ಬಂಟ್ವಾಳ : ಡೈನಿಂಗ್ ಟೇಬಲ್ ಸಾಗಾಟದ ವಿಚಾರದಲ್ಲಿ ಗಲಾಟೆ – ಯುವಕನಿಗೆ ಇರಿತ ..!

WhatsApp Image 2023-02-18 at 19.30.50
Ad Widget

Ad Widget

Ad Widget

ಬಂಟ್ವಾಳ : ಕ್ಷುಲ್ಲಕ ಕಾರಣಕ್ಕೆ ಪರಿಚಿತರಿಬ್ಬರ ನಡುವೆ ಗಲಾಟೆ ನಡೆದು ಓರ್ವ ಯುವಕ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ಫೆ.18 ರಂದು ಮಧ್ಯಾಹ್ನ ನಡೆದಿದೆ. ಪಾಣೆಮಂಗಳೂರು ಜೈನರ ಪೇಟೆ ನಿವಾಸಿ ಸುಲೈಮಾನ್ ಇರಿತಕ್ಕೆ ಒಳಗಾದವರು. ಸ್ಥಳೀಯ ನಿವಾಸಿ ನಿಸಾರ್ ಇರಿದು ಗಾಯಗೊಳಿಸಿದಾತ.

Ad Widget

ಡೈನಿಂಗ್ ಟೇಬಲ್ ಸಾಗಾಟ ಮಾಡಲು ವಾಹನ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಲೇಮಾನ್ ಹಾಗೂ ನಿಸಾರ್‌ ಮಧ್ಯೆ ಇಂದು ಮಧ್ಯಾಹ್ನ ಜಗಳವಾಗಿದೆ. ಈ ವೇಳೆ ನಿಸಾರ್‌ ಕತ್ತರಿಯಿಂದ ಸುಲೇಮಾನ್‌ನ ಬಲ ಭುಜಕ್ಕೆ ಇರಿದಿದ್ದಾನೆ.

Ad Widget

Ad Widget

Ad Widget

ಗಾಯಗೊಂಡ ಸುಲೈಮಾನ್ ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು  ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Ad Widget

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: