ಪುತ್ತೂರು: ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ನಡೆಸಲಿರುವ ನೀರು ಸರಬರಜು ನಿರ್ವಹಣಾ ಕಾಮಗಾರಿ ಸಹಿತ ವಿವಿಧ ಕಾಮಗಾರಿಗಳಿಗೆ ಕರೆಯಲಾಗಿದ್ದ ಟೆಂಡರ್ಗೆ ಕನಿಷ್ಟ ದರ ನಮೊದಿಸಿದ ಗುತ್ತಿಗೆದಾರರಿಗೆ ಅನುಮೊದನೆ ಪಡೆಯುವ ಉದ್ದೇಶದಿಂದ ನಗರಸಭಾ ಕಾರ್ಯಾಲಯದಲ್ಲಿ ನಗ ಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಗುರುವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು.
ನಗರ ಸಭಾ ಸದಸ್ಯ ಮಾತನಾಡಿ ಶಕ್ತಿ ಸಿನ್ಹ ಮಾತನಾಡಿ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಈಗಾಗಲೇ ಎರಡು ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಮುಂದೆ ಚುನಾವಣೆ ನೀತಿಸಂಹಿತೆ ಜಾರಿಯಾದರೆ ಕೊಳವೆ ಬಾವಿ ಕೊರೆಸಲೂ ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಈಗಲೇ ನಗರ ಸಭೆ ಎಚ್ಚೆತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ನಗರ ಸಭಾಸದಸ್ಯ ಭಾಮಿ ಅಶೋಕ್ ಶೆಣೈ “ ಇದು ಕೊನೆಯ ಸಭೆಯಾಗಿರುವ ಕಾರಣ ನೀರಿನ ಸಮಸ್ಯೆ ಉಟಾಗಿರುವ ವಾರ್ಡ್ ನ ಸದಸ್ಯರಿಂದ ನಿನ್ನೆಯ ದಿನಾಂಕದಲ್ಲಿ ಅರ್ಜಿಯನ್ನು ಪಡೆದುಕೊಂಡು, ಕೊಳವೆ ಬಾವಿ ಕೊರೆಯಲು ಹಣ ಒದಗಿಸಲಿ ಎಂದರು
ನಗರ ಸಭೆ ಪೌರಯುಕ್ತ ಮಧು ಎಸ್. ಮನೋಹರ್ ಮಾತನಾಡಿ ನಗರ ಸಭೆಯ ಕೆಳಗಿನ ಅಂತಸ್ತಿನಲ್ಲಿ ಜಲ ಸಿರಿ, ಬ್ಯಾಂಕ್, ಸಕಾಲ ಸೇವೆ ಸೇರಿ ದೂರು ವಿಭಾಗ, ಜನರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟಡವನ್ನು ಆಧುನೀಕರಣ ಮಾಡಲಾಗುತ್ತಿದೆ ಎಂದರು.
ನಗರ ಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ನಗರೋತ್ಥಾನದ ಮೂಲಕ ಬೊಳುವಾರು ತನಕ ಅಗಲೀಕರಣ ಕಾರ್ಯ ನಡೆಯಲಿದೆ. ಇದಕ್ಕಾಗಿ ಹಲವು ನಿವಾಸಿಗಳು ತಮ್ಮ ಜಾಗವನ್ನು ಬಿಟ್ಟುಕೊಡುವ ಮೂಲಕ ನಗರ ಸಭೆ ಜತೆ ಕೈಜೋಡಿಸಿದ್ದಾರೆ. ಇಂತಹ ದಾನಿಗಳಿಗೆ ಅಭಿನಂದನ ಪತ್ರ ನೀಡುವ ಕಾರ್ಯ ಮುಂದಿನ ದಿನಗಳಲ್ಲಿ ನಗರಸಭೆ ವತಿಯಿಂದ ಮಾಡಲಾಗುವುದು ಎಂದರು.
ಜಾತ್ರೆ ಸಂದರ್ಭ ದೇವರ ಸವಾರಿ ಹೋಗುವ ಜಾಗದಲ್ಲಿ ಎಲ್ಲಾ ರಸ್ತೆಗಳನ್ನು ಸ್ವಚ್ಚವಾಗಿಡುವ ಪ್ರಯತ್ನ ಮಾಡಲಾಗುತ್ತಿದೆ. ಮನೆ ದುರಸ್ಥಿಯ ವಿಚಾರದಲ್ಲಿ ಚಿತ್ರ ಸಹಿತ ಸೂಕ್ತ ದಾಖಲೆಯನ್ನು ಅರ್ಜಿಯ ಜತೆಗೆ ನೀಡಬೇಕು. ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವೇ ದುರಸ್ಥಿಕಾರ್ಯಕ್ಕೆ ಮುಂದಾಗಬೇಕು ಎಂದರು.
ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಉಪಸ್ಥಿತರಿದ್ದರು.