Ad Widget

Kanthara-2 | ‘ಕಾಂತಾರ – 2’ ಕ್ಕೆ ತಯಾರಿ : ಚಿತ್ರತಂಡದಿಂದ ಮಂಗಳೂರಿನಲ್ಲಿ ದೈವಕ್ಕೆ ನೇಮ – ನೇಮದಲ್ಲಿ ರಿಷಬ್ ಶೆಟ್ಟಿಗೆ ‘100 ಬಾರಿ ಯೋಚಿಸು’ ಎಂದು ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

InShot_20221210_100102316
Ad Widget

Ad Widget

Ad Widget

ಮಂಗಳೂರು: ಕಾಂತಾರಾ (Kanthara) ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಕಾಂತಾರಾ ಚಿತ್ರ ತಂಡ ಮತ್ತೆ ಪಂಜುರ್ಲಿ ಮೊರೆ ಹೋಗಿದೆ. ನಿರ್ಮಾಪಕ ‘ಹೊಂಬಾಳೆ’ (Hombale) ವಿಜಯ್ ಕಿರಗಂದೂರು (Vijay Kiragandur), ನಟ ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty) ಸೇರಿದಂತೆ ಇಡೀ ಚಿತ್ರರಂಗ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ನೀಡಿದೆ. ಈ ವೇಳೆ ಕಾಂತಾರಾ ತಂಡ ದೈವ ಅಣ್ಣಪ್ಪ ಪಂಜುರ್ಲಿ ಬಳಿ ಕಾಂತಾರಾ ಚಿತ್ರ ಭಾಗ ಎರಡಕ್ಕೆ (Kanthara-2) ಅನುಮತಿ ಯನ್ನು ದೈವದ ಬಳಿ ಕೇಳಿದ್ದು, ದೈವ ಹಲವು ಎಚ್ಚರಿಕೆ ನೀಡಿದೆ.

Ad Widget

Ad Widget

Ad Widget

Ad Widget

Ad Widget

ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಪ್ರಮುಖರ ಮನೆಯಲ್ಲಿ ನಡೆದ ಕಾಂತಾರ ಚಿತ್ರತಂಡದ ಹರಕೆ ಸೇವೆ ಅಣ್ಣಪ್ಪ ಪಂಜುರ್ಲಿ ಕೋಲ ನಡೆಯಿತು.

Ad Widget

Ad Widget

Ad Widget

Ad Widget

Ad Widget
ಪಂಜುರ್ಲಿ ದೈವದ ನೇಮದಲ್ಲಿ ರಿಷಬ ಶೆಟ್ಟಿ ಯ ಕಾಂತಾರ ಚಿತ್ರತಂಡ

ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಕಾಂತಾರಾ ಭಾಗ ಎರಡು ಚಿತ್ರಕ್ಕೆ ಅನುಮತಿ ಕೇಳಿದರು.ಈ ವೇಳೆ ಕಾಂತಾರಾ ಚಿತ್ರತಂಡಕ್ಕೆ ಅಭಯ ನೀಡಿದ ಅಣ್ಣಪ್ಪ ಪಂಜುರ್ಲಿ ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಎನ್ನುವ ಎಚ್ಚರಿಕೆ ನೀಡಿದೆ.

ಕಾಂತಾರ ಯಶಸ್ವಿಗೆ ಪಂಜರ್ಲಿ ನೇಮ ಕೊಟ್ಟ ಚಿತ್ರತಂಡ (ಆಡಿಯೋ)

ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ.ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ ಅಂತಾ ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರಾ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget
ರಿಷಬ್ ಶೆಟ್ಟಿಗೆ ದೈವದ ಅಪ್ಪಣೆಯಾಗುವ ಆಡಿಯೋ

ಈ ವೇಳೆ ಕಾಂತಾರಾ ಚಿತ್ರತಂಡದ ಬಹುತೇಕ ಕಲಾವಿದರು ಭಾಗವಹಿಸಿದ್ದು, ಕಾಂತಾರಾ ಭಾಗ ಎರಡರಲ್ಲೂ ಅದೇ ಕಲಾವಿದರು ಮುಂದುವರಿಯುವ ಸಾಧ್ಯತೆಗಳಿವೆ. ಕಾಂತಾರಾದಲ್ಲಿ ನಟಿಸಿದ್ದ ಕಲಾವಿದರಿಗೆ ತಲೆಕೂದಲು ಬೆಳೆಸಿಕೊಳ್ಳಲು ರಿಷಬ್ ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗಿದೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರಾ ಭಾಗ ಎರಡು ಚಿತ್ರದ ಚಿತ್ರೀಕರಣ ವಾಗುವ ಸಾಧ್ಯತೆಗಳಿವೆ.

ಹೊಂಬಾಳೆ ಪ್ರೊಡಕ್ಷನ್ ನ ವಿಜಯ್ ಕಿರಂಗದೂರು, ನಟ ರಿಷಬ್ ಶೆಟ್ಟಿ, ರಿಷಬ್ ಪತ್ನಿ ಪ್ರಗತಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ, ನವೀನ್ ಬೋಂದೆಲ್ ಸೇರಿದಂತೆ ರಿಷಬ್ ಕುಟುಂಬಸ್ಥರು, ಕಾಂತಾರಾ ಚಿತ್ರ ತಂಡದ ಕಲಾವಿದರು ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಭಾಗವಹಿಸಿದ್ದಾರೆ.

ಈ ಕೋಲದ ಚಿತ್ರೀಕರಣವನ್ನು ಸಂಪೂರ್ಣ ನಿಷೇಧ ಮಾಡಲಾಗಿತ್ತು. ಭಕ್ತಾದಿಗಳು ಮೊಬೈಲ್ ನಲ್ಲಿ ವಿಡಿಯೋ ಫೋಟೋ ತೆಗೆಯಬಾರದೆಂದು ಅಲ್ಲಲ್ಲಿ ಸೂಚನಾ ಫಲಕ ಹಾಕಲಾಗಿತ್ತು. ವಿಶೇಷ ಭದ್ರತೆ ವ್ಯವಸ್ಥೆ ಅಲ್ಲಿ ಕಂಡುಬಂತು.

ಕಾಂತಾರ ಸಿನಿಮಾ ಯಶಸ್ವಿ ಒಂದೆಡೆಯಾದರೆ ತುಳುನಾಡಿನ ಕಾರಣಿಕದ ದೈವಗಳ ಗುಡಿಗಳು, ಅಲ್ಲಲ್ಲಿ ವೇಷ ಹಾಕಿ ಕುಣಿದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಘಟನೆಗಳು ಹಲವು ನಡೆದಿವೆ. ದೈವನರ್ತಕರ ತಂಡ ಈಗಾಗಲೇ ಸಚಿವ ಸಂಸದರನ್ನು ಭೇಟಿಯಾಗಿ ದೈವವನ್ನು ಇನ್ನು ಮುಂದೆ ಚಿತ್ರ, ಸ್ಟೇಜ್ ಷೋ ಗಳಲ್ಲಿ ಪ್ರದರ್ಶನ ಮಾಡಬಾರದು ಎಂದು ಮನವಿ ಸಲ್ಲಿಸಿವೆ. ಇನ್ನು ‘ಕಾಂತಾರ-2’ ಸಿನಿಮಾಕ್ಕೆ ಯಾವಾ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದಾ ಕಾದು ನೋಡಬೇಕಷ್ಟೆ.

ರಿಷಬ್ ಶೆಟ್ಟಿ ಕಟೀಲ್ ಭೇಟಿ
ವಿಜಯ ಕಿರಗಂದೂರು ಕಟೀಲ್ ಭೇಟಿ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: