ದಕ್ಷಿಣ ಕನ್ನಡ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪುತ್ತೂರಿನ ಜಮೀನನ್ನು ಗುಜರಿ ಅಂಗಡಿಯವ ಅತಿಕ್ರಮಿಸಿದ್ದು, ಅದನ್ನು ಸ್ವಚ್ಚಗೊಳಿಸಿ ಮರಳಿ ದೇಗುಲಕ್ಕೆ ಒಪ್ಪಿಸುವ ಕಾರ್ಯ ಹಿಂಜಾವೇ ಮಾಡಿದೆ : ಅಜೀತ್ ರೈ
ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧೀನಕ್ಕೆ ಒಳಪಟ್ಟ ಜಮೀನು ಪುತ್ತೂರು ನಗರದ ಬೋಳ್ವಾರ್ ಎಂಬಲಿದ್ದು ಅದನ್ನು ಗುಜರಿ ವ್ಯಾಪಾರಿಯೊಬ್ಬರು ಅತಿಕ್ರಮಿಸಿದ್ದರು. ಅದನ್ನೀಗ ಹಿಂದೂ ಜಾಗರಣೆ ವೇದಿಕೆ ಸ್ವಚ್ಚಗೊಳಿಸಿ ಮತ್ತೆ ದೇವಳಕ್ಕೆ ಒಪ್ಪಿಸುತ್ತಿದ್ದು ಈ ಹಿನ್ನಲೆಯಲ್ಲಿ ಅದೇ ಸ್ಥಳದಲ್ಲಿ ಮಾ.24 ರಂದು ಆಶ್ಲೇಷ ಬಲಿ, ಅರ್ಧಏಕಾಹ ಭಜನೆ, ಧಾರ್ಮಿಕ ಸಭೆ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಸಹ ಸಂಚಾಲಕ ಅಜಿತ್ ಹೊಸಮನೆ ಹೇಳಿದರು.
ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿ ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸೇರಿದ 1.57 ಜಮೀನಿದ್ದು ಅದನ್ನು 1965ರಲ್ಲಿ ಪೆರ್ನೆ ಸಂಜೀವ ರೈ ಎಂಬವರಿಗೆ ಗೇಣಿ ನೀಡಲಾಗಿತ್ತು ಎಂದು ಅಜೀತ್ ರೈ ತಿಳಿಸಿದರು.
ನಂತರದ ದಿನಗಳಲ್ಲಿ ಈ ಜಾಗಕ್ಕೆ ಸಂಬಂಧಿಸಿದಂತೆ ಹಲವು ವಿದ್ಯಮಾನಗಳು ನಡೆದಿದ್ದು, ಬಳಿಕ ಈ ಜಾಗವನ್ನು ಮರಳಿ ಪಡೆಯಲು ದೇಗುಲದಿಂದ ಕಾನೂನು ಹೋರಾಟ ನಡೆಸಲಾಗಿತ್ತು. ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟು ಮೆಟ್ಟಿಲೇರಿದ ಈ ಪ್ರಕರಣದಲ್ಲಿ 2014 ರಲ್ಲಿ ದೇವಸ್ಥಾನದ ಪರ ತೀರ್ಪು ಬಂದಿತ್ತು. ಅದರೆ ಬಳಿಕ ಸಂಬಂಧಪಟ್ಟವರು ಇಚ್ಚಾ ಶಕ್ತಿ ಪ್ರದರ್ಶಿಸದ ಹಿನ್ನಲೆಯಲ್ಲಿ ಜಮೀನು ಕ್ಷೇತ್ರಕ್ಕೆ ಹಸ್ತಾಂತರಗೊಂಡಿರಲಿಲ್ಲ ಎಂದರು.
ಸಂಬಂಧಿಸಿದ ಸ್ಥಳದಲ್ಲಿ ಹಲವು ದಶಕಗಳಿಂದ ಅಕ್ರಮವಾಗಿ ಗುಜುರಿ ಅಂಗಡಿ ಕಾರ್ಯಚರಿಸುತಿತ್ತು. ಜಾಗವನ್ನು ಸ್ವಾಧೀನ ಪಡೆಯುವಂತೆ ನ್ಯಾಯಾಲಯದ ಸ್ಪಷ್ಟ ಸೂಚನೆಯಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೆರವಾಗಿರಲಿಲ್ಲ. ಈ ಕುರಿತು ಹಿಂದು ಜಾಗರಣ ವೇದಿಕೆ ಎಲ್ಲಾ ದಾಖಲೆಗಳನ್ನು ಕಲೆ ಹಾಕಿ, ಸಮಗ್ರವಾಗಿ ಅಧ್ಯಯನ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಜೊತೆ ಸೇರಿ ತೆರವು ಕಾರ್ಯ ನಡೆಸಿತ್ತು.
ಈಗಾಗಲೇ ಅತಿಕ್ರಮಣವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಈ ಸಂದರ್ಭ ಸುಮಾರು 300 ಟನ್ ನಷ್ಟು ತ್ಯಾಜ್ಯ ಆ ಪ್ರದೇಶದಲ್ಲಿ ಹುಗಿದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದನ್ನು ಹಿಂಜಾವೇ ಸ್ವಚ್ವಗೊಳಿಸಿದೆ ಎಂದರು.
ಜನ ಜಾಗೃತಿ ಸಭೆ
ಮಾ.24ರಂದು ಪ್ರಥಮವಾಗಿ ಆಶ್ಲೇಷ ಬಲಿ, ಧಾರ್ಮಿಕ ಸಭೆ ಮತ್ತು ಅರ್ಧಏಕಾಹ ಭಜನೆ ನಡೆಯಲಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಅರ್ಧ ಏಕಾಹ ಭಜನೆ ಆರಂಭ, ಸಂಜೆ ಆಶ್ಲೇಷ ಬಲಿ ಬಳಿಕ ಜನಜಾಗೃತಿ ಸಭೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು
ಜನಜಾಗೃತಿ ಸಭೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಖಂಡ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.
ಶಿಕ್ಷಣ
Press Release-ವಿಶೇಷ ಸರ್ಟಿಫಿಕೇಟ್ ಕೋರ್ಸ್ಗಳ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ
ವಿವೇಕಾನಂದ ಪದವಿಪೂರ್ವ ಕಾಲೇಜು 2024-25ನೇ ಶೈಕ್ಷಣಿಕ ವರ್ಷದಿಂದ ವಿಶೇಷ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪರಿಚಯಿಸುತ್ತಿದೆ. ಪದವಿಪೂರ್ವ ಶಿಕ್ಷಣ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ವಿನೂತನ ಪ್ರಯೋಗವನ್ನು ನಮ್ಮ ಸಂಸ್ಥೆ ಆರಂಭಿಸುತ್ತಿದ್ದು, ಈ ಕೋರ್ಸ್ಗಳ ಮೂಲಕ ವಿದ್ಯಾರ್ಥಿಗಳಿಗೆ ಶೇರು ವಹಿವಾಟು, Tally, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶವಿದೆ.
ಈ ವಿಶೇಷ ಸರ್ಟಿಫಿಕೇಟ್ ಕೋರ್ಸ್ಗಳ ಉದ್ಘಾಟನಾ ಸಮಾರಂಭವು 24 ಏಪ್ರಿಲ್ 2024 ನೇ ಬುಧವಾರ 10 ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇರುವ ನೇತಾಜಿ ಸಭಾಂಗಣದಲ್ಲಿ ಜರುಗಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ. ಪಿ. ಇವರು ವಹಿಸಲಿದ್ಧಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳು ಹಾಗೂ ಅಜೇಯ ವಿಶ್ವಸ್ಥ ಮಂಡಳಿ, ಮೂರ್ಕಜೆ, ವಿಟ್ಲ ಇದರ ಅಧ್ಯಕ್ಷರಾದ ಪಿ. ಸುಬ್ರಾಯ ಪೈ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಲ್ತ್ ವಿಷನ್ ಪುತ್ತೂರು ಹಾಗೂ ಹಾರ್ದಿಕ್ ಹರ್ಬಲ್ಸ್ ಬಂಟ್ವಾಳ ಇದರ ಸಂಸ್ಥಾಪಕರಾದ ಮುರಳೀಧರ ಕೆ. ಇವರು ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೆ. ಎನ್. ಸುಬ್ರಹ್ಮಣ್ಯ ಹಾಗೂ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರು ಉಪಸ್ಥಿತಲಿರಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪೋಷಕರು, ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ಗಳು ಆರಂಭಗೊಳ್ಳಲಿದ್ದು ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
ಮಂಗಳೂರು
Padmaraj R Poojary-ಮೆಡಿಕಲ್- ಎಜ್ಯುಕೇಶನ್ ಹಬ್ ಆಗಿರುವ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ, ದೇವಸ್ಥಾನಗಳನ್ನು ಬಳಸಿಕೊಂಡು ಟೂರಿಸಂ ಅಭಿವೃದ್ದಿ – ಮುಂಬೈ ಮಹಾನಗರ ಮಾದರಿ ಮಂಗಳೂರನ್ನು 20 ಗಂಟೆ ತೆರೆದಿರುವಂತೆ ನೋಡಿಕೊಂಡು ಉದ್ಯೋಗ ಸೃಷ್ಟಿ ನನ್ನ ಗುರಿ : ಪದ್ಮರಾಜ್ ಆರ್ ಪೂಜಾರಿ
ತುಳುನಾಡು ಅಭಿವೃದ್ಧಿ ಆಗಬೇಕಾದರೆ ಇಲ್ಲಿ ಈ ಹಿಂದೆ ಇದ್ದ ಸಾಮರಸ್ಯದ ಗತ ವೈಭವ ಮರುಸ್ಥಾಪನೆ ಮಾಡುವುದು ಅತ್ಯಗತ್ಯ. ನನಗೆ ಅಧಿಕಾರ ಸಿಕ್ಕಾಗ ನಾನು ಮಾಡುವ ಮೊದಲ ಕಾರ್ಯ ಇದು. ದಕ್ಷಿಣ ಕನ್ನಡ ಜಿಲ್ಲೆಗೆ ಕೈಗಾರಿಕೆಗಳು, ಹೂಡಿಕೆಗಳು ಬರುವಂತೆ ಮಾಡಬೇಕಿದೆ. ಮೆಡಿಕಲ್, ಎಜ್ಯುಕೇಶನ್, ಟೆಂಪಲ್ ಟೂರಿಸಂ, ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಬಳಸಿಕೊಂಡು ಟೂರಿಸಂ ಅಭಿವೃದ್ದಿ ಮಾಡುವ ಕೆಲಸವಾಗಬೇಕಿದೆ. ಇದುವರೆಗೆ ಈ ಕುರಿತು ಪ್ರಯತ್ನವೇ ನಡೆದಿಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.
ಮಾದ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕ್ಷೇತ್ರದ ಅಭಿವೃದ್ದಿಗೆ ತನ್ನ ವಿಷನ್ ಹಂಚಿಕೊಂಡ ಪದ್ಮರಾಜ್ ಆರ್ ಪೂಜಾರಿ “ ಮುಂಬೈ ಮಹಾನಗರ 20 ಗಂಟೆ ಲೈವ್ ಆಗಿ ಲವಲವಿಕೆಯಿಂದ ಇರುತ್ತದೆ.ಮುಂಬೈಯಂತೆ ಮಾಡಲು ಅರ್ಹತೆ ಇರುವ ದೇಶದ ಇನ್ನೊಂದು ನಗರ ಇದ್ರೆ ಮಂಗಳೂರು . ಮಂಗಳೂರು ನಗರಕ್ಕೂ ಮುಂಬೈಯ ಹಾಗೇ ನಾಲ್ಕು ಸಾರಿಗೆ ಮಾರ್ಗಗಳಿವೆ. ಹೀಗಾಗಿ ಮಂಗಳೂರಿನಲ್ಲೂ ಸಹ ಅದೆ ರೀತಿಯ ವಾತವರಣ ನಿರ್ಮಾಣವಾಗಬೇಕು . ಒಂದೊಮ್ಮೆ ಇದು 20 ಗಂಟೆ ಒಪನ್ ಆದ್ರೆ ಅಲ್ಲಿಯ ಹಾಗೆ ಕೈಗಾರಿಕೆ ವಾಣಿಜ್ಯ ವ್ಯವಹಾರಗಳು ಇಲ್ಲೂ ಬೆಳೆಯುತ್ತದೆ. ಆಗ ಅಲ್ಲಿಯಂತೆ ಇಲ್ಲಿಯೂ ಉದ್ಯೋಗ ಸೃಷ್ಟಿ ಆಗಲಿದೆ. ವಿದ್ಯಾವಂತರು ಹೊರ ರಾಜ್ಯ, ದೇಶಗಳಿಗೆ ಹೋಗಿ ದುಡಿಯುವ ಅನಿವಾರ್ಯತೆಗೆ ಪರಿಹಾರವಾಗಿ ಇಲ್ಲೇ ಉದ್ಯೋಗ ಸೃಷ್ಟಿ ಮಾಡೋದು ನನ್ನ ಗುರಿ.
ಬಿಜೆಪಿಯ ಹಿಂದುತ್ವ, ಮೋದಿ ಪ್ರಚಾರ
ನಾನೂ ಹಿಂದೂ ಧರ್ಮದಲ್ಲಿ ಹುಟ್ಟಿದವನು. ಹಿಂದೂ ಧರ್ಮದಲ್ಲಿ ಅಪಾರ ಗೌರವ, ನಂಬಿಕೆಗಳನ್ನು ಇಟ್ಟುಕೊಂಡವನು. ನಮ್ಮ ಧರ್ಮವನ್ನು ಪಾಲನೆ ಮಾಡುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂಬ ಜ್ಞಾನವನ್ನು ಹಿಂದೂ ಧರ್ಮ ನನಗೆ ನೀಡಿದೆ. ಸಾಧ್ಯವಾದಷ್ಟು ಕಡು ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇನೆ. ಇದು ರಾಷ್ಟ್ರ ಭಕ್ತಿ ಅಲ್ವಾ? ಬಿಜೆಪಿಯವರು ಜಾತಿ, ಧರ್ಮ ಹೆಸರಲ್ಲಿ ದ್ವೇಷ ಹರಡಿಸಿ, ಯುವಕರನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಜೈಲಿಗೆ ಹೋಗುವಂತೆ ಮಾಡುವುದು, ಆಸ್ಪತ್ರೆ ಸೇರುವಂತೆ ಅಥವಾ ಕೊಲೆಗೀಡಾಗಿ ಅವರ ಮನೆಯವರನ್ನು ಅನಾಥ ಮಾಡುವುದು ರಾಷ್ಟ್ರಭಕ್ತಿಯಾ ಅಂತ ಕೇಳಲು ಇಚ್ಛಿಸುತ್ತೇನ ಎಂದರು.
ಬಿಜೆಪಿ ಅಪಪ್ರಚಾರ
ಪದ್ಮರಾಜ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಲ್ಲಾದರೂ ಜಾತಿ ಆಧಾರದಲ್ಲಿ ಓಟು ಹಾಕಿ ಅಂತ ಹೇಳಿದ್ದೇನಾ? ಪದ್ಮರಾಜ್ ಬಿಲ್ಲವನೇ ಅಲ್ಲ, ಘಟ್ಟದವರು ಎನ್ನುವ ಅಪಪ್ರಚಾರವನ್ನೂ ಮಾಡುತ್ತಿದ್ದಾರೆ. ನಾನು ಶಾಲೆ, ಕಾಲೇಜು ಕಲಿತಿಲ್ವಾ? ಅವರಿಗೆ ಬೇಕಾದರೆ, ನನ್ನ ಯಾವುದಾದರೂ ಸರ್ಟಿಫಿಕೆಟ್ ಸ್ಕೂಲ್, ಕಾಲೇಜಲ್ಲಿ ಸಿಗಲ್ವಾ? ಇದನ್ನೆಲ್ಲ ಮಾಡೋದು ಅಪಪ್ರಚಾರ ಅಲ್ವಾ? ಕುದ್ರೋಳಿ ದೇವಾಲಯದಲ್ಲಿ 27 ವರ್ಷ ಕೆಲಸ ಮಾಡಿದ್ದೇನೆ. ಇದನ್ನೆಲ್ಲ ಜನರು ನೋಡಿದ್ದಾರೆ. ಉತ್ತರವನ್ನೂ ಕೊಡುತ್ತಾರೆ ಎಂದರು
ಜಾತಿ ರಾಜಕಾರಣ
ಪದ್ಮರಾಜ್ ಯಾವತ್ತೂ ಯಾವುದೇ ಜಾತಿ, ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡಿದವನಲ್ಲ, ಆದರೆ ನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದ್ದು ಹೌದು. ಆ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಂತ ನಾನೆಲ್ಲೂ ಜಾತಿ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿಲ್ಲ. ನಾನು ಸ್ಥಾಪನೆ ಮಾಡಿದ ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಆ ಜಾತಿ, ಈ ಜಾತಿ ಎಂದು ನೋಡದೆ ಸಮಾಜದ ಎಲ್ಲ ಅಶಕ್ತರ ಕಳ್ಕೊರೆಸುವ ಕೆಲಸ ಮಾಡುತ್ತಿದ್ದೇನೆ. ಆದರೆ ಚುನಾವಣೆ ಗೆಲ್ಲುವುದಕ್ಕಾಗಿ ಅಪಪ್ರಚಾರ ಮಾಡೋದು ಬಿಜೆಪಿಯವರ ಚಾಳಿ. ಇದನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ.
•ಪೂಜಾರಿ ಅವರ ಶಿಷ್ಯರಾಗಿ ಅವರ ಅನೇಕ ಚುನಾವಣೆ ನೋಡಿದ್ದೀರಿ. ಆಗಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಹೇಗೆ ಭಿನ್ನವಾಗಿದೆ?
ಪೂಜಾರಿ ಕಾಲದಲ್ಲೂ ಬಿಜೆಪಿಯವರ ಅಪಪ್ರಚಾರ ಇತ್ತು. ಈಗಲೂ ಮಾಡುತ್ತಿದ್ದಾರೆ. ಬಿಜೆಪಿಯ ಅಪಪ್ರಚಾರಗಳಿಂದಲೇ ಅವರು ಸೋತದ್ದು. ಅಂದು ಪೂಜಾರಿ ವಿರುದ್ಧ ಅಪಪ್ರಚಾರ ಮಾಡಿದವರೆಲ್ಲ ಇಂದು ಅವರ ಬಳಿ ಹೋಗಿ ಕಾಲು ಹಿಡಿಯುತ್ತಿದ್ದಾರೆ. ಇದು ಯಾಕೆ? ತಾವು ತಪ್ಪು ಮಾಡಿದ್ದೇವೆ ಅಂತ ಅವರಿಗೂ ಗೊತ್ತಾಗಿದೆ. ಪೂಜಾರಿ ಅವರಿಗೆ ಆಗಿರುವ ಸೋಲು ಕ್ಷೇತ್ರದ ಜನರಿಗೆ ಆಗಿರುವ ಸೋಲು. ಈಗ ಬಿಜೆಪಿಯವರು ಪೂಜಾರಿ ಕಾಲು ಹಿಡಿಯಲು ಯಾಕೆ ಬರುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಿದೆ.
ಪುತ್ತೂರು
ಕಳೆದ ವರ್ಷ ಶೇ 100 ಫಲಿತಾಂಶ ದಾಖಲಿಸಿದ ವಿದ್ಯಾಮಾತಾ ಅಕಾಡೆಮಿಯಿಂದ KARTET 2024ಕ್ಕೆ ತರಬೇತಿ ಪ್ರಾರಂಭ – ಆನ್ಲೈನ್ ತರಬೇತಿ ಪ್ರಾರಂಭಿಸಿದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ
2023ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಹೆಗ್ಗಳಿಕೆಯೊಂದಿಗೆ 2024ನೇ ಸಾಲಿನ KARTET ಗೆ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಭವಿಷ್ಯದ ಸರಕಾರಿ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಪ್ರಾರಂಭಿಸಿದೆ.
ವಿದ್ಯಾಮಾತಾ ಅಕಾಡೆಮಿಯು
ಈ ವರ್ಷವೂ ಕೂಡ ಆನ್ ಲೈನ್ ತರಬೇತಿಯನ್ನು ಒದಗಿಸಲಿದ್ದು ದಿನಾಂಕ 25.04.2024ರಿಂದ 2 ತಿಂಗಳ ಕಾಲ ಪ್ರತಿನಿತ್ಯ ರಾತ್ರಿ 7ರಿಂದ 8ರ ವರೆಗೆ ಆನ್ ಲೈನ್ ತರಗತಿಗಳು ನಡೆಯಲಿದ್ದು, ಈ ಅರ್ಹತಾ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯನ್ನು ಈ ಕೆಳಗಡೆ ನೀಡಿರುವ ದೂರವಾಣಿ ಸಂಖ್ಯೆ ಅಥವಾ ಖುದ್ದಾಗಿ ಸಂಸ್ಥೆಯ ಸುಳ್ಯ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಮತ್ತು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಕಛೇರಿಯನ್ನು ಹಾಗೂ ಕಾರ್ಕಳದ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾನದಂಡಗಳು:
ಅರ್ಜಿ ಸಲ್ಲಿಸಲು 15.05.2024 ಕೊನೆಯ ದಿನಾಂಕವಾಗಿರುತ್ತದೆ
ವಿದ್ಯಾರ್ಹತೆ:
PUC D.Ed, BE. BEd, BA.B.Ed, BSc.B.Ed
B.com B.Ed
ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
ಫೋಟೋ, ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 30.06.2024ರಂದು ನಡೆಯಲಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869
*ಸುಳ್ಯ ಶಾಖೆ:* ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
*PH: 9448527606*
*ಕಾರ್ಕಳ ಶಾಖೆ:*
ಒಂದನೆಯ ಮಹಡಿ, MCC ಬ್ಯಾಂಕ್ ಮೇಲ್ಗಡೆ, ತಾಲೂಕು ಕಚೇರಿ ರಸ್ತೆ, (ಬಂಡಿ ಮಠ ಬಸ್ ಸ್ಟ್ಯಾಂಡ್ ಎದುರು ರಸ್ತೆ ) ಕಾರ್ಕಳ
PH:- 8310484380 / 9740564044 / 9620468869
-
ಪುತ್ತೂರು2 days ago
ಅರುಣ್ ಪುತ್ತಿಲ ಮನೆ ಬಳಿ ಅಣ್ಣಾಮಲೈಗೆ ಅದ್ದೂರಿ ಸ್ವಾಗತ
-
ದಕ್ಷಿಣ ಕನ್ನಡ2 days ago
Annamali Road Show ಅಣ್ಣಾಮಲೈ ಪುತ್ತೂರಿನ ರೋಡ್ ಶೋ ಸಮಯ ಬದಲಾವಣೆ – ಮಾಹಿತಿ ನೀಡದ ಪುತ್ತೂರು ಬಿಜೆಪಿ – ಕಾಲ್ ಎತ್ತದ ಮುಖಂಡರು ; ಗೊಂದಲದಲ್ಲಿ ಕಾರ್ಯಕರ್ತರು
-
ದಕ್ಷಿಣ ಕನ್ನಡ2 days ago
Ashok Kumar Rai | ಮಿಸ್ಟರ್ ಅಶೋಕ್ ರೈ ‘ಯೂ ಆರ್ ಲಯನ್ ಆಫ್ ಸೌತ್ ಕೆನರಾ ಯೂ ಆರ್ ಗ್ರೇಟ್ ಎಂಎಲ್ಎ’ – ಶಾಸಕ ಅಶೋಕ್ ರೈಯನ್ನು ಹೊಗಳಿದ ಕಾಂಗ್ರೇಸ್ ಹೈಕಮಾಂಡ್ ಮಟ್ಟದ ನಾಯಕ ಸುರ್ಜೆವಾಲ
-
ದಕ್ಷಿಣ ಕನ್ನಡ1 day ago
ವಿಟ್ಲ : ದುರಸ್ತಿಗೆ ಬಾವಿಗಿಳಿದ ಇಬ್ಬರು ಅಮ್ಲಜನಕ ಕೊರತೆಯಿಂದ ಮೃತ್ಯು
-
ಅಪರಾಧ2 days ago
Everest fish curry-ಎವರೆಸ್ಟ್ ಫಿಶ್ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್ ಪತ್ತೆ
-
ರಾಜಕೀಯ2 days ago
ಪುತ್ತೂರಿನ ಇಂದಿನ ಬಿಜೆಪಿ ರೋಡ್ ಶೋ ಸಮಯ ಬದಲಾವಣೆ – ನಡುಮಧ್ಯಾಹ್ನ ನಡೆಸಲಿದ್ದಾರೆ ಅಣ್ಣಾಮಲೈ ರೋಡ್ ಶೋ
-
ಮಂಗಳೂರು2 days ago
Heat wave-ರಾಜ್ಯದಲ್ಲಿ ಇನ್ನೂ ಐದು ದಿನ ಉಷ್ಣ ಮಾರುತ ದಾಳಿ; ಕರಾವಳಿಯಲ್ಲಿ ಮುಂದುವರಿದ ಪ್ರಖರ ಬಿಸಿಲು
-
ನಿಧನ ವಾರ್ತೆ17 hours ago
Run over-ತಂದೆಯಿಂದಲೇ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣ