ಕಡಬ: ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ (Koila Farm) ಬೆಂಕಿ ಅವಘಡ ಸಂಬವಿಸಿದೆ.
ಪ್ರಕೃತಿ ರಮಣೀಯವಾದ ಹಸಿರು ಹುಲ್ಲುಗಾವಲಿಗೆ ಪ್ರಸಿದ್ದಿ ಪಡೆದಿದ್ದ ಕೇಂದ್ರದಲ್ಲಿ ಈ ಕೇಂದ್ರದಲ್ಲಿ ಸದ್ಯ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲುಗಳಿಂದ ಆವೃತ್ತವಾಗಿತ್ತು.
ಇಂದು ಮಧ್ಯಾಹ್ನದ ಸುಮಾರಿಗೆ ಈ ಒಣಹುಳ್ಳುಗಳಿಗೆ ಬೆಂಕಿ ತಗುಲಿದ್ದು ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ 50 ಎಕರೆಯಷ್ಟು ದೂರ ಆವರಿಸಿತ್ತು.
ಇದರಿಂದ ಸೃಷ್ಟಿಯಾದ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಾಚಿದ್ದು ಈ ದೃಶ್ಯ ನೋಡಲು ಭಯನಕವಾಗಿತ್ತು .
ಅಲ್ಲಿ ನೂರಾರು ಮಲೆನಾಡ ಗಿಡ್ಡ ದೇಶಿ ಗೋವುತಳಿ ಸಂರಕ್ಷಿಸಪಡುತಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ತಕ್ಷಣ ಘಟನಾ ಸ್ಥಳದಲ್ಲಿ ಫಾರ್ಮ್ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿಗಳು ಹರಸಹಾಸ ಪಟ್ಟು ಬೆಂಕಿ ನಂದಿಸಲು ಶ್ರಮವಹಿಸುತಿದ್ದಾರೆ.