ಆರೋಗ್ಯ
ರಾಜ್ಯದಲ್ಲಿ ತೀವ್ರ ವೇಗದಲ್ಲಿ ಏರುತ್ತಿದೆ ಮಾರಕ ಡೆಂಗ್ಯೂ – ಪ್ಲೇಟ್ ಲೆಟ್ ದಾಸ್ತಾನು ಹೆಚ್ಚಿಸಲು ಸೂಚನೆ

ಬೆಂಗಳೂರು: ಡೆಂಗ್ಯೂ ಪ್ರಕರಣಗಳು ಏರುಗತಿಯಲ್ಲಿದ್ದು ರಕ್ತ ನಿಧಿಗಳಲ್ಲಿ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲ ಸರಕಾರಿ ರಕ್ತ ನಿಧಿಗಳಲ್ಲಿ ಪ್ಲೇಟ್ಲೆಟ್ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಿದೆ.
ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡದಲ್ಲಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಒಂದು ತಿಂಗಳಲ್ಲಿ 3,170 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,040 ಹಾಗೂ ಇತರ ಜಿಲ್ಲೆಗಳಲ್ಲಿ ಒಟ್ಟು 1,130 ಪ್ರಕರಣ ಗಳು ವರದಿಯಾಗುವುದರ ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ಪ್ಲೇಟ್ಲೆಟ್ಗೆ ಬೇಡಿಕೆ ಹೆಚ್ಚುತ್ತಿದೆ.
ಶೇ. 60ರಷ್ಟು ಏರಿಕೆ
ರಾಜ್ಯದಲ್ಲಿ ಪ್ರಸ್ತುತ ರಕ್ತನಿಧಿಗಳಲ್ಲಿ ಪ್ಲೇಟ್ಲೆಟ್ ಬೇಡಿಕೆ ಪ್ರಮಾಣ ಸರಿಸಮಾರು ಶೇ. 60ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಎರಡು ಮೂರು ತಿಂಗಳ ಹಿಂದೆ ದಿನವೊಂದಕ್ಕೆ 710 ಯೂನಿಟ್ ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಗೆ ಬೇಡಿಕೆ ಇತ್ತು.
ಆದರೆ ಪ್ರಸ್ತುತ ದಿನವೊಂದಕ್ಕೆ ರ್ಯಾಂಡಮ್ ಡೋನರ್ನಿಂದ 6070 ಯೂನಿಟ್ ಹಾಗೂ ಸಿಂಗಲ್ ಡೋನರ್ನಿಂದ 15 ಯೂನಿಟ್ ಪ್ಲೇಟ್ಲೆಟ್ಗೆ ಬೇಡಿಕೆ ಇದೆ. ಇಲ್ಲಿ ಸಂಗ್ರಹಿಸಿದ ಪ್ಲೇಟ್ಲೆಟ್ಗಳನ್ನು ನಗರದ ವಿಕ್ಟೋರಿಯಾ, ವಾಣಿವಿಲಾಸ ಸಹಿತ ಸರಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ರಾಷ್ಟ್ರೋತ್ಥಾನ ರಕ್ತನಿಧಿಯ ಅಧಿಕಾರಿ ಹೇಳಿದ್ದಾರೆ.
ಯಾರಿಗೆ ಪ್ಲೇಟ್ಲೆಟ್ ಅಗತ್ಯ?
ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ ತೀವ್ರವಾಗಿ ಇಳಿಕೆಯಾಗುವುದು ಡೆಂಗ್ಯೂ ಜ್ವರದ ಒಂದು ಲಕ್ಷಣ. ಸಾಮಾನ್ಯವಾಗಿ ಪ್ಲೇಟ್ಲೆಟ್ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾದವರಿಗೆ ಮಾತ್ರ ಪ್ಲೇಟ್ಲೆಟ್ ಸಹಿತ ರಕ್ತ ನೀಡಲಾಗುತ್ತದೆ.
5 ದಿನ ಅವಧಿ
ರಾಜ್ಯದ ಸರಕಾರಿ ರಕ್ತನಿಧಿಗಳಲ್ಲಿ ಪ್ಲೇಟ್ಲೆಟ್ ಕೊರತೆಯಿಲ್ಲ. ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯುತ್ತಿದ್ದು, ಇದೇ ವೇಳೆ ರ್ಯಾಂಡಮ್ ಪ್ಲೇಟ್ಲೆಟ್ ಸಂಗ್ರಹಿಸಲಾಗುತ್ತಿದೆ. ಆದರೆ ಇದನ್ನು ಕೇವಲ 5 ದಿನಗಳ ವರೆಗೆ ದಾಸ್ತಾನು ಇರಿಸಿಕೊಳ್ಳಲು ಸಾಧ್ಯ
ಆರೋಗ್ಯ
Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವುದಾದರೆ ತುಪ್ಪ ಬಹಳ ಮಹತ್ವದ ಆಹಾರವಾಗಿದೆ. ಅದು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ತುಪ್ಪವನ್ನು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ. ಹಾಗಾಗಿ ದಿನನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವುದರಿಂದ ಪ್ರಯೋಜನ ಪಡೆದುಕೊಳ್ಳಿ..
*ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ:ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅಡುಗೆಯಲ್ಲಿ ತುಪ್ಪವನ್ನು ಬಳಸುವುದು ಸೂಕ್ತವಾಗಿದೆ. ಇದು ತನ್ನದೇ ಆದ ವಿಶಿಷ್ಟ ಪರಿಮಳವನ್ನು ಹೊಂದಿದೆ, ಅದು ಯಾವುದೇ ಊಟದ ರುಚಿಯನ್ನು ಹೆಚ್ಚಿಸುತ್ತದೆ.
*ತುಪ್ಪದ ಬಳಕೆಯಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ:
ತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಶುದ್ಧ ಹಸುವಿನ ತುಪ್ಪದ ಕೆಲವು ಬೆಚ್ಚಗಿನ ಹನಿಗಳನ್ನು ಮೂಗಿನಲ್ಲಿ ಹಾಕಿದರೆ ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.
*ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ:
ತುಪ್ಪವು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು, ಏಕೆಂದರೆ ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ, ಇದು ನಿಮ್ಮ ಮುಖದ ಮೇಲಿನ ಚರ್ಮದ ವಿನ್ಯಾಸ ಮತ್ತು ಹೊಳಪನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ನೇರವಾಗಿ ಮುಖದ ಮೇಲಿನ ಚರ್ಮಕ್ಕೆ ಹಚ್ಚಿಕೊಳ್ಳಬಹುದು.
*ಕರುಳಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:ಪೌಷ್ಟಿಕಾಂಶಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆರವಾಗುತ್ತದೆ.
ಅಂದ್ರೆ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುವಂತೆ ಮಾಡುತ್ತದೆ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ತುಪ್ಪ ವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ
*ಕಟ್ಟಿದ ಮೂಗಿಗೂ ಇದು ಒಳ್ಳೆಯದು
ಶೀತದಿಂದ ನಿಮ್ಮ ಮೂಗು ಮುಚ್ಚಿದ್ದರೆ ಅಥವಾ ಕಟ್ಟಿದ್ದರೆ ಸಹ ಅದನ್ನು ನಿವಾರಿಸಿಕೊಳ್ಳಲು ತುಪ್ಪವು ತುಂಬಾನೇ ಪ್ರಯೋಜನಕಾರಿಯಾಗಿದೆ. ನಿಮಗೆ ಉಸಿರಾಟದ ತೊಂದರೆ ಆದರೆ, ನಿಮ್ಮ ರುಚಿ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ದಣಿವನ್ನು ಈ ತುಪ್ಪವು ನಿವಾರಿಸುತ್ತದೆ
ಆರೋಗ್ಯ
Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್ಸಿಆರ್ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Heart Attack deaths Increased in India ನವದೆಹಲಿ: ಕೊರೊನಾ ಬಾಧಿಸಿದ (Corona panadamic) ಕಳೆದ 3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದಯಾಘಾತ (Heart Attack) ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ 2022ನೇ ಸಾಲಿನಲ್ಲಿ ಹೃದಯಾಘಾತವಾಗಿ ಸಾಯುವವರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ 12.5% ಏರಿಕೆಯಾಗಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (National Crime Record Bureau) (ಎನ್ಸಿಆರ್ಬಿ) ದೇಶದಲ್ಲಿ ಹೆಚ್ಚಳ ವಾಗುತ್ತಿರುವ ಹೃದಯಘಾತ ಸಂಬಂದಿ ಸಾವಿನ ಅಂಕಿ ಅಂಶಗಳನ್ನು ( Heart Attack death percentage) ಬಿಡುಗಡೆ (ncrb report on Heart Attack) ಮಾಡಿದೆ. ಈ ವರದಿಯ ಬಳಿಕ ಸಾಂಕ್ರಾಮಿಕ ರೋಗಕ್ಕೂ ಹೃದಯಘಾತಕ್ಕೂ ಸಂಬಂಧವಿದೆ ಈ ಬಗ್ಗೆ ವಿಸ್ತ್ರತ ತನಿಖೆ ನಡೆಯಬೇಕು ಎಂದು ತಜ್ಙರು ಆಗ್ರಹಿಸುತ್ತಿದ್ದಾರೆ
ಎನ್ಸಿಆರ್ಬಿ ವರದಿ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 2021ರಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ 28,413. ಈ ಅಂಕಿ ಅಂಶ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 2020ರಲ್ಲಿ 28579 ಮಂದಿ ಹಾರ್ಟ್ ಅಟ್ಯಾಕ್ (Heart attack ) ನಿಂದ ಮೃತಪಟ್ಟಿದ್ದಾರೆ.
ಹಠಾತ್ ಸಾವಿನ ಪ್ರಮಾಣದಲ್ಲೂ ಏರಿಕೆ
ಹಠಾತ್ ಸಾವುಗಳ (sudden death) ಒಟ್ಟಾರೆ ಸಂಖ್ಯೆಯಲ್ಲೂ ದೇಶದಲ್ಲಿ ಗಮನಾರ್ಹ ಏರಿಕೆ ಕಾಣಿಸಿದೆ. ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳ ಕಂಡು ಬಂದಿದೆ. ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವನ್ನು ಎನ್ಸಿಆರ್ಬಿ ಹಠಾತ್ ಮರಣದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು
ತಜ್ಞರು ಏನೂ ಹೇಳುತ್ತಾರೆ
ಹೃದಯದ ಆರೋಗ್ಯದ ಮೇಲೆ ಇದ್ದಕ್ಕಿದಂತೆ ಆಗಾಧ ಪರಿಣಾಮ ಬೀರುತ್ತಿರುವುದರ ಹಿಂದೆ ಸಾಂಕ್ರಮಿಕ ರೋಗದ ಬಳಿಕ ಉದ್ಭವಿಸಿದ ಪರಿಣಾಮಗಳು ಕಾರಣ ಎಂಬ ಅಭಿಪ್ರಾಯ ವೈದಕೀಯ ಲೋಕದಿಂದ ಕೇಳಿ ಬರುತ್ತಿದೆ. ವೈದಕೀಯ ಜಗತ್ತಿನ ಒಂದು ವರ್ಗದ ಪ್ರಕಾರ ಕೊರೊನಾ ಬಾಧಿಸಿದ ಸಂದರ್ಭ ಹಾಗೂ ಕೊರೊನೋತ್ತರ ಕಾಲದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದು ವರ್ಗದ ಪ್ರಕಾರ ಕೊರೊನಾ ಲಸಿಕೆಯ ಪರಿಣಾಮವು ಇದಾಗಿರಬಹುದು. ಹೀಗಾಗಿ ಈ ಸಾವಿನ ಹೆಚ್ಚಳದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡಬೇಕು . ಇದರ ಜತೆಗೆ ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
Bitter Gourd health benefits: ಹಾಗಲಕಾಯಿ ನಾಲಿಗೆಗೆ ಕಹಿ – ಉದರಕ್ಕೆ ಸಿಹಿ… ಇಲ್ಲಿದೆ ಅದರ ಆರೋಗ್ಯ ಪ್ರಯೋಜನಗಳು
ಜೀವನ ಶೈಲಿ ಬದಲಾಯಿಸಿ
ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚಳವಾಗಲು ಬದಲಾದ ಜೀವನ ಶೈಲಿಯು ಒಂದು ಕಾರಣ. ದೈಹಿಕ ವ್ಯಾಯಮವಿಲ್ಲದ ಉದ್ಯೋಗಗಳು ಹೆಚ್ಚಾಗಿರುವುದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
ಆರೋಗ್ಯ
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು

ದಾಳಿಂಬೆ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಪ್ರೋಟೀನ್, ಫೈಬರ್, ವಿಟಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.
ಅಷ್ಟೇ ಅಲ್ಲ ಈ ಕೆಂಪು ಹಣ್ಣಿನಲ್ಲಿ ವೈನ್ ಅಥವಾ ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚಿನ ಆಂಟಿ-ಆಕ್ಸಿಡೆಂಟ್ ಗಳು ಇರುತ್ತವೆ. ಹಾಗಾದರೆ ದಾಳಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
*ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ:ದಾಳಿಂಬೆ ಹಣ್ಣನ್ನು ತಿನ್ನಬೇಕು ಎನ್ನುವುದಕ್ಕೆ ಮುಖ್ಯ ಕಾರಣವೇ ಇದು. ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶಗಳು ಪಾಲಿಫಿನಾಲ್ ರೂಪದಲ್ಲಿ ಸಿಗುತ್ತದೆ.
ಬೇರೆ ಯಾವುದೇ ಹಣ್ಣುಗಳಿಗೆ ಹೋಲಿಸಿದರೆ ದಾಳಿಂಬೆ ಹಣ್ಣುಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯನ್ನು ತಪ್ಪಿಸಲು ಇವು ನೆರವಾಗುತ್ತವೆ.
*ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಲಿದೆ:
ಬಹಳಷ್ಟು ಜನರಿಗೆ ಕರುಳಿನ ಭಾಗದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ ಈ ಸಮಸ್ಯೆಯನ್ನು ದಾಳಿಂಬೆ ಹಣ್ಣು ತಪ್ಪಿಸುತ್ತದೆ.
ಬಹಳಷ್ಟು ಮಹಿಳೆಯರು ಇನ್ಫಾಮೇಟರಿ ಬೋವಲ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ದಾಳಿಂಬೆ ಹಣ್ಣು ಮತ್ತು ಅದರ ಒಂದು ವರದಾನ ಎಂದು ಹೇಳಬಹುದು.
*ಪುರುಷರಿಗೆ ಪ್ರಯೋಜನಕಾರಿ:
ದಾಳಿಂಬೆ ಸೇವನೆಯು ದೈಹಿಕ ದೌರ್ಬಲ್ಯ, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಪ್ರತಿದಿನ ದಾಳಿಂಬೆಯನ್ನು ಸೇವಿಸಬೇಕು.
*ಕ್ಯಾನ್ಸರ್ ತಡೆಯಲು ಸಹಕಾರಿ:
ತಜ್ಞರ ಪ್ರಕಾರ, ನೀವು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸಿದರೆ, ನೀವು ಕ್ಯಾನ್ಸರ್ ನಂತಹ ರೋಗಗಳನ್ನು ತಪ್ಪಿಸಬಹುದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಹಾಗೂ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
*ಅಜೀರ್ಣ ಸಮಸ್ಯೆಗೆ ಪರಿಹಾರ: ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.
*ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ವೈದ್ಯರು ಸಹ ಹೃದ್ರೋಗದಲ್ಲಿ ದಾಳಿಂಬೆಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ
*ರಕ್ತಹೀನತೆಯಲ್ಲಿ ಪ್ರಯೋಜನಕಾರಿ:
ರಕ್ತಹೀನತೆ, ಕಾಮಾಲೆ, ರಕ್ತಹೀನತೆ ಮುಂತಾದ ರೋಗಗಳನ್ನು ಹೊಂದಿರುವ ಜನರು ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆಯಲ್ಲಿ ಕಬ್ಬಿಣ ಕಂಡುಬರುತ್ತದೆ, ಇದು ರಕ್ತದ ಕೊರತೆಯನ್ನು ನಿವಾರಿಸುತ್ತದೆ.
-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್14 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ11 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?