ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತನ (Kashmir Pandit) ಹತ್ಯೆಯಾಗಿದೆ. ಭಾನುವಾರ ( ಫೆ.26 ರಂದು) ಉಗ್ರರ ದಾಳಿಗೆ ಸಂಜಯ್ ಶರ್ಮಾ (40) ಎಂಬಾತ ಬಲಿಯಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾಶ್ಮೀರ ಪಂಡಿತರ ಆಕ್ರೋಶ ಮುಗಿಲುಮುಟ್ಟಿದೆ .
ಪುಲ್ವಾಮಾದ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ಸಂಜಯ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ತೀವ್ರ ಗಾಯಗೊಂಡ ಸಂಜಯ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಗಂಭೀರ ಗಾಯಗೊಂಡ ಕಾರಣ ಅವರು ಮೃತಪಟ್ಟಿದ್ದಾರೆ. ಜಮ್ಮು & ಕಾಶ್ಮೀರದ ಬ್ಯಾಂಕ್ ವೊಂದರಲ್ಲಿ ಸೆಕ್ಯೂರಿಟ್ ಗಾರ್ಡ್ ಆಗಿ ಸಂಜಯ್ ಶರ್ಮಾ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಉಗ್ರರು ಸಂಜಯ್ ಸರ್ಮಾ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪುಲ್ವಾಮದ ಮಾರುಕಟ್ಟೆಯಲ್ಲಿ ತೆರಳುತ್ತಿದ್ದ ವೇಳೆ ನಡೆಸಿದ ದಾಳಿಯ ಪರಿಣಾಮ ಅವರು ಮೃತಪಟ್ಟಿದ್ದಾರೆ. ಪೊಲೀಸರು ದಾಳಿಯಾದ ಪ್ರದೇಶದಲ್ಲಿ ಸುತ್ತುವರೆದು ಉಗ್ರರ ಸೆರೆಗೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.
Govt. & @BJP4India cannot handle 75 lacs kashmiri population and want to control POK & Balochistan. #KashmiriPandits are killed like dogs in Kashmir @HMOIndia and @OfficeOfLGJandK sensor the information that Kashmir is most dangerous place for Kashmiri Pandits in this world.
— KPSS (@KPSSamiti) February 26, 2023
One more #Hindu Sanjay Sharma killed in Kashmir .
— Ashoke Pandit (@ashokepandit) February 26, 2023
Waiting for @OfficeOfLGJandK to condemn it .
5000 #KashmiriPanditemployees are on the streets without salaries of 8 months demanding their relocation to Jammu but their screams are falling on deaf ears . @AMEAK_Displaced
ರಾಹುಲ್ ಭಟ್ ಹತ್ಯೆ ಖಂಡಿಸಿ ಕಳೆದ ಕೆಲ ಸಮಯದಿಂದ ಕಾಶ್ಮೀರಿ ಪಂಡಿತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ವೇಳೆಯಲ್ಲೇ ಮತ್ತೊಂದು ಕಾಶ್ಮೀರಿ ಪಂಡಿತನ ಹತ್ಯೆಯಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪಿಎಂ ಪ್ಯಾಕೇಜ್ ಯೋಜನೆಯಲ್ಲಿ ಉದ್ಯೋಗ ಪಡೆದ ಪಂಡಿತರು ಕಳೆದ 8 ತಿಂಗಳಿನಿಂದ ತಮ್ಮನ್ನು ಜಮ್ಮುಗೆ ಸ್ಥಳಾಂತರಿಸುವಂತೆ ಪ್ರತಿಭಟನೆ ನಿರತರಾಗಿದ್ದಾರೆ. ಇವರಿಗೆ ಕಳೆದ 8 ತಿಂಗಳಿನಿಂದ ಸಂಬಳ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. ಹಲವು ಉದ್ಯೋಗಿಗಳನ್ನೇ ಉಗ್ರರು ಗುಂಡಿಟ್ಟು ಹತ್ಯೆ ಮಾಡುತ್ತಿದ್ದಾರೆ.