Connect with us

ಬಿಗ್ ನ್ಯೂಸ್

Indira Canteen | ಹಸಿದ ಹೊಟ್ಟೆ ತಣಿಸುವ ಸಿದ್ದು ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟಿನ್’ ಸಿಬ್ಬಂದಿಗೆ 6 ತಿಂಗಳಿನಿಂದ ವೇತನವಿಲ್ಲ : ಪ್ರತಿಭಟನೆ ನಂತರ ಒಂದು ತಿಂಗಳ ವೇತನ ಪಾವತಿ : ಬಡವರ ಹಸಿವು ನೀಗಿಸುವ ಸಿಬ್ಬಂದಿಗಳ ಮನೆಯಲ್ಲಿ ಪರದಾಡ : ಪುತ್ತೂರು ಮತ್ತು ಬಂಟ್ವಾಳದಲ್ಲಿ ಪ್ರತಿದಿನ ಎಷ್ಟು ಹಸಿದ ಹೊಟ್ಟೆಗಳಿಗೆ ನೆರವಾಗುತ್ತೇ ಗೊತ್ತೇ..?

Ad Widget

Ad Widget

ಕೊರೊನಾ ಕಾಲದಲ್ಲಿ ನಿಯಮಗಳನ್ನು ಪಾಲಿಸಿಕೊಂಡು ತೆರೆದಿದ್ದ ಸಂದರ್ಭ ಬಡವರ ಹಸಿದ ಹೊಟ್ಟೆಗಳನ್ನು ತಣಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್‌ (Indira Canteen) ನೌಕರರ ವೇತನ ಸಮಸ್ಯೆ ಇನ್ನೂ ಕಗ್ಗಂಟಾಗಿಯೇ ಇದೆ. ಮೂರು ದಿನ ಕ್ಯಾಂಟೀನ್‌ ಬಂದ್‌ ಮಾಡಿ ಪ್ರತಿಭಟಿಸಿದ ಕಾರಣ ಒಂದು ತಿಂಗಳ ವೇತನವನ್ನೇನೋ ಪಾವತಿಸಿದ್ದಾರೆ. ಆದರೆ ಐದು ತಿಂಗಳ ಪಾವತಿ ಇನ್ನೂ ಬಾಕಿ ಇದೆ.

Ad Widget

Ad Widget

Ad Widget

Ad Widget

ಪುತ್ತೂರು ಮಿನಿ ವಿಧಾನಸೌಧ ಹಾಗೂ ಬಿ.ಸಿ.ರೋಡ್‌ನ ಮಿನಿ ವಿಧಾನಸೌಧದ ಪಕ್ಕದಲ್ಲೇ ಕ್ಯಾಂಟೀನ್‌ ಆರಂಭಗೊಂಡ ಸಂದರ್ಭ ಇಲ್ಲಿ ಸೇರಿದ್ದ ನೌಕರರಿಗೆ ಆರಂಭದಿಂದಲೇ ಸರಿಯಾಗಿ ತಿಂಗಳ ಮೊದಲ ವಾರ ವೇತನ ದೊರಕುತ್ತಿರಲಿಲ್ಲ. ಒಂದು ಬಾರಿ ಪ್ರತಿಭಟನೆ ನಡೆಸಿ ಸುದ್ದಿಯಾದ ವೇಳೆ ಗುತ್ತಿಗೆ ವಹಿಸಿಕೊಂಡ ಏಜೆನ್ಸಿಯವರು ಪಾವತಿ ಮಾಡಿದ್ದು ಬಿಟ್ಟರೆ, ಮತ್ತೆ ಅದೇ ಸಮಸ್ಯೆ.

Ad Widget

Ad Widget

Ad Widget

ಮನೆ ಮಂದಿಗೆ ಅಕ್ಕಿ, ಬೇಳೆ ಕೊಂಡು ಹೋಗಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೆ, ಏಜೆನ್ಸಿಯವರನ್ನು ಕೇಳಿದಾಗ ನೀವು ಡಿ.ಸಿ.ಗೆ ದೂರು ನೀಡಿ ಎಂದು ಉತ್ತರ ನೀಡಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಕ್ಯಾಂಟೀನ್‌ ನೌಕರರು ಕಂಗಾಲಾಗಿದ್ದಾರೆ.

Ad Widget

”ಕೊರೊನಾ ಬಂದಾಗಲೂ ನಾವು ಕ್ಯಾಂಟೀನ್‌ ತೆರೆದಿದ್ದು, ಸೇವೆ ನೀಡಿದ್ದೆವು. ಕ್ಯಾಂಟೀನ್‌ ಆರಂಭದ ದಿನದಿಂದ ಇದುವರೆಗೂ ಸರಿಯಾದ ವೇತನ ದೊರಕುತ್ತಿಲ್ಲ. ಅದರಲ್ಲೂ ನಮಗೆ ಆರು ತಿಂಗಳಿಂದ ಸರಿಯಾದ ವೇತನವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ನ.30ರಿಂದ ಮೂರು ದಿನ ನಾವು ಕ್ಯಾಂಟೀನ್‌ ಬಂದ್‌ ಮಾಡಿದ್ದೆವು. ಇದೀಗ ಒಂದು ತಿಂಗಳ ಸಂಬಳವನ್ನು ಹಾಕಿದ್ದು, ಇನ್ನು ಐದು ತಿಂಗಳ ವೇತನ ಬಾಕಿ ಇದೆ. ಆದಾಗ್ಯೂ ನಮ್ಮ ಹಾಗಿರುವ ಬಡ ಜನರಿಗೋಸ್ಕರ ನಾವು ಕ್ಯಾಂಟೀನ್‌ ತೆರೆದಿದ್ದೇವೆ”ಹೀಗೆಂದವರು ಬಿ.ಸಿ.ರೋಡ್‌ ಆಡಳಿತ ಸೌಧದ ಪಕ್ಕದಲ್ಲೇ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್‌ ನೌಕರ ಆನಂದ ಪೂಜಾರಿ.

Ad Widget

Ad Widget

ಪುತ್ತೂರು , ಬಿ.ಸಿ. ರೋಡ್‌ನಲ್ಲಿರುವ ಕ್ಯಾಂಟೀನ್‌ ನೌಕರರಷ್ಟೇ ಅಲ್ಲ, ಹಲವೆಡೆ ಇಂದಿರಾ ಕ್ಯಾಂಟೀನ್‌ ನೌಕರರಿಗೆ ಸರಿಯಾದ ವೇತನ ಬಂದಿಲ್ಲ. ಮೊನ್ನೆ ಪ್ರತಿಭಟನಾರ್ಥವಾಗಿ ಬಂದ್‌ ಮಾಡಿದ ಕಾರಣ ಇದರ ಗುತ್ತಿಗೆ ನಿರ್ವಹಿಸುವವರು ಒಂದು ತಿಂಗಳ ವೇತನ ನೀಡಿ ನೀವು ಬಂದ್‌ ಮಾಡಬೇಡಿ, ಎಂದಿದ್ದಾರೆ. ಆದರೆ ಐದು ತಿಂಗಳ ವೇತನ ಒಮ್ಮೆಗೇ ಸಿಗುವುದು ಡೌಟು ಎಂಬ ಅನುಮಾನ ಅವರಿಗೂ ಇದೆ.

ಪುತ್ತೂರು ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳೊಂದಿಗೆ ಮಾಜಿ ಶಾಸಕಿ ಶಕುಂತಲ ಶೆಟ್ಟಿ ಮಾತುಕತೆ

ಇಲ್ಲಿಗೆ 10 ರೂ.ಗೆ ಊಟ, 5 ರೂ.ಗೆ ತಿಂಡಿ ಸೇವಿಸಲು ಬರುವವರು ಬಡವರು. ಹೀಗಾಗಿ ಅವರಿಗೆ ತೊಂದರೆ ಆಗಬಾರದು ಎಂಬ ಕಳಕಳಿಯೂ ನಮಗಿದೆ ಎನ್ನುತ್ತಾರೆ ಇಲ್ಲಿನ ನೌಕರರು.

ಪುತ್ತೂರು, ಬಂಟ್ವಾಳದಲ್ಲಿ ಎಷ್ಟು ಹಸಿದ ಹೊಟ್ಟೆಗಳಿಗೆ ನೆರವಾಗುತ್ತಿದೆ ಗೊತ್ತೇ..? : ಪುತ್ತೂರಿನಲ್ಲಿ 150 ವಿದ್ಯಾರ್ಥಿಗಳು ಸೇರಿ 400 ಜನರಷ್ಟು ಪ್ರತಿದಿನ ಊಟ ಮತ್ತು ತಿಂಡಿ ಸೇವಿಸುತ್ತಾರೆ. ಮೂವರು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಂಟ್ವಾಳ ಇಂದಿರಾ ಕ್ಯಾಂಟೀನ್‌ ಗೆ ಪ್ರತಿದಿನ 300ರಷ್ಟು ಮಂದಿ ಆಗಮಿಸಿ ಊಟ, 350 ಮಂದಿ ತಿಂಡಿ ಸೇವಿಸುತ್ತಾರೆ. ನಾಲ್ವರು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಒಳಗೆ ಅಡುಗೆ ಮನೆಯಲ್ಲಿ ಕೆಲವೊಮ್ಮೆ ವಿದ್ಯುತ್‌ ಶಾಕ್‌ ಕೂಡ ಬರುತ್ತಿದ್ದ ವೇಳೆ ನಾವು ಕೆಲಸ ಮಾಡಿದ್ದೇವೆ ಎಂದು ಇಲ್ಲಿನ ನೌಕರರು ಅಳಲು ತೋಡಿಕೊಂಡರು.

ಹೋಟೆಲ್‌ನವರ ಮಾನವೀಯತೆ: ಪುತ್ತೂರು ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದ ಕೆಲವು ವಿದ್ಯಾರ್ಥಿಗಳು ಬುಧವಾರ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆ ಬಂದು ಹಿಂತಿರುಗಬೇಕಾಯಿತು. ಈ ನಡುವೆ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆಂದು ಬಂದ ಕೆಲವು ವಿದ್ಯಾರ್ಥಿಗಳಿಗೆ ಪಕ್ಕದ ಶಿವಪ್ರಸಾದ್‌ ಹೋಟೆಲ್‌ನವರು 20 ರೂ. ರಿಯಾಯಿತಿ ದರದಲ್ಲಿ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

Click to comment

Leave a Reply

ಬಿಗ್ ನ್ಯೂಸ್

Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ  ಮದುವೆ ನಿರಾಕರಿಸಿದ ವಧು

Ad Widget

Ad Widget

Bride refuses Marriage in hall ಚಿತ್ರದುರ್ಗ: ನಿಗದಿಯಾಗಿದ ಮದುವೆಗಳು ಮುರಿದು ಬೀಳುವುದು ಸಹಜ . ಆದರೇ ಮದುವೆ ಮಟಂಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಮದುವೆಗಳು ಮುರಿದು ಬೀಳುವುದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರ. ಆದರೇ ಇಂತಹದೊಮದು ಸಿನಿಮೀಯ ಘಟನೆ ಚಿತ್ರದುರ್ಗಾದಿಂದ ವರದಿಯಾಗಿದೆ. ಈ ಘಟನೆ ನೋಡಿ ಮದುವೆ ಬಂದವರು ಹೌಹಾರಿದ್ದಾರೆ.

Ad Widget

Ad Widget

Ad Widget

Ad Widget

ಇನ್ನೇನು ವರ  ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಾಗ  ವಧು ತೆಗೆದುಕೊಂಡ  ಈ ನಿರ್ಧಾರದಿಂದ ಮದುವೆ ಮನೆಯಲ್ಲಿ ಸೇರಿದ್ದ ಜನರಿಗೆ ಎಲ್ಲರಿಗೂ ಒಂದು ರೀತಿಯ ಶಾಕ್ ನೀಡಿದಂತೆ ಆಗಿದೆ.  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ವಿವಾಹವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ ಆಗಿದೆ. ವರ ತಾಳಿ ಕಟ್ಟುವಾಗ ವಧು  ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Ad Widget

Ad Widget

Ad Widget

ವಧುವಿಗೆ ಮದುವೆಗೆ ಇಷ್ಟವಿರಲಿಲ್ಲ .ಮನೆಯವರ ಒತ್ತಾಯಕ್ಕೆ ಮಣಿದು ಆಕೆ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾಳೆ ಅದರೆ ಮುಹೂರ್ತದ ವೇಳೆ ಮನ ಬದಲಾಯಿಸಿದ ವಧು ತಾಳಿ ಕಟ್ಟುವ ವೇಳೆ ಕಯ ಅಡ್ಡ ಹಿಡಿದು ತನ್ನ ಅಸಮ್ಮತಿ ಸೂಚಿಸಿದ್ದಾಳೆ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಕೈ ಕೊಟ್ಟ ವಧುವಿನ ಬಗ್ಗೆ ವರನ ಮನೆಯವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ.

Ad Widget

ಹುಡುಗಿ ಮದುವೆಗೊಪ್ಪದಿರುವದನ್ನು ಗಮನಿಸಿದ ಎರಡು  ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ದಾರೆ. ಆದರೇ ಗಟ್ಟಿ ಮನಸ್ಸು ಮಾಡಿದ ವಧು  ಮದುವೆಯಾಗಲು ನಿರಾಕರಿಸಿದ್ದಾಳೆ.   ಹೀಗಾಗಿ  ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

Ad Widget

Ad Widget

ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Continue Reading

ರಾಜ್ಯ

ಭೂತ ಕೋಲ ಹೆಸರಿನಲ್ಲಿ ಟ್ರಾವೆಲ್‌ ಏಜನ್ಸಿಯಿಂದ ಟೂರ್ ಪ್ಯಾಕೇಜ್‌ ‌ : ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ : ಹಲವರ ವಿರೋಧ – ಕೆಲವರ ಸಮರ್ಥನೆ | ದೈವಾರಾಧನೆ ಟೂರ್‌ ಪ್ಯಾಕೇಜ್‌ ಭಾಗವಾಗುವುದು ತಪ್ಪೇ? ಸರಿಯೇ?   

Ad Widget

Ad Widget

ಮಂಗಳೂರು ಡಿಸೆಂಬರ್‌ 08: ದೈವಾರಾಧನೆ ದಕ್ಷಿಣ ಕನ್ನಡ ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ   ಜನರ ಬದುಕಿನಲ್ಲಿ ಹಾಸು ಹೊಕ್ಕಿದ್ದು ಇದನ್ನು ಇಲ್ಲಿ ತಲೆ ತಲಾಂತರದಿಂದ ಶ್ರದ್ಧೆ, ಭಯ ಭಕ್ತಿಯಿಂದ ಆರಾಧಿಸಲಾಗುತ್ತದೆ. ನಂಬಿದವನ ಕೈಯನ್ನು ದೈವ ಬಿಡದು ಎನ್ನುವುದು ಇಲ್ಲಿನ ದೈವ ಭಕ್ತರು ಅನತಿ ಕಾಲದಿಂದ ನಂಬಿಕೊಂಡು ಬಂದಿರುವ ನುಡಿ.   ಕೇವಲ 3 ಜಿಲ್ಲೆಯಲ್ಲಷ್ಟೆ ಸೀಮಿತವಾಗಿದ್ದ ಈ ಆಚರಣೆ, ವಿಶಿಷ್ಟ ಸಂಸ್ಕೃತಿ ಕನ್ನಡದ ಬ್ಲಾಕ್‌ ಬ್ಲಾಸ್ಟರ್‌ ಮೂವಿ  ಕಾಂತಾರ ಸಿನಿಮಾದಿಂದ ನಾಡಿನ ಉದ್ದಗಲಕ್ಕೂ ಪರಿಚಯವಾಯಿತು . ಆದರೇ ಈಗ ಇದೇ ಈ ಆರಾಧನೆಗೆ ಮುಳುವಾದಂತೆ ಕಾಣುತ್ತಿದೆ.

Ad Widget

Ad Widget

Ad Widget

Ad Widget

ಕಾಂತಾರ ಸಿನಿಮಾ ವೀಕ್ಷಿಸಿದವರಿಗೆ ದೈವದ ಬಗ್ಗೆ ಕುತೂಹಲ ಅದನ್ನು ವೀಕ್ಷಿಸುವ ಹಂಬಲ ಹೆಚ್ಚಾಗಿದೆ. ಬಹುತೇಕರಿಗೆ ದೈವರಾಧನೆಯ ಮಹತ್ವ,  ಅದರ ಹಿಂದೆ ಅಡಕವಾಗಿರುವ ದೈವಿಕ ಭಾವ, ದೊಡ್ಡ ಒಂದು ಜನ ಸಮೂಹ ಅದನ್ನು ತುಂಬು ಶ್ರದ್ದೆ ಮತ್ತು ಭಕ್ತಿಯಿಂದ ಆರಾಧಿಸಕೊಂಡು ಬರುತ್ತಿರುವ ಬಗ್ಗೆ ಗೊತ್ತಿಲ್ಲ. ಹೀಗಾಗಿ ಬಹುತೇಕರಿಗೆ ಇದೊಂದು ಪ್ರೇಕ್ಷಣಿಯ ವಿಚಾರ ಎನಿಸಿದೆ.

Ad Widget

Ad Widget

Ad Widget

ಪ್ಯಾಕೇಜ್‌ ನಲ್ಲಿ ಏನಿದೆ?

Ad Widget

 ಇದನ್ನೆ ಬಂಡವಾಳ ಮಾಡಿಕೊಂಡಿರುವ ಟ್ರಾವೆಲ್‌ ಏಜನ್ಸಿಯೊಂದು ಭೂತ ಕೋಲ ಹೆಸರಿನಲ್ಲಿ ಟ್ರಿಪ್‌ ಪ್ಯಾಕೇಜ್‌ ಆಫರ್‌ ನೀಡಿದೆ. ದೈವಾರಾಧನೆ ಅಥವಾ ಭೂತ ಕೋಲ ಹೇಗೆ ನಡೆಯುತ್ತದೆ..? ದೈವ ನರ್ತಕರು ಹೇಗೆ ಸಿಂಗಾರಗೊಳ್ಳುತ್ತಾರೆ? ಎನ್ನುವ ಕುತೂಹಲ ಇರುವವರಿಗೆ ಭೂತ ಕೋಲವನ್ನು ತೋರಿಸುವುದು ಈ ಪ್ಯಾಕೇಜ್‌ ನ ಉದ್ದೇಶ . ‘ಭೂತ ಕೋಲ’ A night with ancient spirits  ಎಂದು ಈ ಟೂರು ಪ್ಯಾಕೇಜ್‌ಗೆ ಏಜೆನ್ಸಿ ಹೆಸರಿಟ್ಟಿದೆ.   ಕರಾವಳಿಯ ಕಲೆ, ಸಂಸ್ಕೃತಿ ವೀಕ್ಷಣೆಗೆ ಈ ಪ್ಯಾಕೇಜ್‌ ಎಂದು ಏಜೆನ್ಸಿ ಹೇಳಿಕೊಂಡಿದೆ. ಅದರಲ್ಲಿ ದೈವಾರಾಧನೆ ಜೊತೆ ಪ್ರವಾಸಿತಾಣಗಳನ್ನು ತೋರಿಸುವುದಾಗಿ ಪೋಸ್ಟ್ ಹಾಕಲಾಗಿದ್ದು, ಪ್ರತಿ ವ್ಯಕ್ತಿಗೆ 2,899ರೂ. ಟಿಕೆಟ್ ದರ ವಿಧಿಸಿದೆ

Ad Widget

Ad Widget

2,899 ರೂಪಾಯಿ ಕೊಟ್ಟರೆ ಈ ಟ್ರಿಪ್ ಪ್ಯಾಕೆಜ್ ನಲ್ಲಿ ಕಂಬಳ, ಭೂತಕೋಲ, ಟ್ರೆಕ್ಕಿಂಗ್ ಸೌಲಭ್ಯ ನೀಡುವುದಾಗಿ ಪೋಸ್ಟರ್ ಮಾಡಿದ್ದಾರೆ. ಈ ಟ್ರಾವೆಲ್‌ ಆಫರ್‌ ಪೋಸ್ಟರ್ ವೈರಲ್‌ ಆಗುತ್ತಿದ್ದಂತೆ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ ಎಂದು ತುಳುನಾಡಿನ ದೈವಾರಾಧಕರು ಸಿಡಿದು ದೇವರ ಹೆಸರಿನಲ್ಲಿ ಇಂತಹ ವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ನಂಬಿಕೆಯ ಹೆಸರಿನಲ್ಲಿ ಅವರು ಬ್ಯುಸಿನೆಸ್‌ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೈವ ಕೋಲ, ದೈವಾರಾಧನೆ, ಭೂತಾರಾಧನೆ ಇದು ನಮ್ಮ ನಂಬಿಕೆ. ಧಾರ್ಮಿಕ ಆಚರಣೆ. ಇದು ಯಾವುದೇ ಸಾಂಸ್ಕೃತಿಕ ಚಟುವಟಿಕೆ ಅಲ್ಲ. ಪ್ರವಾಸಿಗರು ದಂಡು ಬಂದು ನೋಡುವ ಉತ್ಸವ ಅಲ್ಲ. ಎಂದಿಗೂ ಇದನ್ನು ಬ್ಯುಸಿನೆಸ್‌ ಮಾಡಲು ಅವಕಾಶ ನೀಡಲ್ಲ ಎಂದು ತುಳುನಾಡಿನ ದೈವಾರಾಧಕರು ಟ್ರಾವೆಲ್‌ ಏಜೆನ್ಸಿ ವಿರುದ್ಧ ಕಿಡಿಕಾರಿದ್ದಾರೆ.

ಪೋಸ್ಟರ್‌ ಡಿಲಿಟ್‌

ಇನ್ನು ದೈವ ಕೋಲದ ಹೆಸರಲ್ಲಿ ಟೂರ್ ಪ್ಯಾಕೇಜ್‌ ಆಫರ್‌ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ. ಸಂಬಂಧಿಸಿದ ಟ್ರಾವೆಲ್‌ ಏಜೆನ್ಸಿ ತಮ್ಮ ಸಾಮಾಜಿಕ ಜಾಲತಾಣದಿಂದ ಈ ಪೋಸ್ಟರ್‌ ಅನ್ನು ಡಿಲೀಟ್‌ ಮಾಡಲಾಗಿದೆ.

ಪ್ಯಾಕೇಜ್‌ ಸಮರ್ಥಕರು ಏನೂ ಹೇಳುತ್ತಾರೆ ?

 ಆದರೇ ಇದೆ ವೇಳೆ ಈ ಟೂರ್‌ ಪ್ಯಾಕೇಜ್‌ ಬೆಂಬಲಕ್ಕೂ ಹಲವರು ನಿಂತಿದ್ದಾರೆ. ದೇಶದ ಪ್ರಸಿದ್ದ ದೇಗುಲವಾದ ತಿರುಪತಿ ತಿರುಮಲ ದೇವಸ್ಥಾನಕ್ಕೂ ಟೂರ್‌ ಪ್ಯಾಕೇಜ್‌ ಇದೆ . ಇದೆ ರೀತಿ ದೇಶದ ಬಹುತೇಕ ಎಲ್ಲ ದೇವಸ್ಥಾನಗಳ ಬೇಟಿಗೂ ಹೋಗುವವರಿಗೆ ವಿವಿಧ ಏಜೆನ್ಸಿಗಳು  ಟೂರ್‌ ಪ್ಯಾಕೇಜ್‌  ಘೋಷಿಸಿವೆ. ಅಲ್ಲಿಗೆ ಬರುವ ಯಾತ್ರಾರ್ಥಿಗಳು ದೇವರ ದರುಶನ ಪಾಡಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿ ತೆರಳುತ್ತಾರೆ. ಇದೆ ವ್ಯವಸ್ಥೆ ದೈವಾರಾಧನೆ ಟೂರ್‌ ಪ್ಯಾಕೇಜ್‌ ನವರು ಕಲ್ಪಿಸಿದರೇ ಅದರಲ್ಲಿ ತಪ್ಪೇನಿದೆ ? ಎನ್ನುವುದು ಕೆಲವರ ವಾದ. ದೈವರಾಧನೆ ವೀಕ್ಷಣೆಗೆಂದು ಬರುವವರು ಭೂತ ಕೋಲವನ್ನು ನೋಡಿ ಪ್ರಾರ್ಥನೆ ಸಲ್ಲಿಸಿ ಹೋಗುವುದಿದ್ದರೇ ಅದಕ್ಕೆ ಅಡ್ಡಿ ಪಡಿಸುವುದು ಸರಿಯೇ ಎನ್ನುವುದು ಅವರ ವಾದ

ಇನ್ನು ದೈವರಾಧನೆಯ ಹೆಸರಿನಲ್ಲಿ ಅವರು  ದುಡ್ಡು ಮಾಡುತ್ತಾರೆ  ಎನ್ನುವ ವಾದ ವಿರೋಧ ವ್ಯಕ್ತಪಡಿಸುವ ಗುಂಪಿನದು. ಆದರೇ  ಅದೇ ಯಾತ್ರಾರ್ಥಿಗಳು ತಮ್ಮದೇ ವಾಹನದಲ್ಲಿ ಅಥಾವ ಸಾರ್ವಜನಿಕ ವಾಹನದಲ್ಲಿ ಬಂದು ಭೂತಕೋಲ ವೀಕ್ಷಿಸಿದರೆ ಆಗ ಕೂಡ ಹಣ ಖರ್ಚು ಆಗುವುದಿಲ್ಲವೇ ? ಬಹಳಷ್ಟು ಜನರಿಗೆ ಭೂತ ಕೋಲ ನೋಡಲು ಹೇಗೆ ಬರಬೇಕು ಎನ್ನುವ ಸ್ಪಷ್ಟ ಮಾಹಿತಿಯಿಲ್ಲ . ಅಂತಹವರಿಗೆ ಟೂರು ಏಜೆನ್ಸಿಯವರು ಮಾರ್ಗದರ್ಶಿ ಯಾಕಾಗಬಾರದು ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ.

 ಕೊರಗಜ್ಜ ದೈವದ ಕಾರಣೀಕತೆ ನಾಡಿನುದ್ದಕ್ಕೂ ಪಸರಿಸಿದ ಬಳಿಕ ಹೊರ ಜಿಲ್ಲೆಗಳಿಂದ ಬಹಳಷ್ಟು ಭಕ್ತರು ದೈವದ ಮೂಲಸ್ಥಾನವನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಆದರೇ ಇವರ ದಾರಿ ತಪ್ಪಿಸುವ ಕೆಲಸವನ್ನು ಬಹಳಷ್ಟು ಜನ ಮಾಡುತ್ತಿದ್ದು ಬೇರೆಲ್ಲೊ ಕೊರಗಜ್ಜನ ಆರಾಧನೆ ಮಾಡುವಲ್ಲಿಗೆ ಕರೆದುಕೊಂಡು ಹೋಗಿ  ಇದೇ ಮೂಲಸ್ಥಾನ ಎಂದು ನಂಬಿಸಿ ವಂಚಿಸುತ್ತಿರುವ ಹಣ ಪೀಕಿಸುತ್ತಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ.  ಹೀಗೆ ಭೂತ ಕೋಲ ವೀಕ್ಷಣೆಗೆ ಬರುವವರಿಗೆ  ಟೂರು ಏಜೆನ್ಸಿಯವರು ಭೂತ ಕೋಲವನ್ನು ತೋರಿಸುತ್ತೇನೆ ಈ ಮೂಲಕ ಇಲ್ಲಿನ  ಸಂಸ್ಕೃತಿಯನ್ನು ಹೊರ ಜಿಲ್ಲೆಯವರಿಗೆ ಪರಿಚಯಿಸುತ್ತೇನೆ ಎಂದರೆ ಅದು ತಪ್ಪಾಗುತ್ತದೆಯೇ ಎನ್ನುವುದು ಪರ ಇರುವವರ ವಾದ

ಬಹುತೇಕ ಪ್ರಸಿದ್ದ ಯಾತ್ರ ಕ್ಷೇತ್ರಗಳಲ್ಲಿ ವಿಐಪಿ ದರ್ಶನಕ್ಕೆ ಇಂತಿಷ್ಟು ಹಣ ಪಡೆದು ಶೀಘ್ರ ದೇವರ ದರುಶನಕ್ಕೆ ಅವಕಾಶ ಕಲ್ಪಿಸುವ ಪರಿಪಾಠವಿದೆ. ಇದನ್ನಾದರೂ ಒಂದು ರೀತಿಯಲ್ಲಿ ಹಣ ಮಾಡುವ ವ್ಯವಸ್ಥೆ ಎನ್ನಬಹುದು.  ಇಲ್ಲಿ ಅಂತಾಹ ಯಾವುದೇ ವ್ಯವಸ್ಥೆಯನ್ನು ಟೂರ್‌ ಪ್ಯಾಕೇಜ್‌ ನವರು ಘೋಷಿಸಿಲ್ಲ.. ಹೀಗಿರುವಾಗ ಏಜೆನ್ಸಿಯವರು ಸಂಸ್ಕೃತಿಯನ್ನು  ಹಾಳು ಮಾಡುತ್ತಾರೆ ಎಂದು ದೂರುವುದರಲ್ಲಿ ಅರ್ಥವಿಲ್ಲ ಎಮಬ ವಾದವನ್ನು ಅವರು ಮುಂದಿಡುತ್ತಾರೆ.

ಇನ್ನು ಭೂತಕೋಲ ಟೂರ್‌ ಪ್ಯಾಕೇಜ್‌ ನೊಟ್ಟಿಗೆ ಬೇರೆ ಪ್ರೇಕ್ಷಣಿಯ ಸ್ಥಳಗಳ ಸಂದರ್ಶನಕ್ಕೂ ಅವಕಾಶ  ಕಲ್ಪಿಸಿದ್ದಾರೆ ಇದರಿಂದ ಸಂಸ್ಕೃತಿಗೆ ಅಪಚಾರವಾಗುತ್ತಾದೆ ಎನ್ನುವವರು ಇಗಲೂ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ದೇಗುಲಕ್ಕೆ ಬರುವವರು ಬಳಿಕ ಬೀಚ್‌ ನಲ್ಲಿ ಮೋಜು ಮಸ್ತಿ ಮಾಡಿ ಹೋಗುವುದಿಲ್ಲವೇ ? ಎಂದು ಅವರು ಪ್ರಶ್ನಿಸುತ್ತಾರೆ

ಇನ್ನು ಟೂರ್‌ ಪ್ಯಾಕೇಜ್‌ ಮಾರ್ಕೇಟಿಂಗ್‌ ಗೆ ಏಜೆನ್ಸಿಯವರು ಬಳಸಿದ ಪೋಸ್ಟರ್‌ ಸಂಸ್ಕೃತಿಯನ್ನು ಅಣಕ ಮಾಡುವಂತಿದೆ. ಹೀಗಾಗಿ ಆತನ ಉದ್ದೇಶದ ಬಗ್ಗೆ ನಮಗೆ ಸಂಶಯವಿದೆ ಎಂಬ ವಾದವನ್ನು ಹಲವರು ಮುಂದಿಡುತ್ತಿದ್ದಾರೆ. ಆದರೇ ಇದೆ ಒಂದು ಕಾರಣಕ್ಕೆ ಇಡಿ ಟೂರ್‌ ಪ್ಯಾಕೇಜನ್ನು ದೂರುವುದು ಎಷ್ಟು ಸರಿ ? ಬಹುತೇಕ  ದೇವಸ್ಥಾನ ಸಂದರ್ಶನದ  ಟೂರ್‌ ಪ್ಯಾಕೇಜ್‌ ಗಳ ಪೋಸ್ಟರ್‌ ಗಳಲ್ಲೂ ಈ ಸಮಸ್ಯೆಯಿದೆ ಎನ್ನುವುದು ಪರ ಇರುವವರ ವಾದ  

ದೈವಾರಧಾನೆಗೆ ಎಲ್ಲೆಯ ಮಿತಿ ಇರಬಹುದು ಆದರೇ ಅದರ ಭಕ್ತರಿಗೆ ಎಲ್ಲೆಯಿಲ್ಲ. ಹೀಗಾಗಿ ಯಾವುದೇ ಭಾಗದವರು ಬಂದು ಇಲ್ಲಿಯ ಸಂಸ್ಕೃತಿ, ಆರಾಧಾನ ಪದ್ದತಿಗೆ ಚ್ಯುತಿಯಾಗದಂತೆ ನಡೆದುಕೊಂಡರೆ ಅವರಿಗೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ಟೂರ್‌ ಪ್ಯಾಕೇಜ್‌ ಆರಂಭಕ್ಕೂ ಮೊದಲೇ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ. ಪ್ಯಾಕೇಜ್‌ ಆರಂಭಗೊಂಡ ಬಳಿಕ ಒಂದೊಮ್ಮೆ ಅದರಲ್ಲಿ ದೋಷ ಕಂಡು ಬಂದರೇ ಆಗ ಅದನ್ನು ವಿರೋಧಿಸುವುದು ಸರಿ ಎನ್ನುತ್ತದೆ ಸಮರ್ಥಕರ ವರ್ಗ

Continue Reading

ರಾಜ್ಯ

 Elephant Arjun Dies ಗತಿಸಿದ  ಅರ್ಜುನ –  ಕ್ಯಾಪ್ಟನ್ ಇಲ್ಲದೆ  ದುಬಾರೆಗೆ ಮರಳಿದ ದು:ಖತಪ್ತ ಸಾಕಾನೆಗಳ ತಂಡ – ನಿಲ್ಲದ ವಿನುವಿನ ಕಣ್ಣೀರು

Ad Widget

Ad Widget

ಬೇಲೂರು: ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ನೋವು… ಮತ್ತೆ ವಾಪಸ್ ಬಾರದ ಲೋಕಕ್ಕೆ ಹೋದ ಕ್ಯಾಪ್ಟನ್‌ನನ್ನು ಬಿಟ್ಟು ಹೊರಡಬೇಕಾದ ದುಃಖ…   ತಾಲ್ಲೂಕಿನ ಬಿಕ್ಕೋಡು ವ್ಯಾಪ್ತಿಯಲ್ಲಿ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಹಾಗೂ ಮೂರು ಪುಂಡಾನೆಗಳನ್ನು ಸ್ಥಳಾಂತರ ಮಾಡಿದ ಸಾಕಾನೆಗಳ ತಂಡ ಬುಧವಾರ ದುಬಾರೆ ಆನೆ ಶಿಬಿರಕ್ಕೆ ವಾಪಸಾಗುವ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

Ad Widget

Ad Widget

Ad Widget

Ad Widget

ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ  ವೇಳೆ ಅರ್ಜುನ  ಆನೆ ಮೃತಪಟ್ಟಿದ್ದಾನೆ. ಅರ್ಜುನನ ಕೊರತೆ ಇಡೀ ಕ್ಯಾಂಪ್‌ನಲ್ಲಿ ಎದ್ದು ಕಾಣುತ್ತಿತ್ತು. ಅರ್ಜುನ ಆನೆ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಸಾಗಿತ್ತು. ಅರ್ಜುನ ಆನೆ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಾವುತ ವಿನುಗೆ ಅರ್ಜುನ ಆನೆ ಇನ್ನಿಲ್ಲ ಎಂಬುದು ಸಹಿಸಲು ಆಗುತ್ತಿಲ್ಲ.

Ad Widget

Ad Widget

Ad Widget

ಅರ್ಜುನನ ಮಾವುತ ವಿನುವಿನ ಕಣ್ಣೀರು ಮಾತ್ರ ನಿಲ್ಲುತ್ತಿರಲಿಲ್ಲ. ‘ನನ್ನ ಆನೆಯನ್ನು ತಂದು ಕೊಡಿ’ ಎಂದು ಕಣ್ಣೀರಿಟ್ಟ ವಿನು, ’ಕಾಡಾನೆಗೆ ಫೈರ್ ಮಾಡಲು ಹೋಗಿ ನನ್ನ ಆನೆಗೆ ಹೊಡೆದರು’ ಎಂದು ಅಲವತ್ತಿಕೊಳ್ಳುತ್ತಿದ್ದರು.

Ad Widget

‘ಅವನು ಹೋಗುವ ಮುಂಚೆ ದೇವರು ನನ್ನನ್ನು ಕರೆದುಕೊಳ್ಳಬೇಕಿತ್ತು. ನಮ್ಮ ಮೈಸೂರಿನವರಿಗೆ ಅರ್ಜುನ ಎಂದರೆ ತುಂಬಾ ಇಷ್ಟ. ನಮ್ಮ ಅಪ್ಪ, ಅಮ್ಮನಿಗೆ ಹೇಗೆ ಮುಖ ತೋರಿಸಲಿ? ಅವತ್ತಿನಿಂದ ಏನು ತಿಂದಿಲ್ಲವಂತೆ. ಎಲ್ಲ ಹಾಗೇ ಇದ್ದಾರೆ, ಫೋನ್ ಮಾಡಿದ್ರು. ನನ್ನ ಮಕ್ಕಳು ಏನೂ ತಿಂದಿಲ್ಲ, ಸ್ಕೂಲ್‌ಗೂ ಹೋಗಿಲ್ಲ. ಅರ್ಜುನ ಗಂಟೆ ಅಲ್ಲಾಡಿಸುತ್ತಿದ್ದಂತೆಯೇ, ಬೆಲ್ಲ ತಂದು ನಿಂತುಕೊಳ್ಳೋರು’ ಎಂದು ದುಃಖ ತೋಡಿಕೊಳ್ಳುತ್ತಿದ್ದರು.

Ad Widget

Ad Widget

‘ದಯವಿಟ್ಟು ನನ್ನ ಆನೆಯನ್ನು ಕೊಡಿ ಸರ್, ನಾನು 2015–16 ರಲ್ಲಿ ಅರ್ಜುನನ ಜೊತೆಯಾದೆ. ಮೂರು ಬಾರಿ ಅಂಬಾರಿ ಹೊತ್ತೆವು. ಚಿನ್ನದಂತ ಆನೆ’ ಎಂದು ಗಳಗಳನೆ ಅತ್ತರು.

‘ನಾವು ಶೆಡ್ ಹಾಕಿಕೊಂಡು ಮಲಗಿದ್ದಾಗ ನಮ್ಮ ಹತ್ತಿರ ಕಾಡಾನೆ ಬರಲು ಬಿಡುತ್ತಿರಲಿಲ್ಲ. ನಮಗಿಂತ ಮುಂಚೆ ಅರ್ಜುನನೇ ಎದ್ದೇಳುತ್ತಿದ್ದ. ಮುಂದೆ ಉಳಿದ ಆನೆಗಳಿಗೂ ಸುರಕ್ಷತೆ ನೀಡಿ. ಅಭಿಮನ್ಯುವನ್ನು ಎಲ್ಲಿಗೂ ಕಳಿಸಬೇಡಿ’ ಎಂದು ಮನವಿ ಮಾಡಿದರು.

ಹೊರಡುವ ಮುನ್ನ ಸಿಸಿಎಫ್ ರವಿಶಂಕರ್‌, ಡಿಎಫ್‌ಒ ಮೋಹನ್‌ಕುಮಾರ್‌ ಎಷ್ಟೇ ಸಮಾಧಾನ ಮಾಡಿದರೂ, ವಿನು ಬಿಕ್ಕಿ ಬಿಕ್ಕಿ ಅಳುವುದನ್ನು ಮುಂದುವರಿಸಿದ್ದರು.ಹ್ ಧೈರ್ಯವಾಗಿರು ಎಂದು ಸಮಾಧಾನ ಮಾಡಿದರೂ ಕೇಳಲಿಲ್ಲ. ‘ಅರ್ಜುನನನ್ನು ಹೇಗೆ ಮರೆಯಲಿ’ ಎಂದು ಕಣ್ಣೀರು ಹಾಕಿದ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‘ಹತ್ತು ದಿನ ಕಳೆದ ನಂತರ ಕಾಡಾನೆ ಸೆರೆ ಹಾಗೂ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ತಿಳಿಸಿದರು.  ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಷ್ಟು ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಾಕಾನೆಗಳನ್ನು ಕಾಡಾನೆಗಳು ದುಬಾರೆ ಕ್ಯಾಂಪ್‌ಗೆ ವಾಪಸ್ ಕಳಿಸುತ್ತಿದ್ದೇವೆ. 10 ದಿನದ ನಂತರ ಕಾರ್ಯಾಚರಣೆ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

‘ಈಗಾಗಲೇ ಅರ್ಜುನ ಮರಣ ಹೊಂದಿರುವುದರಿಂದ ಎಲ್ಲ ಮಾವುತರು, ಕಾವಾಡಿಗಳು, ನಮ್ಮ ಸಿಬ್ಬಂದಿ ದುಃಖದಲ್ಲಿದ್ದಾರೆ. ಎಲ್ಲರೂ ದೂರದಿಂದ ಬಂದಿದ್ದು, 15 ದಿನದಿಂದ ಮನೆ ಬಿಟ್ಟಿದ್ದಾರೆ. ಸ್ವಲ್ಪ ದಿನ ಸುಧಾರಿಸಿಕೊಂಡು ನಂತರ ಕಾರ್ಯಾಚರಣೆ ಪುನರಾರಂಭ ಮಾಡುವುದಾಗಿ ಹೇಳಿದರು.

‘9 ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಕೆ ಮಾಡಬೇಕಿತ್ತು. ಈಗಾಗಲೇ ಐದು ಕಾಡಾನೆಗಳಿಗೆ ರೇಡಿಯೊ ಕಾಲರ್ ಹಾಕಲಾಗಿದೆ. ಖಂಡಿತವಾಗಿಯೂ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading

Trending

error: Content is protected !!