದಾನೆ ಎಂದು ಅಪಾರ್ಥ ಮಾಡಿಕೊಂಡು ನೆರೆಮನೆಯ ನಿವಾಸಿ ಸುಂದರ್ ರಾಜ್ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

ಸದ್ಯ ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

Ad Widget

Ad Widget

ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಡಗಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ನಾಯಿ ಹೆಸರಿನಲ್ಲಿ ತನಗೆ ಬಯ್ಯುತ್ತಿರುವುದಾಗಿ ಜೇಮ್ಸ್ ಆರೋಪಿಸಿದ್ದು, ಈತನ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೈಂ

BJP Ticket Deal: ಹಿಂದೂತ್ವದ ಪ್ರಖರ ವಾಗ್ಮಿ ಚೈತ್ರಾ 84 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ – ಜಾಮೀನು ಮಂಜೂರು

Ad Widget

Ad Widget

chaitra Got Bail ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಕೊಡಿಸುವುದಾಗಿ (BJP Ticket Deal) ಹೋಟೆಲ್ ಉದ್ಯಮಿ ಗೋವಿಂದಬಾಬು ಪೂಜಾರಿಗೆ (Govinda Babu poojary) ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನಕ್ಕೀಡಾಗಿದ್ದ ಹಿಂದೂತ್ವದ ಪ್ರಖರ ವಾಗ್ಮಿ  ಚೈತ್ರಾ (Infamous Hindutva Orator) ಸಹಿತ ಇಬ್ಬರಿಗೆ ಕೊನೆಗೂ ಜಾಮೀನು (chaitra Got Bail) ಮಂಜೂರಾಗಿದೆ.  ಇಬ್ಬರಿಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸರಿ ಸುಮಾರಿ 82 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಚೈತ್ರಾ (chaitra) ಕೊನೆಗೂ ಡಿ 5 ರಂದು ಬಿಡುಗಡೆಯಾಗಲಿದ್ದಾರೆ

Ad Widget

Ad Widget

Ad Widget

Ad Widget

 ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಚೈತ್ರಾ ಪ್ರಥಮ ಆರೋಪಿಯಾಗಿದ್ದಾರೆ, ಹಾಲಶ್ರೀ ಸ್ವಾಮೀಜಿ   ಮೂರನೇ ಆರೋಪಿಯಾಗಿದ್ದರು . ಹಾಲಶ್ರೀಗೆ ಕೆಲ ದಿನಗಳ ಹಿಂದೆಯೇ ಜಾಮೀನು ದೊರಕಿತ್ತು.

Ad Widget

Ad Widget

Ad Widget

ಚೈತ್ರಾ ಹಾಗೂ ಸಹಚರರು ಒಟ್ಟು 5 ಕೋಟಿ ರೂಪಾಯಿಯಷ್ಟು ಹಣ ಪಡೆದು ಬಳಿಕ ವಂಚಿಸಿದ್ದರು ಎಂದು ಗೋವಿಂದ ಬಾಬು ಆರೋಪಿಸಿದ್ದರು.  ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಸೆ 12 ರಂದು ರಾತ್ರಿ  ಚೈತ್ರಾ, ಗಗನ್ ಕಡೂರು ಬಂದಿಸಿದ್ದರು.

Ad Widget
Ad Widget

Ad Widget

ಪ್ರಕರಣ ಬೆಳಕಿಗೆ ಬರುತ್ತಲೇ ತಲೆ ಮರೆಸಿಕೊಂಡಿದ್ದ  ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿಯನ್ನು ವಾರಗಳ ಹುಡುಕಾಟದ ಬಳಿಕ ಒಡಿಸ್ಸಾದಲ್ಲಿ ಬಂಧಿಸಲಾಗಿತ್ತು. ಏತನ್ಮಧ್ಯೆ ಉಳಿದ ಆರೋಪಿಗಳಾದ ಚೈತ್ರಾ ಬರೆದ ಸ್ಕ್ರಿಪ್ಟ್‌ ನ ಪಾತ್ರದಾರಿಗಳಾದ  ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ ಓಟ್ಟು  9 ಮಂದಿಯನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು.

ಆರೋಪಿಗಳು ಅಕ್ರಮ ಹಣದಿಂದ ಸಂಪಾದಿಸಿದ್ದ ಲಕ್ಷಾಂತರ ರೂ. ನಗದು ಹಾಗೂ ಕೆಲ ಆಸ್ತಿಗಳ ಪತ್ರಗಳು ಸೇರಿ 4 ಕೋಟಿ ರೂ. ಅಧಿಕ ವಶಕ್ಕೆ  ಪಡೆದುಕೊಳ್ಳಲಾಗಿತ್ತು.   ಚೈತ್ರಾ ಬಳಿ 81 ಲಕ್ಷ ರೂ. ನಗದು ಹಾಗೂ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್ನಲ್ಲಿ 1.08 ಕೋಟಿ ಮೌಲ್ಯದ ಭದ್ರತಾ ಠೇವಣಿ. ಇದರ ಜತೆಗೆ 12 ಲಕ್ಷ ರೂ. ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದರು.

ಇನ್ನು ಚೈತ್ರಾ ಸಹಚರರಾದ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಭಿನವ ಹಾಲಾಶ್ರೀ ಬಳಿ 56 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಲಾಗಿತ್ತು. ಅಲ್ಲದೆ, ತನಿಖೆ ಪೂರ್ಣಗೊಳಿಸಿ ಇತ್ತೀಚೆಗಷ್ಟೇ 9 ಮಂದಿ ಆರೋಪಿಗಳ ವಿರುದ್ಧ ಕೋರ್ಟ್ಗೆ ಸಿಸಿಬಿ ಆರೋಪಪಟ್ಟಿ ಕೂಡ ಸಲ್ಲಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್ಗೆ 3ನೇ ಎಸಿಎಂಎಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.

Continue Reading

Trending

error: Content is protected !!