Connect with us

ಮಂಗಳೂರು

ಮೊದಲ ಬಾರಿ ತನ್ನ ಮಗುವನ್ನು ಕಣ್ಣುಂಬಿಕೊಳ್ಳಲು ಹಾಗೂ ತಾಯಿಯ ವಾರ್ಷಿಕ ವಿಧಿಗಳನ್ನು ಪೂರೈಸಲು ಹುಟ್ಟೂರಿಗೆ ಆಗಮಿಸಬೇಕಿದ್ದ ಮಂಗಳೂರಿನ ಯೋಧ ಅದೇ ದಿನ ಶವವಾಗಿ ಮನೆಗೆ – ಹೃದಯಘಾತಕ್ಕೆ ತುತ್ತಾಗಿ ಮೃತ್ಯು

Ad Widget

Ad Widget

ಮಂಗಳೂರು : ಜ 25 : ಮೊದಲ ಬಾರಿ ತನ್ನ ಮಗುವನ್ನು ಕಣ್ಣುಂಬಿಕೊಳ್ಳಲು ಹಾಗೂ ತನ್ನ ತಾಯಿಯ ವಾರ್ಷಿಕ ವಿಧಿವಿಧಾನಗಳನ್ನು ಪೂರೈಸಲು ಮಂಗಳವಾರ ಹುಟ್ಟೂರಿಗೆ ಗೆ ಆಗಮಿಸಬೇಕಿದ್ದ ಮಂಗಳೂರು  ಶಕ್ತಿನಗರದ ಯೋಧ ಮುರಳೀಧರ ರೈ ಅದೇ ದಿನ (ಮಂಗಳವಾರ)ಶವವಾಗಿ ಮರಳಿದ ಮನ ಕಲಕುವ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಭೋಪಾಲ್‌ನಲ್ಲಿ ಸಶಸ್ತ್ರ ಸೀಮಾ ಬಲ್‌ನಲ್ಲಿ ಮುರಳೀಧರ ರೈ (37) ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವರ್ಷದ ಹಿಂದೆ ಅವರ ತಾಯಿ ತೀರಿಕೊಂಡಿದ್ದು, ಅದರ ವಾರ್ಷಿಕ ಕ್ರಿಯಾಕರ್ಮ ಮಂಗಳವಾರಕ್ಕೆ ನಿಗದಿಯಾಗಿತ್ತು. ಅದಕ್ಕೆ ಅವರು ಊರಿಗೆಬರುವ ಯೋಜನೆ ಹಾಕಿಕೊಂಡಿದ್ದರು. ಆದರೆವಿಧಿಯಾಟ ಬೇರೆಯೇ ಆಗಿತ್ತು.

Ad Widget

Ad Widget

Ad Widget

ಭೋಪಾಲ್ ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಜ.22ರ ಮಧ್ಯ ರಾತ್ರಿ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಮಂಗಳವಾರ ಅವರ ಪಾರ್ಥಿವ ಶರೀರ ಮಂಗಳೂರು ತಲುಪಿದೆ.ಮುರಳೀಧರ ರೈ ಅವರ ಪತ್ನಿ ಉಷಾ ಏಳುತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಕಣ್ಣುಂಬಿಕೊಳ್ಳಲು ಮುರಳೀಧರ ರೈ ಊರಿಗೆ ಆಗಮಿಸುವವರಿದ್ದರು. ಆದರೆ ಎಲ್ಲವೂ ಬುಡಮೇಲಾಗಿದೆ.

Ad Widget

ಮೃತ ಯೋಧನ ಪಾರ್ಥಿವ ಶರೀರಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌. ಜಿಪಂ ಸಿಇಒ ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ವಿಮಾನ ನಿಲ್ದಾಣ ಭದ್ರತಾ ಅಧಿಕಾರಿ ಕಿಶೋರ್ ಕುಮಾರ್ ಗೌರವ ನಮನ ಸಲ್ಲಿಸಿದರು. ಬುಧವಾರ ಮೃತ ಯೋಧನ ಅಂತಿಮ ಸಂಸ್ಕಾರ ಕುಟುಂಬಸ್ಥರ ಉಪಸ್ಥಿತಿಯಲ್ಲಿ ನಡೆಯಲಿದೆ

Ad Widget

Ad Widget
Click to comment

Leave a Reply

ಮಂಗಳೂರು

ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ  ಆಕ್ರೋಶ – ದೇವಸ್ಥಾನದ  EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?

Ad Widget

Ad Widget

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಬ್ರಹ್ಮರಥೋತ್ಸವ ಇದೇ 17 ರಂದು   ನಡೆಯಲಿದೆ.  ಈ ಹಿನ್ನಲೆಯಲ್ಲಿ ಡಿ 14ರಿಂದ 19ರವರೆಗೂ ಈ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ  ಭಕ್ತರು ಭೇಟಿ ನೀಡುತ್ತಾರೆ.  ಆದರೇ  ಜಾತ್ರೆ ಸಂದರ್ಭ  ದೇಗುಲದ ಬಳಿ ಹಾಕುವ ಸಂತೆ ಅಂಗಡಿ ವಿಚಾರ ವಿವಾದಕ್ಕೆ ಕಾರಣವಾಗಿದೆ. ಮತ್ತೆ ಉಭಯ ಜಿಲ್ಲೆಗಳಲ್ಲಿ ವ್ಯಾಪಾರ ದಂಗಲ್‌ ನಡೆಯುವ ಸಾಧ್ಯತೆ ಗೋಚರಿದೆ.

Ad Widget

Ad Widget

Ad Widget

ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ  ಅದರಲ್ಲೂ  ವಿಶೇಷವಾಗಿ ಕರಾವಳಿ ಜಿಲ್ಲೆಗಳ ಹಿಂದೂ ಶ್ರದ್ದಾ ಕೇಂದ್ರಗಳಲ್ಲಿ ನಡೆಯುವ ಜಾತ್ರೋತ್ಸವದ ಸಂದರ್ಭ  ಹಾಕುವ ತಾತ್ಕಾಲಿಕ ಸಂತೆ ವ್ಯಾಪಾರ ಮಳಿಗೆಗಳಲ್ಲಿ ಹಿಂದೂಯೇತರರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ವಿವಾದ ತಾರಕಕ್ಕೇರಿತ್ತು. ಆದರೇ ಕಾಂಗ್ರೆಸ್‌ ಆಡಳಿತ ಬಂದ ಬಳಿಕವು ಈ ವಿವಾದ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇದು ಪ್ರಗತಿಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.  

Ad Widget

ಈ ಸಾಲಿನ ನವರಾತ್ರಿ ಹಬ್ಬದ ಸಂದರ್ಭದಲ್ಲೂ ಈ ವಿವಾದ ಎದ್ದಿತ್ತು. ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ಮುಸ್ಲಿಂ ವ್ಯಾಪರಸ್ಥರಿಗೆ ಸಂತೆ ವ್ಯಾಪರಕ್ಕೆ ಅವಕಾಶ ನೀಡದ ಹಿನ್ನಲೆ ವಿವಾದ ಭುಗಿಲೆದಿತ್ತು. ಈಗ ಮತ್ತೆ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಷಷ್ಟಿ ಮಹೋತ್ಸವದ ಸಂದರ್ಭ ದೇವಸ್ಥಾನದ ಅವರಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ

Ad Widget

Ad Widget

ಕುಡುಪು ಜಾತ್ರೆಯ ಸಂತೆ  ವ್ಯಾಪಾರದಲ್ಲಿ ಹಿಂದೂಯೇತರರಿಗೆ ಅವಕಾಶ ಕಲ್ಪಿಸಿಲ್ಲ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಿಗಳ ಸಮನ್ವಯ ಸಮಿತಿ  ಆರೋಪಿಸಿದ್ದು  ಕಾಂಗ್ರೆಸ್ ನೇತೃತ್ವದ ಸರ್ಕಾರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಬಡ ಸಂತೆ ವ್ಯಾಪಾರಿಗಳ ಜೊತೆ ನಿಲ್ಲಲಾಗದ ಈ ಸರ್ಕಾರದ  ಕ್ರಮವನ್ನು  ಖಂಡಿಸುತ್ತೇವೆ  ಎಂದು ಸಮನ್ವಯ ಸಮಿತಿ ತಿಳಿಸಿದೆ.

ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ.ಇಮ್ತಿಯಾಜ್‌ ಆರೋಪ:

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕುಡುಪು ದೇವಸ್ಥಾನದ ಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಪ್ರಾಂಗಣದ ಹೊರಗಡೆ ಸಂತೆ ವ್ಯಾಪಾರ ನಡೆಯುತ್ತದೆ.  ಇಲ್ಲಿ  ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಾಗ ಧಾರ್ಮಿಕ ತಾರತಮ್ಯ ನಡೆಸಲಾಗುತ್ತಿದೆ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲ ಆಗಿದೆ.  ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಇಲ್ಲಿ ಟೆಂಡರ್‌ ನೀಡಲಾಗುತ್ತಿದೆ. ಅವರು ಹಿಂದೂಯೇತರರಿಗೆ ವ್ಯಾಪಾರಿ ಮಳಿಗೆಗಳನ್ನು ಹಾಕಲು ಅವಕಾಶ ನೀಡುವುದಿಲ್ಲ’ ಎಂದು ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ.ಇಮ್ತಿಯಾಜ್‌ ತಿಳಿಸಿದ್ದಾರೆ.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ ಅವರ ಪ್ರತಿಕ್ರಿಯೆ:

ಈ ವರ್ಷ ದೇವಸ್ಥಾನದ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕಿ ಜಾತ್ರೆ ವ್ಯಾಪಾರ ನಡೆಸುವುದಕ್ಕೆ ಟೆಂಡರ್‌ ಕರೆದೇ ಜಾಗ ಒದಗಿಸಿದ್ದೇವೆ.  ಡಿ. 5ರಂದು ನಡೆದ ಹರಾಜಿನಲ್ಲಿ ಐವರು ಭಾಗವಹಿಸಿದ್ದರು. ಹೆಚ್ಚು ಮೊತ್ತ ನೀಡಿದವರಿಗೆ ಮಳಿಗೆ ಹಾಕಲು ಜಾಗ ಒದಗಿಸಿದ್ದೇವೆ. ನವೀನ್‌ ಎಂಬುವವರು ₹ 1.15 ಲಕ್ಷ ಹೆಚ್ಚಿನ ಮೊತ್ತ ಹಣ ನೀಡಿ ಟೆಂಡರ್ ವಹಿಸಿಕೊಂಡಿದ್ದಾರೆ, ಹಾಗಾಗಿ ಅವರಿಗೆ ಮಳಿಗೆ ಹಾಕಲು ಜಾಗ ಒದಗಿಸಿದ್ದೇವೆ. ಹಿಂದಿನಿಂದಲೂ ಇಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ  ಮಳಿಗೆ ಹಾಕಲು ಅವಕಾಶ ನೀಡುತ್ತಿರಲಿಲ್ಲ. ಈ ವರ್ಷವೂ ಟೆಂಡರ್‌ ನೋಟಿಸ್‌ನಲ್ಲೂ ಇದನ್ನು ಸ್ಪಷ್ಟಪಡಿಸಲಾಗಿತ್ತು’ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ ಅವರು ತಿಳಿಸಿದ್ದಾರೆ.

Continue Reading

ಅಪರಾಧ

Mother and Son died ಮಂಗಳೂರು : ಹಸೂಗೂಸನ್ನು ಟಬ್‌ʼನ ನೀರಿನಲ್ಲಿ ಮುಳುಗಿಸಿ ತಾನೂ ಜೀವ ಕಳೆದುಕೊಂಡ ನವ ವಿವಾಹಿತೆ

Ad Widget

Ad Widget

ಮಂಗಳೂರು: ಹೆರಿಗೆ ಬಳಿಕ ಸಾಮಾನ್ಯವಾಗಿ ಬಾಣಂತಿಯರನ್ನು/ ಮಹಿಳೆಯರನ್ನು  ಕಾಡುವ  ಮಾನಸಿಕ ಖಿನ್ನತೆಗೆ (Mental disorder) ತುತ್ತಾಗಿದ್ದ ಮಹಿಳೆಯೊಬ್ಬರು ತನ್ನ ನಾಲ್ಕೂವರೆ  ತಿಂಗಳ ಹಸುಗೂಸನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಗುಜ್ಜರಕೆರೆ ಎಂಬಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಗುಜ್ಜರಕೆರೆಯ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುತ್ತಿದ್ದ  ಫಾತಿಮಾ ರುಕಿಯಾ (23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.  ನಾಲ್ಕೂವರೆ ತಿಂಗಳ ಗಂಡು ಮಗು  ಅಬ್ದುಲ್ಲಾ ಹೂದ್ ಮೃತ ಹಸುಳೆ.  ಈ ದುರಂತದ ಬಗ್ಗೆ   ಮೃತ ಮಹಿಳೆಯ ತಾಯಿ ದೂರು ನೀಡಿದ್ದು, ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

ಫಾತಿಮಾ ರುಕಿಯಾರವರ ವಿವಾಹ ಸುಮಾರು  ಒಂದೂವರೆ ವರ್ಷದ ಹಿಂದೆ   ಮುಹಮ್ಮದ್ ಉನೈಸ್ ಎಂಬವರ ಜತೆ ಜರುಗಿತ್ತು. ಜುಲೈ 7ರಂದು ಗಂಡು ಮಗುವಿಗೆ (ಅಬ್ದುಲ್ಲಾ ಹೂದ್ ) ಜನ್ಮ ನೀಡಿದ್ದರು.ಇದಾದ ಬಳಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಫಾತಿಮಾರವರಿಗೆ ಮಂಗಳೂರಿನ   ಅರೋಗ್ಯ ಕ್ಲಿನಿಕ್ ನಲ್ಲಿ ಮಾನಸಿಕ ವೈದ್ಯರಾದ ಡಾ. ಸುಪ್ರಿಯಾ ರವರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. .

Ad Widget

ಫಾತಿಮಾರವರು  ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಾಯಿ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದರು . ಡಿ 2 ರಂದು ಬೆಳಿಗ್ಗೆ 11.30ರಿಂದ ಸಂಜೆ 3.30ರ ನಡುವೆ    ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರ ಬೆಡ್ ರೂಮ್ ನ ಗ್ಯಾಲರಿಯಲ್ಲಿ ಫಾತಿಮಾ ರುಕಿಯಾರವರು  ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ 4 1/2 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

Ad Widget

Ad Widget

Bitter Gourd health benefits: ಹಾಗಲಕಾಯಿ ನಾಲಿಗೆಗೆ ಕಹಿ – ಉದರಕ್ಕೆ ಸಿಹಿ… ಇಲ್ಲಿದೆ ಅದರ ಆರೋಗ್ಯ ಪ್ರಯೋಜನಗಳು

ಬಳಿಕ ಕೊಠಡಿಯ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಫಾತಿಮಾ ರುಕಿಯಾ ತಾಯಿ  ಖತಿಜಾತುಲ್ ಕುಬ್ರ ರವರು ಠಾಣೆಗೆ ದೂರು ನೀಡಿದ್ದಾರೆ.

Continue Reading

ಮಂಗಳೂರು

Boy assaulted at school: ದ.ಕ ಜಿಲ್ಲೆಯಲ್ಲೊಂದು ರಾಕ್ಷಸಿ ಕೃತ್ಯ : ಸೈಕಲ್ ಮಾರಾಟ ಮಾಡಿದನೆಂದು ಆರೋಪಿಸಿ ಬಾಲಕನಿಗೆ ಶಾಲೆಯಲ್ಲಿ ದೊಣ್ಣೆಯಿಂದ ಹೊಡೆದ SDMC ಅಧ್ಯಕ್ಷ – ಹಲ್ಲೆಗೆ ಶಿಕ್ಷಕರಿಬ್ಬರ ಪ್ರೋತ್ಸಾಹ  

Ad Widget

Ad Widget

ಪುಂಜಾಲಕಟ್ಟೆ ಡಿ. 1: ಶಾಲಾ  ಬಾಲಕನೋರ್ವ ಸೈಕಲ್‌ ಮಾರಾಟ ಮಾಡಿರುವುದಾಗಿ ಆರೋಪಿಸಿ ಶಾಲಾ ಎಸ್‌ ಡಿ ಎಂಸಿ ಅಧ್ಯಕ್ಷ ಅಧ್ಯಕ್ಷ  ಶಾಲೆಯಲ್ಲಿ  ಬಾಲಕನಿಗೆ ಹಲ್ಲೆಗೈದಿದ್ದು, ಬಾಲಕ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿನ 30ರಂದು ಸಂಭವಿಸಿದೆ.

Ad Widget

Ad Widget

Ad Widget

Ad Widget

ಬಾಲಕ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಹಲ್ಲೆ ಮಾಡಿದಾತನ ವಿರುದ್ದ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಳ್ಳಮಂಜ ಮಚ್ಚಿನದ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷ ಪರಮೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಶಿಕ್ಷಕ ರಮೇಶ್ ಪ್ರಕರಣದ ಆರೋಪಿಗಳು

Ad Widget

Ad Widget

Ad Widget

ಪುಂಜಾಲಕಟ್ಟೆ ಪೊಲೀಸ್ ಠಾಣಾ  ವ್ಯಾಪ್ತಿಯ  ಪ್ರಾಥಮಿಕ  ಶಾಲೆಯೊಂದರ ವಿದ್ಯಾರ್ಥಿ ಸಂತ್ರಸ್ತ ಬಾಲಕ.  8ನೇ ತರಗತಿಯ ಅಪ್ರಾಪ್ತ ಬಾಲಕ ಸೈಕಲ್ ಅನ್ನು ಇನ್ನೊಬ್ಬ ವಿದ್ಯಾರ್ಥಿಗೆ ಮಾರಾಟ ಮಾಡಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ನ.28ರಂದು ಬಾಲಕನನ್ನು ಶಿಕ್ಷಕರ ಕೊಠಡಿಗೆ ಕರೆಸಿದ ಆರೋಪಿ ಪರಮೇಶ್ ವಿದ್ಯಾರ್ಥಿಯ ತಾಯಿಯ ಎದುರಲ್ಲಿಯೇ ಆತನ ಮೇಲೆ ಕೋಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಬಾಲಕನ ಎದೆಗೂ ಗುದ್ದಿದ್ದಾನೆ ಎನ್ನಲಾಗಿದೆ. ಕೋಲಿನಿಂದ ನಡೆಸಿದ ಹಲ್ಲೆಯಿಂದ‌ ಬಾಲಕನ ಕಾಲಿನಲ್ಲಿ ಗಾಯವಾಗಿದೆ. ಹಲ್ಲೆ ನಡೆಸಿದ ಬಳಿಕ ಇದನ್ನು ಯಾರಿಗೂ ತಿಳಿಸಿದರೇ ಸೈಕಲ್ ಕಳ್ಳತನ ಮಾಡಿರುವುದಾಗಿ ಕೇಸ್ ಮಾಡಿಸುತ್ತೇನೆ ಎಂದು ಬೆದರಿಕೆಯನ್ನೂ ಪರಮೇಶ್ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.   ಈ ವೇಳೆ ಶಾಲಾ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಅವರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿದ್ದರು ಎಂದು ಆರೋಪಿಸಲಾಗಿದೆ

Ad Widget

  Gold price hike ಜೆಟ್ ವೇಗದಲ್ಲಿ ಏರಿದ ಚಿನ್ನದ ಬೆಲೆ- ಇಳಿಯುವ ಸಾಧ್ಯತೆ ಇದೆಯಾ?

Ad Widget

Ad Widget

ಹಲ್ಲೆ ನಡೆಸಿದ ಬಳಿಕ ಈ  ವಿಚಾರವನ್ನು ಯಾರಿಗಾದರೂ ಹೇಳಿದರೆ ಸೈಕಲ್ ಕದ್ದು ಮಾರಾಟ ಮಾಡಿದ ಬಗ್ಗೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.  ಶಾಲೆಯಲ್ಲಿ ನಡೆದ ಹಲ್ಲೆಯಿಂದ ನ. 30ರಂದು ಬೆಳಗ್ಗೆ ಬಾಲಕನಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  

ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷ ಪರಮೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಶಿಕ್ಷಕ ರಮೇಶ್ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಕಲಂ 323, 324,506,114 ಹಾಗೂ ಬಾಲನ್ಯಾಯ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನಿಂದ ಮಾಹಿತಿ ಪಡೆದಿದ್ದಾರೆ.

New Simcard Rules :ಸಿಮ್‌ ಕಾರ್ಡ್‌ ಖರೀದಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ ಕಠಿಣ ನಿಯಮಗಳು – ಬೇಕಾಬಿಟ್ಟಿ ಅಕ್ಟಿವೇಶನ್‌ ಗೆ ಕಡಿವಾಣ – ಇಲ್ಲಿದೆ ಕಂಪ್ಲಿಟ್‌ ಡಿಟೈಲ್‌

Continue Reading

Trending

error: Content is protected !!