ಪುತ್ತೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರ ಹಾಗೂ ಬೂತ್ ಮಟ್ಟದ ಎಜೆಂಟ್ ಗಳ ತರಭೇತಿ ಕಾರ್ಯಕ್ರಮವು ಫೆ 14 ಮಂಗಳವಾರದಂದು ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ. ಪುತ್ತೂರು ಹಾಗೂ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಸಂಯುಕ್ತ ಅಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾಂಗ್ರೆಸ್ ನ ಯುವ ಮುಖಂಡ ಬೆಂಗಳೂರಿನ ನಿಕೇತ್ ರಾಜ್ ಮೌರ್ಯ, ಮಂಗಳೂರಿನ ಎಂ.ಜಿ ಹೆಗ್ಗಡೆ ಹಾಗೂ ಪುತ್ತೂರಿನ ಮಹಮ್ಮದ್ ಬಡಗನ್ನೂರು ತರಭೇತುದಾರರಾಗಿ ಭಾಗವಹಿಸಲಿದ್ದಾರೆ.
ತರಭೇತಿಯ ಜತೆಗೆ ಮತದಾರರ ಪಟ್ಟಿಗೆ ಅತ್ಯಧಿಕ ಸದಸ್ಯರನ್ನು ಸೇರ್ಪಡೆಗೊಳಿಸಿದ ಪಕ್ಷದ ಕಾರ್ಯಕರ್ತರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
