Uncategorized
ಬಾಂಬ್ ಸ್ಪೋಟದ ಎಲ್ಲ ಸಾಕ್ಷ್ಯಗಳನ್ನು ಸ್ವಯಂ ನೀಡಿ ಪೊಲೀಸರಿಗೆ ಶರಣಾದ ಆರೋಪಿ ಮಾರ್ಟೀನ್ಗಿತ್ತು ಯಾಹೋವಾ ವಿರುದ್ದ ನಿಗಿ ನಿಗಿ ಕೆಂಡದಂತಹ ಕೋಪ -ಯಾರಿದು ಜೆಹೊವಾಹ್ಸ್ ವಿಟ್ನೆಸಸ್?
ಜೆಹೊವಾಹ್ಸ್ ವಿಟ್ನೆಸಸ್, ಕ್ರೈಸ್ತ ಧರ್ಮದ ಒಂದು ಪಂಗಡ. 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ಇದರ ಉಗಮವಾಗಿತ್ತು. ಇದು ಬಹಳ ವಿಶಿಷ್ಟ ನಂಬಿಕೆಗಳು ಹಾಗೂ ಆಚರಣೆಗಳಿಗೆ ಹೆಸರುವಾಸಿ. ಜೆಹೊವಾಹ್ಸ್ ವಿಟ್ನೆಸಸ್ ಪಂಗಡದ ಜನರ ಪದ್ಧತಿಗಳು ಮುಖ್ಯವಾಹಿನಿಯಲ್ಲಿನ ಕ್ರೈಸ್ತರಿಗಿಂತ ಬಹಳ ವಿಭಿನ್ನ.

ಕಳಮಶ್ಶೇರಿಯ ಸಾಮ್ರಾ ಸಭಾಂಗಣದಲ್ಲಿ ಸ್ಫೋಟ ನಡೆಸಿ ಮೂವರ ಸಾವಿಗೆ ಕಾರಣವಾಗಿದ್ದ ಡೊಮೆನಿಕ್ ಮಾರ್ಟೀನ್ ಕೃತ್ಯಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷಿಗಳನ್ನು ಖುದ್ದು ಪೊಲೀಸರಿಗೆ ನೀಡಿ ಶರಣಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾನೆ. ಬಾಂಬ್ ತಯಾರಿಯ ವಿಡಿಯೋ, ಹಾಲ್ ಗೆ ಬಂದು ಹೋಗುವ ವಿಡಿಯೋ, ರಿಮೋಟ್ ಬಳಕೆಯ ಸಾಕ್ಷ್ಯವನ್ನು ಖುದ್ದು ಆತನೇ ಪೊಲೀಸರಿಗೆ ಒಪ್ಪಿಸಿ ಶರಣಾಗಿದ್ದಾನೆ. ಬಾಂಬ್ ಸ್ಫೋಟದ ಬಳಿಕ ಹಾಗೂ ಶರಣಾಗುವುದಕ್ಕೆ ತುಸು ಮುಂಚೆ ಫೇಸ್ ಬುಕ್ ಲೈವ್ ನಲ್ಲಿ ಬಂದ ಆರೋಪಿ ಬಾಂಬ್ ತಯಾರಿಸಿದ ವಿಡಿಯೋವನ್ನು ಯಾವ ಮಾಧ್ಯಮವೂ ಬಿತ್ತರಿಸಕೂಡದು ಇದರಿಂದ ಅಪಾಯವಿದೆ ಎಂದು ಸಲಹೆ ನೀಡಿದ್ದ
ಲಿಯಾನಾ ಪೌಲೋಸ್, ಕುಮಾರಿ, ಲಿಬಿನಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರು. 50 ಕ್ಕೂ ಹೆಚ್ಚು ಮಂದಿ ಸ್ಪೋಟದಲ್ಲಿ ಗಾಯಗೊಂಡಿದ್ದಾರೆ. ತಾಂತ್ರಿಕ ವಿಷಯಗಳಲ್ಲಿ ಸ್ವಯಂ ಪರಿಣತಿ ಹೊಂದಿದ್ದ ಆರೋಪಿಯು ಆರು ತಿಂಗಳಿನಿಂದ ಇಂಟರ್ನೆಟ್ ಮೂಲಕ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದ. ಅನ್ ಲೈನ್ ನಲ್ಲಿ ಬಾಂಬ್ ತಯಾರಿಗೆ ಬೇಕಾದ ಸಾಮಾಗ್ರಿಗಳನ್ನು ತರಿಸಿದ್ದ. ಬಂಧಿತ ಆರೋಪಿಯನ್ನು ಆತ ಬಾಂಬ್ ತಯಾರಿಸಿದ ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಹೋಗಿ ಅಗತ್ಯ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.

ಡೊಮೆನಿಕ್ ಮಾರ್ಟೀನ್ ಸ್ಪೋಕನ್ ಇಂಗ್ಲೀಷ್ ಶಿಕ್ಷಕನಾಗಿದ್ದು ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ. ಶಾಂತ ಸ್ವಭಾವದ ಈತ ಯಾರಲ್ಲೂ ಹೆಚ್ಚು ಮಾತನಾಡುತ್ತಿರಲಿಲ್ಲ. ದುಬೈನಲ್ಲಿ ಫಯರ್ ಮೇನ್ ವೃತ್ತಿಯಲ್ಲಿದ್ದ ಮಾರ್ಟೀನ್ ತಾಂತ್ರಿಕ ವಿಷಯಗಳಲ್ಲಿ ಪರಿಣತಿ ಹೊಂದಿದ್ದ. ಮಗಳ ಅಸೌಖ್ಯದ ಹಿನ್ನೆಲೆಯಲ್ಲಿ ಆತ ಕಳೆದ ತಿಂಗಳು ಊರಿಗೆ ಮರಳಿದ್ದ. ಜೆಹೊವಾಹ್ಸ್ (ಯಾಹೋವಾ ) ವಿಟ್ನೆಸಸ್ ಹಿಂಬಾಲಕರನ್ನು ವಿರೋಧಿಸುವ ಉದ್ದೇಶದಿಂದ ಅವರನ್ನು ಗುರಿಯಾಗಿಸಿ ತಾನೂ ಬಾಂಬ್ ಸ್ಪೋಟ ಕೃತ್ಯ ಎಸಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.
16 ವರ್ಷಗಳಿಂದ ಜೆಹೊವಾಹ್ಸ್ (ಯಾಹೋವಾ ) ವಿಟ್ನೆಸಸ್ ಹಿಂಬಾಲಕನಾಗಿದ್ದ ಮಾರ್ಟೀನ್ ಬಳಿಕ ಅದರ ಕಡು ವಿರೋಧಿಯಾಗಿ ಬದಲಾಗಿದ್ದ. ರಕ್ತ ವರ್ಗಾವಣೆ, ದೇಶಭಕ್ತಿ ಗಾನಗಳ ಆಲಾಪನೆಯನ್ನು ಯಾಹೋವಾ ವಿಟ್ನೆಸಸ್ ಹಿಂಬಾಲಕರು ವಿರೋಧಿಸುವುದು, ಅನ್ಯಮತೀಯರನ್ನು ಪ್ರತ್ಯೇಕವಾಗಿಡುವ ಜೆಹೊವಾಹ್ಸ್ ತೀರ್ಮಾನವನ್ನು ದೇಶ ದ್ರೋಹಿ ತೀರ್ಮಾನವೆಂದು ಕೊಂಡ ಮಾರ್ಟೀನ್ ಆರು ವರ್ಷಗಳ ಹಿಂದೆ ಜೆಹೊವಾಹ್ಸ್ ವಿಟ್ನೆಸಸ್ ನಿಂದ ದೂರವಾಗಿದ್ದ. ಈ ಸಂಘಟನೆಯ ಪ್ರಚಾರದಿಂದ ಇತರರು ನಾಶವಾಗುತ್ತಾರೆ ಮತ್ತು ಅವರು ಹರಡುವ ಸುಳ್ಳು ವಿಚಾರಗಳನ್ನು ನಿಯಂತ್ರಿಸದಿದ್ದರೆ ತನ್ನಂತಹ ಸಾಮಾನ್ಯ ಜನರು ಅದಕ್ಕೆ ಬಲಿಯಾಗುತ್ತಾರೆಂದು ಡೊಮಿನಿಕ್ ವೀಡಿಯೊದಲ್ಲಿ ಹೇಳಿದ್ದಾನೆ.
ಯೆಹೋವ ಹಿಂಬಾಲಕರ ಮೇಲಿನ ವಿರೋಧದಿಂದಾಗಿ ಬಾಂಬ್ ಇರಿಸಿರುವುದಾಗಿ ಆತ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾನೆ. ಐದು ದಿನಗಳ ಹಿಂದೆ ತೆರೆಯಲಾದ ಫೇಸ್ಬುಕ್ ಪೇಜ್ ಮೂಲಕ ಡೊಮಿನಿಕ್ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದು ಸ್ಫೋಟದ ಹೊಣೆಗಾರಿಕೆಯನ್ನು ಒಪ್ಪಿಕೊಂಡು ಠಾಣೆಗೆ ತೆರಳಿ ಶರಣಾಗುವುದಾಗಿ ಹೇಳುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಪ್ರಸ್ತುತ ಆ ಪೇಜ್ ಪೇಸ್ ಬುಕ್ ನಿಂದ ಕಾಣೆಯಾಗಿದೆ
ಜೆಹೊವಾಹ್ಸ್ ವಿಟ್ನೆಸಸ್ ವಿರುದ್ಧದ ತನ್ನ ಆಕ್ರೋಶವನ್ನು ಪತ್ನಿಯಲ್ಲಿ ಹೇಳಿಕೊಂಡಿದ್ದರೂ, ಬಾಂಬ್ ದಾಳಿಯ ಕುರಿತು ಏನನ್ನೂ ಹೇಳಿರಲಿಲ್ಲ. ಭಾನುವಾರ ಬೆಳಗ್ಗೆ 5ಕ್ಕೆ ಮನೆಯಿಂದ ಹೊರ ಹೋಗುವುದಾಗಿ ಪತ್ನಿಗೆ ತಿಳಿಸಿ ಹೋಗಿದ್ದು, ಉದ್ದೇಶವನ್ನು ತಿಳಿಸಿರಲಿಲ್ಲ. ಯು ಟ್ಯೂಬ್ ನೆರವಿನಿಂದ ಬಾಂಬ್ ತಯಾರಿಸಿದ್ದ ಮಾರ್ಟೀನ್ ಸ್ಫೋಟಕ್ಕೆ ಎರಡು ರಿಮೋಟ್ ಬಳಕೆ ಮಾಡಿದ್ದ.
ಇನ್ನು ಕೃತ್ಯ ಎಸಗಿದ ಬಳಿಕ ಆರೋಪಿ ಕೊಡಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ. ಬಾಂಬ್ ತಯಾರಿಸಲು ಅಗತ್ಯ ಸಾಮಾಗ್ರಿಗಳನ್ನು ಆನ್ಲೈನ್ ಮೂಲಕ ವಿವಿಧೆಡೆಗಳಿಂದ ಖರೀದಿಸಿದ ಡೊಮೆನಿಕ್ ಮಾರ್ಟೀನ್, ಈ ಎಲ್ಲ ಖರೀದಿಯ ಬಿಲ್ ಗಳನ್ನು ಸ್ವ ಇಚ್ಚೆಯಿಂದ ಪೊಲೀಸರಿಗೆ ನೀಡಿದ್ದ.
ಈತ ಟಿಫಿನ್ ಬಾಕ್ಸ್ ಬಾಂಬ್ ಇರಿಸಿದ್ದು, ಈತನ ಮೊಬೈಲ್ ನಿಂದ ಈತ ಬಾಂಬ್ ಟ್ರಿಗರ್ ಮಾಡುವ ದೃಶ್ಯಗಳು ಲಭಿಸಿವೆ. ಮೊಬೈಲ್ ನಿಂದ ಬಾಂಬ್ ಟ್ರಿಗರ್ ಮಾಡಲಾಗಿದೆ. ಸ್ಫೋಟ ನಡೆಸಲು ಐಇಡಿ ಬಾಂಬ್ ಬಳಸಲಾಗಿದ್ದು ಬಾಂಬ್ ತಯಾರಿಗೆ ಈತನಿಗೆ ಯಾರಾದರೂ ತರಬೇತಿ ನೀಡಿದ್ದಾರೆಯೇ ಅಥವಾ ಇಂಟರ್ನೆಟ್ ಮೂಲಕ ಈತ ಸ್ವಯಂ ಬಾಂಬ್ ನಿರ್ಮಿಸಿದ್ದಾನೆಯೇ, ಸ್ಫೋಟ ನಡೆಸಲು ಈತನಿಗೆ ಯಾರಾದರೂ ಸಹಾಯ ಒದಗಿಸಿದ್ದಾರೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಡಿಜಿಪಿ ಅಜಿತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಯಾರಿದು ಜೆಹೊವಾಹ್ಸ್ ವಿಟ್ನೆಸಸ್?
ಜೆಹೊವಾಹ್ಸ್ ವಿಟ್ನೆಸಸ್, ಕ್ರೈಸ್ತ ಧರ್ಮದ ಒಂದು ಪಂಗಡ. 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ಇದರ ಉಗಮವಾಗಿತ್ತು. ಇದು ಬಹಳ ವಿಶಿಷ್ಟ ನಂಬಿಕೆಗಳು ಹಾಗೂ ಆಚರಣೆಗಳಿಗೆ ಹೆಸರುವಾಸಿ. ಜೆಹೊವಾಹ್ಸ್ ವಿಟ್ನೆಸಸ್ ಪಂಗಡದ ಜನರ ಪದ್ಧತಿಗಳು ಮುಖ್ಯವಾಹಿನಿಯಲ್ಲಿನ ಕ್ರೈಸ್ತರಿಗಿಂತ ಬಹಳ ವಿಭಿನ್ನ. ಜೆಹೊವಾಹ್ ಎಂಬ ದೇವರ ಹೆಸರಿನಲ್ಲಿ ನಂಬಿಕೆ ಇರಿಸಿರುವ ಅವರು, ಅದಕ್ಕೆ ಬದ್ಧರಾಗಿರುತ್ತಾರೆ. ಹಾಗೆಯೇ ಜಗತ್ತಿನ ಅಂತ್ಯ ಸನ್ನಿಹಿತವಾಗುತ್ತಿದೆ ಎನ್ನುವುದು ಅವರ ಗಾಢ ನಂಬಿಕೆ.
ಏಸು ಕ್ರಿಸ್ತ ಮತ್ತು ಪವಿತ್ರ ಆತ್ಮಗಳು ಒಬ್ಬ ದೇವನ ಎಲ್ಲಾ ಆಯಾಮಗಳು ಎನ್ನುವ ಸಿದ್ಧಾಂತದ ಟ್ರಿನಿಟಿ ಕುರಿತಾದ ಕ್ರೈಸ್ತರ ಜನಪ್ರಿಯ ನಂಬಿಕೆಯನ್ನು ಜೆಹೊವಾಹ್ ಗುಂಪು ತಿರಸ್ಕರಿಸುತ್ತದೆ. ಅವರಿಗೆ ಜೆಹೊವಾಹ್ ಮಾತ್ರವೇ ನೈಜ ದೇವರು. ಆತನೇ ಎಲ್ಲಾ ವಸ್ತುಗಳ ಸೃಷ್ಟಿಕರ್ತ ಹಾಗೂ ಆತನೊಬ್ಬನೇ ಸಾರ್ವಕಾಲಿಕ ಸಾರ್ವಭೌಮ. ಎಲ್ಲಾ ಆರಾಧನೆಗಳೂ ಆತನ ಕುರಿತಾಗಿಯೇ ಇರಬೇಕು ಎಂದು ಜೆಹೊವಾಹ್ ಅನುಯಾಯಿಗಳು ನಂಬುತ್ತಾರೆ.
ಜೆಹೊವಾಹ್ನ ಅನುಯಾಯಿಗಳು, ಜೀಸಸ್ ದೇವರಿಗಿಂತ ವಿಭಿನ್ನ. ಆತ ರಕ್ಷಕ ಹಾಗೂ ದೇವರ ಮಗ. ಪವಿತ್ರ ಆತ್ಮವು ದೇವರ ಸಕ್ರಿಯ ಶಕ್ತಿ ಹಾಗೂ ಅದು ವ್ಯಕ್ತಿಯಲ್ಲ ಎನ್ನುವುದು ಅವರ ವಾದ.
ಕ್ರೈಸ್ತರ ಈ ಪಂಗಡವು ಬೈಬಲ್ ಅನ್ನು ಬಹಳ ಶ್ರದ್ಧೆಯಿಂದ ಅನುಸರಿಸುತ್ತದೆ. ಬೈಬಲ್ ಎಲ್ಲಕ್ಕಿಂತ ಶ್ರೇಷ್ಠ ಎನ್ನುವ ಅವರ ನಂಬಿಕೆಗಳು ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎರಡರಿಂದಲೂ ಸೃಷ್ಟಿಯಾದ ಎಲ್ಲಾ 66 ಕೃತಿಗಳನ್ನು ಆಧಾರವಾಗಿಟ್ಟುಕೊಂಡಿವೆ. ಭೂಮಿಯ ಮೇಲೆ ತಮ್ಮ ಕೊನೆಯ ದಿನಗಳನ್ನು ಜೀವಿಸುತ್ತಿರುವುದಾಗಿ ಪ್ರತಿಪಾದಿಸುತ್ತಿರುವ ಈ ಗುಂಪು, ಭೂಮಿಯ ಮೇಲೆ ದೇವರ ಸಾಮ್ರಾಜ್ಯ ಸ್ಥಾಪಿಸುವ ಗಳಿಗೆಗಾಗಿ ಕಾದಿದೆ.
ಜೆಹೊವಾಹ್ಗಳ ಹುಟ್ಟು
ಬೈಬಲ್ ವಿದ್ಯಾರ್ಥಿ ಚಳವಳಿಯ ಶಾಖೆಯಾಗಿ ಅಮೆರಿಕದಲ್ಲಿ 1870ರ ದಶಕದಲ್ಲಿ ಚಾರ್ಲ್ಸ್ ತಾಜ್ ರಸೆಲ್ ಅವರು ಜೆಹೊವಾಹ್ ವಿಟ್ನೆಸಸ್ ಅನ್ನು ಹುಟ್ಟುಹಾಕಿದರು. ರಸೆಲ್ ಮತ್ತು ಅವರ ಹಿಂಬಾಲಕರು ಕ್ರಿಶ್ಚಿಯನ್ನರಿಗಿಂತ ವಿಭಿನ್ನ ನಂಬಿಕೆಯುಳ್ಳವರನ್ನು ಒಗ್ಗೂಡಿಸಿದರು. 1916ರಲ್ಲಿ ರಸೆಲ್ ನಿಧನದ ನಂತರ ಜೋಸೆಫ್ ಫ್ರಾಂಕ್ಲಿನ್ ರುದರ್ಫರ್ಡ್ ಅವರು ಗುಂಪಿನ ನಾಯಕತ್ವ ವಹಿಸಿಕೊಂಡರು. 1931ರಲ್ಲಿ ಜೆಹೊವಾಹ್ಸ್ ವಿಟ್ನೆಸಸ್ ಹೆಸರನ್ನು ಘೋಷಿಸಿಕೊಂಡರು.
Uncategorized
Leelavathi | ಪ್ರಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ – ದಕ್ಷಿಣಕನ್ನಡದ ಕುಗ್ರಾಮದಿಂದ ಹೋಗಿ ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮೆರೆದ ನಟಿ

ಬೆಂಗಳೂರು: ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ (Leelavathi) ಅವರು ಶುಕ್ರವಾರ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ನೆಲಮಂಗಲದ ಸೋಲದೇವನ ಹಳ್ಳಿಯ ನಿವಾಸದಲ್ಲೇ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಪುತ್ರ ವಿನೋದ್ ರಾಜ್ ಅವರು ನೋಡಿ ಕೊಳ್ಳುತ್ತಿದ್ದರು.
ದಕ್ಷಿಣಕನ್ನಡ ದ ಬೆಳ್ತಂಗಡಿಯ ಬಂಗಾಡಿಯ ಮೂಲದ ಲೀಲಾವತಿ ( ಲೀಲಾ ಕಿರಣ್) ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಭಾರತೀಯ ನಟಿ.
50 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಂ ಚಿತ್ರಗಳಲ್ಲಿನ ಸ್ಮರಣೀಯ ಅಭಿನಯಕ್ಕಾಗಿ ಅವರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ವರು 1999 ರಲ್ಲಿ ಡಾ. ರಾಜ್ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಚಂಚಲಾ ಕುಮಾರಿ ನಂತರ ಶಂಕರ್ ಸಿಂಗ್ ಅವರ ನಾಗ ಕನ್ನಿಕಾ ಚಿತ್ರದಲ್ಲಿ ಸಣ್ಣ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿಗೆ ಸೇರಿದರು.
ಸುಬ್ಬಯ್ಯ ನಾಯ್ಡು ಅವರ 1958 ರ ಸೂಪರ್ ಹಿಟ್ ಚಲನಚಿತ್ರ ಭಕ್ತ ಪ್ರಹ್ಲಾದ, ಬಳಿಕ ಮಾಂಗಲ್ಯ ಯೋಗ, ಧರ್ಮ ವಿಜಯ ಮತ್ತು ರಣಧೀರ ಕಂಠೀರವ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು.
ರಾಣಿ ಹೊನ್ನಮ್ಮ ಚಿತ್ರದಿಂದ ಲೀಲಾವತಿ ಪೂರ್ಣ ಪ್ರಮಾಣದ ನಾಯಕಿಯಾದರು. ಸಂತ ತುಕಾರಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಮತ್ತು ಮನ ಮೆಚ್ಚಿದ ಮಡದಿ ಚಿತ್ರಗಳಲ್ಲಿ ನಾಯಕಿ. ಅವರು ಗೆಜ್ಜೆ ಪೂಜೆ ಮತ್ತು ಡಾಕ್ಟರ್ ಕೃಷ್ಣ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಮನೋಜ್ಞ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.
ಭೂದಾನ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಮಗಳಾಗಿ, ವಾತ್ಸಲ್ಯ ಚಿತ್ರದಲ್ಲಿ ತಂಗಿಯಾಗಿ,ಪ್ರೇಮಮಯಿ ಚಿತ್ರದಲ್ಲಿ ಅತ್ತಿಗೆಯಾಗಿ ವಿವಿಧ ಚಿತ್ರಗಳಲ್ಲಿ ರಾಜಕುಮಾರ್ ಅವರೊಂದಿಗೆ ನಾಯಕಿಯಾಗಿ ಕೆಲಸ ಮಾಡಿದ ಜನ ಮೆಚ್ಚಿದ ಅಪೂರ್ವ ಜೋಡಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಶ್ರಾವಣ ಬಂತು , ವಸಂತಗೀತೆ, ನಾ ನಿನ್ನ ಮರೆಯಲಾರೆ ಮತ್ತು ಜ್ವಾಲಾಮುಖಿಯಲ್ಲಿಯೂ ನಟಿಸಿದ್ದರು.
Uncategorized
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….

ನವದೆಹಲಿ: ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿ ಸಾಲವನ್ನು ರೈಟ್ ಆಫ್ ಮಾಡಿದ್ದು, ಇದರಲ್ಲಿ 5.52 ಲಕ್ಷ ಕೋಟಿ ರೂ. ದೊಡ್ಡ ಕೈಗಾರಿಕೆಗಳಿಗೆ ಸಂಬಂಧಿಸಿರುವುದಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಿನ್ನೆ (ಡಿ.05) ಮಾಹಿತಿಯನ್ನು ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಹಿತಿಯ ಪ್ರಕಾರ ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿಯನ್ನು ರೈಟ್ ಆಫ್ ಮಾಡಿವೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿತ್ತ ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ಈ ರೀತಿಯಾಗಿ ಸಂಸತ್ತಿನಲ್ಲಿ ಮಾಹಿತಿ ನೀಡಿದರು.ಇದೇ ಅವಧಿಯಲ್ಲಿ ವಸೂಲಾಗದ ಒಟ್ಟು ಸಾಲದಲ್ಲಿ (ಎನ್ಪಿಎ) ₹7.15 ಲಕ್ಷ ಕೋಟಿಯನ್ನು ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ರೈಟ್ ಆಫ್ ಮತ್ತು ಸಾಲಮನ್ನಾ ನಡುವೆ ಒಂದು ವ್ಯತ್ಯಾಸವಿದೆ. ಅದೇನೆಂದರೆ, ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ನಿಂದ ಮರುಪಾವತಿಯಾದ ಸಾಲವನ್ನು ತೆಗದುಹಾಕಿ ಎನ್ಪಿಎ ವರ್ಗಕ್ಕೆ ಸೇರಿಸುತ್ತದೆ. ಅಂದರೆ, ಸಾಲವನ್ನು ಬ್ಯಾಂಕ್ನ ಆಸ್ತಿ ಎಂದು ಪರಿಗಣಿಸುವುದಿಲ್ಲ. ಆದರೆ, ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ ಸಾಲ ಮರುಪಾವತಿ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ, ಸಾಲಮನ್ನಾ ವಿಚಾರಕ್ಕೆ ಬಂದಾಗ ಬ್ಯಾಂಕ್ ನೀಡಿದ ಸಾಲವನ್ನು ಸಂಪೂರ್ಣವಾಗಿ ವಜಾಗೊಳಿಸಲಾಗುತ್ತದೆ. ಅಂದರೆ, ಬ್ಯಾಂಕ್ ಮತ್ತು ಸಾಲ ಪಡೆದವನ ನಡುವೆ ಯಾವುದೇ ಒಪ್ಪಂದ ಇರುವುದಿಲ್ಲ. ಹೀಗಾಗಿ ಸಾಲವನ್ನು ಮರುಪಾವತಿ ಮಾಡುವ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ಸುಮಾರು 2300 ಕಂಪನಿಗಳು ವಿವಿಧ ವಾಣಿಜ್ಯ ಬ್ಯಾಂಕ್ಗಳಿಂದ 5 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡಿಲ್ಲ. ಈ ಮೊತ್ತವೇ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳು ಮತ್ತು ನೀತಿಯ ಪ್ರಕಾರ, ಬ್ಯಾಂಕ್ಗಳು ಈ ಮೊತ್ತವನ್ನು ಎನ್ಪಿಎ ವರ್ಗಕ್ಕೆ ಸೇರಿಸಿವೆ.
ಸರ್ಕಾರದ ಸೂಕ್ತ ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
2018-19ನೇ ಹಣಕಾಸು ವರ್ಷದಿಂದ 2022-23ನೇ ಹಣಕಾಸು ವರ್ಷದವರೆಗೆ ಕಳೆದ ಐದು ವರ್ಷಗಳಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಇತರೆ ಸೇವೆಗಳಿಗೆ ಸಂಬಂಧಿಸಿದ 5.52 ಲಕ್ಷ ಕೋಟಿ ರೂ.ಗಳನ್ನು ವಾಣಿಜ್ಯ ಬ್ಯಾಂಕುಗಳು ರೈಟ್ ಆಫ್ ಮಾಡಿವೆ. ಇದರಲ್ಲಿ 93,874 ಕೋಟಿ ರೂ. ವಂಚನೆಯ ಹಣವೂ ಸೇರಿದೆ. ಒಟ್ಟು 10.57 ಲಕ್ಷ ಕೋಟಿ ರೂ.ಗಳು ಅಂದರೆ, ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿ ಕೂಡ ಮನ್ನಾವಾದಂತೆ.
Uncategorized
New Simcard Rules :ಸಿಮ್ ಕಾರ್ಡ್ ಖರೀದಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ ಕಠಿಣ ನಿಯಮಗಳು – ಬೇಕಾಬಿಟ್ಟಿ ಅಕ್ಟಿವೇಶನ್ ಗೆ ಕಡಿವಾಣ – ಇಲ್ಲಿದೆ ಕಂಪ್ಲಿಟ್ ಡಿಟೈಲ್

New simcard Rules: ಒಂದು ಕಾಲದಲ್ಲಿ ನಾಯಿ ಕೊಡೆಗಳಂತೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ (Sim card) ಗಳ ಖರೀದಿ ಎನ್ನುವುದು ಮುಂದಿನ ದಿನಗಳಲ್ಲಿ ಗಜ ಪ್ರಸವ ಆಗಲಿದೆ. ಈ ಹಿಂದೆ ಯಾರು ಯಾರದೋ ಗುರುತಿನ ಚೀಟಿ (ID Card) ಭಾವಚಿತ್ರಕ್ಕೆ ಇನ್ಯಾರಿಗೋ ಸಿಮ್ ಕಾರ್ಡ್ ನೀಡುತ್ತಿದ್ದ ಹಲವು ನಿದರ್ಶನಗಳು ಕಂಡು ಬಂದಿದ್ದವು . ವಂಚಕರು ಕಾಳ ಸಂತೆಯಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ , ಅದನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದನ್ನು ನಾವು ಕಾಣಬಹುದು . ಸದ್ಯ ಪೊಲೀಸರಿಗೆ ಅಪರಾಧ ತನಿಖೆಯಲ್ಲಿ ಸಿಮ್ ಕಾರ್ಡ್ ಅತೀ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಅಲ್ಲದೇ ದೇಶದಲ್ಲಿ ದಿನೇದಿನೆ ಸೈಬರ್ ಪ್ರಾಡ್ ಗಳು ಹೆಚ್ಚುತ್ತಿದ್ದು, ವಂಚಕರು ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ನಕಲಿ ಸಿಮ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸಿಮ್ ಕಾರ್ಡ್ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ ಈ ವರ್ಷದ ಆಗಸ್ಟ್ನಲ್ಲಿ ಟೆಲಿಕಾಂ ಆಪರೇಟರ್ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.
ದೂರಸಂಪರ್ಕ ಇಲಾಖೆ (DoT) ನಕಲಿ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ಡಿಸೆಂಬರ್ 1, 2023 ರಿಂದ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ಬಂದಿದೆ. ನಕಲಿ ಸಿಮ್ ಕಾರ್ಡ್ಗಳಿಗೆ ಲಿಂಕ್ ಮಾಡಲಾದ ವಂಚನೆಗಳನ್ನು ಪರಿಹರಿಸಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಅನುಸರಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗಬಹುದು.
ಹೊಸ ಸಿಮ್ ಕಾರ್ಡ್ ಪಡೆಯಲು ಸಾಮಾನ್ಯವಾಗಿ ಗುರುತಿನ ಚೀಟಿಯನ್ನು ಕೊಟ್ಟರೆ ಕೆಲವು ಗಂಟೆಗಳ ನಂತರ ಸಿಮ್ ಕಾರ್ಡ್ ಆಕ್ಟಿವೇಶನ್ ಆಗುತ್ತಿತ್ತು, ಆದರೆ ಈಗ ಅದು ಸಾಧ್ಯವಿಲ್ಲ.ದೂ ಇನ್ನು ಮುಂದೆ, ಮಾರಾಟಗಾರರು ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ದೂರಸಂಪರ್ಕ ಇಲಾಖೆಯ ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ಸಿಮ್ ಕಾರ್ಡ್ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ.
ಪ್ರಮುಖವಾಗಿ ಪ್ರಿ-ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳು ದೇಶದಲ್ಲಿ ಮಾರಾಟವಾಗುತ್ತಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.
ಹೊಸ ಸಿಮ್ ಕಾರ್ಡ್ ಪಡೆಯಲು ನಿಯಮಗಳು :
*ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗಿದೆ. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
*ಸಿಮ್ ಕಾರ್ಡ್ ಅನ್ನು ಕ್ಲೋಸ್ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುತ್ತದೆ.
*ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಇತರ ಡೆಮೊಗ್ರಾಫಿಕ್ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್ಗಳ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಪಡೆದ ಸಿಮ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಮರುಪರಿಶೀಲಿಸಲಾಗುತ್ತದೆ.
*ಅಸ್ತಿತ್ವದಲ್ಲಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಲಿಮಿಟೆಟ್ ಲಯಾಬಿಲಿಟಿ ಪಾರ್ಟ್ನರ್ಶಿಪ್ ಐಡೆಂಟಿಫಿಕೇಶನ್ ನಂಬರ್ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್, ಪಾನ್ ಕಾರ್ಡ್, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
*ಪಿಒಎಸ್ CIN, LLPIN, ಇನ್ಕಾರ್ಪೊರೇಶನ್ ಪ್ರಮಾಣಪತ್ರ, ಪಾನ್ ಮತ್ತು ಜಿಎಸ್ಟಿ ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಸಲ್ಲಿಸಬೇಕು. ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣವೇ ಸಲ್ಲಿಸಬೇಕಾಗುತ್ತದೆ.
* ಒಂದು ವೇಳೆ ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಟೆಲಿಕಾಂ ಆಪರೇಟರ್ಗಳು ಅದರ ಐಡಿ ಅನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಪಿಒಎಸ್ ನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರ ಸಿಮ್ಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು23 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್24 hours ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ