ಮಂಗಳೂರು
ಮಂಗಳೂರು : ಪೊಲೀಸ್ ಠಾಣೆ ಸೇರಿದ ಕುಡುಕನಿಗೆ ಬಿದ್ದು ಸಿಕ್ಕಿದ 10 ಲ. ರೂ. ಹಣದ ಬಂಡಲ್ ! FIR ದಾಖಲಾಗದೆ, ಕುಡುಕನ ಕೈಗೂ ಸೇರದೆ, ವಾರೀಸುದಾರರು ಬಾರದೇ ನಿಗೂಢವಾಗಿರುವ ಪ್ರಕರಣ | Exclusive Video
ಮಂಗಳೂರು: ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಹಣದ ಬಂಡಲ್ ಒಂದು ಬೀದಿಯಲ್ಲಿ ಸಿಕ್ಕಿ ಕುಡುಕನೊಬ್ಬನ ಕೈ ಸೇರಿದ, ಅರ್ಧ ಗಂಟೆಯ ಬಳಿಕ ಅದು ಪೊಲೀಸರ ಕೈ ಸೇರಿದ ಅದಾಗಿ ಒಂದು ವಾರ ಕಳೆದರೂ ಠಾಣೆಯಲ್ಲಿ ಪ್ರಕರಣವೂ ದಾಖಲಾಗದೆ, ವಾಪಾಸ್ಸು ಕುಡುಕನ ಕೈಗೂ ಸೇರದೆ ನಿಗೂಢತೆ ಸೃಷ್ಟಿಸಿರುವ ಘಟನೆಯೊಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನ.27ರಂದು ಪಂಪ್ವೆಲ್ ಮೇಲೇತುವೆ ಸಮೀಪದ ವೈನ್ಶಾಪ್ ಸಮೀಪದ ಬಾರ್ ವೊಂದರ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಹಣ ಇರುವ ಚೀಲ ಸಿಕ್ಕಿದೆ ಎಂದು ತಮಿಳುನಾಡು ಮೂಲದ ಕನ್ಯಾಕುಮಾರಿ ಶಿವರಾಜ್ ಎಂಬಾತ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಅದಾದ ಅರ್ಧ ಗಂಟೆಯ ಬಳಿಕ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರಿಬ್ಬರು ಶಿವರಾಜ್ ಹಾಗೂ ಆ ಹಣದ ಥೈಲಿಯನ್ನು ಠಾಣೆಗೆ ಹಿಡಿದುಕೊಂಡು ಹೋಗಿದ್ದಾರೆ , ಮೂರು ದಿನಗಳ ಬಳಿಕ ಹಣವನ್ನು ಇರಿಸಿಕೊಂಡು ಶಿವರಾಜ್ ನನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.
ಏನಿದು ಘಟನೆ ?
ಮೂಲತ : ತಮಿಳುನಾಡಿನವನಾಗಿರುವ ಕನ್ಯಾಕುಮಾರಿ ಶಿವರಾಜ್ (49) ಮಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದಾರೆ. ಬೋಂದೆಲ್ನ ಕೃಷ್ಣನಗರದಲ್ಲಿ ಆತನ ಮನೆ, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗಳು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಪರೀತ ಕುಡಿತದ ಚಟ ಬೆಳೆಸಿಕೊಂಡಿರುವ ಶಿವರಾಜ್ ಮನೆಗೂ ಹೋಗುತ್ತಿಲ್ಲ. ಹೋಟೆಲ್ನಲ್ಲಿ ಚಹಾ, ತಿಂಡಿ, ಬಸ್ಗಳಲ್ಲೇ ನಿದ್ದೆ.
ನ.27ರಂದು ಪಂಪ್ವೆಲ್ ಮೇಲೇತುವೆ ಸಮೀಪದ ವೈನ್ಶಾಪ್ಗೆ ಹೋದ ಶಿವರಾಜ್ ಮದ್ಯ ಸೇವಿಸಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲವನ್ನೂ ಹಾಗೂ ಶಿವರಾಜ್ನನ್ನೂ ದಿಟ್ಟಿಸುತ್ತಿದ್ದ. “ಏನು ನೋಡುತ್ತಿದ್ದಿಯಾ,” ಎಂದು ಕೇಳಿದಾಗ, ಆ ಚೀಲ ತೋರಿಸಿ, ”ಏನೋ ಇದೆ,” ಎಂದು ಉತ್ತರಿಸಿದ. ಮೆಲ್ಲಗೆ ಚೀಲ ತೆರೆದಾಗ ಅಚ್ಚುಕಟ್ಟಾಗಿ ಕಟ್ಟಿದ್ದ ಬಂಡಲ್ ಇತ್ತು. ಕವರ್ ಹರಿದಾಗ, 500 ರೂ. ನೋಟುಗಳಿರುವ ಬಂಡಲ್ ಕಂಡು ಇಬ್ಬರೂ ಹೌಹಾರಿದರು.
ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದು, ಹೊರಗೆ ಬಂದು ಉಳ್ಳಾಲ ಕಡೆಯ ಸರ್ವಿಸ್ ರಸ್ತೆಯಲ್ಲಿ ಅರ್ಧ ಕಿ.ಮೀ. ನಡೆದುಕೊಂಡು ಹೋದರು. ‘ನನಗೇನೂ ಕೊಡುವುದಿಲ್ಲವೇ’ ? ಎಂದುಕೂಲಿ ಕಾರ್ಮಿಕ ಕೇಳಿದಾಗ, 500 ಮತ್ತು 2000 ರೂ. ಮುಖಬೆಲೆಯ ಒಂದು ಬಂಡಲ್ ಆತನಿಗೆ ಕೊಡಲಾಯಿತು.ಮೂರು ಬಂಡಲ್ ಸೊಂಟದ ಮಧ್ಯೆ ಸಿಕ್ಕಿಸಿದರೆ, ಎರಡು ನೋಟು ತೆಗೆದಿದ್ದ ಬಂಡಲ್ ಅಂಗಿಯ ಕಿಸೆಯಲ್ಲಿ ಹಾಕಿದ್ದ ಶಿವರಾಜ್ಗೆ ಅಲ್ಲಿ ನಿಲ್ಲಲಾಗಲಿಲ್ಲ. ಆತ ಮತ್ತೆ ಅದೇ ವೈನ್ಶಾಪ್ಗೆ ಬಂದ.
ಹೊಟ್ಟೆ ತುಂಬಿಸಿಕೊಂಡ. ಹೊರಗೆ ಬರುವಷ್ಟರಲ್ಲಿ ಯಾರೋ ಕೊಟ್ಟ ಮಾಹಿತಿಯಂತೆ ಗಸ್ತು ನಿರತ ಪೊಲೀಸರು ಆತನನ್ನು ಕರೆದು ಕೊಂಡು ಹೋದರು. ಕುಡಿದ ನಶೆ ಇಳಿಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಬಗ್ಗೆ ಕೇಳಿದಾಗ,ದಾರಿಯಲ್ಲಿ ಸಿಕ್ಕಿದ್ದು ಎಂದು ಉತ್ತರಿಸಿದ್ದು,ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ಬಗ್ಗೆಯೂ ತಿಳಿಸಿದರು.
ಪೊಲೀಸರು ಮರುದಿನ ಶಿವರಾಜ್ ನೊಂದಿಗೆ ಬಂದು ಆ ಕೂಲಿ ಕಾರ್ಮಿನನ್ನು ಹುಡುಕಾಡಿದರೂ ಸಿಗಲಿಲ್ಲ. ಆ ಹಣ ಈಗ ಕಂಕನಾಡಿ ನಗರ ಪೊಲೀಸ್ ಠಾಣೆ ಯಲ್ಲಿದೆ. ಈ ಬಗ್ಗೆ ಕೇಸ್ ದಾಖಲಾಗಿಲ್ಲ. ಒಂದು ಬಂಡಲ್ ಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದರೆ, ಹಣ ಕೊಡುತ್ತೇವೆ ಎಂದು ಪೊಲೀಸರು ಒತ್ತಡ ಹಾಕುತ್ತಿದ್ದಾರೆ. ಏನು ಮಾಡ ಬೇಕೆಂದು ತೋಚುತ್ತಿಲ್ಲ ಎಂದು ಶಿವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕುಡುಕ ಘಟನೆಯನ್ನು ವಿವರಿಸಿದ್ದು ಹೀಗೆ – ವಿಡಿಯೋ ನೋಡಿ
ಹಣ ಯಾರದು ?
ಅಷ್ಟಕ್ಕೂ ರಸ್ತೆಯಲ್ಲಿ ಸಿಕ್ಕಿದ ಹಣದ ಬಂಡಲ್ ಯಾರದ್ದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಗರದಲ್ಲಿ ಹಣ ಕಳೆದುಕೊಂಡಬಗ್ಗೆ ಎಲ್ಲೂ ಕೇಸು ದಾಖಲಾಗಿಲ್ಲ. ಪೊಲೀಸರಿಗೂ ಗೊತ್ತಿಲ್ಲ. ಹವಾಲಾ ಹಣ(ಹುಂಡಿ)ಬಿಟ್ಟು ಹೋಗಿರುವ ಅಥವಾ ಬಿದ್ದು ಹೋಗಿರುವ ಸಾಧ್ಯತೆಗಳಿವೆ.
ಮಂಗಳೂರು
ಇಂದಿನಿಂದ ವೈದ್ಯಕೀಯ ವೃತ್ತಿ ಆರಂಭಿಸಬೇಕಾಗಿದ್ದ ಮಂಗಳೂರಿನ ಯುವ ವೈದ್ಯೆ ಡಾ.ಸ್ವಾತಿ ಶೆಟ್ಟಿ ಮಲಗಿದ್ದಲ್ಲೇ ಸಾವು
ಮಂಗಳೂರು : ಇಂದಿನಿಂದ ವೈದ್ಯ ವೃತ್ತಿಗೆ ಹಾಜರಾಗಬೇಕಾಗಿದ್ದ ಯುವ ದಂತ ವೈದ್ಯೆ ಡಾ. ಸ್ವಾತಿ ಶೆಟ್ಟಿ (24) ಎಂಬವರು ಹಠತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ ನಡೆದಿದೆ.
ನಗರದ ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಎ.16ರಂದು ನಗರದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದ ಸ್ವಾತಿ ಸೋಮವಾರ ಸಂಜೆ ಮನೆಯಿಂದ ಪಾಂಡೇಶ್ವರದ ಪಿಜಿಗೆ ಬಂದು ತಂಗಿದ್ದರು.
ರಾತ್ರಿ ತಾಯಿ ತಂದೆ ಜತೆಗೆ ಮೊಬೈಲ್ ನಲ್ಲಿ ಮಾತನಾಡಿ ಬಳಿಕ ವಿಪರೀತ ತಲೆನೋವು ಎಂದೇಳಿ ಜತೆಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದರು.
ಪಕ್ಕದ ಸಹಪಾಠಿ ಕೂಡ ತಲೆನೋವು ಇರೋದ್ರಿಂದ ತೊಂದರೆ ಕೊಡೋದು ಬೇಡ ಎಂದು ಎಚ್ಚರಿಸಲಿಲ್ಲ ಎನ್ನಲಾಗಿದೆ. ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು ಪಿಜಿ ಸೂಪರ್ ವೈಸರ್ ಮಾಹಿತಿ ನೀಡಿ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸುವಷ್ಟರಲ್ಲಿ ಸ್ವಾತಿಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಅವಿವಾಹಿತೆಯಾಗಿರುವ ಸ್ವಾತಿ ಶೆಟ್ಟಿ ಅವರಿಗೆ ಪೋಷಕರು ಈ ವರ್ಷಾಂತ್ಯದೊಳಗೆ ಮದುವೆ ಮಾಡುವ ತಯಾರಿ ನಡೆಸಿದ್ದರು. ಅಪರೂಪಕ್ಕೊಮ್ಮೆ ತಲೆನೋವು ಬಿಟ್ರೆ ಬೇರೆ ಯಾವುದೇ ತೊಂದರೆ ಇರಲಿಲ್ಲ ಎನ್ನಲಾಗಿದೆ.
ಮಂಗಳೂರು
Padmaraj R Poojary-ನಾರಾಯಣ ಗುರುಗಳು ಸ್ಥಾಪಿಸಿದ ಕ್ಷೇತ್ರದಲ್ಲಿ 27 ವರ್ಷ ಸೇವೆ ಸಲ್ಲಿಸಿದವ ಕಾಂಗ್ರೆಸ್ ನ ಅಭ್ಯರ್ಥಿಯಾಗುತ್ತಲೇ ಗುರುಗಳ ಪ್ರತಿಮೆಗೆ ಪ್ರಧಾನಿ ಹಾರ ಹಾಕಿದ್ದಾರೆ. ಜಿಲ್ಲೆಗೆ 14 ಸಲ ಭೇಟಿ ನೀಡಿರುವ ಅವರಿಗೆ ಗುರುಗಳು ಸ್ಥಾಪನೆ ಮಾಡಿದ ಕುದ್ರೋಳಿ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ : ಪದ್ಮರಾಜ್ ಆರ್ ಪೂಜಾರಿ
ಪ್ರಧಾನಮಂತ್ರಿಗಳು 14 ಸಲ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಆದರೆ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಅವರಿಗೆ ಅದನ್ನು ಬಿಜೆಪಿಯವರು ಹೇಳಿರಲಿಕ್ಕಿಲ್ಲ. ಆದರೆ ಕಾಂಗ್ರೆಸ್ನ ಅಭ್ಯರ್ಥಿ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರದಲ್ಲಿ 27 ವರ್ಷಗಳಿಂದ ಕೆಲಸ ಮಾಡಿದವರು. ಅವನಿಗೆ ರಾಷ್ಟ್ರೀಯ ಪಕ್ಷವೊಂದು ಅವಕಾಶನ್ನು ಕೊಟ್ಟಿದೆ ಎನ್ನುವಾಗ ಇಲ್ಲಿನ ಬಿಜೆಪಿಯವರು ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳನ್ನು ನೆನಪಿಸುತ್ತಾರೆ. ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕುವಂತಹ ಕೆಲಸವನ್ನು ಅವರು ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಟೀಕಿಸಿದ್ದಾರೆ .
ಕೋಟಿ ಚೆನ್ನಯರ ವಂಶಸ್ಥರು
ನಾವು ನಾರಾಯಣ ಗುರುಗಳ ಕುಲದಿಂದ ಬಂದವರು. ಕೋಟಿ ಚೆನ್ನಯರ ವಂಶಸ್ಥರು. ತುಳುನಾಡು ದೈವ ದೇವರುಗಳ ನೆಲೆಬೀಡು. ಬಹಳಷ್ಟು ಪೂಜೆ ಪುರಸ್ಕಾರಗಳನ್ನು ಮಾಡುತ್ತಾರೆ. ಸುಮಾರು ಮಸೀದಿಗಳಿದೆ, ಚರ್ಚ್ ಗಳಿವೆ. ಇಲ್ಲಿ ಪೂಜೆ ನಡೆಯುತ್ತದೆ. ಜನರಿಗೆ ದೇವರು ಯಾವುದು ಸರಿ ಯಾವುದು ತಪ್ಪು ಅನ್ನುವುದನ್ನು ತಿಳಿಯುವ ಶಕ್ತಿ ದೇವರು ಕೊಟ್ಟಿದ್ದಾನೆ. ದೇವರು ಜನರ ಮೂಲಕ ಇದಕ್ಕೆ ಸರಿಯಾದ ಉತ್ತರ ಎ. 26ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಡುತ್ತಾನೆ.
Rally ಕ್ಯಾನ್ಸಲ್ ಮಾಡಿದ್ದೇಕೆ ?
ಭಾರತ ದೇಶದ ಪ್ರಧಾನ ಮಂತ್ರಿಗಳಾಗಿ ಮೋದಿಯವರು ಮಂಗಳೂರಿಗೆ ಬಂದಿರುವುದನ್ನು ನಾವು ಸ್ವಾಗತಿಸುತ್ತೇವೆ. ನಿನ್ನೆ ಅವರು ಇಲ್ಲಿ ಬಂದು Rally ಮಾಡಬೇಕಿತ್ತು ಅದನ್ನು ಅವರು ಕ್ಯಾನ್ಸಲ್ ಮಾಡಿದ್ದಾರೆ. ಅದಕ್ಕೆ ಕಾರಣ ಮತ್ತು ಉದ್ದೇಶ ಏನು ಎನ್ನುವುದನ್ನು ಅವರೇ ಹೇಳಬೇಕು.
33 ವರ್ಷಗಳ ಸಾಧನೆಯೇನು?
33 ವರ್ಷಗಳಲ್ಲಿ ಬಿಜೆಪಿಯ ಸಂಸದರು ನಮ್ಮನ್ನು ಪಾರ್ಲಿಮೆಂಟ್ನಲ್ಲಿ ರೆಪ್ರೆಸೆಂಟ್ ಮಾಡ್ತಾ ಇದ್ದಾರೆ. 33 ವರ್ಷಗಳಲ್ಲಿ ಇವರು ಮಾಡಿದ ಸಾಧನೆಗಳು ಏನು? ಬರೀ ಜಾತಿ ಧರ್ಮದ ಹೆಸರಿನಲ್ಲಿ ಎಷ್ಟೋ ಹಿಂದುಳಿದ ವರ್ಗಗಳ ಜನರ ಮನೆಗಳನ್ನು ಒಡೆದು ಅನಾಥರನ್ನಾಗಿ ಮಾಡಿದ್ದಾರೆ. ಅದು ಅಲ್ಲದಿದ್ದರೆ ಅವರು ಅದನ್ನು ನಿನ್ನೆ ಹೇಳಬೇಕಿತ್ತು. ಆದರೆ ಹೇಳಲಿಲ್ಲ.
ಪ್ರಧಾನ ಮಂತ್ರಿಯವರು ನಿನ್ನೆ ಇಲ್ಲಿಗೆ ಭೇಟಿ ನೀಡಿದ ಸುಸಂದರ್ಭ ಬಿಜೆಪಿ ನಾಯಕರು ಇಲ್ಲಿಯ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿರುತ್ತಾರೆ. ಮೋದಿಯವರಿಗೆ ರಾಜಕೀಯವಾಗಿ ನಾರಾಯಣ ಗುರುಗಳನ್ನು ಬಳಸುವುದನ್ನು ಬಿಟ್ಟರೆ, ನಿಜವಾಗಿ ನಾರಾಯಣ ಗುರುಗಳ ತತ್ತ್ವ ಆದರ್ಶಗಳನ್ನು ಜಗತ್ತಿಗೆ ತಿಳಿಸುವುದು ಅಗತ್ಯವಿದೆ. ಇದರ ಬಗ್ಗೆ ಅವರಿಗೆ ಕಾಳಜಿ ಇಲ್ಲ.
ಜಿಲ್ಲೆಗೆ ಆಗಮಿಸಿದ ಪ್ರಧಾನ ಮಂತ್ರಿಗಳಿಂದ ತಾವು ನಿರಂತರವಾಗಿ 33 ವರ್ಷಗಳಿಂದ ಗೆಲ್ಲಿಸಿದ ಬಿಜೆಪಿ ಸಂಸದರು. ಜನರಿಗೆ ಏನು ಮಾಡಿದ್ದಾರೆ, ಎಷ್ಟು ಉದ್ಯೋಗ ಒದಗಿಸಿದ್ದಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಜನರು ಉತ್ತರ ನಿರೀಕ್ಷಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಟ್ಯಾಕ್ಸ್ ಕಟ್ಟುವಂತಹ ಜಿಲ್ಲೆಯಾಗಿದ್ದು, ಇವತ್ತು ಮೋದಿಯವರು ಜನರ ನಿರೀಕ್ಷೆಗೆ ತುಟ್ಟಿ ಬಿಚ್ಚದೆ ಹೋಗಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಮಂಗಳೂರು
Congress roadshow-ಉಳ್ಳಾಲದಲ್ಲಿ ರಾರಾಜಿಸಿದ ಕಾಂಗ್ರೆಸ್ ರೋಡ್ ಶೋ; ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜನತೆ
ಉಳ್ಳಾಲ: ರೋಡ್ ಶೋ ಮೂಲಕ ನಡೆಸಿದ ಚುನಾವಣಾ ಪ್ರಚಾರ ಕಾರ್ಯ ಕಾಂಗ್ರೆಸ್’ಗೆ ಹೊಸ ಉತ್ಸಾಹ ತುಂಬುವಲ್ಲಿ ಸಫಲವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಸಂಜೆ ಹೊತ್ತಿಗೆ ಮುಡಿಪು ತಲುಪಿದ ರೋಡ್ ಶೋಗೆ ಕಾರ್ಯಕರ್ತರು, ಮುಖಂಡರು ಭರ್ಜರಿ ಸ್ವಾಗತ ಕೋರಿದರು. ಅಲ್ಲಿ ಪ್ರಚಾರ ಕಾರ್ಯ ನಡೆಸಿ, ಪೂಪಾಡಿಕಲ್ಲು, ನರಿಂಗಾನ, ಕೈರಂಗಳ, ಮಂಜನಾಡಿ, ನಾಟೆಕಲ್ಲು, ಕಿನ್ಯಾ, ಮೀನಾದಿ, ಮಿಂಪ್ರಿ ಮೊದಲಾದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.
ಅಭ್ಯರ್ಥಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೂಮಾಲೆ ಹಾಕಿ ಗೆಲುವಿಗೆ ಹಾರೈಸಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳುತ್ತಿದ್ದರೆ ತುಂಬಿದ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು.
-
ಪುತ್ತೂರು1 day ago
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
-
ದಕ್ಷಿಣ ಕನ್ನಡ2 hours ago
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ; ಬಂಟ್ವಾಳದಲ್ಲಿ ಬಿರುಸಿನ ಪ್ರಚಾರ
-
ಸಾಮಾಜಿಕ ಮಾಧ್ಯಮ6 hours ago
Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ