Connect with us

ಸುಳ್ಯ

Bellare | ಬೆಳ್ಳಾರೆ ಕಾಮಧೇನು ಜ್ಯುವೆಲ್ಲರಿ ಮಾಲಕ ನವೀನ್ ಅಪಹರಣ ಹೈಡ್ರಾಮ: ಸುಂಟಿಕೊಪ್ಪ ಬಳಿ ಅಂಬ್ಯುಲೆನ್ಸ್ ತಡೆದಾಗ ನವೀನ್ ಪತ್ತೆ : ಅತ್ತೆ ದಿವ್ಯಪ್ರಭಾ ಚಿಲ್ತಡ್ಕ ಮತ್ತು ತಂಡದಿಂದ ಕೃತ್ಯ ಆರೋಪ – ಮಾಧ್ಯಮದೆದುರು ಬಂದು ಗಂಭೀರ ಆರೋಪ ಮಾಡಿದ ನವೀನ್ – ಇಲ್ಲಿದೆ ವಿಡಿಯೋ

Ad Widget

Ad Widget

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರತಿಷ್ಠತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ಅಪರಿಚಿತರ ತಂಡವೊಂದು ಬಲವಂತವಾಗಿ ಕರೆದೊಯ್ದ ಪ್ರಕರಣ ನಡೆದಿದ್ದು, ಆತನನ್ನು ಅಪಹರಿಸಲಾಗಿದೆ ಎಂದು ನವೀನ್ ತಾಯಿ ಆರೋಪಿಸಿದ್ದಾರೆ(Bellare) . ಈ ಅಂಬ್ಯುಲೆನ್ಸನ್ನು ಸಾರ್ವಜನಿಕರ ತಂಡವೊಂದು ಕೊಡಗಿನ ಶುಂಠಿಕೊಪ್ಪ ಬಳಿ ತಡೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

ಘಟನೆಯ ಸಂದರ್ಭದಲ್ಲಿ ನವೀನರ ತಾಯಿ ಮತ್ತು ಅತ್ತಿಗೆ ಪ್ರಜ್ಞಾ ಗಾಯಗೊಂಡಿದ್ದು, ಅವರಿಬ್ಬರೂ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನನ್ನು ನನ್ನ ಅತ್ತೆ ( ದಿವ್ಯಪ್ರಭಾ ಗೌಡ ಚಿಲ್ತಡ್ಕ ) ಹಾಗೂ ಪತ್ನಿ ( ಸ್ಪಂದನಾ ಚಿಲ್ತಡ್ಕ) ರವರ ಚಿತಾವಣೆಯಂತೆ ಅಪಹರಿಸಲಾಗಿದೆ ಎಂದು ನವೀನ್ ಅವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

Ad Widget

Ad Widget

Ad Widget

ಡಿ.19ರಂದು ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್ ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಅಂಬ್ಯುಲೆನ್ಸ್‌ನಲ್ಲಿ ಮತ್ತು ಇತರ ಕಾರುಗಳಲ್ಲಿ ಬಂದ ಕೆಲವರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರೆಂದೂ ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞಾ ತಡೆಯಲು ಬಂದರೆಂದು ಆ ಸಂದರ್ಭ ಅವರ ಮಧ್ಯೆ ಸಂಘರ್ಷ ನಡೆದು ಅಪರಿಚಿತರು ನವೀನರನ್ನು ವಾಹನದಲ್ಲಿ ಕೂರಿಸಿಕೊಂಡು ಹೋದರೆಂದೂ ಹೇಳಲಾಗುತ್ತಿದೆ.

Ad Widget

ಆ ಬಳಿಕ ಘಟನೆಯಲ್ಲಿ ಗಾಯಗೊಂಡ ತಾಯಿ ನೀರಜಾ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿ, ಬಳಿಕ ಸುಳ್ಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆಂದು ತಿಳಿದು ಬಂದಿದೆ.

Ad Widget

Ad Widget

ಇತ್ತ ನವೀನರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಶುಂಠಿಕೊಪ್ಪ ಬಳಿ ಅಲ್ಲಿಯ ಆಂಬ್ಯುಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸುವುದಾಗಿ ಮಾಹಿತಿ ಲಭ್ಯವಾಗಿದೆ.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ನೀರಜಾಕ್ಷಿಯವರು ಮಾಧ್ಯಮಗಳ ಜತೆ ಮಾತನಾಡಿ, ಇಂದು ಮಧ್ಯಾಹ್ನ ಅಂಬ್ಯುಲೆನ್ಸ್‌ನಲ್ಲಿ ೭-೮ ಜನ ಬಂದು ನವೀನ್ ರವರನ್ನು ಅಪಹರಣ ಮಾಡಿದ್ದಾರೆ. ದಿವ್ಯ ಪ್ರಭಾ ,ಅವರ ಮಗ ಮತ್ತು ಮಗಳು ಸ್ಪಂದನಾ ರವರು ಕೂಡಾ ಬಂದಿದ್ದರು. ಅಪಹರಣಗಾರರು ನನ್ನ ಮತ್ತು ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆ ಗೆ ದೂರು ಕೊಡಲು ಬಂದಾಗ ದೂರು ಸ್ವೀಕರಿಸಲಿಲ್ಲ. ಅದಕ್ಕಾಗಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಾಗಿ ಸುಳ್ಯ ಠಾಣೆಗೆ ದೂರು ಕೊಡಲು ಬಂದಿದ್ದೇವೆ. ಇತ್ತೀಚಿಗೆ ನಡೆದ ಘಟನೆ ಸಂಬಂಧಿಸಿ ನಿನ್ನೆ ಮನೆಯಲ್ಲಿ ಮಾತುಕತೆ ನಡೆದಿದೆ. ನವೀನ್ ಸ್ಪಂದನಾ ರವರರನ್ನು ಮನೆಗೆ ಹತ್ತಿಸಿಕೊಳ್ಳಲು ನಿರಾಕರಿಸಿದರಿಂದ ಸೇಡು ತೀರಿಸಿಕೊಳ್ಳಲು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಾಮಧೇನು ಮಾಧವ ಗೌಡರವರಲ್ಲಿ ವಿಚಾರಿಸಿದಾಗ, ನವೀನನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಅವನಿಗೆ ಡಿಹೈಡ್ರೇಷನ್ ಆದ ಕಾರಣ ನಾವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ.

ನವೀನ್ ರನ್ನು ಬೆಂಗಳೂರಿನ ಆಸ್ಪತ್ರೆಗೆಂದು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಆ ಸಂದರ್ಭ ಅಂಬ್ಯುಲೆನ್ಸ್ ನ್ನು ತಡೆಯಲಾಗಿದೆ. ಯಾರು ಯಾವ ಉದ್ದೇಶಕ್ಕೆ ತಡೆದಿದ್ದಾರೆಂಬುದನ್ನು ತಿಳಿದುಕೊಂಡು ಮತ್ತೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ದಿವ್ಯಪ್ರಭಾ ಚಿಲ್ತಡ್ಕ ಪ್ರತಿಕ್ರಿಯಿಸಿದ್ದಾರೆ.

ಸುಂಟಿಕೊಪ್ಪದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನವೀನ್ , ಬೆಳ್ಳಾರೆ ಕ್ರೈಂ ಎಸೈ ಆನಂದರವರ ಜತೆ ನನ್ನ ಹೆಂಡತಿ ಲಾಡ್ಜ್ ನಲ್ಲಿದ್ದಾಗ ಆ . 2 ರಂದು ರೆಡ್ ಹ್ಯಾಂಡಾಗಿ ಹಿಡಿದ ನಾನು ಗಲಾಟೆ ಮಾಡಿದ್ದೆ. ಬಳಿಕ ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ್ದೆ. ಮತ್ತೆ ಮನೆಯೊಳಗೆ ಸೇರಿಸಲು ಹಲವು ಬಾರಿ ಪಂಚಾತಿಕೆ ನಡೆದಿತ್ತು. ನಿನ್ನೆಯೂ ಪಂಚಾತಿಕೆ ನಡೆದಿತ್ತು. ಆದರೆ ನಿನ್ನೆಯೂ ಯಾವುದೇ ಅಂತಿಮ ನಿರ್ಣಯಕ್ಕೆ ಬರಲಾಗಿರಲಿಲ್ಲ. ಆದರೇ ಪತ್ನಿ ಸ್ಪಂದನ ಮನೆಯೊಳಗೆ ಬರುತ್ತೇನೆಂದು ಹಠ ಹಿಡಿದಿದ್ದು ಮನೆಯ ಬಾಗಿಲ ಬಳಿ ಕೂತಿದ್ದಳು . ಆದರೇ ಮನೆ ಬಾಗಿಲು ತೆರೆಯದಂತೆ ನಾನು ತಿಳಿಸಿದ್ದೆ . ಹೀಗಾಗಿ ನನಗೂ ನಿನ್ನೆ ಮನೆಯೊಳಗಡೆ ಹೋಗಲು ಆಗಿರಲಿಲ್ಲ. ಹಾಗಾಗಿ ನಾನು ನಿನ್ನೆ ಸ್ನೇಹಿತರ ಮನೆಯಲ್ಲಿ ಮಲಗಿದ್ದೇನೆ ಎಂದು ನವೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇವತ್ತು ಬೆಳಿಗ್ಗೆ ಬರುವಾಗ ಮನೆಯಲ್ಲಿಯೆ ಇದ್ದರು. ನಾನು ಹಟ್ಟಿಗೆ ಹೋಗಿ ಹಾಲು ಕರೆದು ಬಂದು ಮನೆಯ ಹೊರಗೆ ಇದ್ದ ಡ್ರೆಸ್ಸನ್ನು ಹಾಕಿಕೊಂಡು ಸ್ಕೂಟಿಯಲ್ಲಿ ಹೋದೆ. ಅಂಗಡಿಯ ಕೀ ಮನೆಯ ಒಳಗಿತ್ತು. ಆದರಿಂದ ಶಾಪ್ ಓಪನ್ ಮಾಡಲು ಆಗಲಿಲ್ಲ.

ಇವತ್ತು ಅಪ್ಪ( ಮಾಧವ ಗೌಡ ಬೆಳ್ಳಾರೆ) ಸೊಸೆಯನ್ನು ಮನೆಯೊಳಗೆ ಸೇರಿಸಲು ಮನೆಯ ಬಾಗಿಲು ಮುರಿಯಲು ಮರದ ಕೆಲಸಗಾರರನ್ನು ಕರೆದುಕೊಂಡು ಬರುವುದಾಗಿ ಮಾಹಿತಿ ಸಿಕ್ಕಿತ್ತು. ಇದನ್ನು ನೋಡಿ ವಿಚಾರಿಸಲು ಬಂದಾಗ ಗೇಟ್ ಹತ್ತಿರ ಆಂಬ್ಯುಲೆನ್ಸ್ ನವರು ನನ್ನನ್ನು ಹಿಡಿದು ಗಾಡಿಯಲ್ಲಿ ಕರೆದುಕೊಂಡು ಹೋದರು. ಇಂಜೆಕ್ಷನ್ ಕೊಟ್ರು.
ಬಂದು ನೋಡಿ ಹೋದ್ರು. ಇದೆಲ್ಲ ಸೆಟ್ಟಿಂಗ್ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವರದಿ ಸಿದ್ದಗೊಳ್ಳುತ್ತಿರುವಾಗ ಸಿಕ್ಕ ಮಾಹಿತಿ ಪ್ರಕಾರ “ಪ್ರಕರಣಕ್ಕೆ ಸಂಬಂಧಿಸಿ, ಸುಂಟಿಕೊಪ್ಪ ಠಾಣೆಯಲ್ಲಿ ಮಾತುಕತೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ”.

ಸಂಜೆ ವೇಳೆಗೆ ನವೀನ್ ಅವರ ತಂದೆ , ಪತ್ನಿ, ಮಾವ ಮತ್ತಿತರರು ಅಲ್ಲಿಗೆ ತೆರಳಿದ್ದು ನವೀನ್ ಪರವಾಗಿ ಅವರ ಕೆಲವು ಮಿತ್ರರು ಕೂಡ ಅಲ್ಲಿಗೆ ಹೋಗಿದ್ದಾರೆಂದು ತಿಳಿದುಬಂದಿದೆ.

ಸುಳ್ಯ

 Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ :  ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ,  ವ್ಯತ್ಯಯ – ಇಲ್ಲಿದೆ ಮಾಹಿತಿ

Ad Widget

Ad Widget

ಶ್ರೀ ಕ್ಷೇತ್ರದ  ಜಾತ್ರೋತ್ಸವದ ಹಿನ್ನಲೆ ಇಲ್ಲಿನ  ಪ್ರಧಾನ ಸೇವೆಗಳಲ್ಲಿ  ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.  

Ad Widget

Ad Widget

Ad Widget

Ad Widget

ಪ್ರಾರ್ಥನೆ, ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:

Ad Widget

Ad Widget

Ad Widget

ಲಕ್ಷದೀಪೋತ್ಸವ (ಡಿ.12), ಚೌತಿ (ಡಿ.16), ಪಂಚಮಿ (ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

Ad Widget

 ಲಕ್ಷದೀಪೋತ್ಸವ (ಡಿ.12), ಚೌತಿ  (ಡಿ.16), ಪಂಚಮಿ (ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ (ಡಿ.24) ದಂದು ಮಹಾಭಿಷೇಕ ಸೇವೆ ನಡಯುವುದಿಲ್ಲ. ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

Ad Widget

Ad Widget

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

ಚಂಪಾಷಷ್ಠಿ ಜಾತ್ರೋತ್ಸವವು ಡಿ.10 ರಿಂದ 24ರ ತನಕ ನಡೆಯಲಿದ್ದು, ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.9 ದರುಶನದಲ್ಲಿ ವ್ಯತ್ಯಯ: ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯು ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ, 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Continue Reading

ಸುಳ್ಯ

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

Ad Widget

Ad Widget

Kukke Shri Subrahmanya Temple ಡಿಸೆಂಬರ್ 06;  ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವಾರಾಂತ್ಯದಲ್ಲಿ  ದರ್ಶನ ಮತ್ತು ವಿವಿಧ ಸೇವೆಗಳು ಅರ್ಧ ದಿನದ ಕಾಲ ಲಭ್ಯವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

Ad Widget

Ad Widget

Ad Widget

Ad Widget

ದೇವಳದಲ್ಲಿ 2023-24ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರಕವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ಇರಲಿದೆ. ಈ ಹಿನ್ನಲೆಯಲ್ಲಿ ಆ ದಿನ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Ad Widget

Ad Widget

Ad Widget

ಕುಕ್ಕೆ ಸುಬ್ರಮಣ್ಯದಲ್ಲಿ “ಮೂಲಮೃತಿಕಾ” ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಮೂಲಸ್ಥಾನವಾದ ಕುಕ್ಕೆ ಸುಬ್ರಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಪ್ರಸಾದ. ಯಾವುದೇ ದೇವಾಲಯದಲ್ಲಿ ಸಹ ಈ ಮಾದರಿ ಪ್ರಸಾದ ಸಿಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಪ್ರಸಾದ ತೆಗೆಯಲಾಗುತ್ತದೆ.

Ad Widget

ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೂಲಮೃತಿಕಾ ಪ್ರಸಾದವನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.  ಈ ಮೃತ್ತಿಕೆ ಪ್ರಸಾದ ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

Ad Widget

Ad Widget

ಸಾವಿರಾರು ಭಕ್ತರು ಮೂಲಮೃತಿಕಾ ಪ್ರಸಾದವನ್ನು ತೆಗೆದುಕೊಂಡು ಹೋಗಲು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶುಭ ಕಾರ್ಯಗಳ ಸಂದರ್ಭದಲ್ಲಿ, ರೋಗಗಳ ನಿವಾರಣೆಗೆ ಸಹ ಈ ಪ್ರಸಾದವನ್ನು ಬಳಕೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಸುಬ್ರಹ್ಮಣ್ಯಂ ಗ್ರಾಮದಲ್ಲಿ ಬರುತ್ತದೆ. ಪ್ರಕೃತಿಯ ಸೌಂದರ್ಯದಲ್ಲಿ ನೆಲೆಸಿರುವ ಈ ಭವ್ಯವಾದ  ದೇವಾಲಯವು ಗ್ರಾಮದ ಹೃದಯಭಾಗದಲ್ಲಿದೆ. ಪ್ರಕೃತಿ ನದಿಗಳು, ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಅನನ್ಯ ಸೌಂದರ್ಯವನ್ನು ಬಹಿರಂಗಪಡಿಸುತ್ತದೆ .ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Continue Reading

ಸುಳ್ಯ

Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ  – ಸಂಪಾಜೆಯಲ್ಲಿ ಇಂದೋರ್‌ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು

Ad Widget

Ad Widget

Arecanut Yellow leaf diseases Remedy ಕರಾವಳಿ ಕರ್ನಾಟಕದ ಜೀವನಾಡಿ, ಇಲ್ಲಿನ ಬದುಕಿನ  ಆಧಾರ ಸ್ಥಂಭ ಎನಿಸಿಕೊಂಡಿರುವ ಅಡಿಕೆಗೆ (Arecanut) ಕಂಟಕವಾಗಿ ಪರಿಣಮಿಸಿರುವ ಹಳದಿ  ಎಲೆ ರೋಗ (Yellow leaf diseases) ಮೊತ್ತ ಮೊದಲ ಬಾರಿ ಈ ಭಾಗದಲ್ಲಿ ಕಾಣಿಸಿಕೊಂಡದ್ದು ಸುಳ್ಯ ತಾಲೂಕಿನ ಸಂಪಾಜೆಯಲ್ಲಿ (Sampaje).  ಪಶ್ಚಿಮ ಘಟ್ಟದ ಅಂಚಿನಲ್ಲಿರುವ ದ.ಕ ಹಾಗು ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆಯಲ್ಲಿ ಈ ರೋಗ ಕಾಣಿಸಿಕೊಂಡು ಸರಿ ಸುಮಾರು ಅರ್ಧ ಶತಮಾನವಾಗುತ್ತ ಬಂದಿದೆ. ಬಳಿಕದ ದಿನಗಳಲ್ಲಿ ಇದು ಇತರ ಭಾಗಗಳಿಗೂ ನಿಧಾನವಾಗಿ ಪಸರಿಸಲು ಆರಂಭಿಸಿದ್ದು ಪೂರ್ತಿ ಸುಳ್ಯ ತಾಲೂಕನ್ನು ಅಕ್ರಮಿಸಿತ್ತು ಹಾಗೂ ಇತ್ತೀಚಿನ ವರ್ಷಗಳಲ್ಲಿ ಇದು ಇನ್ನಷ್ಟು ವ್ಯಾಪಿಸಿ ಅಕ್ಕ ಪಕ್ಕದ ತಾಲೂಕುಗಳಾದ ಕಡಬ ಬೆಳ್ತಂಗಡಿ ಹಾಗು ಪುತ್ತೂರು ತಾಲೂಕಿಗೂ ಪಸರಿಸಿದೆ. ಪ್ರಸ್ತುತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ಹಳದಿ ಎಲೆ ರೋಗ ಬಂದಿದೆ.

Ad Widget

Ad Widget

Ad Widget

Ad Widget

ಅಡಿಕೆ ಕೃಷಿಗೆ ಬೆನ್ನು ಹಾಕಿದ ರೈತರು

Ad Widget

Ad Widget

Ad Widget

ಸಂಪಾಜೆ ಅಸುಪಾಸಿನಲ್ಲಿ ಹಳದಿ ರೋಗದ ಹಾವಳಿ ಹೇಗಿತು ಎಂದರೆ ಬಹುತೇಕ ತೋಟಗಳು  ಈ ರೋಗದಿಂದ ನಾಶವಾಗಿ ಹೋಯಿತ್ತು. ಉಳಿದ ಅಲ್ಪ ತೋಟದಲ್ಲೂ  ಫಸಲು ಇಲ್ಲ. ಹಳದಿ ರೋಗ ಭಾದಿತ ಗಿಡಗಳನ್ನು ಕಡಿದು ತೆಗೆದು ಅಲ್ಲಿ ಹೊಸತಾಗಿ ಅಡಿಕೆ ಕೃಷಿ ಮಾಡಿದರೂ  ಮತ್ತೆ ಆ ಮರಗಳನ್ನು ಹಳದಿ ರೋಗ ಬೆಂಬಿಡದೆ ಕಾಡುತಿತ್ತು. ಹೀಗಾಗಿ ಅಡಿಕೆಯ ಕೃಷಿಯ ಸಹವಾಸವೇ ಬೇಡ ಎಂದು ಆ ಭಾಗದ ರೈತರು ಬೇರೆ ಕೃಷಿಯತ್ತ ಮುಖ ಮಾಡಿದರು.

Ad Widget

ವಿಫಲ ಪ್ರಯತ್ನಗಳು

Ad Widget

Ad Widget

ಈ ರೋಗ ನಿಯಂತ್ರಣಕ್ಕೆ  ತೋಟಗಾರಿಕೆ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ಸೇರಿದಂತೆ ಕೃಷಿಕರ ಸಂಘಟನೆಗಳೂ ಸಾಕಷ್ಟು ಪ್ರಯತ್ನ ನಡೆಸಿವೆಯಾದರು ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.  ಹಲವು ಕಂಪೆನಿಗಳು ಹಾಗೂ ಸರಕಾರದ ಇಲಾಖೆಗಳು ವಿವಿಧ ನಮೂನೆಯ ಪರಿಹಾರೋಪಾಯಗಳನ್ನು ಔಷಧಿಗಳನ್ನು ನೀಡಿತಾದರೂ ಅದರಿಂದ ಕೃಷಿಕರಿಗೆ ಲಾಭಕ್ಕಿಂತ ನಷ್ಟವಾದದ್ದೆ ಹೆಚ್ಚು. ರೋಗ ನಿಯಂತ್ರಣಕ್ಕೂ ಬಂದಿಲ್ಲ. ಈಗ ಈ ರೋಗ  ಕರಾವಳಿ ಮಲೆನಾಡಿಗೂ ಹಬ್ಬಿದ್ದು , ಅಲ್ಲಿನ ರೋಗ ಬಾಧಿತ ತೋಟದ ಪರಿಸ್ಥಿತಿ ಇಲ್ಲಿನದಕ್ಕಿಂತ ಭಿನ್ನವಾಗಿಲ್ಲ. ಕೆಲವು ಔಷಧಿ ಕಂಪೆನಿಗಳಂತೂ ರೈತರ ಅಸಹಾಯಕತೆಯನ್ನು ಬಳಸಿಕೊಂಡು ಲಾಭ ಮಾಡಿಕೊಂಡದ್ದು ಇದೆ. ಇನ್ನು ರಾಜಕಾರಣಿಗಳು ಚುನಾವಣೆಯ ಸಂದರ್ಭ ಮತಗಳಿಕೆಗೆ ಇದನ್ನು ಸಾಧನವಾಗಿಸಿದ್ದು ಬಿಟ್ರೆ ರೈತರಿಗೆ ಅವರಿಂದ ದೊಡ್ಡ ಲಾಭವಾಗಿಲ್ಲ.

ಆಶಾಕಿರಣ

ಆದರೆ ಈಗ ಕಾಲ ಚಕ್ರ ಒಂದು ಸುತ್ತು ತಿರುಗಿದಂತೆ ಕಾಣುತ್ತಿದೆ. ಮೊದಲ ಬಾರಿ ಹಳದಿ ರೋಗಕ್ಕೆ ತುತ್ತಾದ ಸಂಪಾಜೆಯಲ್ಲೆ ಈ ರೋಗಕ್ಕೆ  ಶಾಶ್ವತ ಪರಿಹಾರದ ಆಶಾಕಿರಣವೊಂದು ಕಾಣಿಸಿದೆ. ಇಂದೋರ್‌ನಲ್ಲಿ  ಸ್ವಂತ ರಾಸಾಯನಿಕ ಗೊಬ್ಬರದ ಘಟಕ ನಿರ್ವಹಿಸುತ್ತಿರುವ ( ಶ್ರೀ ಸಿದ್ದಿ ಎಗ್ರಿ ಕೆಮಿಕಲ್‌ ಪ್ರೈವೇಟ್‌ ಲಿಮಿಟೆಡ್‌, ಇಂದೋರ್)  ದ.ಕ. ಮೂಲದ ಕೃಷಿ ಉದ್ಯಮಿ ಪಿ.ಎನ್.ಭಟ್ ಪೆರುವೊಡಿ  ಈ  ರೋಗದ ಕುರಿತಾಗಿ  ಸ್ವತ: ಸಂಶೋಧನೆ ನಡೆಸಿದ್ದು,  ಅದನ್ನು ತನ್ನ  ಸಹೋದರ ಸಂಪಾಜೆ ಗ್ರಾಮದ ಪೆರುವೊಡಿ ಸತ್ಯನಾರಾಯಣ ಭಟ್ ಹಾಗೂ ಜೇಡ್ಲ  ಶ್ರೀಧರ ಭಟ್ ರವರ  ಹಳದಿ ಎಲೆ ರೋಗ ಪೀಡಿತ ಅಡಕೆ ತೋಟದಲ್ಲಿ  ಪ್ರಾಯೋಗಿಕವಾಗಿ ಬಳಸಿದ್ದಾರೆ. ಕಳೆದೊಂದು ವರ್ಷದಿಂದ ಸಂಪಾಜೆಯ ಈ ಆಯ್ದ  ತೊಟಗಳಲ್ಲಿ ಪ್ರಯೋಗ ಚಾಲ್ತಿಯಲ್ಲಿದ್ದು  ನಿರೀಕ್ಷಿತ ಯಶಸ್ಸು ಸಿಕ್ಕಿದೆ. ಹಾಗಾಗಿಯೂ ಪ್ರಯೋಗ ಆರಂಭಿಕ ಹಂತದಲ್ಲಿದ್ದು ಎರಡು ವರ್ಷಗಳ ಕಾಲ‌ ಇದೇ ಔಷಧಿಯನ್ನು ಬಳಸಿ ನೋಡಿದ ಬಳಿಕ  ಇನ್ನಷ್ಟು  ಖಚಿತತೆ ಸಿಗಬಹುದು.  

ಮಣ್ಣಿನ ಸ್ಯಾಂಪಲ್‌ ಪರೀಕ್ಷೆ

ಪಿ.ಎನ್.ಭಟ್ ಅವರು ಮೊದಲಿಗೆ ಪೆರುವೊಡಿ ಸತ್ಯನಾರಾಯಣ ಭಟ್ ಹಾಗೂ ಜೇಡ್ಲ ಶ್ರೀಧರ ಭಟ್ ರವರ ತೋಟದ ಮಣ್ಣಿನ ಸ್ಯಾಂಪಲ್ ಪಡೆದು ಇಂದೋರ್‌ನ ತನ್ನ ಘಟಕದಲ್ಲಿ ಪರೀಕ್ಷೆ ನಡೆಸಿದ್ದಾರೆ. 90ರ ದಶಕದ ಕೊನೆಯಲ್ಲಿ ಈ ಎರಡು ತೋಟಗಳು ಹಳದಿ ರೋಗಕ್ಕೆ ತುತ್ತಾಗಿತ್ತು. ಸರಿ ಸುಮಾರು 150 ಕ್ವಿಂಟ್ವಾಲ್‌ ಅಡಿಕೆ ಫಸಲು ಬರುತ್ತಿದ್ದ  ತೋಟ ಬರುಬರುತ್ತಾ ಶೂನ್ಯ ಫಸಲಿನತ್ತ ಸಾಗಿತ್ತು. ಜೇಡ್ಲ  ಶ್ರೀಧರ ಭಟ್ ರವರು 2015ರಲ್ಲಿ ಅದೇ ಜಾಗದಲ್ಲಿ ಹೊಸ ತೋಟಕ್ಕೆ ತಯಾರಿ ನಡೆಸಿದ್ದು, 2017ರಲ್ಲಿ 400 ಅಡಿಕೆ ಸಸಿಗಳನ್ನು ಅಲ್ಲಿ ನೆಟ್ಟಿದ್ದರು. ಇದರಲ್ಲೂ ವರ್ಷಗಳ ಹಿಂದೆ 4-5 ಗಿಡಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗಿದಂತೆ ಕಂಡು ಬಂದಿತ್ತು. ಅದು ಹಳದಿ ರೋಗವಾಗಿರಬಹುದು ಎಂಬ ಶಂಕೆ ನನ್ನಲ್ಲಿತ್ತು ಎನ್ನುತ್ತಾರೆ ಶ್ರೀಧರ ಭಟ್.

ಶ್ರೀ ಸಿದ್ದಿ ಎಗ್ರಿ ಕೆಮಿಕಲ್‌ ಪ್ರೈವೇಟ್‌ ಲಿಮಿಟೆಡ್‌ ನ ಪಿ ಎನ್‌ ಪೆರುವೋಡಿ ಹೇಳಿದ್ದೇನು? ವಿಡಿಯೋ ಕೃಪೆ : THe Rural Mirror

2 ವರ್ಷ ಬೇಕು  

 ಇಂದೋರ್‌ ನಲ್ಲಿ ನಡೆಸಿದ  ಪರೀಕ್ಷೆ ವೇಳೆ ಹಳದಿ ಎಲೆರೋಗ ಪೀಡಿತ ಅಡಕೆ ತೋಟಗಳ ಮಣ್ಣಿನಲ್ಲಿ ಮೆಗ್ನೆಶಿಯಂ, ಕ್ಯಾಲ್ಸಿಯಂ ಹಾಗೂ ಪೊಟಾಷ್ ಅಂಶ  ಗಣನಿಯ ಪ್ರಮಾಣದಲ್ಲಿ  ಕೊರತೆ ಇರುವುದು ಕಂಡುಬಂದಿದೆ.  ಇದನ್ನು ಹೋಗಲಾಡಿಸಲು ತಾವೇ ತಯಾರಿಸಿದ ರಾಸಾಯನಿಕ ಔಷಧವನ್ನು ಪಿಎನ್‌ ಭಟ್‌ ಅವರು ಈ ಇಬ್ಬರು ರೈತರಿಗೆ ನೀಡಿದ್ದಾರೆ.  ಅವರ ಸಲಹೆಯಂತೆ ಕಳೆದ ಡಿಸೆಂಬರ್‌ನಿಂದ ಪ್ರತಿ ತಿಂಗಳು  ಈ  ಔಷಧ ಸಿಂಪರಣೆ ಮಾಡಿ ಹಳದಿ ಎಲೆ ರೋಗದಿಂದ ಶ್ರೀಧರ ಭಟ್ ಹಾಗೂ ಸತ್ಯನಾರಾಯಣ ಭಟ್ ಮುಕ್ತಿ ಪಡೆದಿದ್ದಾರೆ. ಸದ್ಯ  ಇವರ ತೋಟಗಳು  ಹಸಿರಿನಿಂದ ಕಂಗೋಳಿಸುತ್ತಿದ್ದು, ಹಳದಿ ಎಲೆ ರೋಗವಿದ್ದ ಪ್ರದೇಶದಲ್ಲಿ ಫಸಲು ನಳನಳಿಸುತ್ತಿದೆ.  ಆದರೇ ಇನ್ನೂ 2 ವರ್ಷ ಬಳಸಿ ನೋಡಿದಾಗ ಮಾತ್ರ ಸಂಪೂರ್ಣ ಫಲಿತಾಂಶ ಸಿಗಬಹುದು. ಈ ರೋಗ ಭಾದಿತ ತೋಟದ ರೈತರು ಕೃಷಿಯ ಬಗ್ಗೆ ನಂಬಿಕೆ ಕಳಕೊಂಡಿದ್ದು ಅವರಿಗೆ ಈ ಬೆಳವಣಿಗೆ ಚೇತೊಹರಿ ಎನಿಸಿದೆ.

ಪ್ರಯೋಗ ನಡೆಸಿದ ರೈತರ ಮಾತು : ವಿಡಿಯೋ ಕೃಪೆ : THe Rural Mirror

 

 ಇಂದೋರ್‌ನ ಈ  ರಸಗೊಬ್ಬರ ಕಂಪನಿ  ಅಲ್ಪಕಾಲಿಕ ಬೆಳೆಗಳಾದ  ಟೊಮೆಟೋ, ಖರ್ಜೂರ ಮುಂತಾದ ಬೆಳೆಗಳಲ್ಲಿ ಕಾಡುವ ಹಳದಿ ಎಲೆ ರೋಗಕ್ಕೆ ಈ ಹಿಂದೆ ಔಷಧ ಒದಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ದೀರ್ಘಕಾಲಿಕ ಬೆಳೆಯಾದ ಅಡಕೆ ಮರದ ಮೇಲೂ ಪ್ರಯೋಗ ನಡೆಸಲು ಮುಂದಾಯಿತು. ಪ್ರಸಕ್ತ ಈ ಪ್ರಯೋಗವನ್ನು ಇತರೆ ರೋಗಪೀಡಿತ ತೋಟಗಳಿಗೂ ವಿಸ್ತರಿಸಲಾಗಿದೆ.

ಹಳದಿ ಎಲೆರೋಗಕ್ಕೆ ಔಷಧ ಸಿಂಪರಣೆ ಮೊದಲು ಕಡ್ಡಾಯ ಮಣ್ಣು ಪರೀಕ್ಷೆ ಮಾಡಿಸಬೇಕು. ನನ್ನಲ್ಲಿ ವಿವಿಧ ಬಗೆಯ ಪೋಷಕಾಂಶಯುಕ್ತ ಔಷಧ ಸಿಂಪರಣೆಯಿಂದ ಹಳದಿ ಎಲೆರೋಗ ನಿಯಂತ್ರಣ ಸಾಧ್ಯವಾಗಿದೆ. ಈ ಮಾದರಿ ಹಳದಿ ಎಲೆರೋಗ ಪೀಡಿತ ತೋಟಗಳಲ್ಲಿ ಬಳಕೆಯಾದರೆ ಎಲ್ಲ ಬೆಳೆಗಾರರಿಗೂ ಉಪಯುಕ್ತವಾಗಲಿದೆ

ಶ್ರೀಧರ ಭಟ್ ಜೇಡ್ಲ,  ಸಂಪಾಜೆ, ಅಡಕೆ ಬೆಳೆಗಾರ            



Continue Reading

Trending

error: Content is protected !!