Connect with us

ಕ್ರೀಡೆ

KL Rahul Tulu Language | T-20 ಅತ್ಯುತ್ತಮ ಬ್ಯಾಟಿಂಗ್‌ : ‘ಬಾರೀ ಎಡ್ಡೆ ಗೊಬ್ಬಿಯʼ ಎಂದು ತುಳುವಿನಲ್ಲಿ ಸೂರ್ಯಕುಮಾರ್ ಗೆ ಶುಭಕೋರಿದ ಕೆ.ಎಲ್ ರಾಹುಲ್ – ರಾಹುಲ್ ಗೆ ತುಳುವಿನಲ್ಲೇ ರಿಪ್ಲೈ ಕೊಟ್ಟ ಯಾದವ್ ಪತ್ನಿ

Ad Widget

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್‌ ಯಾದವ್‌ ಶ್ರೀಲಂಕಾ ವಿರುದ್ಧದ ಕೊನೆಯ T-20 ಪಂದ್ಯಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಹ ಆಟಗಾರ ಕೆ.ಎಲ್‌ ರಾಹುಲ್‌ ತುಳು ಭಾಷೆಯಲ್ಲಿ (KL Rahul Tulu Language) ಶುಭಾಶಯ ಕೋರಿ ಸ್ಟೋರಿ ಹಾಕಿದ್ದ ಫೋಟೊ ಈಗ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ರಾಹುಲ್ ಜೊತೆ ಎಲ್ಲಾ ಸ್ಟಾರ್ ಆಟಗಾರರೂ ಶುಭಕೋರಿದ್ದಾರೆ.

Ad Widget

Ad Widget

Ad Widget

Ad Widget

ತುಳುವಿನಲ್ಲಿ ʼಬಾರೀ ಎಡ್ಡೆ ಗೊಬ್ಬಿಯʼ ಅಂದರೆ ʼತುಂಬಾ ಚೆನ್ನಾಗಿ ಆಟವಾಡಿದ್ದೀಯಾʼ ಎಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದರು. ಇದು ಕೂಡಲೇ ಹಲವಾರು ತುಳುವರ ಗಮನ ಸೆಳೆದಿತ್ತು. ಹಲವರು ಇದನ್ನು ವಿವಿಧ ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿದ್ದರು. ಈ ಸ್ಟೇಟಸ್‌ ಗೆ ಸೂರ್ಯಕುಮಾರ್‌ ಯಾದವ್‌ ಪತ್ನಿ ನೀಡಿರುವ ಪ್ರತಿಕ್ರಿಯೆಯೂ ವೈರಲ್‌ ಆಗಿದೆ.

Ad Widget

Ad Widget

ಸೂರ್ಯಕುಮಾರ್‌ ಪತ್ನಿ ದೇವಿಶಾ ಶೆಟ್ಟಿ ಕೂಡಾ ಮಂಗಳೂರು ಮೂಲದವರಾಗಿದ್ದಾರೆ. ಇದೇ ಸ್ಟೋರಿಯನ್ನು ತಮ್ಮ ಪ್ರೊಫೈಲ್‌ ನಲ್ಲಿ ಶೇರ್‌ ಮಾಡಿದ ಅವರು, “ಚೂರು ತುಳು ಕಲ್ಪಾವೊಡು ಆರೆಗ್‌ ನನ” (ಅವರಿಗಿನ್ನು ಸ್ವಲ್ಪ ತುಳು ಕಲಿಸಬೇಕು”) ಎಂದು ಬರೆದಿದ್ದಾರೆ. ಈ ಎರಡೂ ಸ್ಟೋರಿಗಳೂ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ. 

Ad Widget

Ad Widget
Click to comment

Leave a Reply

ಅಂತರ ರಾಜ್ಯ

Hardik Patel-ಐಪಿಎಲ್ʼನ ಸತತ ಸೋಲಿನಿಂದ ಕಂಗೆಟ್ಟು ದೇವರ ಮೊರೆ ಹೋದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ – ಸೋಮನಾಥ ದೇವಸ್ಥಾನಕ್ಕೆ ಭೇಟಿ

Ad Widget

ಮುಂಬೈ: ಸತತ ಸೋಲು ಮತ್ತು ಪ್ರೇಕ್ಷಕರ ವರ್ತನೆಯಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಈಗ ದೇವರ ಮೊರೆ ಹೋಗಿದ್ದಾರೆ. ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವ ಹಾರ್ದಿಕ್, ವಿಶೇಷ ಪೂಜೆ ಸಲ್ಲಿಸಿದ್ದಾರೆ.

Ad Widget

Ad Widget

Ad Widget

Ad Widget

ಸಾಂಪ್ರದಾಯಿಕ ಉಡುಪು ಧರಿಸಿದ ಪಾಂಡ್ಯ ಪೂಜೆ ಸಲ್ಲಿಸಿದ್ದಾರೆ. ಸೋಮನಾಥ ದೇವಾಲಯವು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ವರ್ಷವಿಡೀ ವಿಶ್ವಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ.

Ad Widget

Ad Widget

ಗುಜರಾತ್ ಟೈಟಾನ್ಸ್ ನಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಹಾರ್ದಿಕ್ ಪಾಂಡ್ಯಗೆ ಮುಂಬೈ ನಾಯಕತ್ವ ನೀಡಲಾಗಿದೆ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಕ್ಕಿಳಿಸಿದ ಬಳಿಕ ಅಭಿಮಾನಿಗಳು ಹಾರ್ದಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಿ ಪಂದ್ಯದಲ್ಲಿ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ತವರು ಮೈದಾನ ವಾಂಖೆಡೆಯಲ್ಲೂ ಹಾರ್ದಿಕ್ ಅಭಿಮಾನಿಗಳ ನಿಂದನೆ ಎದುರಿಸಿದ್ದರು.

Ad Widget

Ad Widget

ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೂರು ಪಂದ್ಯಗಳನ್ನೂ ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ ಕೊನೆಯ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಡೆ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ರವಿವಾರ (ಎ.7) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

Ad Widget

Ad Widget
Continue Reading

ಕ್ರೀಡೆ

Mayank Yadav-ವಿಶ್ವಕಪ್‌ಗೆ ಬೇಕು ಈ ಐಪಿಎಲ್‌ ನ ಸೆನ್ಸೆಷನ್‌ “ಸೂಪರ್‌ ಕ್ವಿಕ್‌’ ಬೌಲರ್‌ ಮಾಯಾಂಕ್‌ ಯಾದವ್‌

Ad Widget

ಬೆಂಗಳೂರು: ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ “ಸೂಪರ್‌ ಕ್ವಿಕ್‌’ ಬೌಲರ್‌ ಮಾಯಾಂಕ್‌ ಯಾದವ್‌ ಈ ಐಪಿಎಲ್‌ನಲ್ಲಿ ಭಾರೀ ಸಂಚಲನ ಮೂಡಿಸುತ್ತಿದ್ದಾರೆ. ಶರ ವೇಗದ, ಅಷ್ಟೇ ನಿಖರ ಎಸೆತಗಳಿಂದ ಎದುರಾಳಿಯ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಪಂಜಾಬ್‌, ಬಳಿಕ ಆರ್‌ಸಿಬಿ ಆಟಗಾರರು ಈ ವೇಗಿಯ ದಾಳಿಗೆ ತತ್ತರಿಸಿ ಶರಣಾಗತಿ ಸಾರಿದ್ದಾರೆ. ಮೊನ್ನೆ ಮೊನ್ನೆಯ ತನಕ ಅಪರಿಚಿತರಾಗಿಯೇ ಇದ್ದ ದಿಲ್ಲಿಯ ಈ ಬೌಲರ್‌ ಈಗ ಐಪಿಎಲ್‌ನ ಸೂಪರ್‌ ಸ್ಟಾರ್‌. ಇವರ ಸಾಹಸವನ್ನು ಕೊಂಡಾಡಿದವರೆಲ್ಲ ಮುಂದಿನ ಟಿ20 ವಿಶ್ವಕಪ್‌ಗೆ ಈ ವೇಗಿ ಟೀಮ್‌ ಇಂಡಿಯಾದಲ್ಲಿ ಇರಲೇಬೇಕು ಎಂದು!

Ad Widget

Ad Widget

Ad Widget

Ad Widget

ಮಾಯಾಂಕ್‌ ಯಾದವ್‌ ಅವರ ವೇಗದ ಬೌಲಿಂಗ್‌ ವಿಶ್ವದ ಸಮಕಾಲೀನ ವೇಗಿಗಳಾದ ಕಾಗಿಸೊ ರಬಾಡ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಮೊದಲಾದವರ ಪ್ರಶಂಸೆಗೆ ಪಾತ್ರವಾಗಿದೆ. ಮಾಯಾಂಕ್‌ ಭಾರತದ ವಿಶ್ವಕಪ್‌ ತಂಡದಲ್ಲಿರಬೇಕು ಎಂಬುದು ಎಲ್ಲರ ಹಾರೈಕೆಯೂ ಆಗಿದೆ.

Ad Widget

Ad Widget

ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್‌ ಉರುಳಿಸಿದ್ದು, ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದದ್ದು ಮಾಯಾಂಕ್‌ ಯಾದವ್‌ ಅವರ ಯಶಸ್ಸಿಗೆ ಸಾಕ್ಷಿ.

Ad Widget

Ad Widget

ಇಶಾಂತ್‌, ಸೈನಿ ಸಲಹೆ
ಮಾಯಾಂಕ್‌ ಯಾದವ್‌ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸೀನಿಯರ್‌ ಬೌಲರ್‌ಗಳಾದ ಇಶಾಂತ್‌ ಶರ್ಮ, ನವದೀಪ್‌ ಸೈನಿ ಅವರು ನೀಡಿದ ಸಲಹೆ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ.

Ad Widget

Ad Widget

“ನಿನ್ನ ಬೌಲಿಂಗ್‌ನಲ್ಲಿ ಯಾವುದೇ ಹೊಸತನ ಬೇಕಿದ್ದರೂ ಅಳವಡಿಸಿಕೊ, ಆದರೆ ಯಾವ ಕಾರಣಕ್ಕೂ ವೇಗದೊಂದಿಗೆ ರಾಜಿ ಮಾಡಿಕೊಳ್ಳಬೇಡ ಎಂದು ಇಶಾಂತ್‌ ಭಾಯ್‌, ಸೈನಿ ಭಾಯ್‌ ಸಲಹೆ ನೀಡಿದ್ದಾರೆ. ಇದನ್ನು ನಾನು ಪಾಲಿಸಿಕೊಂಡು ಬರುತ್ತಿದ್ದೇನೆ’ ಎಂದಿದ್ದಾರೆ ಮಾಯಾಂಕ್‌ ಯಾದವ್‌.

“ವೇಗದ ಎಸೆತಗಳೊಂದಿಗೆ ವಿಕೆಟ್‌ ಕೆಡವಿ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸುವುದು ನನ್ನ ಪ್ರಮುಖ ಗುರಿ. ಆದರೆ ಇಂಥ ವೇಗದ ಎಸೆತಗಳ ವೇಳೆ ಪೇಸ್‌, ಲೈನ್‌-ಲೆಂತ್‌ ಕಾಪಾಡಿ ಕೊಳ್ಳುವುದು ಅತೀ ಮುಖ್ಯ. ಬೌಲಿಂಗ್‌ ವೇಳೆ ವೇಗದ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಪಂದ್ಯದ ಬಳಿಕ ಜನರಲ್ಲಿ ನನ್ನ ವೇಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ’ ಎಂಬುದಾಗಿ ಮಾಯಾಂಕ್‌ ಯಾದವ್‌ ಹೇಳಿದರು.

“ಅತೀ ವೇಗದ ಬೌಲರ್‌ ಆಗುವು ದಕ್ಕಿಂತ ಅತ್ಯುತ್ತಮ ಬೌಲರ್‌ ಆಗ ಬೇಕೆಂಬುದು ನನ್ನ ಕನಸು. ಇದೇ ಯಶಸ್ಸು ಕಾಯ್ದುಕೊಂಡು ಭಾರತ ತಂಡದ ಪರ ಆಡುವುದು ನನ್ನ ಗುರಿ. ಮುಂದಿರುವುದು ಟಿ20 ವಿಶ್ವಕಪ್‌. ನಿರೀಕ್ಷೆಯಂತೂ ಇದೆ. ಏನಾಗುತ್ತದೋ ನೋಡೋಣ. ಸದ್ಯದ ಯೋಚನೆ ಐಪಿಎಲ್‌ ಮಾತ್ರ’ ಎಂದಿದ್ದಾರೆ ಮಾಯಾಂಕ್‌ ಯಾದವ್‌.

ಮಾಯಾಂಕ್‌ ಹಾದಿ…
ಮಾಯಾಂಕ್‌ ಪ್ರಭು ಯಾದವ್‌, ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಕಲ್ಪನೆ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. 7 ವರ್ಷಗಳ ಹಿಂದೆ ಹೊಸದಿಲ್ಲಿ ಸಾನೆಟ್‌ ಕ್ರಿಕೆಟ್‌ ಕ್ಲಬ್‌ಗೆ ಕಾಲಿಟ್ಟಾಗ ಅವರಿಗೆ ಕೇವಲ 14 ವರ್ಷ. ಕೃಶ ಶರೀರ ಹೊಂದಿದ್ದ ಮಾಯಾಂಕ್‌ ಬಳಿ ಯೋಗ್ಯವಾದ ಶೂ ಕೂಡ ಇರಲಿಲ್ಲ.

ಸಾನೆಟ್‌ ಕ್ಲಬ್‌ಗೆ ಒಬ್ಬ ಒಳ್ಳೆಯ ಬೌಲರ್‌ ಬೇಕಿತ್ತು. ಅದೇ ವೇಳೆ ಮಾಯಾಂಕ್‌ ಕ್ಲಬ್‌ ಪ್ರವೇಶಿಸಿದ್ದರು. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ಕುಟುಂಬದ ದಿನದ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಸಾನೆಟ್‌ ಕ್ಲಬ್‌ನ ತಾರಕ್‌ ಸಿನ್ಹಾ ಇವರ ಮೊದಲ ಕೋಚ್‌.

Continue Reading

ಅಂತರ ರಾಜ್ಯ

Rohit Sharma-ಐಪಿಎಲ್ ಪಂದ್ಯದ ವೇಳೆ ವಿಕೆಟ್ ಕೀಳಲು ಬೌಲರ್ ಗೆ ನೆರವಾದ ರೋಹಿತ್ ;ಇದು ಕ್ಯಾಪ್ಟನ್ಸಿ ನೋಡಿ ಕಲಿ – ಪಾಂಡ್ಯಗೆ ಮೊಟಕಿದ ಮುಂಬೈ ಇಂಡಿಯನ್ಸ್ ಫಾನ್ಸ್

Ad Widget

ನವದೆಹಲಿ: ಗುಜಾರತ್ ಟೈಟಾನ್ಸ್ ನಾಯಕನಾಗಿ ಅತ್ಯಧ್ಬುತ ಪ್ರದರ್ಶನ ನೀಡಿದ ಬಾರತದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ತಂಡ ಬದಲಾಯಿಸಿ ಮುಂಬೈ ಇಂಡಿಯನ್ಸ್ ನ ಸಾರಥ್ಯ ವಹಿಸಿದ್ದಾರೆ. ಆ ಬಳಿಕ ಅವರ ಗ್ರಹಗತಿಯೆ ಬದಲಾದಂತಿದೆ. ಮೊದಲು ಮುಂಬೈ ಇಂಡಿಯನ್ಸ್ ಕೋಪಕ್ಕೆ ತುತ್ತಾದ ಅವರು ಇದೀಗ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದಾರೆ

Ad Widget

Ad Widget

Ad Widget

Ad Widget

ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕಳಪೆ ನಾಯಕತ್ವದಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯ ಅಂತಿಮ ಹಂತದಲ್ಲಿ ಗುಜರಾತ್ ಪಾಲಾಯಿತು.

Ad Widget

Ad Widget

ನಿನ್ನೆ (ಮಾ. 27) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹಾರ್ದಿಕ್ ತಂತ್ರಗಳು ಕೈ ಕೊಟ್ಟವು. ಕೆಟ್ಟ ನಾಯಕತ್ವದ ನಿರ್ಧಾರಗಳಿಂದ ಮುಂಬೈ ತಂಡ ಮತ್ತೊಂದು ಸೋಲು ಕಾಣಬೇಕಾಯಿತು. ಮುಂಬೈ ತಂಡ ಬ್ಯಾಕ್ ಫುಟ್ ನಲ್ಲಿದ್ದಾಗ, ರೋಹಿತ್ ಶರ್ಮಾ ತೋರಿದ ಜಾಣ ನಡೆ ಮುಂಬೈಯನ್ನು ಮತ್ತೆ ಪಂದ್ಯಕ್ಕೆ ಮರಳಿಸಿತ್ತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹೊಡಬಡಿಯ ಬ್ಯಾಟಿಂಗ್ ಪ್ರದರ್ಶಿಸಿದ್ದು, . ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಎದುರಿಸಿದ ಹೆಡ್ 62 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಔಟಾದರು. ಮುಂಬೈ ಬೌಲರ್ಗಳನ್ನು ಹೆಡ್ ಮನಸೋ ಇಚ್ಛೆ ದಂಡಿಸಿದರು. ಹೆಡ್ ಆಟದ ವೇಗವನ್ನು ನೋಡಿದಾಗ ಇನ್ನೂ ಎರಡು ಓವರ್ ಕ್ರೀಸ್ನಲ್ಲಿ ಇದ್ದಿದ್ದರೆ ಶತಕ ಸಿಡಿಸಿಬಿಡುತ್ತಿದ್ದರು.

Ad Widget

Ad Widget

ಆದರೆ, ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ವಹಿಸಿಕೊಂಡರು. ಹೆಡ್ ವಿಕೆಟ್ ಉರುಳಿಸಲು ಬಿಗಿ ಫೀಲ್ಡಿಂಗ್ ಸೆಟ್ ಮಾಡಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಂತೆ ಹಾರ್ದಿಕ್ಗೆ ಸೂಚನೆ ನೀಡಿದರು. ಗೆರಾಲ್ಡ್ ಕೋಟ್ಜಿಗೆ ಬೌಲ್ ಮಾಡಲು ಕೆಲ ಸಲಹೆ ನೀಡಿದರು. ಅದರಂತೆ ಕೋಟ್ಜಿ ಎಸೆದ ಬಾಲ್ ಅನ್ನು ಬಲವಾಗಿ ಹೊಡೆಯಲು ಹೋಗಿ ನಮನ್ ಧಿರ್ಗೆ ಕ್ಯಾಚಿತ್ತು ನಿರ್ಗಮಿಸಿದರು.

Ad Widget

Ad Widget

ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್, ರೋಹಿತ್ ರಣತಂತ್ರ ನೋಡಿ ಒಂದು ಕ್ಷಣ ಹುಬ್ಬೇರಿಸಿದರು. ರೋಹಿತ್ ಅವರ ಸರಿಯಾದ ಅಂದಾಜು, ಸರಿಯಾದ ಯೋಜನೆ, ಬ್ಯಾಟರ್ಗಳನ್ನು ಕೆರಳಿಸುವುದು ಮತ್ತು ಬೌಲರ್ಸ್ಗೆ ಆತ್ಮವಿಶ್ವಾಸ ತುಂಬಿದರೆ ವಿಕೆಟ್ಗಳನ್ನು ಪಡೆಯಬಹುದು ಎಂಬ ರೋಹಿತ್ ತಂತ್ರ ಒಂದು ಕ್ಷಣ ಹಾರ್ದಿಕ್ ಮೈಂಡ್ ಬ್ಲಾಕ್ ಮಾಡಿತು. ತಂಡ ಸಂಕಷ್ಟದಲ್ಲಿದ್ದ ವೇಳೆ ರೋಹಿತ್, ತನ್ನ ಜವಾಬ್ದಾರಿ ಮೆರೆದಿದ್ದನ್ನು ನೋಡಿ, ನೆಟ್ಟಿಗರು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

ಮುಂಬೈಗೆ 5 ಬಾರಿ ಐಪಿಎಲ್ ಕಪ್ ಸುಮ್ಮನೇ ಬಂದಿಲ್ಲ. ನಾಯಕತ್ವ ಎಂದರೆ ಇದೇ ಎನ್ನುತ್ತಾರೆ. ಹಾರ್ದಿಕ್, ರೋಹಿತ್ನಿಂದ ಕಲಿಯಲಿ, ನಾಯಕ ಯಾವತ್ತಿದ್ದರೂ ನಾಯಕನೇ ಎಂದು ರೋಹಿತ್ರನ್ನು ಹೊಗಳುತ್ತಿದ್ದು, ಹಾರ್ದಿಕ್ರನ್ನು ಜುಜುಬಿ ಹೊಸ ನಾಯಕ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  .

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading