Power Man Death : ವಿದುತ್‌ ಶಾಕ್‌ ಗೆ ತುತ್ತಾಗಿ ಕಡಬದಲ್ಲಿ  ಪವರ್‌ ಮ್ಯಾನ್‌ ಸಾವು  – ಮೆಸ್ಕಾಂ ನ ಇಬ್ಬರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು

IMG-20230601-WA0030
Ad Widget

Ad Widget

Ad Widget

ಮೆಸ್ಕಾಂ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ಯಾಮಣ್ಣ ದೊಡಮನಿ (26) ಅವರ ಸಾವಿಗೆ ಸಂಬಂಧಿಸಿದಂತೇ ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ  ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಸಹಾಯಕ ಇಂಜಿನಿಯರ್‌  ಸತ್ಯನಾರಾಯಣ್‌ ಸಿ ಕೆ ಮತ್ತು ಮೆಸ್ಕಾಂ ಕಡಬ ಶಾಖೆಯ  ಕಿರಿಯ ಇಂಜಿನಿಯರ್‌ ವಸಂತ ಪ್ರಕರಣದ ಆರೋಪಿಗಳು . ಇವರ ವಿರುದ್ದ  ಐ.ಪಿ.ಸಿ ಕಲಂ: 304(A) ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ad Widget

ಜೂ 1 ರಂದು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್‌ ಕಂಬವೇರಿ ದುರಸ್ತಿ ಕಾರ್ಯದಲ್ಲಿ ಮಗ್ನರಾಗಿದ್ದ ಪವರ್ ಮ್ಯಾನ್ ದ್ಯಾಮಣ್ಣ ಎಂಬವರು ಹಠಾತ್‌ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದರು. ವಿದ್ಯುತ್‌ ಶಾಕ್‌ ಹೊಡೆದ ಬಳಿಕ ಕೆಲ ಸಮಯದವರೆಗೆ ವಿದಯುತ್‌ ಕಂಬದಲ್ಲಿದ್ದ ದ್ಯಾಮಣ್ಣ ಅವರನ್ನು ಸ್ಥಳೀಯರು ಕಂಬದಿಂದ ಇಳಿಸಿ ಆಸ್ಫತ್ರೆಗೆ ಕರೆದುಕೊಂಡು ಹೋಗಿದ್ದರು . ಆದರೇ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು.

Ad Widget

Ad Widget

Ad Widget

ದೂರಿನಲ್ಲಿ ಏನಿದೆ ?

Ad Widget

ಕಂಬದ ಮೇಲೆ ವಿದ್ಯುತ್‌ ದುರಸ್ತಿ ಕಾರ್ಯಕ್ಕೆ ಕಳುಹಿಸುವಾಗ  ನಿಯಮದಂತೆ  ದ್ಯಾಮಣ್ಣ ಅವರ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸಿಲ್ಲ.   ಹೆಲ್ಮೇಟ್‌ ಹ್ಯಾಂಡ್‌ ಗ್ಲೌಸ್, ಶೂ,ಸೇರಿದಂತೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

 ನಿರ್ಲಕ್ಷತನದಿಂದ ವಿದ್ಯುತ್‌ ಕಂಬ ಹತ್ತಲು ಹೇಳಿ ಕೆಲಸ ಮಾಡಿಸಿದ ಮತ್ತು ತಮ್ಮ ಮಗನ ಸಾವಿಗೆ ಕಾರಣರಾದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್‌ ಆದ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್‌ ವಸಂತ ಎಂಬವರ ಮೇಲೆ ಮೊಕದ್ದಮ್ಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ್ಯಾಮಣ್ಣ ಅವರ ತಂದೆ ರೇವಣೆಪ್ಪ ದೊಡಮನಿ ಕಡಬ ಪೊಲೀಸರಿಗೆ  ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಾಗಿದೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: