Pramod Muthalik | ಆದಾಯವಿಲ್ಲದ ಬಿಜೆಪಿ ಮುಖಂಡರ ಹೆಸರಲ್ಲಿ ಬರೋಬ್ಬರಿ 67 ಎಕ್ರೆ ಆಸ್ತಿ ಖರೀದಿ – ಈಗ ಅದೇ ಸ್ಥಳ ಇಂಡಸ್ಟ್ರಿಯಲ್ ಎಸ್ಟೇಟ್ ಆಗಿ ಘೋಷಿಸುವ ಪ್ರಯತ್ನ : ಬೇನಾಮಿ ಆಸ್ತಿಯ ಹಿಂದೆ ಪ್ರಭಾವಿ ಸಚಿವರ ಕೈವಾಡ – ‘ಕಾರ್ಕಳದ ಆಸ್ತಿ ಬಗ್ಗೆ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ದಾಖಲಿಸಿದ್ದೇನೆ ಮುಖ್ಯಮಂತ್ರಿಗಳೇ ತನಿಖೆ ನಡೆಸಿ’ ಎಂದು ಸವಾಲು ಎಸೆದ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್

InShot_20230303_202805056
Ad Widget

Ad Widget

Ad Widget

ಉಡುಪಿ, ಮಾ.3: ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೇನಾಮಿ ಹೆಸರಲ್ಲಿ ಬಿಜೆಪಿಯ ಮುಖಂಡ ದಂಪತಿಗಳು ಭಾರಿ ಪ್ರಮಾಣದ ಆಸ್ತಿ ಖರೀದಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಉಡುಪಿ ಲೋಕಾಯುಕ್ತ ಉಡುಪಿ ವಿಭಾಗ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಅವರಿಗೆ ದೂರು ಸಲ್ಲಿಸಿದರು.

Ad Widget

ಶಿವಪುರ ಗ್ರಾಮದಲ್ಲಿ ಗಜಾನನ ಮತ್ತು ವಿದ್ಯಾ ಸುವರ್ಣ ಎಂಬವರ ಹೆಸರಿನಲ್ಲಿ 67.94 ಎಕರೆ ಜಾಗವನ್ನು 4.15ಕೋಟಿ ರೂ.ಗೆ ಖರೀದಿ ಮಾಡಿದ್ದು, ಇವರಿಗೆ ಯಾವುದೇ ಆದಾಯದ ಮೂಲ ಇಲ್ಲ. ಆಸ್ತಿ ಇಲ್ಲ ಇವರು ಬಿಜೆಪಿಯ ತಾಲೂಕು ಪದಾಧಿಕಾರಿಯಾಗಿರುವ ಇವರ ಆಸ್ತಿ ಖರೀದಿ ಹಿಂದೆ ಪ್ರಭಾವಿ ಸಚಿವರ ಕೈವಾಡದ ಶಂಕೆ ಇದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.

Ad Widget

Ad Widget

Ad Widget

ರೈತರಿಗೆ ಮೋಸ ಮಾಡಿ ಆಸ್ತಿ ಖರೀದಿಸಲಾಗಿದೆ . ಇಂಡಸ್ಟ್ರಿಯಲ್ ಎಸ್ಟೇಟ್ ಮಾಡಿದರೆ ರೈತರಿಗೆ ಲಾಭ ನೇರವಾಗಿ ಸಿಗಲಿ ಎಂದು ಮುತಾಲಿಕ್ ಹೇಳಿದರು.

Ad Widget

ಮಂತ್ರಿಗಳ ಪಿಎ ಈ ಬೇನಾಮಿ ಆಸ್ತಿ ವಿಷಯದಲ್ಲಿ ಇದ್ದು , ಇದನ್ನು ಬಹಿರಂಗಪಡಿಸಿ ತಾನು ಈ ಪ್ರಕರಣದಲ್ಲಿ ಇಲ್ಲ ಎಂದು ಹೇಳಬೇಕು ಎಂದು ಮುತಾಲಿಕ್ ಹೇಳಿದರು.

Ad Widget

Ad Widget

ವ್ಯವಸ್ಥಿತವಾಗಿ 53 ರೈತರಿಗೆ ಮೋಸ ಮಾಡಿ ಬಲತ್ಕಾರವಾಗಿ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಈಗ ಅದೇ ಜಾಗವನ್ನು ಕೈಗಾರಿಕ ವಲಯ ಎಂಬುದಾಗಿ ಘೋಷಣೆ ಮಾಡಿ ನಾಲೈದು ಪಟ್ಟು ಹೆಚ್ಚು ಹಣಕ್ಕೆ ಸರಕಾರಕ್ಕೆ ಮಾರಾಟ ಮಾಡಿ ಹಣ ಪಡೆಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮತ್ತು ಇವತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಈ ಕುರಿತು ವಾರದೊಳಗೆ ಸಂಪೂರ್ಣ ತನಿಖೆಯಾಗ ಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ದಾಖಲಿಸಿ ಎನ್ನುತ್ತಿದ್ದಾರೆ ಈಗ ಸಂಪೂರ್ಣ ದಾಖಲೆ ಇಟ್ಟು ಕೇಸ್ ದಾಖಲಿಸಿದ್ದೇವೆ ತನಿಖೆ ಮಾಡಿ ತೋರಿಸಿ ಎಂದು ಸವಾಲು ಎಸೆದರು.

ಇನ್ನೂ ಸಾಕಷ್ಟು ಬೇನಾಮಿ ಆಸ್ತಿ ಕಾರ್ಕಳ ಕ್ಷೇತ್ರದಲ್ಲಿ ಇದೆ , ಈ ಪ್ರಕರಣ ಬದಲಾಯಿತು ಅಂದರೆ ತನ್ನಿಂದ ತಾನೇ ಎಲ್ಲವೂ ಹರ ಬರ್ತದೆ ಎಂದರು.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: