ವೈರಲ್ ನ್ಯೂಸ್
Banana Price | ಚಿನ್ನದಂತಾಗಿದ್ದ ಟೊಮೇಟೊ ಈಗ ಕೇವಲ 10ಕ್ಕೆ..! ಅಡಿಕೆಯಿಂದ ಬಾಳೆಹಣ್ಣು ಬೆಲೆ ದಿಡೀರ್ ಏರಿಕೆ

ಚಿನ್ನದ ಬೆಲೆ ಪಡೆದಿದ್ದ ಟೊಮೇಟೊ ಈಗ ಕೇವಲ 10 ರೂಪಾಯಿಗೆ ತಲುಪಿದ್ದರೆ , ಬಾಳೆಹಣ್ಣು (Banana Price) ಗೆ ಅದೃಷ್ಟ ಖುಲಾಯಿಸಿದೆ. ಬೆಲೆ ಏರಿಕೆ ನೋಡಿದರೆ ಬಾಳೆಹಣ್ಣು ಮಾತ್ರ ತಿನ್ನುವವರ ಬಾಯಿಗೆ ಎಟುಕದಂತಾಗಿದೆ. ಎಲ್ಲ ರೀತಿಯ ಪೂಜೆಯಿಂದ ಹಿಡಿದು ರಸಾಯನದಂತಹ ಆಹಾರ ಪದಾರ್ಥಗಳ ತಯಾರಿಗೆ, ಸಾಮಾನ್ಯ ಸೇವನೆಗೆ ಬಾಳೆಹಣ್ಣು ಅವಶ್ಯವಾಗಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಅತ್ಯಂತ ತೀರಾ ಕಡಿಮೆ ಬೆಲೆಗೆ ಟೊಮೆಟೊ ಹರಾಜಾಗಿದೆ.
15 ಕೆ.ಜಿ ‘ನಾಟಿ’ ಟೊಮೆಟೊ ಬಾಕ್ಸ್ ಕನಿಷ್ಠ * 50 ಹಾಗೂ ಗರಿಷ್ಠ ತೆ 150 ಕ್ಕೆ ಮಾರಾಟವಾಗಿದೆ. ಕಡಿಮೆ ಗುಣಮಟ್ಟದ ಕೆ.ಜಿ ಟೊಮೆಟೊಗೆ ಸರಾಸರಿ ಕನಿಷ್ಠ 23 ಹಾಗೂ ಗುಣಮಟ್ಟದ ಟೊಮೆಟೊಗೆ ಗರಿಷ್ಠ 710 ಸಿಕ್ಕಿದೆ. ಕಳೆದ ಎರಡೂವರೆ ತಿಂಗಳಲ್ಲಿ ಅತಿ ಕಡಿಮೆ ದರಕ್ಕೆ ಮಾರಾಟವಾಗಿದೆ.
ನಿತ್ಯ ಬಳಕೆಗೆ ಬೇಕಾಗಿರುವ ಬಾಳೆಹಣ್ಣು ಇಂದು ದುಬಾರಿಯಾಗಿದ್ದು, ಕೊಳ್ಳುವವರು ಹಿಂದು ಮುಂದು ನೋಡುವಂತಾಗಿದೆ. ಬಾಳೆಹಣ್ಣು ಪೂಜೆಗೆ ಶ್ರೇಷ್ಠ. ಇದಿಲ್ಲದೆ ಯಾವ ಪೂಜೆಯೂ ಇಲ್ಲ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆ ಆರೋಗ್ಯದಾಯಕ. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಬೇಕಾದ ಫಲವಾಗಿದೆ.
ಎರಡು ಮೂರು ತಿಂಗಳ ಹಿಂದೆ ಕೆಜಿಗೆ 50-60 ರೂ. ಇದ್ದ ಬಾಳೆ ಬೆಲೆ ಇಂದು 120ರಿಂದ 150 ರೂ. ವರೆಗೆ ಏರಿಕೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಆಸುಪಾಸಿನಲ್ಲಿ ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ದುಪ್ಪಟ್ಟಾಗಿದೆ. ಕೆಜಿ ಬಾಳೆಹಣ್ಣು ಕೊಳ್ಳುವವರು ಕಾಲು ಕೆಜಿ ಲೆಕ್ಕಕ್ಕೆ ಬಂದಿದ್ದಾರೆ. ಪ್ರತಿ ವರ್ಷದಂತೆ ಸಾಕಷ್ಟು ಬೆಳೆ ಬರದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಈ ಹಿಂದಿನ ದಿನಗಳಲ್ಲಿ ರೈತರ ಎಲ್ಲ ಜಮೀನುಗಳಲ್ಲಿಯೂ ಬಾಳೆ ಬೆಳೆಯುತ್ತಿದ್ದರು. ಆದರೆ ಈಗ ವಾಣಿಜ್ಯ ಬೆಳೆಯಾದ ಅಡಕೆಗೆ ಮಾರು ಹೋಗಿದ್ದು, ಬಾಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಎರಡು ಮೂರು ತಿಂಗಳ ಹಿಂದೆ ತೋಟದಲ್ಲಿಯೇ 30-40 ರೂ.ಗೆ ಕೆಜಿ ಪುಟ್ಟಬಾಳೆ ಕಾಯಿ ಸಿಗುತ್ತಿತ್ತು. ಪಚ್ಚಬಾಳೆಯನ್ನು 8 ರಿಂದ 10 ರೂ.ಗೆ ವ್ಯಾಪಾರಸ್ಥರು ಕೊಳ್ಳುತ್ತಿದ್ದರು.
ಈಗ ಬೆಲೆ ದುಪ್ಪಟ್ಟಾಗಿದೆ. ಏಲಕ್ಕಿ ಬಾಳೆ, ರಸಬಾಳೆ, ಬೂದು ಬಾಳೆಯಂತಹ ಉತ್ತಮ ತಳಿಯ ಫಲ 200 ರೂ. ಆಗಿದೆ. ಬೇಕೆಂದರೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.ತೋಟದಲ್ಲಿಯೇ ಬೆಳೆ ಕೊರತೆಕಡಿಮೆ ಶ್ರಮದಲ್ಲಿ ಉತ್ತಮ ಆದಾಯದ ಬೆಳೆ ಬೆಳೆಯಲು ರೈತರು ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಬಾಳೆ ಬೆಳೆಯಲು ಸ್ವಲ್ಪ ಶ್ರಮ ಪಡಬೇಕಾಗುತ್ತದೆ.
ಹಾಗೆಯೆ, ಕಳ್ಳರಿಂದ ಮತ್ತು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಇಷ್ಟೆಲ್ಲದರ ನಡುವೆಯೂ ಬಾಳೆ ಬೆಳೆದವರ ಬಾಳು ಈಗ ಬೆಲೆ ಏರಿಕೆ ಕಾರಣಕ್ಕೆ ಬಂಗಾರವಾಗುತ್ತಿದೆ.ಒಂದು ಎಕರೆಗೆ 400 ಬಾಳೆಗಿಡಗಳನ್ನು ನೆಟ್ಟರೆ ಈಗಿನ ಬೆಲೆಯಲ್ಲಿ ಸುಮಾರು 3 ಲಕ್ಷ ರೂ. ಆದಾಯ ಬರುತ್ತದೆ. ಅದೇ ಕೆ.ಜಿ.ಗೆ 20 -30 ರೂ. ಸಿಕ್ಕಿದರೆ ಒಂದು ಲಕ್ಷ ರೂ. ಆದಾಯವಿರುತ್ತದೆ.
ಹಾಗಾಗಿ ದೊಡ್ಡ ಆದಾಯ ನಿರೀಕ್ಷಿಸುವ ರೈತರು ಬಾಳೆ ಬೆಳೆಯನ್ನು ನಿರ್ಲಕ್ಷಿಸುತ್ತಾರೆ. ಇತ್ತೀಚೆಗೆ ಬಾಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿ ಸರಕಿಗೆ ವ್ಯಾಪಾರಸ್ಥರು ಪರದಾಡುವಂತಾಗಿದೆ. ಬದುಗಳಲ್ಲಿ ಹಾಕಿರುವ ಒಂದೊ ಎರಡೊ ಗೊನೆಗಳನ್ನು ತಂದು ರೈತರು ಮಾರುಕಟ್ಟೆಗೆ ಕೊಡುತ್ತಾರೆ. ವ್ಯಾಪಾರಸ್ಥರು ಅದನ್ನೇ ಮಾರಾಟ ಮಾಡಬೇಕಿದೆ. ಮುಂದೆ ಬರುವ ಗೌರಿ ಹಬ್ಬಕ್ಕೆ ಕೆಜಿ ಬಾಳೆ ಬೆಲೆ 150 ರೂ.ಗೆ ಹೋದರೂ ಅಚ್ಚರಿಪಡುವಂತಿಲ್ಲ ಎಂಬುದು ವರ್ತಕರ ಅಭಿಪ್ರಾಯ.
ವೈರಲ್ ನ್ಯೂಸ್
Arjuna Elephant | ಅರ್ಜುನನಿಗೆ ತಪ್ಪಾಗಿ ಗುಂಡೇಟು ಬಿದ್ದದ್ದಲ್ಲ ಕಾದಾಡುವಾಗ ಚೂಪಾದ ಮರದ ತುಂಡು ಚುಚ್ಚಿ ಗಾಯವಾಗಿದ್ದು : ಅರಣ್ಯ ಇಲಾಖೆ ಸ್ಪಷ್ಟನೆ

ಹಾಸನ: ವಿಶೇಷ ಕಾರ್ಯಾಚರಣೆ ವೇಳೆ ಭೀಕರ ಕಾಳಗದಲ್ಲಿ ದಸರಾ ಹಬ್ಬ ಖ್ಯಾತಿಯ ಅರ್ಜುನ ಆನೆ ಮೃತಪಟ್ಟಿದ್ದು (Arjuna Elephant) ಇಡೀ ರಾಜ್ಯವೇ ಮರುಕಪಟ್ಟಿದೆ.
ಅರ್ಜುನ ಆನೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ತಪ್ಪಾದ ಗುಂಡೇಟಿಗೆ ಬಲಿಯಾಗಿದೆ ಎಂಬ ಆರೋಪ ಎಲ್ಲೆಡೆ ಕೇಳಿಬಂದಿತ್ತು. ಆದರೆ, ಅರಣ್ಯ ಇಲಾಖೆಯು ಈ ಆರೋಪವನ್ನು ಅಲ್ಲಗಳೆದಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಒಂಟಿ ಕಾಡಾನೆ ಸೆರೆ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ನಾನು ಅದಕ್ಕೆ ರೇಡಿಯೊ ಕಾಲರ್ಗಳನ್ನು ಸರಿಪಡಿಸುತ್ತಿದ್ದ ವೇಳೆ ಅರ್ಜುನನ ಬಲಭಾಗ ದೊಡ್ಡ ಗಾಯವಾಗಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದುದನ್ನು ಗಮನಿಸಿದ್ದೆ ಎಂದು ಹೇಳಿದ್ದಾರೆ.
ಕಾಡಾನೆಯೊಂದಿಗೆ ಕಾದಾಡುವಾಗ ಚೂಪಾದ ಮರದ ತುಂಡನ್ನು ತುಳಿದು ಆನೆ ಗಾಯಗೊಂಡಿದೆ. ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದರೂ ಅದು ತೀವ್ರವಾಗಿ ಹೋರಾಡುತ್ತಿತ್ತು. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಾಗಿ ಗುಂಡೇಟು ಬಿದ್ದು ಅರ್ಜುನ ಆನೆ ಗಾಯಗೊಂಡು ಮೃತಪಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಾಚರಣೆ ವೇಳೆ ಅರಣ್ಯ ಅಧಿಕಾರಿಯೊಬ್ಬರು ದೂರದಲ್ಲಿ ನಿಂತು, ಕಾಡಾನೆಯನ್ನು ಭಯಪಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು, ಆಗ ಅರ್ಜುನ ಆನೆ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿತು ಎನ್ನುತ್ತಾರೆ.
ಇಂತಹ ಕಾರ್ಯಾಚರಣೆಯ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಡಬಲ್ ಬ್ಯಾರಲ್ ಗನ್ ನ್ನು ಮಾತ್ರ ಕೊಂಡೊಯ್ಯುತ್ತಾರೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅರ್ಜುನನ ದೇಹದ ಯಾವುದೇ ಭಾಗದಲ್ಲಿ ಮದ್ದುಗುಂಡಿನ ಗಾಯಗಳು ವೈದ್ಯರಿಗೆ ಕಂಡುಬಂದಿಲ್ಲ ಎಂದು ಹೇಳಿದರು.
ಕ್ರಮಕ್ಕೆ ಆಗ್ರಹ: ಅರ್ಜುನನ ಮಾವುತ ವಿನು ನೀಡಿದ್ದ ಹೇಳಿಕೆಯ ನಂತರ ಕಾಡಾನೆಯೊಂದಿಗೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ಗುಂಡೇಟಿಗೆ ತೀವ್ರ ಗೊಯಗೊಂಡು ಮೃತಪಟ್ಟಿದೆ ಎಂದು ಪ್ರಾಣಿ ಪ್ರೇಮಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಬಿಗ್ ನ್ಯೂಸ್
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು

Bride refuses Marriage in hall ಚಿತ್ರದುರ್ಗ: ನಿಗದಿಯಾಗಿದ ಮದುವೆಗಳು ಮುರಿದು ಬೀಳುವುದು ಸಹಜ . ಆದರೇ ಮದುವೆ ಮಟಂಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಮದುವೆಗಳು ಮುರಿದು ಬೀಳುವುದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರ. ಆದರೇ ಇಂತಹದೊಮದು ಸಿನಿಮೀಯ ಘಟನೆ ಚಿತ್ರದುರ್ಗಾದಿಂದ ವರದಿಯಾಗಿದೆ. ಈ ಘಟನೆ ನೋಡಿ ಮದುವೆ ಬಂದವರು ಹೌಹಾರಿದ್ದಾರೆ.
ಇನ್ನೇನು ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಾಗ ವಧು ತೆಗೆದುಕೊಂಡ ಈ ನಿರ್ಧಾರದಿಂದ ಮದುವೆ ಮನೆಯಲ್ಲಿ ಸೇರಿದ್ದ ಜನರಿಗೆ ಎಲ್ಲರಿಗೂ ಒಂದು ರೀತಿಯ ಶಾಕ್ ನೀಡಿದಂತೆ ಆಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ವಿವಾಹವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ ಆಗಿದೆ. ವರ ತಾಳಿ ಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ವಧುವಿಗೆ ಮದುವೆಗೆ ಇಷ್ಟವಿರಲಿಲ್ಲ .ಮನೆಯವರ ಒತ್ತಾಯಕ್ಕೆ ಮಣಿದು ಆಕೆ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾಳೆ ಅದರೆ ಮುಹೂರ್ತದ ವೇಳೆ ಮನ ಬದಲಾಯಿಸಿದ ವಧು ತಾಳಿ ಕಟ್ಟುವ ವೇಳೆ ಕಯ ಅಡ್ಡ ಹಿಡಿದು ತನ್ನ ಅಸಮ್ಮತಿ ಸೂಚಿಸಿದ್ದಾಳೆ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಕೈ ಕೊಟ್ಟ ವಧುವಿನ ಬಗ್ಗೆ ವರನ ಮನೆಯವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ.
ಹುಡುಗಿ ಮದುವೆಗೊಪ್ಪದಿರುವದನ್ನು ಗಮನಿಸಿದ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ದಾರೆ. ಆದರೇ ಗಟ್ಟಿ ಮನಸ್ಸು ಮಾಡಿದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.
ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಜೀವನಶೈಲಿ
2024 Maruti swift Car: ಮಾರುತಿ ಸುಜುಕಿ ಕಂಪನಿಯಿಂದ ಸಿಹಿಸುದ್ದಿ: ಹೊಸ ಎಂಜಿನ್ ಮಹಿಮೆ – 40 ಕಿ. ಮೀ ಮೈಲೇಜ್ ಕೊಡುವ ಹೊಸ ಸ್ವಿಫ್ಟ್ ಬಿಡುಗಡೆ ಕ್ಷಣಗಣನೆ – ಬೆಲೆ ಎಷ್ಟಿದೆ ಗೊತ್ತೆ?

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ದೇಶದ ಪ್ರಸಿದ್ಧ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಬಹುನೀರಿಕ್ಷಿತ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮಾದರಿಯು ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಹೊಸ ತಲೆಮಾರಿನ ಸ್ವಿಫ್ಟ್ ಕಾರು ಮಾದರಿಯು ಜಪಾನಿನ ಟೋಕಿಯೋ ಶೋದಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದು ಮುಂಬರುವ 2024ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಯಾಗಲಿದೆ.

ಮುಂಬರಲಿರುವ ಮಾರುತಿ ಸ್ವಿಫ್ಟ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಅದರ ಮೈಲೇಜ್ನಿಂದಾಗಿಯೇ, ಮೂಲಗಳ ಪ್ರಕಾರ ಈ ಕಾರು ಪರೀಕ್ಷೆಯಲ್ಲಿ ಬರೋಬ್ಬರಿ 40km/l ಮೈಲೇಜ್ ಅನ್ನು ಹಿಂದಿರುಗಿಸಿದೆ ಎಂದು ವರದಿಯಾಗಿದೆ. ಮಾರುತಿ ಸ್ವಿಫ್ಟ್ನ ಈ ಬೆರಗುಗೊಳಿಸುವ ಮೈಲೇಜ್ಗೆ ಪ್ರಮುಖ ಕಾರಣವೆಂದರೆ ಅದರ ಹೊಸ ಪವರ್ಟ್ರೇನ್.

ಜಪಾನ್ ನಲ್ಲಿ ಬಿಡುಗಡೆಯಾಗಿರುವ ಹೊಸ ಸ್ವಿಫ್ಟ್ ನಲ್ಲಿ ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಿಂದಿನ ಸ್ವಿಫ್ಟ್ ಮಾದರಿಯಲ್ಲಿದ್ದ ಕೆ12 1.2ಡ್ ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಂತ್ರಜ್ಞಾನ ಪ್ರೇರಿತ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗೆ ಬದಲಾಯಿಸಲಾಗಿದ್ದು, ಇದು ಹಿಂದಿನ ಮಾದರಿಗಿಂತಲೂ ತುಸು ಕಡಿಮೆ ಹಾರ್ಸ್ ಪವರ್ ಹೊಂದಿದ್ದರೂ ಇಂಧನ ದಕ್ಷತೆಯಲ್ಲಿ ಸಾಕಷ್ಟು ಸುಧಾರಿಸಿದೆ.
ಹೊಸ ಸ್ವಿಫ್ಟ್ ಮಾದರಿಯಲ್ಲಿನ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಶೀಘ್ರದಲ್ಲಿಯೇ ಇದು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ 4×4 ಡ್ರೈವ್ ಸಿಸ್ಟಂ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಪರೀಕ್ಷಾ ಪರಿಸ್ಥಿತಿಗಳಲ್ಲಿ ಝಡ್-ಸೀರಿಸ್ ಎಂಜಿನ್ ಸುಮಾರು 40 ಕಿ.ಮೀ ಮೈಲೇಜ್ ನೀಡಿದೆ ಎನ್ನಲಾಗಿದ್ದು ಅಸ್ತಿತ್ವದಲ್ಲಿರುವ ಸ್ವಿಫ್ಟ್ ಎಂಜಿನ್ ಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಪ್ರಸ್ತುತ ಸ್ವಿಫ್ಟ್ ನ ಎಂಜಿನ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ 22.38 ಕಿ.ಮೀ ಮತ್ತು ಎಜಿಎಸ್ (ಆಟೋ ಗೇರ್ ಶಿಫ್ಟ್) ನೊಂದಿಗೆ 22.56 ಕಿ.ಮೀ ಮೈಲೇಜ್ ನೀಡುತ್ತದೆ.
ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ಮಾದರಿಯು ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮೈಲ್ಡ್ ಹೈಬ್ರಿಡ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎಎಂಟಿ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಸ್ವಿಫ್ಟ್ ಸಹ ಜಪಾನ್ ಮಾರುಕಟ್ಟೆಯಲ್ಲಿನ ಮಾದರಿಯೆಂತೆಯೇ ಮೈಲೇಜ್ ನೀಡಲಿದ್ದು, ಇದು ಫ್ರಂಟ್ ಡ್ರೈವ್ ಸಿಸ್ಟಂ ಆಯ್ಕೆ ಮಾತ್ರ ಹೊಂದಿರಲಿದೆ.
ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಹೊಂದಿದೆ. ಹೀಗಾಗಿ ಬೆಲೆಯಲ್ಲಿ ತುಸು ದುಬಾರಿಯಾಗಲಿರುವ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ರೂ. 10 ಲಕ್ಷ ರೂ ಬೆಲೆ ಇರಲಿದೆ.
-
ಸುಳ್ಯ2 days ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು23 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್23 hours ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು