ಪುತ್ತೂರು : ಸ್ಕೂಟರ್ – ಕಾರು ಢಿಕ್ಕಿ , ಸವಾರ ಗಂಭೀರ

IMG_20230214_181201_103~2
Ad Widget

Ad Widget

Ad Widget

ಪುತ್ತೂರು, ಫೆ 14 : ಕಾರು ಹಾಗೂ ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿ ಸವಾರ ಗಾಯಗೊಂಡ ಘಟನೆ ಪುತ್ತೂರಿನ ಹೊರ ವಲಯದ ಕೃಷ್ಣನಗರದಲ್ಲಿ ಸಂಭವಿಸಿದೆ. ಪುತ್ತೂರಿನ ಖ್ಯಾತ ಗುತ್ತಿಗೆದಾರರರೊಬ್ಬರ ಪುತ್ರ ಗಾಯಗೊಂಡ ಸ್ಕೂಟರ್ ಸವಾರ.

Ad Widget

ಸ್ಕೂಟರ್ ಸುಜುಕಿ ಆ್ಯಕ್ಸೆಸ್ (KA 21 Y 5419) ಸವಾರ ಗಂಗಾಧರ ಎಂಬವರು ಕೃಷ್ಣ ನಗರದ ಹಾಲಿನ ಡಿಪೋಗೆ ಹಾಲುಕೊಟ್ಟು ಹಿಂತಿರುಗುತ್ತಿದ್ದ ವೇಳೆ ಹಿಂದಿನಿಂದ ಬಂದ ಮಾರುತಿ ಸ್ವಿಫ್ಟ್ ( KA 21 Z 5643) ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Ad Widget

Ad Widget

Ad Widget

ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸುಮಾರು 10ಮೀ ದೂರ ಎಸೆಯಲ್ಪಟ್ಟಿದೆ ಹಾಗೂ ಸವಾರ ಕಾರಿನ ಎದುರಿನ ಗ್ಲಾಸ್ ನ ಮೇಲೆ ಬಿದ್ದು ತಲೆಗೆ ಗಂಭೀರ ವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಳುವನ್ನು ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹಾಗೂ ಸ್ಕೂಟರ್ ಗಳೆರಡಕ್ಕೂ ಹಾನಿಯಾಗಿದೆ.

Ad Widget

ಘಟನಾ ಸ್ಥಳಕ್ಕೆ ನಗರ ಸಂಚಾರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Ad Widget

Ad Widget

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: