ಸುಳ್ಯ
Pocso : ಸುಬ್ರಹ್ಮಣ್ಯ : ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಅನ್ಯ ಕೋಮಿನ ಯುವಕನಿಗೆ ತಂಡದಿಂದ ಹಲ್ಲೆ – ಬಾಲಕಿಯ ತಂದೆಯಿಂದ ಮಾನಭಂಗ ಯತ್ನ ಪ್ರಕರಣ
ಸುಬ್ರಹ್ಮಣ್ಯ/ Subrahmanya :
ಸುಬ್ರಹ್ಮಣ್ಯ : ಜ 6 : ಹಿಂದೂ ವಿದ್ಯಾರ್ಥಿನಿಯೊಂದಿಗೆ ಮುಸ್ಲಿಂ ಹುಡುಗ ತಿರುಗಾಡುತ್ತಿದ್ದಾನೆಂದು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಲ್ಲುಗುಂಡಿ ಯುವಕನೋರ್ವ ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ನನ್ನ ಮಗಳಿಗೆ ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ತಂದೆ ಹಲ್ಲೆಗೊಳಗಾದ ಯುವಕನ ವಿರುದ್ಧ ದೂರು ನೀಡಿದ್ದು ಸುಬ್ರಹ್ಮಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಜ.5ರಂದು ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರ ಜಂಕ್ಷನ್ ಬಳಿ ನಡೆದಿದೆ.
ಸಂಪಾಜೆ ಗ್ರಾಮದ ಕಲ್ಲುಗುಂಡಿ ಹನೀಫ್ ಎಂಬವರ ಮಗ ಅಫೀದ್ (20) ಹಲ್ಲೆಗೊಳಗಾದ ಯುವಕ ಹಾಗೂ ಮಾನಭಂಗ ಪ್ರಕರಣದ ಆರೋಪಿ. 17ರ ಹರೆಯದ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂತ್ರಸ್ತ ಬಾಲಕಿ.
ಅಫೀದ್ ಕೊಟ್ಟ ದೂರಿನಲ್ಲಿ ಏನಿದೆ?
ಅಫೀದ್ ಎಂಬಾತನಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ ಸುಬ್ರಹ್ಮಣ್ಯದ ವಿದ್ಯಾರ್ಥಿನಿಯ ಪರಿಚಯವಾಗಿದ್ದು, ಆತ ಆಕೆಯನ್ನು ಈ ಹಿಂದೆ 2-3 ಸಲ ಸುಬ್ರಹ್ಮಣ್ಯಕ್ಕೆ ಬಂದು ಭೇಟಿಯಾಗಿದ್ದ. ಅದರಂತೆ ಗುರುವಾರವೂ ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಕ್ದಾಣಕ್ಕೆ ಬಂದಿದ್ದು ಅವಳು ಕಾಲೇಜಿನಿಂದ ಸಂಜೆ ಬಸ್ ನಿಲ್ದಾಣಕ್ಕೆ ಬಂದ ವೇಳೆ ಆತ ಆಕೆಗೆ ಚಾಕಲೇಟ್ ನೀಡಿ ಮಾತನಾಡುತ್ತಿದ್ದ ವೇಳೆ ಪರಿಚಯವಿಲ್ಲದ 2-3 ಮಂದಿ ಬಂದು ಅಫೀದ್ ನನ್ನು ಎಳೆದುಕೊಂಡು ಜೀಪೊಂದರಲ್ಲಿ ಹಾಕಿದ್ದು, ಆಗ ಅಲ್ಲಿಗೆ 5-6 ಮಂದಿ ಬಂದು ಜೀಪಿನಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಜಂಕ್ಷನ್ ಬಳಿಯ ಹಳೆ ಕಟ್ಟಡದ ಕೋಣೆಯೊಳಗ ಕೂಡಿ ಹಾಕಿ 10-12 ಜನರು ಕೈಯಲ್ಲಿ ಮರದ ದೊಣ್ಣೆ, ಬೆತ್ತಗಳಿಂದ ಹೊಡಿದಿದ್ದು, ಒಬ್ಬಾತ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದಾನೆ. ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಫೀದ್ ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಯುವಕನ ವಿರುದ್ಧ ಮಾನಭಂಗಕ್ಕೆ ಯತ್ನಿಸಿದ ಆರೋಪ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಯುವತಿಯ ತಂದೆ ದೂರು ನೀಡಿದ್ದಾರೆ. ನನ್ನ ಮಗಳು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಹಫೀದ್ ಎಂಬಾತ ಮಗಳನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಮಗಳ ದೂರವಾಣಿ ಸಂಖ್ಯೆ ಕೇಳಿದ್ದು, ನಿರಾಕರಿಸಿದ ಸಂದರ್ಭದಲ್ಲಿ ಅವಳ ಕೈ ಹಿಡಿದು ಎಳದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Kadaba-ಕಡಬ : ಕುಮಾರಧಾರ ನದಿಯಲ್ಲಿ ಮೊಸಳೆ ಮೃತಪಡಲು ಪ್ಲಾಸ್ಟಿಕ್ ಸೇವನೆ ಯೇ ಕಾರಣ – ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಪರಿಸರ ಪ್ರೇಮಿಗಳ ಕಿಡಿ
ಕಡಬ ಸಮೀಪದ ಪುಳಿಕುಕ್ಕು ಬಳಿ ಕುಮಾರಧಾರ ನದಿಯಲ್ಲಿ ಮೃತಪಟ್ಟ ಮೊಸಳೆಯ ಸಾವಿಗೆ ಪ್ಲಾಸ್ಟಿಕ್ ಸೇವನೆ ಮಾಡಿರುವುದೇ ಕಾರಣ ಎನ್ನುವುದು ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.
ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು.. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್ ನಡೆಸಿದರು.
ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಪತ್ತೆಯಾಗಿತ್ತು. . ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಅಸೌಖ್ಯಗೊಂಡು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇದೊಂದು ಹೆಣ್ಣು ಮೊಸಳೆಯಾಗಿದ್ದು ನಾಲ್ಕು ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಮೊಸಳೆ ಕಳೆಬರಹದ ಅಂತ್ಯ ಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಕಾರಿ ಗಿರೀಶ್, ಉಪ ವಲಯಾರಣ್ಯಾಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಮತ್ತಿತರರು ಭಾಘವಹಿಸಿದ್ದರು.
ಕೆಲವು ಕಿಡಿಗೇಡಿಗಳು ಕೋಳಿ ತ್ಯಾಜ್ಯ, ದನ ಕಡಿದು ಮಾಂಸ ಮಾಡಿರುವುದರ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುತ್ತಾರೆ. ಗೋ ಕಳ್ಳರು ರಾತ್ರಿ ಹೊತ್ತು ಯಾರೂ ಇಲ್ಲದ ವೇಳೆ ನದಿಗೆ ತ್ಯಾಜ್ಯ ಎಸೆದರೆ, ಕೋಳಿ ತ್ಯಾಜ್ಯ ಎಸೆಯುವವರು ರಾತ್ರಿ ತಮ್ಮ ಅಂಗಡಿ ಬಂದ್ ಮಾಡಿದ ಬಳಿಕ ಜನಸಂದಣೀ ಇಲ್ಲದಿದ್ದ ಸಮಯ ಗಮನಿಸಿ ನದಿಗೆ ಅಥವಾ ತೋಡಿಗೆ ಎಸೆದು ಬರುತ್ತಾರೆ. ಇದರಿಂದ ನೀರು ಕಲುಷಿತಗೊಂಡು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇನ್ನು ಇದನ್ನು ಸೇವಿಸುವ ಜಲಚರಗಳು ಸಾವನ್ನಪ್ಪುತ್ತಿವೆ. ಇದರ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸುಳ್ಯ
ಕಡಬದ ಹೇಮಂತ್ ರೈ ಮನವಳಿಕೆ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕರಾಗಿ ಆಯ್ಕೆ
ಆಲಂಕಾರು: ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕರಾಗಿ ಕಡಬ ತಾಲೂಕಿನ ಮನವಳಿಕೆಗುತ್ತು ಹೇಮಂತ್ ರೈ ಯವರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ರವರು ಆದೇಶ ಹೊರಡಿಸಿದ್ದಾರೆ.
ಹೇಮಂತ್ ರೈಯವರು ಕಡಬ ತಾಲೂಕು ಆಲಂಕಾರು ಸಮೀಪದ ಪ್ರತಿಷ್ಠಿತ ಮನವಳಿಕೆ ಗುತ್ತುವಿನವರಾಗಿರುವ ಪ್ರವಾಸೋದ್ಯಮ ಉದ್ಯಮಿಯಾಗಿದ್ದಾರೆ. ಈ ಹಿಂದೆ ಕ್ಲಬ್ ಮಹೀಂದ್ರಾ, ಸ್ಟರ್ಲಿಂಗ್ ಹಾಲಿಡೆಸ್, ಲೀಸರ್ ವೆಕೇಶನ್ಸ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು.ಹೇಮಂತ್ ರೈಯವರು ಎಂಬಿಎ, ಎಲ್.ಎಲ್.ಬಿ ಪದವೀಧರರಾಗಿದ್ದು ಈ ಹಿಂದೆ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಸಹ ಸಂಚಾಲಕರಾಗಿದ್ದರು.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದು ಸಂಘದ ಪ್ರಾಥಮಿಕ ಹಾಗೂ ದ್ವಿತೀಯ ಶಿಕ್ಷಾವರ್ಗವನ್ನೂ ಪೂರ್ಣಗೊಳಿಸಿರುತ್ತಾರೆ. ಕಾಲೇಜು ಜೀವನಗಳಲ್ಲಿ ಎ.ಬಿ.ವಿ.ಪಿ.ಯ ಪದಾಧಿಕಾರಿಯಾಗಿದ್ದು ಇದೀಗ ಬಿ.ಜೆ.ಪಿ. ಆರ್ಥಿಕ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ಸುಳ್ಯ
Padmaraj R. Poojary-ಯುವಕ – ಯುವತಿಯರಿಗೆ ಉದ್ಯೋಗ ಸೃಷ್ಟಿಯಾದರೆ ದೇಶ ಸದೃಢ; ಬಿಳಿನೆಲೆಯಲ್ಲಿ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ
ಕಡಬ: ಪ್ರತಿ ಯುವಕ – ಯುವತಿಯರಿಗೆ ಉದ್ಯೋಗ ಸಿಗಬೇಕು. ಪ್ರತಿ ಮನೆಯೂ ಸದೃಢಗೊಂಡಾಗ ಈ ಸಮಾಜ ಬಲಿಷ್ಠವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಗೆ ಉದ್ದಿಮೆಗಳು ಬರಬೇಕು. ವಿದೇಶಿ ಬಂಡವಾಳ ಹೂಡಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮೆಡಿಕಲ್ ಟೂರಿಸಂ, ಶೈಕ್ಷಣಿಕ ಟೂರಿಸಂ, ಪ್ರವಾಸೋದ್ಯಮಕ್ಕೆ ವಿಫುಲ ಸಾಧ್ಯತೆಗಳಿವೆ. ಹೀಗಿರುವಾಗ ನಮ್ಮೂರಿನ ಯುವಕ – ಯುವತಿಯರು ಉದ್ಯೋಗಕ್ಕಾಗಿ ಹೊರ ಊರುಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿಯಾದರೆ ಅದೇಷ್ಟೋ ಹೆತ್ತವರು ತಮ್ಮ ಮಕ್ಕಳ ಜೊತೆಯಲ್ಲೇ ಜೀವನ ಸಾಗಿಸಬಹುದು. ಇದನ್ನು ನನಸು ಮಾಡುವುದೇ ತನ್ನ ಹಾಗೂ ಕಾಂಗ್ರೆಸಿನ ಆದ್ಯತೆ ಎಂದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಸಂದೇಹ ಬೇಡ ಎಂದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಉಸ್ತುವಾರಿ ರಮಾನಾಥ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. ದೇಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಈಗ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು ಎಂದ ಅವರು, ಪದ್ಮರಾಜ್ ಆರ್. ಪೂಜಾರಿ ಅವರನ್ನು ಸಂಸತ್ ಸದಸ್ಯರಾಗಿ ಮಾಡಬೇಕಿದೆ ಎಂದರು.
ಸುಳ್ಯ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ, ಸಂಯೋಜಕರಾದ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ, ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಪಿ.ಪಿ. ವರ್ಗೀಸ್, ವೆಂಕಪ್ಪ ಗೌಡ, ತಾಪಂ ಮಾಜಿ ಸದಸ್ಯರಾದ ಅಶೋಕ್ ನೆಕ್ರಾಜೆ, ಫಝಲ್, ಪ್ರಮುಖರಾದ ಸರ್ವೋತ್ತಮ ಗೌಡ, ಕಿರಣ್ ಬುಡ್ಲೆಗುತ್ತು, ಬಾಲಕೃಷ್ಣ ಬಲ್ಲೇರಿ, ಜಯರಾಜ್, ಗಣೇಶ್ ಕೈಕುರೆ ಮೊದಲಾದವರು ಉಪಸ್ಥಿತರಿದ್ದರು.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಅರ್ಚಕ ವೆಂಕಟೇಶ್, ಗಿರೀಶ್ ಕಳಿಗೆ, ವಿನೋದ್ ನೆಟ್ಟಣ, ಕಿಶೋರ್ ವಾಲ್ತಾಜೆ, ನಾಗೇಶ್ ಬಿಳಿನೆಲೆ ಬೈಲು, ರಾಮಕೃಷ್ಣ ಓಳ್ಳಾರು, ಮಹೇಶ್ ಕೈಕಂಬ ಉಪಸ್ಥಿತರಿದ್ದರು.
ಇಚ್ಲಂಪಾಡಿ ಸೈಂಟ್ ಜಾರ್ಜ್ ಚರ್ಚ್ ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು. ಚರ್ಚ್ ಧರ್ಮಗುರು ಫಾ. ವರ್ಗೀಸ್ ಥೋಮಸ್ ಶುಭ ಹಾರೈಸಿದರು.
ಚರ್ಚ್ ಕಾರ್ಯದರ್ಶಿ ಜಾಕೋವಿಯಂ, ಖಜಾಂಚಿ ರಿನು ಮಡಿಪ್ಪು, ತಾಪಂ ಮಾಜಿ ಸದಸ್ಯೆ ವಲ್ಸಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ಸದಸ್ಯ ದಿನೇಶ್, ಡೈಸಿ ವರ್ಗೀಸ್, ಬೂತ್ ಅಧ್ಯಕ್ಷರಾದ ಹರೀಶ್ ಗೌಡ ಅಲೆಕ್ಕಿ, ಥೋಮಸ್ ಜಿ., ರಾಯ್ ಟಿ.ಕೆ., ಗ್ರಾಪಂ ಸದಸ್ಯೆ ರತ್ನಾವತಿ ಮೊದಲಾದವರು ಉಪಸ್ಥಿತರಿದ್ದರು.
ಐತ್ತೂರು ಸುಂಕದಗಟ್ಟೆ, ಮರ್ದಾಳ ನೆಕ್ಕಿತ್ತಡ್ಕ ದರ್ಗಾಕ್ಕೆ ಭೇಟಿ
ಸುಂಕದಕಟ್ಟೆ ಗಹೀಬಾನ್ ಶಾಹ್ ವಲಿಲ್ಲಾಹಿ ದರ್ಗಾ ಹಾಗೂ ಮರ್ದಾಳ ನೆಕ್ಕಿತ್ತಡ್ಕ ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಸುಂಕದಕಟ್ಟೆ ದರ್ಗಾದ ಅಶ್ರಫ್ ಶೇಡಿಗುಂಡಿ, ತಾಪಂ ಮಾಜಿ ಸದಸ್ಯ ಫಝಲ್, ಡಿಸಿಸಿ ಸದಸ್ಯ ಸೈಮನ್, ಗ್ರಾಪಂ ಸದಸ್ಯ ಈಸುಬು ಹಾಗೂ ನೆಕ್ಕಿತ್ತಡ್ಕ ದರ್ಗಾದ ಕೆ.ಎಸ್. ಅಬ್ದುಲ್ ಹಮೀದ ತಂಞಳ್, ಮರ್ದಾಳ ಗ್ರಾಪಂ ಸದಸ್ಯ ಶಾಕೀರ್ ಪಿಳ್ಯ, ಐತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಪಿ.ಯೂಸುಫ್, ಅಬ್ದುಲ್ ಹಮೀದ್ ಎ.ಎಸ್., ಅಬೂಬಕ್ಕರ್ ಪಿ., ಉಮ್ಮರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.