Ad Widget

ಮಂಗಳೂರು : ಪಾರ್ಕ್‌ನಲ್ಲಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ನಾಲ್ವರ್‌ ಅರೆಸ್ಟ್‌

WhatsApp Image 2023-02-10 at 17.40.31
Ad Widget

Ad Widget

ಮಂಗಳೂರು:  ಕದ್ರಿ ಉದ್ಯಾನವನದ ಬಳಿ ಅನ್ಯಕೋಮಿನ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.ಕಡಬದ ಯಶ್ವಿ‌ತ್‌, ಚಿಕ್ಕಮಗಳೂರಿನ ಶರತ್‌, ಅಳಪೆಯ ಧೀರಜ್‌, ಬಂಟ್ವಾಳದ ಅಭಿಜಿತ್‌ ಬಂಧಿತ ಆರೋಪಿಗಳು.

Ad Widget

Ad Widget

Ad Widget

Ad Widget

ಬಂಧಿತ ಆರೋಪಿಗಳು  ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳಲಾಗಿದೆ.  ಕದ್ರಿ ಪಾರ್ಕ್‌ ಗೆ  ಉತ್ತರ ಕರ್ನಾಟಕ ಮೂಲದ ಮುಸ್ಲಿಂ ಯುವಕ  ಹಾಗೂ   ಹಿಂದೂ ಯುವತಿ  ಆಗಮಿಸಿದ್ದರು.  ಇದನ್ನು ಗಮನಿಸಿದ ಸಂಘಟನೆಗೆ ಸೇರಿದ ಆರೋಪಿ ಯುವಕರು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.  

Ad Widget

Ad Widget

Ad Widget

Ad Widget

 ಹಲ್ಲೆಗೊಳಗಾದ ಜೋಡಿಯೂ  ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Ad Widget

Leave a Reply

Recent Posts

error: Content is protected !!
%d bloggers like this: